ಅಸಹಾಯಕ ಮಹಿಳೆಗೆ ಸೂರು ನಿರ್ಮಾಣ


Team Udayavani, Mar 28, 2018, 9:39 AM IST

28-March-1.jpg

ತೋಕೂರು: ಬಡ ಮಹಿಳೆಯೊಬ್ಬರಿಗೆ ಸೂರನ್ನು ನಿರ್ಮಿಸಿ ಕೊಟ್ಟು ಗ್ರಾಮಸ್ಥರೆಲ್ಲರು ಔದಾರ್ಯತೆ ಮೆರೆದ ಘಟನೆ ಪಡುಪಣಂಬೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ 10ನೇ ತೋಕೂರಿನ ಕಂಬಳ ಬೆಟ್ಟಿನಲ್ಲಿ ನಡೆದಿದೆ.

ಆಕೆಯ ಹೆಸರು ಬೊಮ್ಮಿ ಪೂಜಾರ್ತಿ ಊರಲ್ಲೆಲ್ಲ ಬೊಮ್ಮಕ್ಕ ಎಂದೇ ಪರಿಚಿತರು. ಕೃಷಿ- ಕೂಲಿ ಕೆಲಸ, ತೆಂಗಿನ ಗೆರಟೆಯನ್ನು ಹದಮಾಡಿ ಸಟ್ಟಿಗ ಮಾಡುವ ಪರೋಕ್ಷ ಕಾಯಕವನ್ನು ಮಾಡಿಕೊಂಡು ಸಿಕ್ಕ ಒಂದಷ್ಟು ಪುಡಿಗಾಸೇ ಆಕೆಯ ಜೀವನಾಧಾರ. ಮೂವರು ಹೆಣ್ಣು ಮಕ್ಕಳನ್ನು ಕೈಗಿತ್ತು, ಪತಿ ತೌಡು ಪೂಜಾರಿ ಅಕಾಲಿಕವಾಗಿ ಸಾವನ್ನಪ್ಪಿದಾಗ ಬೊಮ್ಮಿ ಪೂಜಾರಿಗೆ ಆಸರೆಯಾದವರೇ ಸ್ಥಳೀಯರು. ಕಷ್ಟಪಟ್ಟು ಮಕ್ಕಳನ್ನು ಬೆಳೆಸಿ ಮದುವೆ ಮಾಡಿಸಿದರು.

ಪ್ರಾಮಾಣಿಕತೆಯಿಂದ ಜೀವನದ ಉದ್ದಕ್ಕೂ ಕಷ್ಟಗಳನ್ನೇ ಅನುಭವಿಸಿದ ಬೊಮ್ಮಿ ಪೂಜಾರಿಯವರ ಮನೆ ದಿನದಿಂದ ದಿನಕ್ಕೆ ಶಿಥಿಲಾವಸ್ಥೆಯನ್ನು ಕಾಣುತ್ತಿತ್ತು. ಜಮೀನಿನ ದಾಖಲೆ ಪತ್ರದ ಕಾನೂನಾತ್ಮಕ ತೊಡಕಿನಿಂದ ಮನೆಗೆ ಪ್ಲಾಸ್ಟಿಕ್‌ ಹೊದಿಕೆ ಅನಿವಾರ್ಯ ವಾಯಿತು. ಗಂಡನನ್ನು ಕಳೆದುಕೊಂಡಿರುವ ಹಿರಿಯ ಪುತ್ರಿ ಹಾಗೂ ಆಕೆಯ ಮಗನ ಸಂಸಾರವನ್ನು ಸರಿದೂಗಿಸಲು ಇದ್ದ ಮನೆಯನ್ನಾದರೂ ದುರಸ್ತಿ ಮಾಡಲು ಇಚ್ಛಿಸಿದ ಬೊಮ್ಮಿ ಅವರಿಗೀಗ 80ರ ಹರೆಯ. ಜತೆಯಲ್ಲಿರುವ ಮಗಳ ಹಾಗೂ ಮೊಮ್ಮಗನಿಗೊಂದು ಸೂರು ಸಿಗಲಿ ಎಂಬ ಕನಸು ಕಟ್ಟಿ ಕೊಂಡಿದ್ದರು.

ನೆರವಿಗೆ ನಿಂತ ಗ್ರಾ.ಪಂ.
ಗ್ರಾಮದ ಬಡ ಮಹಿಳೆಗೆ ಸೂರೊಂದನ್ನು ನಿರ್ಮಿಸಲು ಮೊದಲಿಗೆ ಪಡುಪಣಂಬೂರು ಗ್ರಾ.ಪಂಚಾಯತ್‌ನ ಅಧ್ಯಕ್ಷರಾಗಿರುವ ಮೋಹನ್‌ದಾಸ್‌ ಹಾಗೂ ಸದಸ್ಯರಾಗಿರುವ ಹೇಮಂತ್‌ ಅಮೀನ್‌ ಮುಂದಾದರಾದರೂ ಜಮೀನಿಗೆ ದಾಖಲೆ ಪತ್ರದ ಸಮಸ್ಯೆ ಯಿತ್ತು. ಇದು ಕಾನೂನಾತ್ಮಕವಾಗಿಯೂ ತೊಡಕಾಯಿತು. ಆದರೂ ಸಹ ಇದ್ದ ಸ್ಥಳದಲ್ಲಿಯೇ ಮನೆಯ ದುರಸ್ತಿ ಎಂಬ ಮೀಸಲು ಅನುದಾನವನ್ನು ಪಂಚಾಯತ್‌ನಿಂದ ಆರಂಭದಲ್ಲಿ ಬಳಸಿಕೊಂಡು ಸ್ಥಳೀಯ ಸಮಾಜಮುಖಿ ಚಿಂತನೆಯ ಸೇವಾ ಸಂಸ್ಥೆಗಳಿಗೆ ನೆರವನ್ನು ನೀಡಲು ಬೊಮ್ಮಿ ಪೂಜಾರಿಯವರ ಪರವಾಗಿ ವಿನಂತಿಸಿಕೊಂಡರು.

ಇದಕ್ಕೆ ಶೀಘ್ರ ಸ್ಪಂದನೆ ಸಿಕ್ಕಂತೆ ವ್ಯವಸ್ಥಿತವಾದ ಮನೆಯೊಂದು ಸುಮಾರು 6 ತಿಂಗಳ ಅವಧಿಯಲ್ಲಿ ಅಂದಾಜು 1.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯಿತು. ಇವರಿಗೆ ಸ್ಥಳೀಯ ಗ್ರಾಮಸ್ಥರು, ಉತ್ಸಾಹಿ ಯುವಕರು, ಉದ್ಯಮಿಗಳು ಸಹ ವೈಯಕ್ತಿಕ ಸಹಾಯ ಮಾಡಿದ್ದಾರೆ.

ಕೈ ಮುಗಿದ ಬೊಮ್ಮಕ್ಕ
ಮನೆ ನಿರ್ಮಾಣದ ಬಗ್ಗೆ ಪತ್ರಿಕೆಯೊಂದಿಗೆ ಹೇಳಿಕೆ ನೀಡಲು ಮುಂದಾದರೂ ಸಹ ಬೊಮ್ಮಕ್ಕನ ಬಾಯಲ್ಲಿ ಮಾತು ಹೊರಡಲಿಲ್ಲ. ಅನಾರೋಗ್ಯದಿಂದ ಬಳಲುತ್ತಿರುವ ಆಕೆ ಕೈ ಮುಗಿದು ಸಹಕರಿಸಿದವರನ್ನು ನೆನಪಿಸಿಕೊಂಡು ಕಣ್ಣೀರು
ಸುರಿಸಿದರು. 

ಸಂಸ್ಥೆಗಳ ನೆರವು
ಗ್ರಾಮ ಪಂಚಾಯತ್‌ನ ಎಲ್ಲ ಸದಸ್ಯರು ಸಹ ಈ ಅಸಹಾಯಕ ಮಹಿಳೆಗೆ ಸ್ಪಂದಿಸಲು ಸಹಕರಿಸಿದರಲ್ಲದೇ, ಸ್ಥಳೀಯ ಸಂಘ ಸಂಸ್ಥೆಗಳು ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸಿದ್ದಾರೆ.
ಮೋಹನ್‌ ದಾಸ್‌, ಅಧ್ಯಕ್ಷರು,
   ಪಡುಪಣಂಬೂರು ಗ್ರಾ.ಪಂ.

ಟಾಪ್ ನ್ಯೂಸ್

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Kasaragod: ರಿಕ್ಷಾ ಚಾಲಕನ ಕೊಲೆ: ಜೀವಾವಧಿ ಸಜೆ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ

Road Mishap ಶಾಲಾ ಬಸ್‌-ಬೈಕ್‌ ಢಿಕ್ಕಿ: ಸವಾರನಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Sullia: ನಿಯಂತ್ರಣ ತಪ್ಪಿ ಕಾರು ಪಲ್ಟಿ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.