Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

ಪಕ್ಷಗಳಲ್ಲಿ ಸೋಲು-ಗೆಲುವಿನ ನಾನಾ ಕೋನದ ಅವಲೋಕನ

Team Udayavani, Apr 29, 2024, 6:50 AM IST

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

ಮಂಗಳೂರು: ಕರಾವಳಿಯಲ್ಲಿ ಲೋಕ ಸಮರ ಮುಕ್ತಾಯವಾಗಿದ್ದು, ಜೂ. 4ರ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ಮಧ್ಯೆ, ಸೋಲು-ಗೆಲುವಿನ ಲೆಕ್ಕಾಚಾರಗಳು ಬಿಜೆಪಿ-ಕಾಂಗ್ರೆಸ್‌ ಮಧ್ಯೆ ಬಿರುಸಿ ನಿಂದಲೇ ನಡೆಯುತ್ತಿದೆ.

ಮತಯಂತ್ರದೊಳಗೆ ಭದ್ರವಾಗಿ ರುವ ಜನಾದೇಶ ಪ್ರಕಟಗೊಳ್ಳಲು ಇನ್ನು ಬರೋಬ್ಬರಿ 36 ದಿನಗಳು ಬಾಕಿ ಉಳಿದಿದ್ದು ಸೋಲು ಗೆಲುವಿನ ಬಗ್ಗೆ ಲೆಕ್ಕಾಚಾರ, ವಿಶ್ಲೇಷಣೆಗಳು ಮಾತ್ರ ನಾನಾ ಕೋನಗಳಿಂದ ಲೆಕ್ಕವಿಲ್ಲದಷ್ಟು ನಡೆಯುತ್ತಿವೆ.

ದ.ಕ. ಲೋಕಸಭಾ ಕ್ಷೇತ್ರದಲ್ಲಿ ಶೇ.77.56 ಮತದಾನವಾಗಿದೆ. ಎಂದಿ ನಂತೆ ಸುಳ್ಯದಲ್ಲಿ ಗರಿಷ್ಠ ಶೇ.83.01 ಮತದಾನವಾಗಿದೆ. ಹೆಚ್ಚಿದ ಮತದಾನ ಮತ್ತು ಕ್ಷೇತ್ರದಲ್ಲಿ ವ್ಯಕ್ತವಾಗಿರುವ ರಾಜಕೀಯ ಟ್ರೆಂಡ್‌ಗಳನ್ನು ಮೂಲ ವಾಗಿಟ್ಟುಕೊಂಡು ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆಗಳು ನಡೆಯುತ್ತಿವೆ.

ದ.ಕ. ಕ್ಷೇತ್ರದ ಎಲ್ಲ 1,876 ಬೂತ್‌ಗಳ ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಕೂಡಿಸಿ ಕಳೆಯುವ ಮತ ಗಣಿತ ಲೆಕ್ಕಾ ಚಾರ ಪಕ್ಷಗಳ ಕಚೇರಿಯಲ್ಲಿ ನಡೆಯುತ್ತಿದೆ. ಪ್ರತಿಯೊಂದು ಬೂತ್‌ನಲ್ಲಿ ತಮ್ಮ ಪಕ್ಷಕ್ಕೆ ಬರುವ ಪಕ್ಕಾ ಮತಗಳು, ಎದುರಾಳಿ ಅಭ್ಯರ್ಥಿಗೆ ಹೋಗಿರುವ ಮತ, ಶೇ.50-50ರ ಅಂಚಿನಲ್ಲಿರುವ ಮತ ಗಳನ್ನು ಅಂದಾಜಿಸಿ ಗಳಿಸಿರಬಹುದಾದ ಮತಗಳ ಲೆಕ್ಕ ಹಾಕುವ ಕಾರ್ಯ ಆರಂಭ ಗೊಂಡಿದೆ. ಇವುಗಳನ್ನು ಕ್ರೋಢಿಕರಿಸಿ ಗೆಲುವಿನ ಸಾಧ್ಯತೆ, ಅಂತರಗಳ ಒಟ್ಟು ಚಿತ್ರಣವೊಂದನ್ನು ಅಂದಾಜಿಸುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತೊಡಗಿಸಿಕೊಂಡಿದ್ದಾರೆ.

ತಿಂಗಳ ಅಬ್ಬರ ಈಗ ಮೌನ!
ಮತದಾರರ ಮನಸ್ಸು ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತು, ಕಾರ್ಯತಂತ್ರಗಳನ್ನು ಅನು ಸರಿಸಿದ್ದವು. ಆರೋಪ ಪ್ರತ್ಯಾರೋಪ, ವಾದ ವಿವಾದ, ಭರವಸೆ, ಆಶ್ವಾಸನೆಗಳು ಚುನಾವಣ ಪ್ರಚಾರ ಕಣದಲ್ಲಿ ಸಾಕಾಷ್ಟು ಆಗಿ ಹೋಗಿದೆ. ಬಹಿರಂಗ ಪ್ರಚಾರ, ರೋಡ್‌ಶೋಗಳಿಂದ ಚುನಾವಣ ಕಣ ರಂಗೇರಿತ್ತು. ಮತದಾರರ ಮನೆಯೆಡೆಗೆ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡಿಗೆ ಸಾಗಿತ್ತು. ಕೆಲವು ಪ್ರಭಾವಿ ನಾಯಕರು ಜಿಲ್ಲೆಗೆ ಆಗಮಿಸಿ ರಾಜಕೀಯ ಸಂಚಲನ ಮೂಡಿಸಿದ್ದರು. ರಾಜಕೀಯ ಪಕ್ಷಗಳು, ಬೆಂಬಲಿಗ ಸಂಘಟನೆಗಳಿಂದ ಸರಣಿ ಪತ್ರಿಕಾಗೋಷ್ಠಿಗಳು ಆಯೋಜನೆ ಗೊಂಡಿದ್ದವು. ಎ.26ರಂದು ಮತದಾನ ನಡೆಯುವುದರ ಜತೆಗೆ ಇದೆಲ್ಲದಕ್ಕೂ ತೆರೆಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಸದ್ದುಗದ್ದಲದ ರಾಜಕೀಯ ವಾತಾವರಣ ಇದೀಗ ಮೌನಕ್ಕೆ ಜಾರಿದೆ.

ಮದುವೆ/ ಅಂಗಡಿ.. ಎಲ್ಲೆಡೆಯೂ ಮತದಾನೋತ್ತರ ಚರ್ಚೆ!
ದ.ಕ. ಲೋಕ ಕಣದಲ್ಲಿ ಯಾರು ಗೆಲ್ಲಬಹುದು ಎಂಬ ಬಗ್ಗೆ ಮತದಾರರಲ್ಲಿ ಕುತೂಹಲ ಗರಿಗೆದರಿದೆ. ಮದುವೆ ಸೇರಿದಂತೆ ಎಲ್ಲ ರೀತಿಯ ಸಮಾರಂಭದಲ್ಲಿ ಇದೇ ಬಹು ಚರ್ಚಿತ ವಿಷಯ. ಮತದಾನೋತ್ತರ ಸಮೀಕರಣ ಇಲ್ಲಿಯೂ ನಡೆಯುತ್ತಿದೆ. “ಹೇಗಾಗಬಹುದು?’ ಎಂದು ಮಾತು ಆರಂಭಿಸುತ್ತ ಜಾತಿ ಲೆಕ್ಕಾಚಾರ, ಪಕ್ಷಗಳ ನಿಲುವು, ಧರ್ಮ-ಜಾತಿ ಗಣಿತ, ಲಾಭ, ನಷ್ಟ ಹೀಗೆ ಎಲ್ಲ ಕೋನಗಳಿಂದ ಚರ್ಚೆ ನಡೆಯುತ್ತಿದೆ. ಜತೆಗೆ ಸಮಯವಿದ್ದವರು, ಹೊರ ಜಿಲ್ಲೆ-ರಾಜ್ಯದ ಕುತೂಹಲ ಸಂಗತಿ ಬಗ್ಗೆಯೂ ಮಾತು ಮುಂದುವರಿಸುತ್ತಾರೆ. ಕಳೆದ ಲೋಕಸಭೆಯ ಮತದಾನದ ಲೀಡ್‌, ವಿಧಾನಸಭೆಯಲ್ಲಿ ಆದ ಲೀಡ್‌ ಎಂಬಿತ್ಯಾದಿ ವಿಷಯಗಳಿಂದ ಚರ್ಚೆ ಗಮನಸೆಳೆಯುತ್ತಿದೆ. ಸಮಾರಂಭ ಮಾತ್ರವಲ್ಲ-ಹೊಟೇಲ್‌, ಸೆಲೂನ್‌ ಸಹಿತ ಎಲ್ಲ ವ್ಯವಹಾರ ತಾಣದಲ್ಲಿಯೂ ಈಗ ಮತದಾನೋತ್ತರದ್ದೇ ಚರ್ಚೆ!

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.