ಧರ್ಮಸ್ಥಳ: ಶಿವರಾತ್ರಿ ವೈಭವಕ್ಕೆ ಸಕಲ ಸಿದ್ಧತೆ


Team Udayavani, Mar 2, 2019, 5:55 AM IST

2-march-5.jpg

ಬೆಳ್ತಂಗಡಿ : ಮಹಾಶಿವರಾತ್ರಿ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಸಕಲ ಸಿದ್ಧತೆ ಕೈಗೊಂಡಿದ್ದು, ನಾಡಿನೆಲ್ಲೆಡೆಯಿಂದ ಭಕ್ತರು ತಂಡೋಪ ತಂಡವಾಗಿ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ.

ಪಂಚಾಕ್ಷರಿ ಮಂತ್ರ ಜಪಿಸುತ್ತ ಪಾದಯಾತ್ರೆಯಲ್ಲಿ ನಾಡಿನೆಲ್ಲೆಡೆಯಿಂದ ಸುಮಾರು 15,000 ಮಂದಿ ಭಕ್ತರು ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ಪಾದಯಾತ್ರಿಗಳ ಅನುಕೂಲಕ್ಕಾಗಿ ಶ್ರೀಕ್ಷೇತ್ರದಲ್ಲಿ ಸರ್ವರೀತಿಯ ಸಿದ್ಧತೆ ಕೈಗೊಳ್ಳಲಾಗಿದೆ. ಕಳೆದ ಬಾರಿ ಮಹಾ ಶಿವರಾತ್ರಿಗೆ 11,000 ಮಂದಿ ಭಕ್ತರು ಪಾದಯಾತ್ರೆಯಲ್ಲಿ ಆಗಮಿಸಿದ್ದರು. ಫೆ. 19ರಂದು ದಾವಣಗೆರೆ, ಬೆಂಗಳೂರು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಬೇಲೂರು ಸಹಿತ ವಿವಿಧೆಡೆಗಳಿಂದ ಪಾದಯಾತ್ರೆ ಆರಂಭಿಸಿದ್ದು, ರವಿವಾರದೊಳಗೆ ಕ್ಷೇತ್ರ ಸೇರಲಿದ್ದಾರೆ.

 ಕ್ಷೇತ್ರದಲ್ಲಿ ಸಿದ್ಧತೆ
ಭಕ್ತರಿಗೆ ಧರ್ಮಸ್ಥಳದ ವತಿಯಿಂದ ವೈದ್ಯಕೀಯ ಸೇವೆ, ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸಮಿತಿ ಮುಖೇನ ದೇಗುಲ ಅಲಂಕಾರ, ನಿರಂತರ ಭಜನೆ ಸಹಿತ ಶಿವನ ಆರಾಧನೆಗೆ ಪೂರ್ವ ನಿಯೋಜಿತ ತಯಾರಿಯಲ್ಲಿ ತೊಡಗಿದೆ. ಇನ್ನುಳಿದಂತೆ ಪಾದಯಾತ್ರೆಯಲ್ಲಿ ಆಗಮಿಸುವ ಭಕ್ತರಿಗೆ ಚಾರ್ಮಾಡಿ, ಸೋಮಂತಡ್ಕ, ಕಲ್ಮಂಜ, ಸತ್ಯಾನ ಪಲ್ಕೆ, ಬೂಡುಜಾಲು 5 ಕಡೆ ವೈದ್ಯಕೀಯ ಶಿಬಿರ ತೆರೆಯಲಾಗಿದೆ. ಉಜಿರೆ, ಧರ್ಮಸ್ಥಳದಲ್ಲೂ ವೈದ್ಯಕೀಯ ಶಿಬಿರ ತೆರೆಯ ಲಾಗಿದ್ದು, ಗಂಗೋತ್ರಿಯಲ್ಲಿ 8,050, ಸಾಕೇತ 5,940, ಎಸ್‌ಡಿಎಂ ಪ್ರೌಢಶಾಲೆ 550, ಎಸ್‌ಡಿಎಂ ಪ್ರಾ. ಶಾಲೆಯಲ್ಲಿ 525 ಮಂದಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

 ವೈದ್ಯರ ತಂಡ
ಎಸ್‌.ಡಿ.ಎಂ. ಆಸ್ಪತ್ರೆಯ 9 ಮಂದಿ ವೈದ್ಯರು, 10 ಮಂದಿ ಶುಶ್ರೂಷಕಿಯರು, 10 ಮಂದಿ ಸಹಾಯಕರು ಸೇವೆಯಲ್ಲಿ ನಿರತರಾಗಿದ್ದಾರೆ. ಹೊರ ವೈದ್ಯರಿಬ್ಬರು ಸ್ವಯಂ ಪ್ರೇರಿತರಾಗಿ ಸೇವೆ ನೀಡುತ್ತಿದ್ದಾರೆ. ಪ್ರತಿ ಶಿಬಿರದಲ್ಲಿ ಓರ್ವ ವೈದ್ಯರು, ತಲಾ 2 ಮಂದಿ ಶುಶ್ರೂಷಕಿಯರು ಹಾಗೂ ಸಹಾಯಕರು ನಿರಂತರ ಸೇವೆಯಲ್ಲಿ ತೊಡಗಿದ್ದಾರೆ. ಎರಡು ಆ್ಯಂಬುಲೆನ್ಸ್‌ ಗಸ್ತು ತಿರುಗುತ್ತಿದ್ದು, ಧರ್ಮಸ್ಥಳದ ಸಂಚಾರಿ ಆಸ್ಪತ್ರೆಯ ಸಿಬಂದಿಯೂ ಪಾದಯಾತ್ರಿಗಳ ಶುಶ್ರೂಷೆಯಲ್ಲಿ ತೊಡಗಿದ್ದಾರೆ. 24 ಗಂಟೆ ಸೇವೆ ಲಭ್ಯವಿದೆ.

ವಿಶೇಷ ನಾಮಫಲಕ
ಪಾದಯಾತ್ರಿಗಳ ಸಂಚರಿಸುವ ಮುಖ್ಯ ರಸ್ತೆ ಇಕ್ಕೆಲಗಳಲ್ಲಿ ಮಾಹಿತಿ ಫಲಕ ಅಳವಡಿಸಲಾಗಿದೆ. ಉಡುಪು, ಸ್ವಚ್ಛತೆ ಸಹಿತ ಸಂಚಾರ ನಿಯಮ ಪಾಲಿಸುವ ಕುರಿತು ಮಾಹಿತಿ ನೀಡಲಾಗಿದೆ. ಒಟ್ಟು 9 ಕಟಡೆಗಳಲ್ಲಿ ಬೃಹತ್‌ ಫಲಕ ಅಳವಡಿಸಲಾಗಿದ್ದು, ವಾಹನ ಚಾಲಕರಿಗೂ ಪಾದಯಾತ್ರಿಗಳ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.

 ವಿಶೇಷ ಭಜನೆ
ಪಾದಯಾತ್ರಿಗಳಿಗೆ ದಾರಿ ಮಧ್ಯೆ ಭಕ್ತರ ತಂಗುದಾಣದಲ್ಲಿ ಸಂಜೆ 6ರಿಂದ ರಾತ್ರಿ 8 ಗಂಟೆಯವರೆಗೆ ಭಜನೆ ಹಾಗೂ ಉಪನ್ಯಾಸ ಹಮ್ಮಿಕೊಳ್ಳಲಾಗಿರುವುದು ಈ ಬಾರಿಯ ವಿಶೆಷಗಳಲ್ಲೊಂದು. ಶ್ರೀರಾಮ ಭಜನ ಮಂದಿರ ಕೊಟ್ಟಿಗೆ ಹಾರ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಚಾರ್ಮಾಡಿ, ಪರಶುರಾಮ ದೇವಸ್ಥಾನ ಮುಂಡಾಜೆ, ಜನಾರ್ದನ ಸ್ವಾಮಿ ದೇವಸ್ಥಾನ ಉಜಿರೆ ಸಹಿತ ಒಟ್ಟು 8 ಕಡೆಗಳಲ್ಲಿ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಹನುಮಂತ ಸ್ವಾಮೀಜಿಯಿಂದ 40ನೇ ವರ್ಷದ ಯಾತ್ರೆ 
ಮೂಲತಃ ದೊಡ್ಡಬಳ್ಳಾಪುರ ತಾಲೂಕು ಕಾಳನೂರಿನ ಹನುಮಂತ ಸ್ವಾಮೀಜಿ ಬೆಂಗಳೂರಿನಿಂದ ತನ್ನ 40ನೇ ವರ್ಷದ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದಾರೆ. 1980ನೇ ಇಸವಿಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪ್ರಥಮ ಬಾರಿಗೆ ಪಾದಯಾತ್ರೆ ಕೈಗೊಂಡಿದ್ದರು. 79ನೇ ಇಳಿ ವಯಸ್ಸಿನಲ್ಲೂ 200 ಮಂದಿ ಭಕ್ತರ ತಂಡದೊಂದಿಗೆ ಬೆಂಗಳೂರಿನಿಂದ ಚೆನ್ನರಾಯಪಟ್ಟಣ, ಹಾಸನ, ಬೇಲೂರು ಮಾರ್ಗವಾಗಿ ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿಯಾಗಿ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ.

 ವಿಶೇಷ ವರದಿ

ಟಾಪ್ ನ್ಯೂಸ್

ಯೋಗೇಶ್ವರ್‌ ಬಿಜೆಪಿ ಕಟ್ಟಾಳುವಲ್ಲ: ಅಶೋಕ್‌

C. P. Yogeshwara ಬಿಜೆಪಿ ಕಟ್ಟಾಳುವಲ್ಲ: ಅಶೋಕ್‌

CPY-annapoorana

By Election: ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿದ ಎಐಸಿಸಿ

Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿUttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ

Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ

Nikhil Kumaraswamy: ಕಾರ್ಯಕರ್ತನಿಗೆ ಟಿಕೆಟ್‌ ಸಿಕ್ಕಿದರೆ ನನಗೆ ಸಿಕ್ಕಂತೆ

Nikhil Kumaraswamy: ಕಾರ್ಯಕರ್ತನಿಗೆ ಟಿಕೆಟ್‌ ಸಿಕ್ಕಿದರೆ ನನಗೆ ಸಿಕ್ಕಂತೆ

Bengaluru: ಕಟ್ಟಡ ಕುಸಿತ: ಮೃತರ ಸಂಖ್ಯೆ 8ಕ್ಕೇರಿಕೆ

Bengaluru: ಕಟ್ಟಡ ಕುಸಿತ: ಮೃತರ ಸಂಖ್ಯೆ 8ಕ್ಕೇರಿಕೆ

ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ: ಅಶ್ವತ್ಥನಾರಾಯಣ

C. N. Ashwath Narayan: ಕೆಲ ಕಾರಣಗಳಿಂದ ಯೋಗೇಶ್ವರ್‌ಗೆ ನೋವಾಗಿದೆ

CET: ಕಾಲೇಜಿಗೆ ವರದಿ ಮಾಡಿಕೊಳ್ಳದ 2,348 ಅಭ್ಯರ್ಥಿಗಳಿಗೆ ಕೆಇಎ ನೋಟಿಸ್‌

CET: ಕಾಲೇಜಿಗೆ ವರದಿ ಮಾಡಿಕೊಳ್ಳದ 2,348 ಅಭ್ಯರ್ಥಿಗಳಿಗೆ ಕೆಇಎ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಯೋಗೇಶ್ವರ್‌ ಬಿಜೆಪಿ ಕಟ್ಟಾಳುವಲ್ಲ: ಅಶೋಕ್‌

C. P. Yogeshwara ಬಿಜೆಪಿ ಕಟ್ಟಾಳುವಲ್ಲ: ಅಶೋಕ್‌

CPY-annapoorana

By Election: ಚನ್ನಪಟ್ಟಣ, ಸಂಡೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿದ ಎಐಸಿಸಿ

Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿUttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ

Uttara Kannada: ಭೂ, ಗುಡ್ಡ ಕುಸಿತ ತಡೆಗೆ 100 ಕೋಟಿ ರೂ. ಪ್ರಸ್ತಾವನೆ: ಡಿಸಿ

Nikhil Kumaraswamy: ಕಾರ್ಯಕರ್ತನಿಗೆ ಟಿಕೆಟ್‌ ಸಿಕ್ಕಿದರೆ ನನಗೆ ಸಿಕ್ಕಂತೆ

Nikhil Kumaraswamy: ಕಾರ್ಯಕರ್ತನಿಗೆ ಟಿಕೆಟ್‌ ಸಿಕ್ಕಿದರೆ ನನಗೆ ಸಿಕ್ಕಂತೆ

Bengaluru: ಕಟ್ಟಡ ಕುಸಿತ: ಮೃತರ ಸಂಖ್ಯೆ 8ಕ್ಕೇರಿಕೆ

Bengaluru: ಕಟ್ಟಡ ಕುಸಿತ: ಮೃತರ ಸಂಖ್ಯೆ 8ಕ್ಕೇರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.