ಮಳೆಗಾಲಕ್ಕೆ  ಕ್ಷಣಗಣನೆ: ಕೊಡೆ, ರೈನ್  ಕೋಟ್‌ಗಳಿಗೆ ಹೆಚ್ಚಿದ ಬೇಡಿಕೆ


Team Udayavani, Jun 1, 2018, 11:30 AM IST

1june-2.jpg

ಮಹಾನಗರ: ಮಳೆಗಾಲ ಎಂದರೆ ಮೊದಲು ನೆನಪಿಗೆ ಬರುವುದೇ ಕೊಡೆ, ರೈನ್‌ ಕೋಟ್‌. ಮಳೆಗಾಲದಲ್ಲಿ ಕೊಡೆ ಬಿಟ್ಟವ ಕೆಟ್ಟ ಎಂಬ ಗಾದೆಯೇ ಇದೆ. ಮಳೆ ನಿಂತ ಮೇಲೆ ಮೂಲೆ ಸೇರಿದ ಕೊಡೆಗಳು ಮತ್ತೆ ಪ್ರತ್ಯಕ್ಷವಾಗುವುದು ಮಳೆ ಪ್ರತ್ಯಕ್ಷವಾದ ಬಳಿಕವೇ!

ಇನ್ನೂ ಹೊಸ ಕೊಡೆಗಳ ಖರೀದಿಯ ಬಗ್ಗೆ ಹೇಳುವುದೇ ಬೇಡ. ಮಳೆಗಾಲ ಆರಂಭದಲ್ಲಿ ಎಲ್ಲ ಅಂಗಡಿಗಳಲ್ಲೂ ಕೊಡೆ, ರೈನ್‌ಕೋಟ್‌ಗಳು ಮೊದಲ ಪ್ರಾಶಸ್ತ್ಯ  ಪಡೆದುಕೊಂಡಿರುತ್ತದೆ. ತರೇವಾರಿ ಕೊಡೆಗಳ ಸಾಲು ಮಾರುಕಟ್ಟೆಯುದ್ದಕ್ಕೂ ಕಂಗೊಳಿಸುತ್ತದೆ. ಮಳಿಗೆಗಳಲ್ಲಿ ಹಿಡಿಗಾತ್ರದಿಂದ ಉದ್ದಕೋಲಿನವರೆಗೆ ಬಣ್ಣ ಬಣ್ಣದ ಕೊಡೆಗಳ ಸಾಲುಸಾಲು. ಸಾಂಪ್ರಾದಾಯಿಕ ಕೊಡೆಗಳಿಂದ ಆಧುನಿಕ ಫ್ಯಾಶನ್‌ ಕೊಡೆಗಳವರೆಗೆ ಗ್ರಾಹಕರ ಅಭಿರುಚಿಗೆ ತಕ್ಕಂತಹ ಕೊಡೆ, ರೈನ್‌ಕೋಟ್‌ಗಳ ಖರೀದಿ ಭರಾಟೆ ಹೆಚ್ಚುತ್ತಿದೆ.

ಮುಂಗಾರು ಆರಂಭದ ತವಕದಲ್ಲಿರುವ ಮಂಗಳೂರಿನಲ್ಲಿ ಇದೀಗ ಕೊಡೆ, ರೈನ್‌ಕೋಟ್‌ ವ್ಯಾಪಾರವೂ ಜೋರಾಗಿದೆ. ಮಂಗಳವಾರ ಸುರಿದ ಭಾರೀ ಮಳೆಯಿಂದ ನಗರ ಜೀವನ ಆಸ್ತವ್ಯಸ್ತ ಆಗಿದ್ದರೂ ಮುಂದಿನ ಮಳೆಗಾಲ ಎದುರಿಸುವ ನಿಟ್ಟಿನಲ್ಲಿ ಜನರು ಕೊಡೆ, ರೈನ್‌ಕೋಟ್‌ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೊಡೆ ವ್ಯಾಪಾರವೂ ಭರ್ಜರಿಯಾಗಿ ನಡೆಯುತ್ತಿದೆ.

ಮಳೆಗಾಲ ಮುಂಚಿತವಾಗಿ ಕೊಡೆ, ರೈನ್‌ ಕೋಟ್‌ ಖರೀದಿಸಿ ದವ ರು ಈಗ ನಿರಾಳವಾಗಿರಬಹುದು. ಮಳೆ ಆರಂಭಗೊಂಡ ಬಳಿಕ ಖರೀದಿಗೆ ತೆರಳುವವರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಯಾಕೆಂದರೆ ಮಳೆ ಆರಂಭವಾದ ಬಳಿಕ ಕೊಡೆ, ರೈನ್‌ಕೋಟ್‌ ಅವಶ್ಯವಾಗಿರುವುದರಿಂದ ಅಂಗಡಿ ಮಾಲಕರು ಆದರ ಬೆಲೆಯನ್ನು ದಿಢೀರ್‌ ಏರಿಸುತ್ತಾರೆ. ಹಾಗಾಗಿ ಮಳೆಗಾಲದಲ್ಲಿ ಅವಶ್ಯವಾಗಿರುವ ಕೊಡೆ, ರೈನ್‌ ಕೋಟ್‌ಗಳ ಲಾಭವನ್ನು ಅಂಗಡಿ ಮಾಲಕರು ಪಡೆದುಕೊಳ್ಳುತ್ತಿದ್ದಾರೆ.

ದುಬಾರಿಯಾದರೂ ಬ್ರ್ಯಾಂಡೆಡ್ ರೈನ್‌ ಕೋಟ್‌ಗಳಿಗೆ ಬೇಡಿಕೆ ಹೆಚ್ಚು
ಒಮ್ಮೆ ದುಬಾರಿ ಹಣ ಕೊಟ್ಟು ಬ್ರ್ಯಾಂಡೆಡ್ ಕೊಡೆ, ರೈನ್‌ಕೋಟ್‌ ಖರೀದಿಸಿದರೆ ಸುಮಾರು 5 ವರ್ಷಗಳ ಕಾಲ ಮತ್ತೆ ಕೊಡೆ, ರೈನ್‌ಕೋಟ್‌ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಜನರು ಅವುಗಳತ್ತ ಹೆಚ್ಚು ಒಲವು ತೋರಿಸುತ್ತಾರೆ. ಅದಕ್ಕೆ ಇದರ ಬೆಲೆಯೂ ಕೊಂಚ ದುಬಾರಿಯಾಗಿದೆ. ವಿವಿಧ ಬ್ರ್ಯಾಂಡೆಡ್  ಕೊಡೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸಣ್ಣ ಕೊಡೆಗಳು 300 ರೂ. ನಿಂದ ಆರಂಭಗೊಂಡು 450 ರೂ. ಬೆಲೆ ಹೊಂದಿದ್ದು, ದೊಡ್ಡ ಕೊಡೆಗಳು ಇದರಿಂದ ಕೊಂಚ ದುಬಾರಿಯಾಗಿದೆ.

ರಸ್ತೆ ಬದಿಗಳಲ್ಲಿ ಕೊಡೆ, ರೈನ್‌ಕೋಟ್‌
ಮಳಿಗೆಗಳಲ್ಲಿ ಮಾತ್ರವಲ್ಲದೆ ನಗರದ ಮುಖ್ಯ ರಸ್ತೆಗಳ ಬದಿಗಳಲ್ಲಿ ಹಾಗೂ ಹೆದ್ದಾರಿ ರಸ್ತೆ ಬದಿಗಳಲ್ಲಿ ಕೊಡೆ, ರೈನ್‌ ಕೋಟ್‌ಗಳ ಮಾರಾಟ ಜೋರಾಗಿದೆ. ಹೆದ್ದಾರಿ ಬದಿಗಳಲ್ಲಿ ಬಣ್ಣ ಬಣ್ಣದ ಕೊಡೆ ಹಾಗೂ ರೈನ್‌ಕೋಟ್‌ಗಳು ಕಣ್ಣಿಗೆ ಬೀಳುತ್ತಿವೆ. ಅಂಗಡಿಗಳಲ್ಲಿ ಲಭಿಸುವ ಬೆಲೆಗಿಂತ ಇಲ್ಲಿ ತುಸು ಕಡಿಮೆಗೆ ದೊರೆಯುವುದರಿಂದ ಜನರು ಈ ಕೊಡೆ, ರೈನ್‌ ಕೋಟ್‌ಗಳ ಖರೀದಿಯತ್ತ ಆಕರ್ಷಿತರಾಗುತ್ತಿದ್ದಾರೆ. 

ಈಗ ವ್ಯಾಪಾರ ಪರವಾಗಿಲ್ಲ
ಮಳೆಗಾಲ ಆರಂಭವಾಗುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ವ್ಯಾಪಾರ ನಡೆಯುತ್ತಿದೆ. ಮಂಗಳವಾರದ ಮಳೆ ಅಕ್ಷರಶಃ ನಮ್ಮನ್ನು ಗಾಬರಿ ಪಡಿಸಿತ್ತು. ಈಗ ಪರವಾಗಿಲ್ಲ. ವ್ಯಾಪಾರ ನಡೆಯುತ್ತಿದೆ. 
– ಮೆಹತ್‌ ಅಲಿ, ಕೊಡೆ ವ್ಯಾಪಾರಿ

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

1-aaaaa

Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video

Khattar

2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

2(1

Sullia: ಜಾಕ್‌ವೆಲ್‌ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್‌

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

1(1

Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Mollywood: ನಟಿ ಹನಿ ರೋಸ್‌ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.