ಗಡಿಪ್ರದೇಶದ ನೆಟ್ಟಣಿಗೆ ಮುಡ್ನೂರು (ಕರ್ನೂರು) ಸರಕಾರಿ ಶಾಲೆ 


Team Udayavani, Jun 1, 2018, 12:54 PM IST

1june-5.jpg

ಈಶ್ವರಮಂಗಲ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಕಸರತ್ತುಗಳ ನಡೆಯುತ್ತಾ ಬರುತ್ತಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಲ್ಲಿ ಸರಕಾರಿ ಶಾಲೆಗಳು ಮುನ್ನಡೆಯತ್ತಿದೆ. ಸರಕಾರ ವಿವಿಧ ಸವಲತ್ತುಗಳನ್ನು ನೀಡುತ್ತಿವೆ ಸರಿಯಾದ ರೀತಿಯಲ್ಲಿ ಅದನ್ನು ಉಪಯೋಗಿಸಿಕೊಂಡು ಮುಂದಡಿಯಿಟ್ಟರೆ ಪ್ರಾಥಮಿಕ ಶಾಲೆಗಳು ಶಾಶ್ವತವಾದ ಸ್ಥಾನವನ್ನು ಗ್ರಾಮೀಣ ಪ್ರದೇಶದಲ್ಲಿ ಉಳಿದುಕೊಳ್ಳಲು ಸಾಧ್ಯವಾಗಬಹುದು ಎಂಬ ಅಂಶಗಳು ಶಾಲಾ ಪ್ರಾರಂಭೋತ್ಸವ ದಿನಗಳಲ್ಲಿ ಕಾಣಬಹುದಾಗಿದೆ.

ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಟ್ನೂರು (ಕರ್ನೂರು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಕೇವಲ 50ಮೀ. ಮುಂದು ಹೋದರೆ ಕೇರಳ ರಾಜ್ಯದ ಶಾಲೆಗಳು ಇವೆ. ಕೇರಳ-ಕರ್ನಾಟಕದಲ್ಲಿ ಗಡಿಭಾಗದಲ್ಲಿ ಮಲೆಯಾಳ-ಕನ್ನಡ ಭಾಷೆಗಳ ಸಂಗಮ ಪ್ರದೇಶವಾಗಿದೆ. ಜತೆಗೆ ಪ್ರಾದೇಶಿಕ ಭಾಷೆಗಳ ಸಮ್ಮಿಲನವಾಗಿದೆ. ಇಂತಂಹ ಪ್ರದೇಶದಲ್ಲಿ ಕನ್ನಡದ ಭಾಷಾಭಿಮಾನಕ್ಕೆ ಕಾರಣವಾದದ್ದು ಈ ಶಾಲೆಯ ಶಾಲಾ ಪ್ರಾರಂಭೋತ್ಸವ. 

ಶಾಲೆ ಪ್ರಾರಂಭೋತ್ಸವದಲ್ಲಿ ಪಲ್ಲಕ್ಕಿ ಎಲ್ಲರ ಗಮನ ಸೆಳೆಯಿತು. ಸುಂದರವಾದ ಪಲ್ಲಕ್ಕಿಯನ್ನು ಬಣ್ಣ ಬಣ್ಣಗಳಿಂದ ಶೃಂಗಾರಿಸಲಾಗಿತ್ತು. ಕನ್ನಡದ ಅಕ್ಷರಮಾಲೆ, ಕಾಗುಣಿತ ಅಕ್ಷರಗಳು, ಸ್ವರ-ವ್ಯಂಜನ ಅಕ್ಷರಗಳನ್ನು ಅಂದವಾಗಿ ಬರೆಯಲಾಗಿತ್ತು. ವಿದ್ಯಾಸರಸ್ವತಿ ಭಾವಚಿತ್ರ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ವಹಿಸಿದ ಮಹಾತ್ಮ ಗಾಂಧೀಜಿ, ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ , ಅಂಬೇಡ್ಕರ್‌ ಭಾವಚಿತ್ರಗಳು, ಪಕ್ಷಿ,ಪ್ರಾಣಿ ಚಿತ್ರಗಳ ಸಹಿತ ಕಥೆಗಳು, ನುಡಿಮುತ್ತುಗಳು, ಪದಬಂಧ, ಚಿತ್ರ ಸಮೇಶ ಕಥೆಗಳು, ಪರಿಸರ ಸಂಬಂಧಿಸಿದ ಚಿತ್ರಗಳು ರಾರಾಜಿಸುತ್ತಿದ್ದವು. ಶಾಲೆಯ ವಿದ್ಯಾರ್ಥಿಗಳು ಈ ಪಲ್ಲಕ್ಕಿಯನ್ನು ಹೊತ್ತು ಕೊಂಡು ರಸ್ತೆಯುದ್ದಕ್ಕೂ 200ಮೀ. ನಡೆದುಕೊಂಡು ಹೋದರು.

ವಿದ್ಯಾರ್ಥಿ ಸಮೂಹದ ಬ್ಯಾಂಡ್‌ ಸೆಟ್ಟ, ಕನ್ನಡದ ಧ್ವಜ, ಶಾಲಾ ಬ್ಯಾನರ್‌ ಮುಂಚೂಣಿಯಲ್ಲಿತ್ತು. ಇವುಗಳ ಮಧ್ಯೆ ವಿದ್ಯಾರ್ಥಿಗಳು ಹೊತ್ತ ಅಕ್ಷರ ಪಲ್ಲಕ್ಕಿ ಹೆಜ್ಜೆ ಹಾಕಿತ್ತು. ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ವಿದ್ಯಾಭಿಮಾನಿಗಳು ಸಾಥ್‌ ನೀಡಿದರು. ಪುಸ್ತಕಗಳನ್ನು ವಿತರಿಸಲಾಯಿತು. ಮಧ್ಯಾಹ್ನದ ಬಿಸಿಊಟದೊಂದಿಗೆ ಶಾಲೆಯೊಂದಿಗೆ ನಿಕಟ ಸಂಬಂಧ ಇರುವ ಸತೀಶ್‌ ರೈ ಹಿತ್ಲುಮೂಲೆ ಪಾಯಸ ವ್ಯವಸ್ಥೆ ಮಾಡಿದ್ದು ಮಕ್ಕಳಲ್ಲಿ ವಿಶೇಷ ಸಂಭ್ರಮಕ್ಕೆ ಕಾರಣವಾಯಿತು.

ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ಇವೆ. ಇದರ ನಡುವೆ 1ನೇ ತರಗತಿಗೆ 7ನೇ ತರಗತಿ ವರೆಗೆ ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ 27 ಮಕ್ಕಳು ಸೇರ್ಪಡೆಯಾಗಿರುವುದು ಪ್ರಾರಂಭೋತ್ಸವದ ಮೆರಗು ಹೆಚ್ಚಿಸಿ ಸಾರ್ಥಕತೆ ಪಡೆದುಕೊಂಡಿತ್ತು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಎಚ್‌.ಸೂಫಿ  ಶುಭ ಹಾರೈಸಿದರು. ಶಿಕ್ಷಕರಾದ ಮಹಾಬಲ ರೈ ಶಿಕ್ಷಣದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಹೆತ್ತವರು ಉಪಸ್ಥಿತರಿದ್ದರು.

ಶಾಲಾ ಮುಖ್ಯಶಿಕ್ಷಕ ಸಾವಿತ್ರಿ ಕೆ. ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕ ರಮೇಶ್‌ ಶಿರ್ಲಾಲು ವಂದಿಸಿದರು. ಶಿಕ್ಷಕಿಯರಾದ ರೇಶ್ಮಾ, ದೀಪಾ, ಭವ್ಯಾ ಸಹಕರಿಸಿದರು.

ದಾಖಲಾತಿ ಹೆಚ್ಚಿದೆ
ಅಕ್ಷರ ನಮ್ಮ ಆಸ್ತಿ. ಅಕ್ಷರದಿಂದಲೇ ಮಕ್ಕಳ ಕಲಿಕೆ ಆರಂಭವಾಗುವುದು. ಪ್ರತಿ ಮಕ್ಕಳು ಪಲ್ಲಕ್ಕಿ ಏರುವ ಕನಸು ಕಾಣಲಿ. ಕೊನೆಗೆ ಅಕ್ಷರ ಪಲ್ಲಕ್ಕಿ ಇಂದು ಸಾಕಾರವಾಯಿತು. ವಿದ್ಯಾಭಿಮಾನಿಗಳ ಒಳ್ಳೆಯ ರೀತಿ ಸ್ಪಂದನೆ ಸಿಕ್ಕಿದೆ, ದಾಖಲಾತಿ ಹೆಚ್ಚಿದೆ.
 – ಸಾವಿತ್ರಿ ಕೆ.,
ಶಾಲಾ ಮುಖ್ಯಗುರು

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.