ನರಹರಿ ಪರ್ವತದಲ್ಲಿ ‘ದಗಲ್ಬಾಜಿ’ಗಳು !
Team Udayavani, Dec 17, 2017, 3:45 PM IST
ಬಂಟ್ವಾಳ: ಪುರಾಣ ಪ್ರಸಿದ್ಧ ನರಹರಿ ಪರ್ವತದಲ್ಲಿ ಕಳೆದ ಎರಡು ದಿನಗಳಿಂದ ‘ದಗಲ್ಬಾಜಿ’ ಫಿಲಂ ಚಿತ್ರೀಕರಣ ನಡೆಯುತ್ತಿದೆ.
ಪ್ರಕೃತಿ ಮಡಿಲು ಶಿವ ಸನ್ನಿಧಿಯಲ್ಲೂ ದಗಲ್ಬಾಜಿಗಳು ಕೈಚಳಕ ತೋರಿಸಿದ್ದು ವಿಸ್ಮಯ ಎನಿಸುತ್ತಿದೆ. ಇದು ರಿಯಲ್ ಅಲ್ಲ, ಇದೊಂದು ರೀಲ್ನ ಕ್ಲೈಮ್ಯಾಕ್ಸ್. ‘ದಗಲ್ ಬಾಜಿ’ ತುಳು ಚಿತ್ರ ತಂಡದವರು ನರಹರಿ ಪರ್ವತದಲ್ಲಿ ಸೆಟ್ ಹಾಕಿ ಮದುವೆಯ ಕ್ಲೈಮಾಕ್ಸ್ ಅನ್ನು ಚಿತ್ರಿಸಿಕೊಂಡರು. ಭಾರೀ ಹೊಡೆದಾಟದ ದೃಶ್ಯವನ್ನು ಪರ್ವತದ ತುತ್ತ ತುದಿಯಲ್ಲಿ ಚಿತ್ರೀಕರಿಸಲಾಗಿದೆ. ಇಂತಹ ಕ್ಲೈಮ್ಯಾಕ್ಸ್ ದೃಶ್ಯವನ್ನು ಈ ತಂಡ ಮೊದಲ ಬಾರಿಗೆ ನರಹರಿ ಪರ್ವತದಲ್ಲಿ ಚಿತ್ರೀಕರಿಸಿದೆ.
ಸಾಹಸ ನಿರ್ದೇಶಕ, ಉಗ್ರಂ ಖ್ಯಾತಿಯ ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನದಲ್ಲಿ ಮೈನವಿರೇಳಿಸುವ ಸಾಹಸ ದೃಶ್ಯಗಳನ್ನು ಛಾಯಾಚಿತ್ರಗ್ರಾಹಕ ಕೆ.ಎಂ. ವಿಷ್ಣುವರ್ಧನ್ ಅವರು ಚಿತ್ರೀಕರಿಸುತ್ತಿದ್ದು, ಚಿತ್ರದಲ್ಲಿ ನಟ ವಿಘ್ನೇಶ್, ಕಲಾ ನಾಯಕ ಸುರೇಶ್ ಅಂಚನ್, ನಾಯಕಿ ರಶ್ಮಿಕಾ ಹಾಗೂ ತುಳುನಾಡಿನ ಕಲಾ ದಿಗ್ಗಜರಾದ ನವೀನ್ ಡಿ. ಪಡೀಲ್, ಅರವಿಂದ್ ಬೊಳಾರ್, ಭೋಜರಾಜ್ ವಾಮಂಜೂರ್, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಉಮೇಶ್ ಮಿಜಾರ್ ಮೊದಲಾದ ನೂರಾರು ಸಹ ಕಲಾವಿದರು ಪಾಲ್ಗೊಂಡು ಚಿತ್ರೀಕರಣ ಭರದಿಂದ ಸಾಗಿತ್ತು. ಸುನೀಲ್ ನೆಲ್ಲಿಗುಡ್ಡೆ, ಚಂದ್ರಶೇಖರ್ ಸಿದ್ಧಕಟ್ಟೆ, ರೂಪಾ ವರ್ಕಾಡಿ, ಪ್ರಿಯಾ ಹೆಗ್ಡೆ ಭಾಗವಹಿಸಿದ್ದರು.
ಸಂತೋಷ್ ಶೆಟ್ಟಿ ಕುಂಬ್ಳೆ ನಿರ್ಮಾಣದ ಈ ಚಿತ್ರಕ್ಕೆ ಸುರೇಶ್ ಅಂಚನ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ಆರ್.ಡಿ. ವರ್ಮನ್ ಮತ್ತು ಸಂದೇಶ ಬಾಬು ಸಂಗೀತ ನೀಡಿದ್ದು, ವಿ.ಎಸ್. ಪ್ರಶಾಂತ್ ನಿರ್ದೇಶಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Puttur: ಮೊದಲ ಕಿನ್ನಿಪಿಲಿಗೆ 48 ವರ್ಷ!; 15ರಿಂದ 75ಕ್ಕೇರಿದ ಟೀಮ್
Belthanagdy:ಹಿರಿಯ ಸಹಕಾರಿ,ಉಜಿರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸೇವಾಸಂಘದ ಅಧ್ಯಕ್ಷ ನಿಧನ
Mangaluru: ಮುಮ್ತಾಜ್ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
Bigg Boss Kannada11: ಬಿಗ್ ಬಾಸ್ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?
Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.