“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

ಭಯ ಹುಟ್ಟಿಸಿ ಕುಳಿತಲ್ಲಿಂದಲೇ "ಹಣ' ದೋಚುವ ಕೃತ್ಯ ಹೊಸ ಕುತಂತ್ರ!

Team Udayavani, May 16, 2024, 7:35 AM IST

“ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಸೈಬರ್‌ ವಂಚಕರಿಂದ “ಗಾಳ’

ಮಂಗಳೂರು: ದಿನಕ್ಕೊಂದು ವಂಚನೆ ತಂತ್ರ ಅನುಸರಿಸುತ್ತಿರುವ ಸೈಬರ್‌ ವಂಚಕರು ಈಗ “ಫೆಡೆಕ್ಸ್‌ ಪಾರ್ಸೆಲ್‌’ ಹೆಸರಲ್ಲಿ ಗಾಳ ಹಾಕಲಾರಂಭಿಸಿದ್ದಾರೆ. ವಂಚಕರು ಮೊದಲು “ಪಾರ್ಸೆಲ್‌’ ಕತೆ ಕಟ್ಟುತ್ತಾರೆ. ಪೊಲೀಸ್‌ ಅಧಿಕಾರಿಗಳೆಂದು ಪರಿಚಯಿಸಿ ಕೊಂಡು ಬಂಧಿಸುವುದಾಗಿ ಬೆದರಿಸುತ್ತಾರೆ. ಹಣ ನೀಡಿದರೆ ಬಂಧನದಿಂದ ತಪ್ಪಿಸಿಕೊಳ್ಳ ಬಹುದೆನ್ನುತ್ತಾರೆ. ಬುದ್ಧಿ ಮಂಕಾಗುವಂತೆ ಮಾಡಿ ತತ್‌ಕ್ಷಣವೇ ಹಣವನ್ನು ವರ್ಗಾಯಿಸುವಂತೆ ಪೀಡಿಸುತ್ತಾರೆ.

ಪಾರ್ಸೆಲ್‌ನಲ್ಲಿ ಡ್ರಗ್ಸ್‌
ಇತ್ತೀಚೆಗೆ ಫೆಡೆಕ್ಸ್‌ ಹೆಸರಿನಲಿ ನಗರದ ಮರ್ಚೆಂಟ್‌ ನೇವಿಯ ನಿವೃತ್ತ ಚೀಫ್ ಎಂಜಿ ನಿಯರ್‌ ಅವರನ್ನು ವಂಚಿಸಿ 1.60 ಕೋ.ರೂ. ಹಣವನ್ನು ಸೈಬರ್‌ ವಂಚಕರು ದೋಚಿದ್ದರು. ಅವರ ಇಬ್ಬರು ಮಕ್ಕಳು ವಿದೇಶದಲ್ಲಿ ಕಲಿ ಯುತ್ತಿದ್ದು ಅದೇ ವಿಷಯವನ್ನು ಬಳಸಿ ವಂಚಿಸಲಾಗಿದೆ. ತನ್ನನ್ನು ರಾಜೇಶ್‌ ಕುಮಾರ್‌ ಎಂದು ಪರಿಚಯಿಸಿಕೊಂಡ ವಂಚಕ “ನಿಮ್ಮ ಹೆಸರಿನಲ್ಲಿ ಮುಂಬಯಿಯಿಂದ ಥೈಲ್ಯಾಂಡ್‌ಗೆ ಒಂದು ಪಾರ್ಸೆಲ್‌ ಬಂದಿದ್ದು ಅದರಲ್ಲಿ ಅಫ್ಘಾನ್‌ ಮತ್ತು ಕಿನ್ಯಾ ದೇಶದವರ ಪಾಸ್‌ಪೋರ್ಟ್‌ಗಳು, ಕ್ರೆಡಿಟ್‌ ಕಾರ್ಡ್‌ಗಳು, ಎಂಡಿಎಂಎ ಡ್ರಗ್ಸ್‌, ಬಟ್ಟೆಗಳು, ಲ್ಯಾಪ್‌ಟಾಪ್‌ ಇವೆ. ಇದರ ಬಗ್ಗೆ ಮುಂಬಯಿ ಸೈಬರ್‌ ಕ್ರೈಂ ಬ್ರಾಂಚ್‌ ತನಿಖೆ ನಡೆಸುತ್ತಿದೆ. ಕೂಡಲೇ ಸೈಬರ್‌ ಕ್ರೈಂ ಪೊಲೀಸ್‌ ಅಧಿಕಾರಿ ಜತೆ ಮಾತನಾಡಿ’ ಎಂದು ಕರೆಯನ್ನು ವರ್ಗಾಯಿಸಿದ. ಕೂಡಲೇ ಆ ಅಧಿಕಾರಿ ಮಾತನಾಡಿ ಸಿಬಿಐ ಅಧಿಕಾರಿ ರುದ್ರ ರಾಥೋಡ್‌ ಎಂಬವರನ್ನು ಇ-ಮೇಲ್‌ ಮೂಲಕ ಸಂಪರ್ಕಿಸಲು ತಿಳಿಸಿದ. ಕೂಡಲೇ ರುದ್ರ ರಾಥೋಡ್‌ ಎಂದು ಪರಿಚಯಿಸಿಕೊಂಡ ವ್ಯಕ್ತಿ ಕರೆ ಮಾಡಿ “ಈ ಪ್ರಕರಣದಲ್ಲಿ ಹಲವು ಮಕ್ಕಳನ್ನು ಕೊಲೆಮಾಡಿದ ತಂಡ ಶಾಮೀಲಾಗಿದೆ. ನಮಗೆ ಸಹಕರಿಸದಿದ್ದಲ್ಲಿ ಇಂಟರ್‌ಪೋಲ್‌ ಮೂಲಕ ವಿದೇಶದಲ್ಲಿರುವ ಮಗ ಮತ್ತು ಮಗಳನ್ನು ಬಂಧಿಸಬೇಕಾದೀತು ಎಂದು ಭಯ ಹುಟ್ಟಿಸಿದರು. ಕೂಡಲೇ ಸ್ಕೈಪ್‌ ಅಕೌಂಟ್‌ ತೆರೆಯುವಂತೆ ಸೂಚಿಸಿ, ಆ ನಿರಂತರ ಸಂಪರ್ಕದಲ್ಲಿರಲು ಸೂಚಿಸಿದರು. ಬಳಿಕ ಸಿಬಿಐ ಇಲಾಖೆಗೆ ಸಂಬಂಧಪಟ್ಟ ನೋಟಿಸ್‌ಗಳೆಂದು ಕೆಲವು ದಾಖಲೆಗಳನ್ನು ಕಳುಹಿಸಿದರು. ಬಾಂಡ್‌ ರೂಪ ದಲ್ಲಿ ಹಣ ಪಾವತಿಸಬೇಕು. ಪ್ರಕರಣ ಮುಗಿದ ಕೂಡಲೇ ಹಣ ವಾಪಸು ನೀಡುತ್ತೇವೆ’ ಎಂದರು. ಆಗ ಅವರು ತಮ್ಮ ಮಕ್ಕಳಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಒಟ್ಟು 1.60 ಕೋ.ರೂ. ವರ್ಗಾಯಿಸಿದರು.

ವಿವಿಧೆಡೆ ಫೆಡೆಕ್ಸ್‌ ಗುಮ್ಮ!
ಕಳೆದೊಂದು ವಾರದಲ್ಲಿ ಬೆಂಗಳೂರು ಸೇರಿ ದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಫೆಡೆಕ್ಸ್‌ ಪಾರ್ಸೆಲ್‌ ಹೆಸರಿನ ವಂಚನೆ ಪ್ರಕರಣಗಳು ನಡೆದಿವೆ. ಈ ಮೂಲಕ ಕೋಟ್ಯಂತರ ರೂ. ಸೈಬರ್‌ ವಂಚಕರ ಪಾಲಾಗಿದೆ.

ಮಹಿಳೆಯ ಅಳುವಿಗೆ ಮರುಗಿದ ವಂಚಕ!
ಮತ್ತೊಂದು ಪ್ರಕರಣದಲ್ಲಿ ಮಹಿಳೆಗೂ ಇದೇ ರೀತಿ ಕರೆ ಬಂದಿತ್ತು. ತಾನು ಯಾವುದೇ ಪಾರ್ಸೆಲ್‌ ಕಳುಹಿಸಿಲ್ಲ ಎಂದಾಗ, ಕರೆ ಮಾಡಿದವರು “ಹಾಗಾದರೆ ಮುಂಬಯಿ ಸೈಬರ್‌ ಕ್ರೈಂಗೆ ದೂರು ದಾಖಲಿಸಿ’ ಎಂದರು. ಕೂಡಲೇ ಓರ್ವ ಕರೆ ಮಾಡಿ ಮುಂಬಯಿ ಸೈಬರ್‌ ಕ್ರೈಂ ವಿಭಾಗದವನೆಂದು ಪರಿಚಯಿಸಿಕೊಂಡು “ನಿಮ್ಮ ದೂರು ದಾಖಲಿಸಿ. ಸ್ಕೈಪ್‌ ಮೂಲಕ ಕೆಮರಾದಲ್ಲಿ ಮಾತನಾಡಿ’ ಎಂದ. ಮಹಿಳೆ ನಿರಂತರವಾಗಿ ಅಳಲು ಆರಂಭಿಸಿದಾಗ ಆತ ಕರೆಯನ್ನು ಕೊನೆಗೊಳಿಸಿದ. ತಾನೋರ್ವ ವಂಚಕ ಎಂದೂ ಒಪ್ಪಿದ!

ಹಿರಿಯರನ್ನು ಜಾಗೃತಗೊಳಿಸಿ
ಫೆಡೆಕ್ಸ್‌ ಕೊರಿಯರ್‌ ಕಂಪೆನಿ ಹೆಸರಿನಲ್ಲಿ ಕರೆ ಮಾಡಿ ವಂಚಿಸುವ ಪ್ರಕರಣ ರಾಜ್ಯಾದ್ಯಂತ ನಡೆದಿದೆ. ಸ್ಕೈಪ್‌ ಮೂಲಕ ವೀಡಿಯೋ ಕಾಲ್‌ ಮಾಡುತ್ತಾರೆ. ಯುನಿಫಾರಂ ಹಾಕಿದ ಪೊಲೀಸರೇ ಮಾತ ನಾಡುವುದರಿಂದ, ಅವರು ನಮ್ಮ ಮನೆ ವಿಳಾಸ, ಮೇಲ್‌ ಐಡಿ, ಆಧಾರ್‌ ಸಂಖ್ಯೆ ಎಲ್ಲವನ್ನೂ ಸರಿಯಾಗಿ ಹೇಳುವುದರಿಂದ ಶೇ. 90 ರಷ್ಟು ಜನ ನಂಬುತ್ತಾರೆ. ಇದರ ಬಗ್ಗೆ ಎಚ್ಚರ ಅವಶ್ಯ. ಮುಖ್ಯವಾಗಿ ಮನೆಯಲ್ಲಿರುವ ಹಿರಿಯರನ್ನು ಜಾಗೃತರನ್ನಾಗಿಸಬೇಕು.
ಕ್ರೈಂ ಬ್ರಾÂಂಚ್‌ನವರು ಪೋನ್‌ನಲ್ಲಿ ಸಂಪರ್ಕಿಸುವುದಿಲ್ಲ. ಪಾರ್ಸೆ ಲ್‌ ಕಳುಹಿಸದೇ ಇದ್ದರೆ ಹೆದರಬೇಕಿಲ್ಲ. ಪಾರ್ಸೆಲ್‌ ಕಳು ಹಿಸುವಾಗ ಸರಿಯಾಗಿ ಸೀಲ್‌ ಮಾಡಿ. ಇಂತಹ ಕರೆ ಬಂದರೆ ಯಾವುದೇ ಮಾಹಿತಿ ನೀಡಬೇಡಿ. ಸೈಬರ್‌ ಕ್ರೈಂ “ಸಹಾಯವಾಣಿ 1930’ಗೆ ಕರೆ ಮಾಡಿ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞ
ಡಾ| ಅನಂತ ಪ್ರಭು ಜಿ.

ಏನಿದು ಫೆಡೆಕ್ಸ್‌ ?
ಫೆಡೆಕ್ಸ್‌ ಎಂಬುದು ಕೊರಿಯರ್‌ ಮತ್ತು ಪಾರ್ಸೆಲ್‌ ಕಂಪೆನಿ. ದೇಶ-ವಿದೇಶದಲ್ಲಿ ಇದು ಪಾರ್ಸೆಲ್‌ ಸೇವೆ ಒದಗಿಸುತ್ತದೆ. ಇದು ಜನಪ್ರಿಯ ಸಂಸ್ಥೆಯಾದ ಕಾರಣ ಈ ಹೆಸರನ್ನೇ ವಂಚಕರು ಬಳಸುತ್ತಿದ್ದಾರೆ. ಫೆಡೆಕ್ಸ್‌ ಎಂದಾಗ ಜನ ಸುಲಭವಾಗಿ ವಂಚಿಸ ಬಹುದು ಎಂಬ ಲೆಕ್ಕಾಚಾರ ವಂಚಕರದ್ದು.

ಫೆಡೆಕ್ಸ್‌ ಹೆಸರಿನಲ್ಲಿ ವಂಚನೆ ಪ್ರಕರಣ ಗಳು ಮಂಗಳೂರು ಸಹಿತ ವಿವಿಧೆಡೆ ನಡೆದಿರುವುದು ವರದಿಯಾ ಗಿವೆ. ಈ ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ತನಿಖೆ ತೀವ್ರಗೊಳಿಸಿದ್ದೇವೆ. ಅಪರಿಚಿತರ ಕರೆಗೆ ಸ್ಪಂದಿಸುವಾಗ ಜಾಗ್ರತೆ ಅವಶ್ಯ, ಪೊಲೀಸ್‌ ಅಥವಾ ಯಾವುದೇ ಇಲಾಖೆಯವರೆಂದು ಹೇಳಿದರೂ ಖಚಿತ ಪಡಿಸಿಕೊಳ್ಳದೆ ಮಾಹಿತಿ ನೀಡಬಾರದು. ಪೊಲೀಸರು ಹೀಗೆ ಮಾಹಿತಿ ಕೇಳುವುದಿಲ್ಲ.
-ಅನುಪಮ್‌ ಅಗರ್‌ವಾಲ್‌
ಪೊಲೀಸ್‌ ಆಯುಕ್ತರು, ಮಂಗಳೂರು

-ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.