ಕ್ಯಾ| ಬ್ರಿಜೇಶ್‌ ಚೌಟ ವಿಜಯ ಪತಾಕೆ; ವಿಜಯಕ್ಕೆ ತಡೆಯಾಗದ ಕಾಂಗ್ರೆಸ್‌ನ ಪದ್ಮರಾಜ್‌ ಪ್ರತಿರೋಧ

ಕರಾವಳಿಯಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ಅಬಾಧಿತ

Team Udayavani, Jun 5, 2024, 12:22 AM IST

ಕ್ಯಾ| ಬ್ರಿಜೇಶ್‌ ಚೌಟ ವಿಜಯ ಪತಾಕೆ; ವಿಜಯಕ್ಕೆ ತಡೆಯಾಗದ ಕಾಂಗ್ರೆಸ್‌ನ ಪದ್ಮರಾಜ್‌ ಪ್ರತಿರೋಧ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮೂರು ದಶಕಗಳ ಜಯದ ಸರದಿಯನ್ನು ಮುಂದುವರಿಸಿದೆ. ಈ ಬಾರಿ 1,49,208 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು ಕಾಂಗ್ರೆಸ್‌ನ ಪದ್ಮರಾಜ್‌ ಆರ್‌. ಪೂಜಾರಿ ಅವರನ್ನು ಸೋಲಿಸಿದ್ದಾರೆ.

ಚೌಟ 7,64,132 ಮತ ಗಳಿಸಿದರೆ ಪದ್ಮರಾಜ್‌ 6,14,924 ಮತ ಪಡೆದಿದ್ದಾರೆ. ಈ ಬಾರಿ ಒಟ್ಟು ಮತಗಳಲ್ಲಿ ಶೇ. 53.97 ಅನ್ನು ಬಿಜೆಪಿ ಗಳಿಸಿದ್ದರೆ ಕಾಂಗ್ರೆಸ್‌ಗೆ ಶೇ. 43.43 ಪ್ರಾಪ್ತವಾಯಿತು. ಈ ಬಾರಿ ರೋಚಕತೆ ಸೃಷ್ಟಿಸುವಂತಹ ಮೂರನೇ ಪಾರ್ಟಿಯಾಗಲೀ, ವ್ಯಕ್ತಿಯಾಗಲೀ ಇರಲಿಲ್ಲ. ಕಳೆದ ಬಾರಿ 46,839 ಮತ ಗಳಿಸಿದ್ದ ಎಸ್‌ಡಿಪಿಐ ಈ ಬಾರಿ ಇಂಡಿ ಒಕ್ಕೂಟಕ್ಕೆ ಬೆಂಬಲ ಸೂಚಿಸಿದ್ದರಿಂದ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು.

ಸುರತ್ಕಲ್‌ನ ಎನ್‌ಐಟಿಕೆಯಲ್ಲಿ ಮಂಗಳವಾರ ಬೆಳಗ್ಗೆ ಮತಎಣಿಕೆ ಕಾರ್ಯವು ಬಿಗಿಭದ್ರತೆಯಲ್ಲಿ ಆರಂಭಗೊಂಡಿತು. 19 ಹಂತಗಳಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ಪ್ರತಿ ಹಂತಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿತ್ತು.

ಭದ್ರಕೋಟೆಯಲ್ಲೂ ಆತಂಕವಿತ್ತು!
ನಿರಾಯಾಸವಾಗಿ ಗೆಲುವು ಸಾಧಿಸುತ್ತೇವೆ, ಪ್ರಚಾರಕ್ಕೆ ಹೆಚ್ಚು ಯತ್ನ ಬೇಕಾಗಿಲ್ಲ ಎಂದು ಬಿಜೆಪಿ ಅಂದುಕೊಂಡಿದ್ದ ಕ್ಷೇತ್ರ ದಕ್ಷಿಣ ಕನ್ನಡ. ಆದರೂ ಪ್ರಚಾರದ ವೇಳೆ ಪಕ್ಷದ ಆಂತರಿಕ ವಲಯದಲ್ಲೇ ಗೆಲುವಿಗೆ ಕಷ್ಟ ಪಡಬೇಕು ಎಂಬ ಸಣ್ಣ ಒತ್ತಡ ಸೃಷ್ಟಿಯಾಗಿತ್ತು. ಆದರೆ ಕೊನೆಗೆ ದೊಡ್ಡ ಜಯ ಒಲಿದು ಬಂತು.

ದ.ಕ. ಕೇಸರಿ ಭದ್ರಕೋಟೆ ಎಂದುಕೊಂಡಿರುವಾಗಲೇ ಬಿಜೆಪಿ ಕಾರ್ಯಕರ್ತರಲ್ಲಿ ಬೆವರು ಮೂಡಿಸಿತ್ತು ಕಾಂಗ್ರೆಸ್‌. ಒಂದೆಡೆ ಯಾವುದೇ ಕಳಂಕವಿಲ್ಲದ ಅಭ್ಯರ್ಥಿಯಾಗಿರುವುದು, ಈ ಬಾರಿ ಜಾತಿ ರಾಜಕಾರಣ ಕೆಲಸ ಮಾಡುತ್ತದೆ ಎನ್ನುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಯಶಸ್ವಿಯಾಗಿ ಪ್ರಚುರಗೊಂಡಿದ್ದ ಕಾರಣ ಬಿಜೆಪಿ ಪ್ರಚಾರದ ಸಂದರ್ಭ ಒಂದಷ್ಟು ದಿಗಿಲುಗೊಂಡಿತ್ತು.

ಆರಂಭದಲ್ಲೇ ಯಾವುದೇ ಗೊಂದಲವಿಲ್ಲದೆ ಅಭ್ಯರ್ಥಿಯ ಹೆಸರು ಪ್ರಕಟವಾಗಿದ್ದು ಕ್ಯಾ| ಬ್ರಿಜೇಶ್‌ಚೌಟರಿಗೂ ಅನುಕೂಲವಾಯಿತು. ಪ್ರಚಾರಕ್ಕೆಸಮಯ ಸಿಕ್ಕಿತ್ತು. ಕಾಂಗ್ರೆಸ್‌ನ ಸವಾಲು ಎದುರಿಸುವುದಕ್ಕಾಗಿ ಪ್ರಚಾರ ಬಿರುಸುಗೊಳಿಸಲಾಯಿತು. ಮಾಜಿ ಯೋಧ, ದೇಶಪ್ರೇಮಿ, ಸುಶಿಕ್ಷಿತ ಅಭ್ಯರ್ಥಿ ಎನ್ನುವ ಅಂಶವನ್ನು ಪ್ರಚುರ ಪಡಿಸಲಾಯಿತು.

“ಚಾವಡಿ ಸಭೆ’ಯ ತಂತ್ರಗಾರಿಕೆ
ಬಿಜೆಪಿಯಿಂದ ಆರಂಭದಲ್ಲಿ ಕಾರ್ಯಕರ್ತರ ಪ್ರಚಾರ ಕಾರ್ಯ ತುಸು ಮಂದಗತಿಯಲ್ಲೇ ಸಾಗುತ್ತಿರುವುದು ಸಂಘ ಪರಿವಾರದ ಗಮನಕ್ಕೆ ಬಂದಿತ್ತು. ಮೋದಿ ಹೆಸರು ಹೇಳಿದರೆ ಸಾಕು ವೋಟು ಬೀಳುತ್ತದೆ ಎಂಬ ಭ್ರಮೆಯಲ್ಲಿ ಕಾರ್ಯಕರ್ತರು, ನಾಯಕರಿದ್ದರು. ಪ್ರಚಾರಕ್ಕೆ ಅವರನ್ನೇ ನೆಚ್ಚಿಕೊಂಡರೆ ಕಷ್ಟ ಎನ್ನುವುದು ಅರಿತುಕೊಂಡ ಸಂಘ ಪರಿವಾರದ ಮಂದಿ ತಮ್ಮದೇ ರೀತಿಯಲ್ಲಿ “ಚಾವಡಿ ಸಭೆ’ ಆಯೋಜಿಸಿದರು. ಸಾಮಾನ್ಯವಾಗಿ 20-40 ಮಂದಿ
ಯನ್ನು ಸೇರಿಸಿ ಅವರಲ್ಲಿರುವ ಸಂಶಯ, ಪ್ರಶ್ನೆಗಳಿಗೆ ಉತ್ತರಿಸುವುದು, ಕೇಂದ್ರ ಸರಕಾರ ನಡೆಸಿರುವ ಕಾರ್ಯಗಳ ಬಗ್ಗೆ ವಿವರಿಸುವುದು ಇದರ ಮುಖ್ಯ ಅಂಗ. ಪಕ್ಷದ ಬ್ಯಾನರ್‌ ಇಲ್ಲದೆ ನೇರವಾಗಿ ಹಾಗೂ ಔಪಚಾರಿಕತೆ ಇಲ್ಲದೆ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಇಂತಹ 300-400 ಸಭೆಗಳನ್ನು ನಡೆಸಲಾಗಿದೆ.

ನಡೆಯದ ಜಾತಿ ರಾಜಕಾರಣ
ಇದುವರೆಗೆ ಜಾತಿ ಕಾರಣ ಸುಳಿಯದಿದ್ದ ದಕ್ಷಿಣ ಕನ್ನಡದಲ್ಲೂ ಈ ಬಾರಿ ನಸುವಾಗಿ ಜಾತಿ ಮಾತು ಕೇಳಿ ಬರತೊಡಗಿತ್ತು. ಜಿಲ್ಲೆಯಲ್ಲಿ ಬಿಲ್ಲವರ ಸಂಖ್ಯೆ ದೊಡ್ಡದಾಗಿದೆ. ಬಿಲ್ಲವ ಮತದಾರರು ಈ ಬಾರಿ ಬಿಜೆಪಿ ಪರವಾಗಿ ನಿಲ್ಲಲಾರರು, ಅಲ್ಲದೆ ಕಾಂಗ್ರೆಸ್‌ನಿಂದ ಬಿಲ್ಲವರ ಸಂಘಟನೆಯಲ್ಲೇ ತೊಡಗಿಸಿಕೊಂಡ ಪದ್ಮರಾಜ್‌ ಅಭ್ಯರ್ಥಿಯಾಗಿರುವುದರಿಂದ ಅವರ ಕೈ ಬಿಡಲಾರರು ಎನ್ನುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇತ್ತು. ಆದರೆ ಈ ಲೆಕ್ಕಾಚಾರ ವಕೌìಟ್‌ ಆದಂತಿಲ್ಲ. ಹಿಂದಿನಂತೆಯೇ ಈ ಬಾರಿಯೂ ಹಿಂದುತ್ವವೇ ಪ್ರಮುಖವಾಗಿ ಹೊರಹೊಮ್ಮಿತು.

ಪುತ್ತಿಲ ಪರಿವಾರ ಸಹಕಾರಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಪುತ್ತೂರಿನಲ್ಲಿ ಸೆಡ್ಡು ಹೊಡೆದು ಬಳಿಕ ಪಕ್ಷಕ್ಕೇ ಸವಾಲಾಗಿದ್ದ ಹಿಂದೂ ಮುಖಂಡ ಅರುಣ್‌ ಪುತ್ತಿಲ ಅವರನ್ನು ಬಿಜೆಪಿ ಸಮಾಧಾನ ಪಡಿಸಿ ಪಕ್ಷಕ್ಕೆ ಸೇರಿಸಿಕೊಂಡದ್ದು ಕೂಡ ಮಹತ್ವದ ಪಾತ್ರ ವಹಿಸಿದೆ. ಪುತ್ತೂರು ಭಾಗದಲ್ಲಿ ಪುತ್ತಿಲ ಪರಿವಾರ ಬಿಜೆಪಿ ಗೆಲುವಿಗೆ ಸಾಕಷ್ಟು ಬೆವರು ಸುರಿಸಿದೆ.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.