Bunts Hostel ವೃತ್ತ: ಫುಟ್ಪಾತ್ ಇಲ್ಲದೆ ಅಪಾಯ
Team Udayavani, Sep 30, 2024, 2:34 PM IST
ಬಂಟ್ಸ್ಹಾಸ್ಟೆಲ್: ನಗರದ ಬಂಟ್ಸ್ಹಾಸ್ಟೆಲ್ ವೃತ್ತದ ಬಳಿ ಫುಟ್ಪಾತ್ ಇಲ್ಲದೆ ಪಾದಚಾರಿಗಳು ವಾಹನಗಳ ನಡುವೆ ಅಪಾಯಕಾರಿಯಾಗಿ ಸಂಚರಿಸ ಬೇಕಾದ ಅನಿವಾರ್ಯತೆ ಉಂಟಾಗಿದೆ.
ಜ್ಯೋತಿ ಕಡೆಯಿಂದ ಕರಂಗಲ್ಪಾಡಿ ಕಡೆಗೆ ಬರುವಲ್ಲಿ ಸರ್ಕಲ್ ಸಮೀಪ (ಎಸ್ಸೆಲ್ ಟವರ್ ಅಕ್ಕಪಕ್ಕ) ಫುಟ್ಪಾತ್ ಇಲ್ಲ. ಮಾತ್ರವಲ್ಲ, ರಸ್ತೆಯ ಅಂಚಿನಲ್ಲಿ ನಡೆದಾಡುವುದು ಕೂಡ ಕಷ್ಟಕರವಾಗಿದೆ. ರಸ್ತೆಯ ಅಂಚು ಸಮತಟ್ಟಾಗಿಲ್ಲ. ಇರುವ ಸ್ವಲ್ಪ ಜಾಗದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತದೆ. ಹಾಗಾಗಿ ಇದು ತೀರಾ ಇಕ್ಕಟ್ಟಿನಿಂದ ಕೂಡಿದ ಸ್ಥಳವಾಗಿ ಮಾರ್ಪಟ್ಟಿದೆ. ಜ್ಯೋತಿ ಕಡೆಯಿಂದ ಪಿವಿಎಸ್ ಕಡೆಗೆ ಬರುವ ವಾಹನಗಳು ಇಲ್ಲಿ ತಿರುವು ಪಡೆದುಕೊಳ್ಳುವಾಗ ತೀರಾ ರಸ್ತೆಯ ಅಂಚಿನಲ್ಲಿಯೇ ಸಾಗುತ್ತವೆ. ಹಾಗಾಗಿ ಇಲ್ಲಿ ನಡೆದುಕೊಂಡು ಹೋಗುವವರಿಗೆ ವಾಹನ ಢಿಕ್ಕಿಯಾಗುವ ಅಪಾಯ ಎದುರಾಗುತ್ತಿದೆ. ಇದರ ಎದುರು ಭಾಗದಲ್ಲಿ ಕೂಡ ಸುರಕ್ಷಿತವಾಗಿ ನಡೆದಾಡಲು ಫುಟ್ಪಾತ್ ಇಲ್ಲ.
ಜನನಿಬಿಡ ಪ್ರದೇಶ
ಸದಾ ವಾಹನಗಳ ದಟ್ಟಣೆ ಇರುವ ಈ ಸ್ಥಳದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಪಕ್ಕದಲ್ಲೇ ಬಸ್ಗಳ ತಂಗುದಾಣ ಕೂಡ ಇವೆ. ಇಲ್ಲಿ ಫುಟ್ಪಾತ್ ಇಲ್ಲದಿರುವುದರಿಂದ ಹಿರಿಯ ನಾಗರಿಕರು, ಮಹಿಳೆಯರು, ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಸಮಸ್ಯೆ ಮತ್ತಷ್ಟು ಹೆಚ್ಚು. ಲಭ್ಯ ಜಾಗವನ್ನು ಬಳಸಿಕೊಂಡು ಫುಟ್ಪಾತ್ ನಿರ್ಮಿಸುವ ಅಗತ್ಯವಿದೆ. ಇದಕ್ಕೂ ಮೊದಲು ಇಲ್ಲಿನ ರಸ್ತೆಯ ಅಂಚುಗಳಲ್ಲಿ ಉಂಟಾಗಿರುವ ಹೊಂಡಗಳನ್ನು ಮುಚ್ಚಿ ಸಮತಟ್ಟುಗೊಳಿಸಬೇಕಾದ ಆವಶ್ಯಕತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Dandeli : ಸರಣಿ ಕಳ್ಳತನ ಪ್ರಕರಣ… ಇಬ್ಬರು ಅಂತರ್ ರಾಜ್ಯ ಕಳ್ಳರ ಬಂಧನ
Mangaluru: ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ಸಮ್ಮಾನ
Tusshar Kapoor: ʼಗೋಲ್ ಮಾಲ್ʼ ನಟ ತುಷಾರ್ ಕಪೂರ್ ಫೇಸ್ಬುಕ್ ಖಾತೆ ಹ್ಯಾಕ್
Karkala: ಹೊಸ್ಮಾರು ಬಳಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಸಾವು
Hubli: ಬಂಡತನ ಇದ್ದರೆ ಏನು ಮಾಡುವುದಕ್ಕಾಗುತ್ತದೆ…; ಸಿಎಂ ಕುರಿತು ಶೆಟ್ಟರ್ ಮಾತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.