Mangaluru ಯಶಸ್ವಿನಿ ಯಶಸ್ಸಿಗೆ ಕರಾವಳಿಯ ಕುಟುಂಬ ವ್ಯವಸ್ಥೆ ತೊಡಕು!

ಅಳಿಯಕಟ್ಟು, ಅವಿಚಕ್ತ ಕುಟುಂಬಗಳ ಸದಸ್ಯರಿಗೆ ಸಿಗದ ಯೋಜನೆ

Team Udayavani, Sep 14, 2023, 7:15 AM IST

Mangaluru ಯಶಸ್ವಿನಿ ಯಶಸ್ಸಿಗೆ ಕರಾವಳಿಯ ಕುಟುಂಬ ವ್ಯವಸ್ಥೆ ತೊಡಕು!

ಮಂಗಳೂರು: ರಾಜ್ಯದಲ್ಲಿ ಮರು ಜಾರಿಗೊಂಡಿರುವ ಯಶಸ್ವಿ ನಿಯೋಜನೆಯ ಯಶಸ್ಸಿಗೆ ಕರಾವಳಿ ಭಾಗದ ಕುಟುಂಬ ವ್ಯವಸ್ಥೆ ತೊಡಕಾಗಿದ್ದು ಹಲವಾರು ಮಂದಿ ಸೌಲಭ್ಯ ದಿಂದ ವಂಚಿತರಾಗುತ್ತಿದ್ದಾರೆ.

ಯಶಸ್ವಿನಿ ಯೋಜನೆಯ ಮಾರ್ಗ ಸೂಚಿ ಯಲ್ಲಿರುವ “ಕುಟುಂಬ’ ವ್ಯಾಖ್ಯಾನಕ್ಕೂ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಇರುವ ಅಳಿಯ ಕಟ್ಟು/ಮಗಳ ಕಟ್ಟು ಹಾಗೂ ಅವಿಭಕ್ತ ಕುಟುಂಬ ವ್ಯವಸ್ಥೆಗೂ ತಾಳೆಯಾಗದೆ ಗೊಂದಲ ಸೃಷ್ಟಿಯಾಗಿದೆ. ಇದರಿಂದಾಗಿ ಯಶಸ್ವಿನಿ ಕಾರ್ಡ್‌ ಹೊಂದಿದ್ದರೂ ಯೋಜನೆಯಡಿ ಆಸ್ಪತ್ರೆಯಲ್ಲಿ ನಗದುರಹಿತವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಅನೇಕ ಮಂದಿ ತೊಂದರೆಗೀಡಾಗಿದ್ದಾರೆ.

ಕುಟಂಬದ ಅರ್ಥ ವ್ಯತ್ಯಾಸ
“ಯಶಸ್ವಿನಿ’ ಮಾರ್ಗಸೂಚಿ ಪ್ರಕಾರ “ಕುಟುಂಬ’ವೆಂದರೆ ಪ್ರಧಾನಅರ್ಜಿದಾರರ (ಪ್ರಿನ್ಸಿಪಾಲ್‌ ಮೆಂಬರ್‌) ತಂದೆ, ತಾಯಿ, ಗಂಡ/ಹೆಂಡತಿ, ಗಂಡುಮಕ್ಕಳು, ಮದುವೆ ಯಾಗದ ಹೆಣ್ಣು ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಮಾತ್ರ. ಒಂದು ವೇಳೆ ವಿವಾಹಿತೆ ಪ್ರಧಾನ ಅರ್ಜಿದಾರಳಾಗಿದ್ದರೆ ಆಕೆಯ ಪತಿ, ಮಕ್ಕಳು, ಅತ್ತೆ, ಮಾವ ಯೋಜನೆಗೆ ಒಳಪಡುತ್ತಾರೆ. ಆಕೆಯ ತಂದೆ, ತಾಯಿ, ಕುಟುಂಬದ ಇತರ ಸದಸ್ಯರು ಯೋಜನೆಗೆ ಒಳಪಡುವುದಿಲ್ಲ. ಅದೇ ರೀತಿ ವಿವಾಹಿತ ಪ್ರಧಾನ ಅರ್ಜಿದಾರನಾಗಿ ದ್ದರೆ ಆತನ ಅಣ್ಣ, ತಮ್ಮ, ಅಕ್ಕ, ತಂಗಿ ಒಳಗೊಳ್ಳುವುದಿಲ್ಲ. ಇದೇ ರೀತಿ ಹಲವಾರು ರೀತಿಯ ಗೊಂದಲಗಳು ಇದ್ದು ನೂರಾರು ಮಂದಿ ಸೌಲಭ್ಯ ದಿಂದ ವಂಚಿತರಾಗುತ್ತಿದ್ದಾರೆ. 2016 -17ನೇ ಸಾಲಿನಲ್ಲಿ ಈ ಯೋಜನೆ ಜಾರಿಯಲ್ಲಿದ್ದಾಗ ಕುಟುಂಬದ ವ್ಯಾಖ್ಯಾನ ಇರಲಿಲ್ಲ. ಹಾಗಾಗಿ ಗೊಂದಲ ಇರಲಿಲ್ಲ.

ಪಡಿತರ ಚೀಟಿಗೆ ಸಂಬಂಧವಿಲ್ಲ
ಪಡಿತರ ಚೀಟಿಯಲ್ಲಿ ಹೆಸರು ಇರುವ ಸದಸ್ಯರನ್ನು ಒಂದು ಕುಟಂಬವೆಂದು ಪರಿಗಣಿಸಿ ಸಹಕಾರ ಸಂಘಗಳಲ್ಲಿ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಆದರೆ ಅಂತಹ ಕುಟುಂಬ ಅವಿಭಕ್ತ ಕುಟುಂಬವಾಗಿದ್ದರೆ ಅದರಲ್ಲಿ ಕೆಲವು ಮಂದಿಗೆ ಸೌಲಭ್ಯ ದೊರೆಯುತ್ತಿಲ್ಲ. ಪಡಿತರ ಚೀಟಿಗೂ ಯಶಸ್ವಿನಿ ಯೋಜನೆಯಲ್ಲಿ ಸೌಲಭ್ಯ ಪಡೆಯುವವರಿಗೂ ಸಂಬಂಧವಿಲ್ಲ. ಸಹಕಾರ ಸಂಘಗಳ ಷೇರುದಾರರು/ಸದಸ್ಯರಾಗಿರುವವರ ಮೂಲಕ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ನೋಂದಣಿ ಸಂದರ್ಭದಲ್ಲಿ ಪ್ರಧಾನ ಅರ್ಜಿದಾರರನ್ನು ಪರಿಗಣಿಸುವಾಗ ಮಾಡಿರುವ ಲೋಪಗಳಿಂದ ಗೊಂದಲ ವಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಸಹಕಾರ ಸಂಘಗಳ ಎಡವಟ್ಟು?
ನೋಂದಣಿ ಮಾಡುವಾಗಲೇ ಮಾರ್ಗಸೂಚಿಯಲ್ಲಿ ಇರುವ ಕುಟುಂಬ ವ್ಯಾಖ್ಯಾನ ಗಮನಿಸಿಯೇ ಅರ್ಜಿ ಸ್ವೀಕರಿಸುವಂತೆ ಸಹಕಾರ ಸಂಘಗಳಿಗೆ ಸೂಚಿಸಲಾಗಿತ್ತು. ಆದರೆ ಕೆಲವು ಸಂಘಗಳಲ್ಲಿ ಲೋಪವಾಗಿ ಈ ಗೊಂದಲ ಉಂಟಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಸಹಕಾರ ಇಲಾಖೆಯ ಅಧಿಕಾರಿಗಳು.

ತಿದ್ದುಪಡಿ ಪರಿಹಾರ
ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಇಂತಹ ಗೊಂದಲ, ಸಮಸ್ಯೆ ಉಂಟಾಗಿಲ್ಲ. ಯಶಸ್ವಿನಿ ಯೋಜನೆ ಯಲ್ಲಿ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ರೂಪಿಸಲಾಗಿದೆ. ಕರಾವಳಿ ಭಾಗದ ಗೊಂದಲ ನಿವಾರಣೆಯಾಗಬೇಕಾದರೆ ಈ ಭಾಗಕ್ಕೆ ಅನ್ವಯವಾಗುವಂತೆ ಮಾರ್ಗ ಸೂಚಿ ತಿದ್ದುಪಡಿ ಮಾಡಬೇಕಾಗಿದೆ.

1.67 ಲಕ್ಷ ಮಂದಿ ನೋಂದಣಿ
ಉಡುಪಿ ಜಿಲ್ಲೆಯಲ್ಲಿ 77,000ಕ್ಕೂ ಅಧಿಕ ಹಾಗೂ ದ.ಕ. ಜಿಲ್ಲೆಯಲ್ಲಿ 90 ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.ಸೌಲಭ್ಯ ಪಡೆಯಲು ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ಈಗಾಗಲೇ ಹಲವರು ದೂರಿಕೊಂಡಿದ್ದು ಇದೇ ರೀತಿ ಸಾವಿರಾರು ಮಂದಿಗೆ ತೊಡಕಾ ಗಿರುವ ಸಾಧ್ಯತೆ ಇದೆ.

ಯಶಸ್ವಿನಿ ಉತ್ತಮ ಯೋಜನೆಯಾಗಿದ್ದು ಇದು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ರಾಜ್ಯಾದ್ಯಂತ 45.80 ಲಕ್ಷ ಮಂದಿ ನೋಂದಾಯಿಸಿದ್ದಾರೆ. ಯೋಜನೆಯಲ್ಲಿ ಕುಟುಂಬವೆಂದರೆ ಏನೆಂಬುದನ್ನು ಸರಕಾರ ವ್ಯಾಖ್ಯಾನಿಸಿದೆ. ಅದರಂತೆ ಸೌಲಭ್ಯಗಳು ದೊರೆಯುತ್ತಿವೆ. ಯೋಜನೆ ಅನುಷ್ಠಾನಕ್ಕೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಕರಾವಳಿ ಭಾಗದಲ್ಲಿ ಕೆಲವರಿಗೆ ಸಮಸ್ಯೆಯಾಗುತ್ತಿದ್ದರೆ ಅದನ್ನು ಸಹಕಾರ ಸಚಿವರ ಗಮನಕ್ಕೆ ತಂದು ಪರಿಹರಿಸಲಾಗುವುದು.
– ಡಾ| ಕೃಷ್ಣಪ್ರಸಾದ್‌, ಟ್ರಸ್ಟಿ, ಯಶಸ್ವಿನಿ ಸ.ಸ.ಆ. ಟ್ರಸ್ಟ್‌

ಕರಾವಳಿ ಭಾಗದ ಕುಟುಂಬ ವ್ಯವಸ್ಥೆಯಿಂದ ಯಶಸ್ವಿನಿ ಸೌಲಭ್ಯಕ್ಕೆ ತೊಡಕಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಯಾರೂ ಲಿಖಿತ ಮನವಿ ಸಲ್ಲಿಸಿಲ್ಲ. ನಿರ್ದಿಷ್ಟವಾಗಿ ಸಮಸ್ಯೆಯ ಮಾಹಿತಿ ನೀಡುತ್ತಿಲ್ಲ. ಯಾವುದೇ ಸಂಘ – ಸಂಸ್ಥೆಯವರು ಅಥವಾ ಸಂಬಂಧಿಸಿದ ಸಮುದಾಯದವರು ಅಧಿಕೃತವಾಗಿ ಲಿಖೀತ ಮನವಿ ಸಲ್ಲಿಸಿದರೆ ಕೂಡಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ವೆಂಕಟಸ್ವಾಮಿ, ಸಿಇಒ, ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌, ಬೆಂಗಳೂರು

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.