![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 25, 2017, 1:40 PM IST
ಮಂಗಳೂರು : ಇಲ್ಲಿ ನ ಅಳಿವೆ ಬಾಗಿಲಿನಲ್ಲಿ ಆಳ ಸಮುದ್ರ ಮೀನುಗಾರಿಕಾ ಬೋಟ್ವೊಂದು ಬುಧವಾರ ರಾತ್ರಿ ಮುಳುಗಡೆಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.
ಮೀನುಗಾರಿಕೆಗೆ ನಡೆಸಿ ವಾಪಾಸಾಗುತ್ತಿದ್ದ ವೇಳೆ ಘಟನೆ ನಡೆದಿದ್ದು, ಮರಳು ದಿಬ್ಬಕ್ಕೆ ಬಡಿದು ಅವಘಡ ಸಂಭವಿಸಿದೆ.
ಲೋಕನಾಥ್ ಬೋಳಾರ್ ಅವರಿಗೆ ಸೇರಿದ ಬೋಟ್ ಇದಾಗಿದ್ದು ಅವಘಡ ನಡೆಯುವ ವೇಳೆ ಬೋಟ್ನಲ್ಲಿ 10 ಮಂದಿ ಮೀನುಗಾರರಿದ್ದರು.
ಮೀನುಗಾರರನ್ನು ಬೇರೆ ಬೋಟ್ನವರು ರಕ್ಷಿಸಿದ್ದು, ಸುಮಾರು 70 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.