ನಿರ್ವಹಣೆಯಿಲ್ಲದೆ ಸೊರಗುತ್ತಿದೆ ಬೋಳಾರದ ಪಾರ್ಕ್‌


Team Udayavani, Feb 24, 2020, 5:18 AM IST

2102MLR22-PARK

 ವಿಶೇಷ ವರದಿಮಹಾನಗರ: ನೇತ್ರಾವತಿಯ ಹಿನ್ನೀರಿನ ಸೊಬಗನ್ನು ಸವಿಯುವ ಹಿನ್ನೆಲೆಯಲ್ಲಿ ಬೋಳಾರದಲ್ಲಿ ನಿರ್ಮಾಣ ಮಾಡಲಾದ ಮಹಾನಗರ ಪಾಲಿಕೆಯ ಸಣ್ಣ ಪಾರ್ಕ್‌ ಸದ್ಯ ನಿರ್ವಹಣೆ ಇಲ್ಲದೆ ಸೊರಗಿದೆ.

ಪಾಲಿಕೆ ಲಕ್ಷಾಂತರ ರೂ. ವೆಚ್ಚ ಮಾಡಿ ಪಾರ್ಕ್‌ಗಳನ್ನು ಅಭಿವೃದ್ಧಿ ಮಾಡುತ್ತಿದೆಯಾದರೂ ಅದರ ನಿರ್ವಹಣೆ ಸಮರ್ಪಕವಾಗಿ ನಡೆಸದ ಕಾರಣ ವರ್ಷದೊಳಗೆ ಆ ಪಾರ್ಕ್‌ಗಳು ಕಳೆಗುಂದುತ್ತವೆ ಎಂಬ ಆರೋಪಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಇದಕ್ಕೆ ನಿದರ್ಶನವೆಂಬಂತೆ 2017ರಲ್ಲಿ ನಿರ್ಮಾಣವಾದ ಬೋಳಾರದ ಪಾರ್ಕ್‌ ಸದ್ಯ ನಿರ್ವಹಣ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಬಿಕೋ ಎನ್ನುತ್ತಿದೆ. ಹೂವು, ಅಲಂಕಾರಿಕ ಗಿಡವಿದ್ದರೂ ನಿಯಮಿತವಾಗಿ ಅದರ ನಿರ್ವಹಣೆ ಆಗದೆ ಪಾರ್ಕ್‌ನ ಕಳೆ ಗೌಣವಾಗಿದೆ.

2017 ಫೆ. 27ರಂದು ಅಂದಿನ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಈ ಪಾರ್ಕ್‌ ಉದ್ಘಾಟಿಸಿದ್ದರು. ನದಿ ವೀಕ್ಷಣೆಗೆ ಹಲವಾರು ಮಂದಿ ಇಲ್ಲಿ ಬರುತ್ತಿದ್ದಾರೆ. ಮದುವೆಯ ಫೋಟೋ ಶೂಟ್‌ಗೆ ಕೆಲವು ಛಾಯಾಗ್ರಾಹಕರು ಈ ಸ್ಥಳದಲ್ಲಿ ಚಿತ್ರೀಕರಣ ನಡೆಸುತ್ತಾರೆ. ಮುಂಜಾನೆ ವಾಕಿಂಗ್‌ ಹಾಗೂ ಸಂಜೆ ವಿಶ್ರಾಂತಿಗಾಗಿ ಹಲವು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಶೌಚಾಲಯ ಸಹಿತ ಎಲ್ಲ ವ್ಯವಸ್ಥೆಗಳನ್ನು ಇಲ್ಲಿ ಕಲ್ಪಿಸಲಾಗಿತ್ತು. ಆದರೆ ಸದ್ಯ ನಿರ್ವಹಣೆ ಕೊರತೆಯೇ ಇಲ್ಲಿ ಕಾಡುತ್ತಿದೆ.ಕಾಲ್ನಡಿಗೆ ಪಥ, ಕುಳಿತು ಕೊಳ್ಳಲು ನಾಲ್ಕೈದು ಕಲ್ಲು ಬೆಂಚು, ಧ್ವಜಸ್ತಂಭ ಇದರೊಳಗಿದೆ. ಹೂವಿನ ಹಾಗೂ ಅಲಂಕಾರಿಕ ಗಿಡಗಳಿವೆ. ಪಾರ್ಕ್‌ ಸುತ್ತ ಗೇಟ್‌ ಅಳವಡಿಸಿ, ಸುತ್ತಲೂ ನದಿ ವೀಕ್ಷಣೆಗೆ ಅನುಕೂಲವಾಗುವಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ತಡೆ ಬೇಲಿ ಅಳವಡಿಸಲಾಗಿದೆ.

ಸೊರಗಿ ಹೋಗುತ್ತಿದೆ
“ನಗರ ಬೆಳೆಯುತ್ತಿದ್ದಂತೆ ಸುಂದರವಾದ ಪಾರ್ಕ್‌ಗಳೇ ನಗರ ಜೀವನಕ್ಕೆ ಹೆಚ್ಚು ಅಪ್ಯಾಯಮಾನವಾಗುತ್ತದೆ. ಪಾರ್ಕ್‌ಗಳಲ್ಲಿ ಮುಂಜಾನೆ-ಸಂಜೆ ವಿಹಾರ, ವಿಶ್ರಾಂತಿ ಪಡೆಯಲು ನಗರ ಜನತೆ ಬಯಸುತ್ತಾರೆ.

ಬೆಂಗಳೂರಿನಲ್ಲಿ ಈ ಸಂಬಂಧ ವಾರ್ಡ್‌ಗೆ ಒಂದರಂತೆ ದೊಡ್ಡ ಮಟ್ಟದ ಪಾರ್ಕ್‌ಗಳೇ ಇವೆ. ಆದರೆ ಮಂಗಳೂರಿನಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಕದ್ರಿ ಪಾರ್ಕ್‌ ಹೊರತುಪಡಿಸಿ ಬೃಹತ್‌ ಪಾರ್ಕ್‌ ನಗರದಲ್ಲಿಲ್ಲ.

ಉಳಿದಂತೆ ಇರುವ ಬೆರ ಳೆಣಿಕೆ ಪಾರ್ಕ್‌ಗಳಲ್ಲಿ ಜನಜಾತ್ರೆಯೇ ಇದೆ. ಆದರೆ ನಗರದೊಳಗೆ ಇರುವ ಕೆಲ ವೊಂದು ಸಣ್ಣಪುಟ್ಟ ಪಾರ್ಕ್‌ಗಳು ಮಾತ್ರ ನಿರ್ವಹಣೆಯನ್ನೇ ಕಾಣದೆ ಸೊರಗಿ ಹೋಗುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದಿರುವುದುಬೇಸರ ತರಿ ಸುತ್ತಿದೆ’ ಎನ್ನುತ್ತಾರೆ ಸ್ಥಳೀಯರೋರ್ವರು.

ಪರಿಶೀಲಿಸಿ ಕ್ರಮ
ಬೋಳಾರ ರಿವರ್‌ ವಿವ್ಯೂ ಪಾರ್ಕ್‌ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಸದ್ಯ ನಿರ್ವಹಣೆ ಸಮಸ್ಯೆ ಇರುವ ಕಾರಣದಿಂದ ಆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು, ಮನಪಾ

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ

15-nalin

Mangaluru: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಅಭಿವೃದ್ಧಿ ಕಡೆಗಣನೆಯಾಗಿದೆ: ನಳಿನ್‌ ಆರೋಪ

Kinnigoli ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

Kinnigoli ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮನೆಯಲ್ಲಿ ಮತ್ತಷ್ಟು ಲಂಚದ ಹಣ ಪತ್ತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

KSRTC VOLVO

Dasara: ಎರಡು ಸಾವಿರ ಹೆಚ್ಚುವರಿ ಬಸ್‌

school

ರಾಜ್ಯ ಪಠ್ಯಕ್ರಮ ಬೋಧನೆ ಕಡ್ಡಾಯ : ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.