![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Mar 17, 2018, 10:57 AM IST
ಸುರತ್ಕಲ್: ಲೋಕೋಪಯೋಗಿ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸುರತ್ಕಲ್ – ಗಣೇಶಪುರ ನಡುವೆ 58 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಗಣೇಶಪುರದಲ್ಲಿ ಶಾಸಕ ಮೊದಿನ್ ಬಾವಾ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಸ್ತೆ ವಿಸ್ತರಣೆ ಬಳಿಕ ಟ್ಯಾಂಕರ್ ಸಹಿತ ಅಪಾಯಕಾರಿ ವಾಹನ ರಸ್ತೆ ಪಾರ್ಕಿಂಗ್ ಮಾಡದಂತೆ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ 3 ಮೀ. ಫುಟ್ಪಾತ್, ಸೈಕ್ಲಿಂಗ್ ನಡೆಸಲು 2 ಮೀ. ರಸ್ತೆ, ಎರಡೂ ಬದಿ ಉದ್ಯಾನವನ ವ್ಯವಸ್ಥೆಯಿದೆ ಎಂದು ಹೇಳಿದರು.
ಅನುಮೋದನೆ ಹಂತದಲ್ಲಿದೆ
ಲೋಕೋಪಯೋಗಿ ಇಲಾಖಾ ಅಧಿಕಾರಿ ಕಾಂತ ರಾಜು ಮಾತನಾಡಿ, ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಅನುಮೋದನೆ ಹಂತದಲ್ಲಿದೆ. ರಾಜ್ಯದಲ್ಲೇ ಪ್ರಥಮ ಬಾರಿಗೆ ದ.ಕ. ಜಿಲ್ಲೆಗೆ 58 ಕೋ.ರೂ.ಗಳ ಬೃಹತ್ ಮೊತ್ತ ಲಭಿಸಿದೆ. ಹೀಗಾಗಿ ರಸ್ತೆ ಕಾಂಕ್ರೀಟ್ ಕಾಮಗಾರಿ ಸಹಿತ ಎಲ್ಲ ಆಧುನಿಕ ಸೌಲಭ್ಯ ಒದಗಿಸಲು ಅವಕಾಶವಿದೆ ಎಂದರು. ಬಶೀರ್ ಅಹ್ಮದ್, ಪ್ರತಿಭಾ ಕುಳಾಯಿ, ಅಶೋಕ್ ಶೆಟ್ಟಿ, ಧರ್ಮೇಂದ್ರ, ಮಮ್ತಾಜ್ ಆಲಿ, ಶಕುಂತಳಾ ಕಾಮತ್, ಮಂಗಳೂರು ಬಾವಾ, ಅಬ್ದುಲ್ ಸತ್ತಾರ್ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.