ಗೋವಾಕ್ಕೆ ಮಕ್ಕಳಿಂದ ಸೈಕಲ್ ಪ್ರವಾಸ
Team Udayavani, May 2, 2017, 4:40 PM IST
ಮಹಾನಗರ: ಮಂಗಳೂರು ಬೈಸಿಕಲ್ ಕ್ಲಬ್(ಎಂಬಿಸಿ)ನ ಜೂನಿಯರ್ ವಿಭಾಗ ಪ್ರತಿನಿಧಿಸುವ ಅಚಿಂತ್ಯ ರಾವ್, ಅಂಕಿತ್ ಶೆಟ್ಟಿ, ದೃಶ್ಯ ಬಿಲ್ಲವೆ, ಗೌತಮ್ ರಾವ್ ಮತ್ತು ಶಾನ್ ಪತ್ರಾವೊ ಅವರು ಸೈಕಲ್ ಮೂಲಕ ಗೋವಾ ಪ್ರವಾಸ ಕೈಗೊಂಡಿದ್ದಾರೆ.
ಬಿರು ಬಿಸಿಲಿನ ಮಧ್ಯೆಯೇ ಗೋವಾ ಪ್ರವಾಸ ಕೈಗೊಂಡಿರುವುದು ವಿಶೇಷ. ಎ.27ರಂದು ಬೆಳಗ್ಗೆ 3.50ಕ್ಕೆ ಕೆಪಿಟಿ ಜಂಕ್ಷನ್ನಿಂದ ಹೊರಟ ಅವರು, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಬೆಳಗ್ಗೆ 10ಕ್ಕೆ ಕುಂದಾಪುರ ತಲಪಿದರು. ಸಂಜೆ 4ಕ್ಕೆ ತಮ್ಮ ಮೊದಲ ದಿನದ ಗುರಿಯಾದ ಕುಮಟಾ ತಲುಪಿ ಅಲ್ಲಿ ತಂಗಿದರು. ಮರು ದಿನ ಬೆಳಗ್ಗೆ 7.30ಕ್ಕೆ ಹೊರಟು ಏರುತಗ್ಗಿನ ಕಠಿನ ಹೆದ್ದಾರಿಯಲ್ಲಿ ಗೋವಾ ತಲುಪಿದರು.ಮೊದಲ ದಿನವೇ ಸರಾಸರಿ ಪ್ರತಿ ಗಂಟೆಗೆ 24 ಕಿ. ಮೀ. ವೇಗವನ್ನು ಕಾಯ್ದುಕೊಂಡು ಗೋವಾ ತಲುಪಿರುವ ಇವರ ಸಾಧನೆಗೆ ಎಂಬಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಬಿಸಿಲಿನಲ್ಲಿ 300 ಕಿ.ಮೀ. ಪ್ರಯಾಣ ಅತ್ಯಂತ ಕಠಿನ, ಹುಡುಗರನ್ನು ಪ್ರೋತ್ಸಾಹಿಸಿದ ಪೋಷಕರ ನಡೆ ಶ್ಲಾಘನೀಯ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?
Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ
Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು
Mangaluru: ಮುಕ್ತಿ ಕಾಣದ “ಬ್ಲ್ಯಾಕ್ಸ್ಪಾಟ್’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು
Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.