ನರಿಮೊಗರು: ಮಳೆಗೆ ಕೊಚ್ಚಿಹೋದ ಭಕ್ತಕೋಡಿ-ತೌಡಿಂಜ-ಕಡ್ಯ ಸಂಪರ್ಕ ರಸ್ತೆ
Team Udayavani, Jun 9, 2018, 2:35 AM IST
ನರಿಮೊಗರು: ನಿರಂತರ ಸುರಿತಯುತ್ತಿರುವ ಮಳೆಯಿಂದಾಗಿ ಮುಂಡೂರು ಗ್ರಾ.ಪಂ. ಕ್ಕೊಳಪಟ್ಟ ಭಕ್ತಕೋಡಿ-ತೌಡಿಂಜ-ಕಡ್ಯ ಸಂಪರ್ಕ ರಸ್ತೆಯು ಕೊಚ್ಚಿಹೋಗಿದ್ದು, ಈ ಪರಿಸರದ ಜನತೆ ಸಂಪರ್ಕ ಕಡಿತದ ಬೀತಿ ಎದುರಿಸುತ್ತಿದ್ದಾರೆ. ಭಕ್ತಕೋಡಿಯಿಂದ ತೌಡಿಂಜ ಮೂಲಕ ಕಡ್ಯ ಭಾಗವನ್ನು ಸಂಪರ್ಕಿಸುವ ಈರಸ್ತೆಯು ಮಳೆಯಿಂದಾಗಿ ಕೊಚ್ಚಿಹೋಗಿದೆ. ಈ ರಸ್ತೆಗೆ ಈ ಹಿಂದಿನ ಅವಧಿಯಲ್ಲಿ ಶಾಸಕರ 10 ಲಕ್ಷರೂ ಅನುದಾನದಲ್ಲಿ ರಸ್ತೆಯ ಒಂದು ಭಾಗದಲ್ಲಿ ಕಾಂಕ್ರೀಟಿಕರಣಗೊಳಿಸಲಾಗಿತ್ತು.ಈಗ ನಿರಂತರ ಮಳೆಯಿಂದಾಗಿ ಆ ಕಾಂಕ್ರೀಟಿಕೃತ ರಸ್ತೆಗೂ ಹಾನಿಯಾಗಿದೆ. ಉಳಿದ ಕಚ್ಚಾ ರಸ್ತೆಯು ಮಳೆ ನೀರಿಗೆ ಕೊಚ್ಚಿಹೋಗಿದ್ದು ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
25ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ
ಈ ರಸ್ತೆಯ ಮೂಲಕ ತೌಡಿಂಜ,ಕಡ್ಯ ಪರಿಸರದ 25ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. ಈಗ ಮಳೆಯಿಂದಾಗಿ ಈ ಮನೆಗಳಿಗೆ ಹೋಗಲು ಸಮಸ್ಯೆಯಾಗಿದೆ. ಈಗ ಮಳೆಗಾಲದಲ್ಲಿ ಯಾವುದೇ ದುರಸ್ತಿಯ ಸಾಧ್ಯತೆ ಕಡಿಮೆ.ನಿರಂತರ ಮಳೆಯಿಂದ ಯಾವುದೇ ಕೆಲಸ ಮಾಡಲು ಕಷ್ಟದ ಸ್ಥಿತಿ ಇದೆ.
ಮನವಿ ಮಾಡಲಾಗಿದೆ
ಮಳೆಯಿಂದಾಗಿ ರಸ್ತೆ ಹಾನಿಯಾಗಿರುವ ಕುರಿತು ಗ್ರಾ.ಪಂ.ಅಧ್ಯಕ್ಷರಿಗೆ ಹಾಗೂ ಅಭಿವೃದ್ದಿ ಅಧಿಕಾರಿಯವರಿಗೆ ಮನವಿ ಮಾಡಲಾಗಿದೆ. ಅವರಿಂದ ಸಕರಾತ್ಮಕ ಸ್ಪಂದನೆ ದೊರಕಿದೆ.ಹಾಗೂ ಸಂಸದ, ಶಾಸಕರಿಗೆ, ತಾ.ಪಂ., ಜಿ.ಪಂ.ಸದಸ್ಯರಿಗೂ ಮನವಿ ಮಾಡಲಾಗಿದೆ. ಕೂಡಲೇ ಈ ರಸ್ತೆಯ ಅಭಿವೃದ್ದಿ ಕುರಿತು ಗಮಹರಿಸುವಂತೆ ಮುಂಡೂರು ಗ್ರಾ.ಪಂ. ಮಾಜಿ ಸದಸ್ಯ ಬಾಲಚಂದ್ರ ಕಡ್ಯ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Udayavani.com “ನಮ್ಮನೆ ಕೃಷ್ಣ”: ಪ್ರಥಮ ಬಹುಮಾನ ಗಳಿಸಿದ ರೀಲ್ಸ್
Rescue;ಅಪಘಾತಕ್ಕೀಡಾಗಿ ಫ್ಲೈಓವರ್ ಪಿಲ್ಲರ್ನಲ್ಲಿ ಸಿಲುಕಿಕೊಂಡ ಮಹಿಳೆ!!
Laddu ವಿವಾದ: ಮುಂದಿನ ಕ್ರಮದ ಬಗ್ಗೆ ಅರ್ಚಕರು, ತಜ್ಞರೊಂದಿಗೆ ಸಮಾಲೋಚನೆ: ಸಿಎಂ ನಾಯ್ಡು
Theerthahalli: ಶೋಕಿ ಜೀವನಕ್ಕಾಗಿ ಗ್ರಾಹಕರ ಹಣ ವಂಚಿಸಿದ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!
Thug Life: ದುಬಾರಿ ಬೆಲೆಗೆ ಕಮಲ್ ಹಾಸನ್ ʼಥಗ್ ಲೈಫ್ʼ ಓಟಿಟಿ ರೈಟ್ಸ್ ಸೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.