Budget 2024: ಕರಾವಳಿ ಕರ್ನಾಟಕದ ಕೈಗಾರಿಕೆಗೂ ಆಶಾಕಿರಣ


Team Udayavani, Jul 24, 2024, 7:20 AM IST

ಕರಾವಳಿ ಕರ್ನಾಟಕದ ಕೈಗಾರಿಕೆಗೂ ಆಶಾಕಿರಣ

ಮಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಈ ಬಾರಿಯ ಕೇಂದ್ರ ಬಜೆಟ್‌ ವಿಕಸಿತ ಭಾರತಕ್ಕೊಂದು ಮಾರ್ಗನಕ್ಷೆಯಾಗಿ ಗೋಚರಿಸುವಂತಿದೆ. ಮುಖ್ಯವಾಗಿ ಅನ್ನದಾತ, ಮಹಿಳೆ, ಬಡವರು, ಯುವಕರನ್ನು ತಮ್ಮ ಬಜೆಟ್‌ನಲ್ಲಿ ಆದ್ಯತೆಯಾಗಿ ಪರಿಗಣಿಸಿರುವಂತಿದೆ.

ಉದ್ಯೋಗ, ಕೌಶಲ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಮಧ್ಯಮ ವರ್ಗಗಳನ್ನು ಅವರು ತಮ್ಮ ಯೋಜನೆಗಳಲ್ಲಿ ಹೆಚ್ಚಾಗಿ ಸೇರಿಸಿಕೊಂಡಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ನಮ್ಮ ಭಾಗಕ್ಕೇನು ಸಿಕ್ಕಿದೆ ಎಂದು ನೋಡಿದರೆ ಮುಖ್ಯವಾಗಿ ಕೈಗಾರಿಕ ವಲಯದಲ್ಲಿ ಹಲವು ವಿಚಾರಗಳು ಕಂಡುಬರುತ್ತವೆ.

ಸಣ್ಣ ಕೈಗಾರಿಕೆ, ಕೈಗಾರಿಕಾ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಕರಾವಳಿಯಲ್ಲೂ ಇದು ನೆರವಾಗುವಂತಿದೆ.

ಉದ್ಯೋಗ ಮತ್ತು ಕೌಶಲಾಭಿವೃದ್ಧಿ ವಿಚಾರದಲ್ಲಿ ನೋಡಿದರೆ, ಹೊಸಬರಿಗೆ ಒಂದು ತಿಂಗಳ ವೇತನವನ್ನು ಮೂರು ಕಂತುಗಳಲ್ಲಿ ನೀಡುತ್ತಾರೆ. ಎಲ್ಲ ಹೊಸ ಉದ್ಯೋಗಿಗಳಿಗೆ ಉದ್ಯೋಗದಾತ ನೀಡುವ ಭವಿಷ್ಯನಿಧಿ ಸಲ್ಲಿಕೆಯಲ್ಲಿ 3,000 ರೂ. ವರೆಗೆ/ಮಾಸಕ್ಕೆ 2 ವರ್ಷ ಕಾಲ ನೀಡಲಾಗುವುದು ಉತ್ತಮ. ಕೈಗಾರಿಕೆಗಳೊಂದಿಗೆ ಮಾತುಕತೆ ನಡೆಸಿ, ವೃತ್ತಿನಿರತ ಮಹಿಳೆಯರಿಗೆ ಹಾಸ್ಟೆಲ್‌ ನಿರ್ಮಿಸುವುದು ನೆರವಾಗಲಿದೆ. ಐಟಿಐಗಳ ಸುಧಾರಣೆ, ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗುವಂತೆ ಕೋರ್ಸ್‌ಗಳ ಅಂಶಗಳನ್ನು ರೂಪಿಸುವುದು ಕೂಡ ಇದರಲ್ಲಿದೆ. ಈ ಎಲ್ಲ ಕ್ರಮಗಳಿಂದ ಉತ್ಪಾದಕತೆ ಹೆಚ್ಚುವುದು, ಉದ್ಯೋಗ ಪರಿಸ್ಥಿತಿ ಸುಧಾರಣೆಯಾಗುವುದು.

ಮುದ್ರಾ ಯೋಜನೆಯ ತರುಣ್‌ ವಿಭಾಗದಲ್ಲಿ ಸಾಲ ನೀಡಿಕೆಯ ಗರಿಷ್ಠ ಮಿತಿಯನ್ನು 10ರಿಂದ 20 ಲಕ್ಷ ರೂ.ಗೆ ಏರಿಸಿರುವುದು ಉದ್ಯಮಶೀಲತೆಗೆ ದೊಡ್ಡ ಕೊಡುಗೆ. ಕೈಗಾರಿಕ ಕಾರ್ಮಿಕರಿಗೆ ಪಿಪಿಪಿ ಆಧಾರದಲ್ಲಿ ಬಾಡಿಗೆ ಮನೆ ಒದಗಿಸುವುದು, ಎಂಎಸ್‌ಎಂಇ ಸಾಲಕ್ಕೆ ಹೊಸ ರೀತಿಯ ಪರಿಶೀಲನ ಮಾದರಿ, ಎಂಎಸ್‌ಎಂಇಗಳಿಗೆ ತುರ್ತು ಸನ್ನಿವೇಶಗಳಲ್ಲಿ ಸಾಲದ ನೆರವು ನೀಡುವುದು, ಟ್ರಿಬ್ಯುನಲ್‌ ಮತ್ತು ಮೇಲ್ಮನವಿ ಟ್ರಿಬ್ಯುನಲ್‌ ರಚನೆ ಮೂಲಕ ದಿವಾಳಿತನದ ಪರಿಹಾರ ಒದಗಿಸಲಾಗುತ್ತದೆ.

ಇನ್ನು ಇ-ಕಾಮರ್ಸ್‌ ರಫ್ತು ಹಬ್‌ ರಚನೆ ಮಾಡುವುದಕ್ಕೆ ಬಜೆಟ್‌ನಲ್ಲಿ ತಿಳಿಸಲಾಗಿದೆ. ಸಣ್ಣ ಹಾಗೂ ಗುಡಿ ಕೈಗಾರಿಕೆಗಳಲ್ಲಿನ ಕೌಶಲದಾರರು ತಮ್ಮ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವುದಕ್ಕೆ ಪಿಪಿಪಿ-ಆಧಾರದಲ್ಲಿ ರಫ್ತು ಹಬ್‌ಗಳನ್ನು ರಚಿಸುವುದಕ್ಕೆ ಒತ್ತು ಕೊಟ್ಟಿದ್ದಾರೆ, ಇದು ಕಾರ್ಯರೂಪಕ್ಕೆ ಬಂದರೆ ಉತ್ತಮ.

ಸಾಗರೋತ್ತರ ರಫ್ತಿಗೆ ಒತ್ತು
ಸಿಗಡಿ ಹಾಗೂ ಮೀನು ಆಹಾರಕ್ಕೆ ಇರುವ ಸುಂಕವನ್ನು ಶೇ.5ರಷ್ಟು ಇಳಿಕೆ ಮಾಡಿದ್ದರಿಂದ ಸಾಗರೋತ್ತರ ರಫ್ತು ವಿಚಾರದಲ್ಲಿ ನಮ್ಮ ಉದ್ದಿಮೆಗಳಿಗೆ ಒತ್ತು ಕೊಟ್ಟಂತಾಗಿದೆ. ಅದೇ ರೀತಿ ನಬಾರ್ಡ್‌ ಮೂಲಕ ಸಿಗಡಿ ಫಾರ್ಮಿಂಗ್‌ಗೆ ಹಣಕಾಸು ನೆರವು ಕೊಡುವ ನಿರೀಕ್ಷೆ ಇದೆ.

ನೌಕಾಯಾನ ಉದ್ಯಮದಲ್ಲಿ ಲೀಸಿಂಗ್‌ ಹಾಗೂ ಸುಧಾರಣೆಗೆ ಹೆಚ್ಚಿನ ಒತ್ತು ಕೊಡುವುದಾಗಿ ತಿಳಿಸಲಾಗಿದೆ. ಇದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ಹೆಚ್ಚಿನ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ. ಜಿಡಿಪಿಯ ಶೇ 3.4ನ್ನು ಎಂದರೆ 11,11,111 ಕೋಟಿ ರೂ. ಮೊತ್ತವನ್ನು ಮೂಲಸೌಕರ್ಯಕ್ಕೆ ಮೀಸಲಿಡಲಾಗಿದೆ. ಅದರಲ್ಲಿ ನಮ್ಮ ಕರಾವಳಿ ಪ್ರದೇಶವನ್ನು ಒಳನಾಡಿಗೆ ಜೋಡಿಸಿಕೊಂಡರೆ ಬಹುತೇಕ ಸಮಸ್ಯೆಗಳೂ ಬಗೆಹರಿಯಬಹುದು.

-ಅಜಿತ್‌ ಕಾಮತ್‌, ಅಧ್ಯಕ್ಷರು, ಭಾರತೀಯ
ಕೈಗಾರಿಕೆಗಳ ಮಹಾಒಕ್ಕೂಟ, ಮಂಗಳೂರು ಶಾಖೆ

ಟಾಪ್ ನ್ಯೂಸ್

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

Nagamangala ಗಲಭೆಯ ಹಿನ್ನೆಲೆ ಗೊತ್ತಾಗಬೇಕು: ಸಿ.ಎನ್‌. ಅಶ್ವತ್ಥನಾರಾಯಣ

Nagamangala ಗಲಭೆಯ ಹಿನ್ನೆಲೆ ಗೊತ್ತಾಗಬೇಕು: ಸಿ.ಎನ್‌. ಅಶ್ವತ್ಥನಾರಾಯಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

-ROHAN

Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.