“ಮಕ್ಕಳು ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿದ್ದಾರೆ’


Team Udayavani, Dec 16, 2019, 5:51 AM IST

Raj

ಮಹಾನಗರ: “ಇಂದಿನ ಪೀಳಿಗೆ ಶಾಸ್ತ್ರೀಯ ಸಂಗೀತವನ್ನು ಇಷ್ಟಪಡುವುದಿಲ್ಲ. ಪಾಶ್ಚಾತ್ಯ ಸಂಗೀತದತ್ತ ಅವರ ಒಲವು ಹೆಚ್ಚುತ್ತಿದೆ ಎಂಬುದಾಗಿ ಪ್ರಚಲಿತ ಕೇಳಿಬರುತ್ತಿರುವ ಅಭಿಪ್ರಾಯಗಳು, ಭಾವನೆಗಳು ಸರಿಯಲ್ಲ. ಓರ್ವ ಸಂಗೀತಗಾರನಾಗಿ, ಸಂಗೀತ ಶಿಕ್ಷಕನಾಗಿ ನಾನು ಕಂಡುಕೊಂಡಿರುವ ಸತ್ಯ ಎನೆಂದರೆ ಮಕ್ಕಳಲ್ಲಿ ಶಾಸ್ತ್ರೀಯ ಸಂಗೀತದ ಒಲವು ಹೆಚ್ಚುತ್ತಿದೆ’ ಎಂದು ಖ್ಯಾತ ಪಿಟೀಲುವಾದಕ ಕುಮರೇಶ್‌ ರಾಜಗೋಪಾಲನ್‌ ಹೇಳಿದ್ದಾರೆ.

ಸ್ವರಲಯ ಸಾಧನಾ ಪೌಂಡೇಶನ್‌ ಆಶ್ರಯದಲ್ಲಿ ನಗರದ ಉಜೊjàಡಿಯ ನಾರ್ದನ್‌ ಸ್ಕೈ ಸಿಟಿಯಲ್ಲಿ ಡಿ. 13ರಿಂದ 15ರ ವರೆಗೆ ಆಯೋಜಿಸಿದ್ದ ಪಿಟೀಲು ವಾದನದ ವಿಶೇಷ ನೈಪುಣ್ಯ ಶಿಬಿರದ ಸಮಾರೋಪದ ಸಂದರ್ಭ ರವಿವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಇತ್ತೀಚೆಗೆ ಮಕ್ಕಳಿಗೆ ಶಾಸ್ತ್ರೀಯ ಸಂಗೀತ ಮನೆಪಾಠ ಟ್ರೆಂಡ್‌ ಹೆಚ್ಚುತ್ತಿದೆ. ಮಕ್ಕಳು ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗುತ್ತಿದ್ದಾರೆ. ಸಂಗೀತವನ್ನು ತಮ್ಮ ಕಲಿಕೆ ವಿಷಯವಾಗಿ ಆಯ್ದುಕೊಳ್ಳುವ ಪ್ರವೃತ್ತಿ ಇದೀಗ ಯುವಜನತೆಯಲ್ಲಿ ಹೆಚ್ಚಾಗುತ್ತಿದೆ.ನಾನು ಭೇಟಿ ನೀಡುವ ಪ್ರತಿಯೊಂದು ಶಿಬಿರಗಳಲ್ಲೂ ಗಣನೀಯ ಸಂಖ್ಯೆಯಲ್ಲಿ ಮಕ್ಕಳು ಸಂಗೀತಾಭ್ಯಾಸದಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ ಎಂದರು.

“ರಾಗಪ್ರವಾಹ’ದ ಸೃಷ್ಟಿ
ಸಂಗೀತಗಾರರಲ್ಲಿ ಶೋಧನೆಯ ತುಡಿತ ಹೆಚ್ಚಾದಾಗ ಅಲ್ಲಿ ಹೊಸತು ಸೃಷ್ಟಿಯಾಗುತ್ತದೆ. ನಾನು ಹಾಗೂ ಸಹೋದರ ಗಣೇಶ್‌ ಪಿಟೀಲಿನಲ್ಲಿ ರಾಗ ಪ್ರವಾಹ ಎಂಬ ಹೊಸ ಸ್ವರವನ್ನು ಸೃಷ್ಟಿಸಿದೇವು. ಇದು ಸಂಗೀತ ಪ್ರಿಯರು, ವಿದ್ವಾಂಸರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಸಂಗೀತ ಕ್ಷೇತ್ರ ಇದನ್ನು ಸ್ವೀಕರಿಸಿ ಅಪ್ಪಿಕೊಂಡಿದೆ.

ನಾದೋಪಾಸನೆಯಿಂದ ಸಂಗೀತಗಾರ ಸಾಧಕನಾಗಿ ಮೂಡಿಬರಲು ಸಾಧ್ಯವಾಗುತ್ತದೆ. ಯಾವ ಸಂಗೀತಗಾರ ನಾದೋಪಾಸನೆಯಲ್ಲಿ ತೊಡಗುತ್ತಾನೋ ಅವನೋರ್ವ ಶ್ರೇಷ್ಠ ಸಂಗೀತಗಾರ, ಸಂಗೀತ ಶಿಕ್ಷಕ, ವಿದ್ವಾಂಸ, ಸಂಶೋಧಕನಾಗಿ ಎತ್ತರಕ್ಕೇರಲು ಸಾಧ್ಯವಾಗುತ್ತದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಸಾಮಾನ್ಯವಾಗಿ ಸಂಗೀತದಲ್ಲಿ ಸಾಹಿತ್ಯ ಭಾವ ಮತ್ತು ಸಂಗೀತ ಭಾವ ಎಂಬ ಎರಡು ಭಾಗಗಳಿರುತ್ತವೆ. ಸಾಹಿತ್ಯಭಾವದಲ್ಲಿ ಸಾಹಿತ್ಯವನ್ನು ಪ್ರಧಾನವಾಗಿಟ್ಟುಕೊಂಡರೆ ಸಂಗೀತಭಾವದಲ್ಲಿ ಸ್ವರವನ್ನೇ ಪ್ರಧಾನ ವಾಗಿಟ್ಟುಕೊಂಡು ಸಂಗೀತಗಾರ ಮುನ್ನೆಡೆ ಯುತ್ತಾನೆ. ಪಿಟೀಲು, ವೀಣೆ ಸಹಿತ ಸಂಗೀತ ಸಾಧನಾಗಳಲ್ಲಿ (ಇನ್ಸುಟ್ರಾಮೆಂಟಲ್‌) ಸ್ವರವೇ ಪ್ರಧಾನವಾಗಿರುತ್ತದೆ. ನನ್ನ ರಾಗಪ್ರವಾಹದಲ್ಲಿ ಸಂಗೀತ ಭಾವವೇ ಪ್ರಧಾನವಾಗಿದೆ.

ಸಂಗೀತ ಮೊದಲು ತನ್ನನ್ನು ಆಕರ್ಷಿಸಬೇಕು
“ಸಂಗೀತ ಮೊದಲು ತನ್ನನ್ನು ಆಕರ್ಷಿಸಬೇಕು. ಆಗ ನಾನು ಇತರರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ ಎಂಬುದು ನನ್ನ ಅಭಿಮತವಾಗಿದೆ.ರಾಗಪ್ರವಾಹ ಸ್ವರ ಸೃಷ್ಠಿಯ ಸಂದರ್ಭದಲ್ಲೂ ಇದೇ ಪರಿಕಲ್ಪನೆಯನ್ನು ಅನ್ವಯಿಸಿಕೊಂಡಿದ್ದೇನೆ. ನನ್ನ ಪ್ರತಿಯೊಂದು ಸಂಗೀತ ಸಾಧನೆಗೂ ಮೊದಲ ವಿಮರ್ಶಕ ನಾನೆ ಆಗಿದ್ದೆ.’ ಎನ್ನುತ್ತಾರೆ ಕುಮರೇಶ್‌ ಪರಿವರ್ತನೆ ಸಹಜ “ಪ್ರತಿಯೊಂದು ಕ್ಷೇತ್ರವೂ ಖಂಡಿತವಾಗಿಯೂ ನಿಂತ ನೀರಲ್ಲ. ಅದು ನಿರಂತರ ಬದಲಾವ ಣೆಗಳನ್ನು ಕಾಣುತ್ತವೇ ಬಂದಿದೆ. ಯಾಕೆಂದರೆ ಪರಿವರ್ತನೆ ಜಗದ ನಿಯಮ. ಇದಕ್ಕೆ ಸಂಗೀತವೂ ಹೊರತಾಗಿಲ್ಲ. ಸಂಗೀತ ಕ್ಷೇತ್ರ ಹೊಸ ಅವಿಷ್ಕಾರಗಳನ್ನು , ಹೊಸ ಸೃಷ್ಠಿಗಳನ್ನು, ಪ್ರಯೋಗಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಬಂದಿವೆ. ಇದು ನಿರಂತರ ಪ್ರಕ್ರಿಯೆ’ ಎಂಬುದು ಕುಮರೇಶ್‌ ಅವರ ಅಭಿಮತ.

ಚೆನೈಮೂಲದ ಕುಮರೇಶ್‌ ರಾಜಗೋಪಾಲನ್‌ ಅವರು “ದ ಫ್ಲಿಡಿಂಗ್‌ ಮಾಂಕ್‌ ‘ಎಂದೇ ಪ್ರಸಿದ್ಧರು. ಕುಮರೇಶ್‌ ಅವರು ವಿಶ್ವದ ಯಾವುದೇ ಸಂಗೀತ ಪ್ರಕಾರವನ್ನು ಪಿಟೀಲಿನಲ್ಲಿ ಲೀಲಾಜಾಲವಾಗಿ ನುಡಿಸುವ ನೈಪುಣ್ಯ ಪಡೆದಿರುವ ಸಂಗೀತಗಾರ. ವಿಶ್ವದ ಶ್ರೇಷ್ಠ ಪಿಟೀಲುವಾದಕರ ಸಾಲಿನಲ್ಲಿರುವ ಸಹೋದರರಾದ ಗಣೇಶ್‌, ಕುಮರೇಶ್‌ ಅವರು ಪಿಟೀಲುವಾದನದಲ್ಲಿ “ಗಣೇಶ್‌ ಕುಮರೇಶ್‌’ ಎಂದೇ ಪ್ರಖ್ಯಾತರು. ಕುಮರೇಶ್‌ ಅವರು ಮಂಗಳೂರಿನಲ್ಲಿ ಪ್ರಥಮ ಬಾರಿಗೆ ಪಿಟೀಲು ವಾದನ ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.