![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 28, 2024, 10:09 PM IST
ಸುರತ್ಕಲ್: ತನ್ನನ್ನು ಯೋಧ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ, ಯೋಧರಿಗೆ ಚಿಕಿತ್ಸೆ ಕೊಡಲು ನಿಮ್ಮ ಸಹಕಾರ ಬೇಕು ಎಂದು ಹೇಳಿ ಸುರತ್ಕಲ್ನ ಮಹಿಳಾ ವೈದ್ಯರೊಬ್ಬರ ಖಾತೆಯಿಂದ 2 ಲಕ್ಷ ರೂ. ಡ್ರಾ ಮಾಡಿ ಮೋಸ ಮಾಡಿದ ಘಟನೆ ಫೆ. 26ರಂದು ನಡೆದಿದೆ.
ವೈದ್ಯರು ಕ್ಲಿನಿಕ್ನಲ್ಲಿದ್ದ ಸಂದರ್ಭ ಕರೆ ಮಾಡಿ, ತಾನು ಸೈನ್ಯದಲ್ಲಿ ಅಧಿಕಾರಿಯಾಗಿದ್ದು ನಮ್ಮ ಯೋಧರಿಗೆ ನೀವು ಚಿಕಿತ್ಸೆ ಕೊಡಬೇಕು. ಇದಕ್ಕಾಗಿ ನಿಮಗೆ ರಿಜಿಸ್ಟರ್ ನಂಬ್ರ ಕೊಡಲಾಗುವುದು ಎಂದು ಹೇಳಿ ಮೊಬೈಲ್ನಲ್ಲಿ ಕೋಡ್ ಹಾಕಲು ಹೇಳಿದ್ದಾನೆ. ಮೊದಲ ಬಾರಿ ಹಾಕಿದಾಗ 50 ಸಾವಿರ ರೂ. ಹೀಗೆ ಒಟ್ಟು ಮೂರು ಬಾರಿ ತಲಾ 50 ಸಾ.ರೂ. ಒಂದು ಬಾರಿ 30 ಸಾ.ರೂ. ಹಾಗೂ ಕೊನೆಯ ಬಾರಿ 20 ಸಾ.ರೂ ಡ್ರಾ ಮಾಡಿ ಸಂಪರ್ಕ ಕಡಿತಗೊಳಿಸಿದ್ದಾನೆ ಎನ್ನಲಾಗಿದೆ.
ಈ ಹಿಂದೆಯೂ ಇದೇ ವ್ಯಕ್ತಿ ಸುರತ್ಕಲ್ನ ಟಿಫಿನ್ ಸೆಂಟರ್ ಮಾಲಕರನ್ನು ಮೋಸ ಮಾಡಲು ಯತ್ನಿಸಿ ವಿಫಲನಾಗಿದ್ದ ಎನ್ನಲಾಗಿದೆ. ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸುರಕ್ಷತೆಗೆ ಕರೆ ಸಂಪರ್ಕ
ಕಡಿತ ಮಾಡಿ
ಯಾವುದೇ ಒಟಿಪಿ ನೀಡದೆಯೂ ಹೈಟೆಕ್ ಕಳ್ಳರು ಸೈನ್ಯದ ಹೆಸರು ದುರ್ಬಳಕೆ ಮಾಡಿಕೊಂಡು ನಾನಾ ತಂತ್ರಜ್ಞಾನ ಉಪಯೋಗಿಸಿ ಬ್ಯಾಂಕ್ನಿಂದ ಹಣ ಡ್ರಾ ಮಾಡುತ್ತಿದ್ದು ,ಹೆಚ್ಚಿನ ತಾಂತ್ರಿಕ ವ್ಯವಸ್ಥೆಯನ್ನೂ ಮೀರಿ ಅಪರಾಧಿಗಳು ಕೃತ್ಯ ನಡೆಸುತ್ತಿರುವುದು ಪೊಲೀಸ್ ಇಲಾಖೆಗೂ ಸವಾಲಾಗಿ ಪರಿಣಮಿಸಿದೆ. ಯೋಧರ, ಸೈನ್ಯಾಧಿಕಾರಿಯ ಹೆಸರಿನಲ್ಲಿ ಸುಳ್ಳು ಕರೆ ಬಂದಲ್ಲಿ ಯಾವುದೇ ಕಾರಣಕ್ಕೂ ಕರೆ ಮುಂದುವರಿಸದೆ ಯಾವುದೇ ಕೋಡ್ ನಂಬ್ರವನ್ನು ಒತ್ತದೆ ದೂರವಾಣಿ ಸಂಪರ್ಕ ಕಡಿತ ಮಾಡುವುದೇ ಸುರಕ್ಷತೆಯ ದಾರಿ ಎಂಬುದು ಐಟಿ ತಂತ್ರಜ್ಞರ ಸಲಹೆಯಾಗಿದೆ.
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.