Mangaluru: ಬೆಳೆ ವಿಮೆ ಯೋಜನೆ: ದ.ಕ.ಕ್ಕೆ 349 ಕೋ. ರೂ.

ರಾಜ್ಯದಲ್ಲೇ ಇದು ಗರಿಷ್ಠ ಮೊತ್ತ, ಈ ಬಾರಿ ಇನ್ನಷ್ಟು ಹೆಚ್ಚು ನಿರೀಕ್ಷೆ

Team Udayavani, Sep 26, 2024, 12:11 AM IST

Mangaluru: ಬೆಳೆ ವಿಮೆ ಯೋಜನೆ: ದ.ಕ.ಕ್ಕೆ 349 ಕೋ. ರೂ.

ಮಂಗಳೂರು: ಬೆಳೆವಿಮೆ ಯೋಜನೆ ಜಿಲ್ಲೆಯಲ್ಲಿ ಕೃಷಿಕರ ವಿಶ್ವಾಸ ಗಳಿಸುತ್ತಿದೆ. ಅದಕ್ಕೆ ಸೂಚಕವಾಗಿ ಇದುವರೆಗಿನ ಗರಿಷ್ಠ ಮಟ್ಟದ ಪೇಔಟ್‌ ಆಗಿ ಜಿಲ್ಲೆಗೆ 349 ಕೋ. ರೂ. ತೋಟಗಾರಿಕೆ ಬೆಳೆಗಳಿಗೆ ವಿತರಿಸಲಾಗಿದೆ. ಈ ಮೂಲಕ ವಿಮೆ ಮೊತ್ತ ಪಡೆಯುವಲ್ಲಿ ರಾಜ್ಯದಲ್ಲೇ ನಂ.1 ಜಿಲ್ಲೆಯಾಗಿ ಗುರುತಿಸಿಕೊಂಡಿದೆ.

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಪೇಔಟ್‌ ಮೊತ್ತ ವಿತರಣೆಯಾಗುತ್ತಾ ಬಂದಿರುವ ಹಿನ್ನೆಲೆ ಹಾಗೂ ಈ ಬಾರಿ ಹೆಚ್ಚಿದ ಮಳೆಯ ಕಾರಣದಿಂದಾಗಿ ಮತ್ತೆ ದಾಖಲೆ ಮಟ್ಟದಲ್ಲಿ ವಿಮಾ ಮೊತ್ತ ವಿತರಣೆಯಾಗುವ ನಿರೀಕ್ಷೆಯೂ ಇದೆ.

ಹವಾಮಾನ ಆಧರಿತ ಬೆಳೆವಿಮೆ ಪ್ರೀಮಿಯಂ ಪಾವತಿ ಕುರಿತಂತೆ ಪ್ರತಿ ವರ್ಷವೂ ಹುಟ್ಟಿಕೊಳ್ಳುವ ಹಲವು ಗೊಂದಲಗಳ ಹೊರತಾಗಿಯೂ ನಿರಂತರವಾಗಿ ಕರಾವಳಿ ಜಿಲ್ಲೆಯಲ್ಲಿ ಬೆಳೆವಿಮೆಗೆ ರೈತರು ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ತೋಟಗಾರಿಕೆ ಇಲಾಖೆ ನೀಡುವ ಮಾಹಿತಿ.

2022- 23ರಲ್ಲಿ ಸುಳ್ಯ(90.34 ಕೋ. ರೂ.) ಪುತ್ತೂರು (85.58 ಕೋ. ರೂ.), ಕಡಬ (65.97 ಕೋ. ರೂ.), ಬೆಳ್ತಂಗಡಿ ( 50.57 ಕೋ. ರೂ.), ಬಂಟ್ವಾಳ (49.28 ಕೋ. ರೂ.) ತಾಲೂಕುಗಳು ದೊಡ್ಡ ಪ್ರಮಾಣದಲ್ಲಿ ಯೋಜನೆಯ ಪ್ರಯೋಜನ ಪಡೆದುಕೊಂಡಿವೆ. ಸುಮಾರು 500ರಷ್ಟು ಅರ್ಜಿಗಳ ವಿಲೇವಾರಿ ಬಾಕಿ ಇದೆ. ಆಧಾರ್‌ ಜೋಡಣೆ ಸರಿಯಾಗದಿರುವುದು, ಬೆಳೆ ಸಮೀಕ್ಷೆ ಹೊಂದಾಣಿಕೆ ಆಗದಿರುವುದು ಮುಂತಾದ ಕಾರಣಗಳಿಂದ ವಿಮೆ ಮೊತ್ತ ಬಿಡುಗಡೆ ಬಾಕಿ ಇದ್ದು, ತಪ್ಪು ಸರಿಪಡಿಸಿದ ಬಳಿಕ ಪಾವತಿಯಾಗುವ ನಿರೀಕ್ಷೆ ಇದೆ.

ವರ್ಷದಿಂದ ವರ್ಷಕ್ಕೆ ಏರಿಕೆ
2016-17ರಲ್ಲಿ ಆರಂಭದ ವರ್ಷದಲ್ಲಿ 7.35 ಕೋ.ರೂ., 2017-18ರಲ್ಲಿ 3.52 ಕೋ. ರೂ., 2018-19ರಲ್ಲಿ 39.87 ಕೋ.ರೂ., 2019-20ರಲ್ಲಿ 88.43 ಕೋ.ರೂ., 2020-21ರಲ್ಲಿ 99.38 ಕೋ. ರೂ., 2021-22ರಲ್ಲಿ 150.14 ಕೋ. ರೂ. ವಿಮೆ ಮೊತ್ತ ವಿತರಿಸಲಾಗಿದೆ.

ಹವಾಮಾನ ಆಧರಿತ ವಿಮೆ ಎನ್ನುವುದು ವ್ಯವಸ್ಥಿತ, ವೈಜ್ಞಾನಿಕ ಪದ್ಧತಿ. ಇದರಲ್ಲಿ ಮಳೆಯ ತೀವ್ರತೆ, ಅಕಾಲಿಕ ಮಳೆ ಹಾಗೂ ತಾಪಮಾನ ಎಂಬ ಮೂರು ವಿಭಾಗಗಳಡಿ ನಷ್ಟವನ್ನು ಅಂದಾಜಿಸಲಾಗುತ್ತದೆ.

ಮಳೆ ಪ್ರಮಾಣ ದಿನಕ್ಕೆ 100 ಮಿ.ಮೀ.ಗಿಂತ ಹೆಚ್ಚಾದರೆ ಜಿಲ್ಲೆಯಲ್ಲಿ ನಷ್ಟ ಲೆಕ್ಕಾಚಾರ ಆರಂಭವಾಗುತ್ತದೆ. ಹೆಚ್ಚಾದಷ್ಟೂ ನಷ್ಟದ ಪ್ರಮಾಣವನ್ನು ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಅಕಾಲಿಕವಾಗಿ ಮಳೆ ಸುರಿದಾಗಲೂ ರೋಗ ಬಾಧೆ ಪೂರಕ‌ ಪರಿಸ್ಥಿತಿ (ಕಂಜೀನಿಯಲ್‌ ಕಂಡಿಷನ್ಸ್‌) ಉಂಟಾಗುತ್ತದೆ. ಮೂರನೇ ಮಾನದಂಡ ವೆಂದರೆ ತಾಪಮಾನ. ಮುಖ್ಯವಾಗಿ ಎಪ್ರಿಲ್‌ – ಮೇ ತಿಂಗಳಲ್ಲಿ ಅಧಿಕ ತಾಪಮಾನದಿಂದಾಗಿ ಎಳೆಯ ಅಡಿಕೆ ಬಾಡಿ ಬೀಳುತ್ತದೆ.

ಹವಾಮಾನ ಆಧರಿತ ಬೆಳೆವಿಮೆಗೆ ಗ್ರಾ.ಪಂ ಒಂದು ಘಟಕವಾಗಿರುತ್ತದೆ. ಎಲ್ಲ ಮಾಹಿತಿ ಸಂಗ್ರಹಿಸಿಕೊಂಡು ಕೇಂದ್ರ ಸರಕಾರದ ಇ-ಆಫೀಸ್‌ನಲ್ಲಿ ಆಯಾ ರೈತರಿಗೆ ಎಷ್ಟು ವಿಮೆ ಕೊಡಬೇಕು ಎನ್ನುವುದನ್ನು ನಿಗದಿಪಡಿಸಿ ಖಾತೆಗೆ ನೇರವಾಗಿ ಪಾವತಿಸಲಾಗುತ್ತದೆ.

ಈ ಬಾರಿ 1,32,019 ಅರ್ಜಿ
ಆರಂಭದಲ್ಲಿ ಯೋಜನೆ ಬಗ್ಗೆ ಸಂಶಯಗಳಿದ್ದರೂ ಬಳಿಕ ವರ್ಷದಿಂದ ವರ್ಷಕ್ಕೆ ರೈತರಿಗೆ ಇದರಲ್ಲಿರುವ ಅನುಕೂಲತೆಗಳು ಕೈ ಹಿಡಿದಿವೆ. ಹಾಗಾಗಿ ಪ್ರಸ್ತುತ ದ.ಕ.ದಲ್ಲಿ ಈ ವರ್ಷಕ್ಕೆ ಕಾಳುಮೆಣಸು ಹಾಗೂ ಅಡಿಕೆ ಸಹಿತ 1,32,019 ಅರ್ಜಿಗಳು ಸ್ವೀಕೃತಗೊಂಡಿವೆ. ಅತ್ಯಧಿಕ ಅರ್ಜಿಗಳು ಸುಳ್ಯದಿಂದ (32,291) ಸ್ವೀಕೃತಗೊಂಡಿವೆ. ಕಡಬ 28,623, ಪುತ್ತೂರು 25,729, ಬೆಳ್ತಂಗಡಿ 24,352, ಬಂಟ್ವಾಳ 17,562, ಮೂಡುಬಿದಿರೆ 1,778, ಮಂಗಳೂರು 599, ಉಳ್ಳಾಲ 1,013 ಹಾಗೂ ಮೂಲ್ಕಿ 72 ಅರ್ಜಿಗಳು ಬಂದಿವೆ.

ಟಾಪ್ ನ್ಯೂಸ್

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Manipal: ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Arrest

Ajjampura: ಪತ್ನಿಯ ಶೀಲ ಶಂಕಿಸಿ 5 ವರ್ಷದ ಮಗಳನ್ನೇ ಕೊಂದ ತಂದೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangaluru: ವಿಧಾನ ಪರಿಷತ್‌ ಉಪಚುನಾವಣೆ; ಡಿಸಿ ಕಚೇರಿ ಸುತ್ತ ನಿಷೇಧಾಜ್ಞೆ

Mangaluru: ವಿಧಾನ ಪರಿಷತ್‌ ಉಪಚುನಾವಣೆ; ಡಿಸಿ ಕಚೇರಿ ಸುತ್ತ ನಿಷೇಧಾಜ್ಞೆ

Mangaluru: ಅನುಮಾನಾಸ್ಪದ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ತಂಡ

Mangaluru: ಅನುಮಾನಾಸ್ಪದ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ತಂಡ

WhatsApp Image 2024-09-25 at 20.56.17

Mangaluru: ಆ್ಯಂಬುಲೆನ್ಸ್‌ ಪಲ್ಟಿ; ರೋಗಿ ಸಾವು

10

Kodailbail: ಕೆ.ಎಸ್‌.ರಾವ್‌ ರಸ್ತೆ; ಪಾದಚಾರಿಗಳಿಗಿಲ್ಲ ಸುರಕ್ಷತೆ !

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.