Mangaluru: ಬಡ್ಡಿ ಸಹಿತ ಪಾವತಿಸುವಂತೆ ಗ್ರಾಹಕ ನ್ಯಾಯಾಲಯ ಆದೇಶ
ಠೇವಣಿ ಮೊತ್ತ ಕಡಿತಗೊಳಿಸಿದ್ದ ಅಂಚೆ ಇಲಾಖೆ
Team Udayavani, Sep 27, 2024, 6:25 AM IST
ಮಂಗಳೂರು: ನಿವೃತ್ತ ಶಿಕ್ಷಕಿಯೊಬ್ಬರು ತನ್ನ ಪಿಂಚಣಿ ಹಣವನ್ನು 5 ವರ್ಷದ ಅವಧಿಗೆ ಅಂಚೆ ಕಚೇರಿಯಲ್ಲಿ ಠೇವಣಿ ಇರಿಸಿ, ಅವಧಿಗೂ ಮುನ್ನವೇ ಹಿಂಪಡೆದ ವೇಳೆ ವಿನಾಕಾರಣ ಕಡಿತಗೊಳಿಸಿದ್ದ ಮೊತ್ತವನ್ನು ಬಡ್ಡಿ ಸಹಿತ ಅವರಿಗೆ ಮರು ಪಾವತಿಸುವಂತೆ ಮಂಗಳೂರು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಮಂಗಳೂರು ಮೂಲದ ನಿವೃತ್ತ ಶಿಕ್ಷಕಿ ರೀಟಾ ನೊರೋನ್ಹಾ ಅವರು ತನ್ನ ಪಿಂಚಣಿಯ ಹಣ 22 ಲಕ್ಷ ರೂ.ಯನ್ನು ಕಂಕನಾಡಿ ಅಂಚೆ ಕಚೇರಿಯಲ್ಲಿ 5 ವರ್ಷಗಳ ಅವಧಿಗೆ 2020ರ ಫೆ. 28ರಲ್ಲಿ ಜಮೆ ಮಾಡಿದ್ದರು. ಪ್ರತೀವರ್ಷ 1,74,355 ರೂ. ಬಡ್ಡಿ ಪಾವತಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ನಡುವೆ ಹಣಕಾಸಿನ ಅಡಚಣೆ ಎದುರಾದ ಸಂದರ್ಭದಲ್ಲಿ 2023ರ ಮೇ 18ರಂದು ಜಮೆ ಮಾಡಿದ ಹಣವನ್ನು ಹಿಂಪಡೆಯಲು ಅಂಚೆ ಕಚೇರಿಗೆ ಮನವಿ ಮಾಡಿದ್ದರು.
ಅಂಚೆ ಇಲಾಖೆ 22 ಲಕ್ಷದ ಬದಲಾಗಿ 20,20,994 ರೂ. ಮೊತ್ತವನ್ನು ನಿವೃತ್ತ ಶಿಕ್ಷಕಿಯ ಖಾತೆಗೆ ವರ್ಗಾಯಿಸಿತ್ತು. 1,79,006 ರೂ.ಗಳನ್ನು ಇಲಾಖೆ ಸಮರ್ಪಕ ಮಾಹಿತಿ ನೀಡದೆ ಕಡಿತಗೊಳಿಸಿತ್ತು.
ಗ್ರಾಹಕ ನ್ಯಾಯಾಲಯದ ಮೊರೆ
ಈ ನಡುವೆ ತನಗೆ ಆಗಿರುವ ಅನ್ಯಾಯ ಪ್ರಶ್ನಿಸಿ ನಿವೃತ್ತ ಶಿಕ್ಷಕಿ 2023ರ ಜುಲೈ 13ರಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದರು. ಗ್ರಾಹಕ ನ್ಯಾಯಾಲಯವು 2024ರ ಸೆ. 23ರಂದು ಅಂಚೆ ಕಚೇರಿ ತಡೆ ಹಿಡಿದಿದ್ದ 1,79,006 ರೂ.ವನ್ನು ಶೇ. 8ರ ಬಡ್ಡಿಯೊಂದಿಗೆ 45 ದಿನಗಳ ಒಳಗಾಗಿ ಮರುಪಾವತಿಸುವಂತೆ ಆದೇಶ ನೀಡಿದೆ. ಅಲ್ಲದೆ 25 ಸಾವಿರ ರೂ. ಪರಿಹಾರ ಮೊತ್ತ ಹಾಗೂ 10 ಸಾವಿರ ವ್ಯಾಜ್ಯದ ಖರ್ಚು ಪಾವತಿಸುವಂತೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗಿಲ್ಲ:ಮಂಜುನಾಥ ಭಂಡಾರಿ
Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು
Mangaluru: ಅಮೆರಿಕದಲ್ಲಿ ಯಕ್ಷಗಾನಕ್ಕೆ ಸಿಕ್ಕ ಗೌರವ ಅವಿಸ್ಮರಣೀಯ: ಪಟ್ಲ ಸತೀಶ್ ಶೆಟ್ಟಿ
Kaun Banega Crorepati ಸ್ಪರ್ಧಿ ಅಪೂರ್ವ ಶೆಟ್ಟಿ; 2 ವರ್ಷಗಳ ಪ್ರಯತ್ನಕ್ಕೆ ಸಿಕ್ಕಿದ ಫಲ
Rain: ಕರಾವಳಿಯ ವಿವಿಧೆಡೆ ಸಾಧಾರಣ ಮಳೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.