![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-415x234.jpg)
ರಸ್ತೆಯಲ್ಲೇ ಚರಂಡಿ ನೀರು: ದುರಸ್ತಿಗೆ ಆಗ್ರಹ
Team Udayavani, Jun 29, 2018, 12:37 PM IST
![29-june-10.jpg](https://www.udayavani.com/wp-content/uploads/2018/06/29/29-june-10.jpg)
ಉಪ್ಪಿನಂಗಡಿ: ಪ್ರಸಕ್ತ ಆಡಳಿತ ನಡೆಸುತ್ತಿರುವ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಆಡಳಿತವು ರಸ್ತೆಯ ಅಂಚನ್ನು ಇಂಟರ್ ಲಾಕ್ ಅಳವಡಿಸಿ ಚರಂಡಿಯನ್ನು ಸಮರ್ಪಕವಾಗಿ ನಿರ್ಮಿಸಿ ಜನ ಮೆಚ್ಚುಗೆ ಪಡೆದಿದೆ. ಆದರೆ ಮಳೆಗಾಲದಲ್ಲಿ ಮಳೆ ನೀರು ಚರಂಡಿ ಬದಲು ರಸ್ತೆಯಲ್ಲೇ ಹರಿಯುವಂತೆ ಮಾಡಿ ಜನರನ್ನು ಸಂಕಷ್ಟಕ್ಕೀಡು ಮಾಡಿದೆ ಎಂದು ಗ್ರಾಮಸ್ಥರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.
ಉಪ್ಪಿನಂಗಡಿ ಪೇಟೆಯ ಬ್ಯಾಂಕ್ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದೆ. ಹಲವೆಡೆ ಚರಂಡಿಯನ್ನು ಒತ್ತುವರಿ ಮಾಡಿಕೊಂಡಿರುವುದು ಸಮಸ್ಯೆಗೆ ಕಾರಣ ಎನ್ನವಾಗಿದೆ. ರಸ್ತೆಯಲ್ಲೇ ಚರಂಡಿ ನೀರು ಹರಿಯುತ್ತಿರುವ ಬಗ್ಗೆ ವಾರ್ಡ್ ಸದಸ್ಯರಲ್ಲಿ ಪ್ರಶ್ನಿಸಿದಾಗ, ಸಮಸ್ಯೆಯನ್ನು ಸರಿಪಡಿಸಲು ಪಿಡಿಒಗೆ ಸತತವಾಗಿ ಮನವಿ ಮಾಡಲಾಗಿದೆ. ಅವರು ಸ್ಪಂದಿ ಸುತ್ತಿಲ್ಲ. ಪಂ. ಆಡಳಿತಕ್ಕೆ ಶೇ. 95ರಷ್ಟು ಆದಾಯ ತಂದುಕೊಡುವ ವಾರ್ಡ್ಗೆ ಮೂಲಸೌಕರ್ಯ ಒದಗಿಸಲು ಕಾನೂನು ತೊಡಕು ಕಾಡುತ್ತಿದೆಯೇ? ಅಥವಾ ಕಾನೂನು ಇರುವುದೇ ಸಮಸ್ಯೆ ಸೃಷ್ಟಿಸಲೇ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಮಕ್ಕಳು ಸಂಚರಿಸುವಾಗ ಬೇಸರ ಮೂಡುತ್ತದೆ
ಚರಂಡಿ ನೀರು ಹರಿಯುತ್ತಿರುವ ರಸ್ತೆಯಲ್ಲಿ ಪಾದಚಾರಿಗಳು ನಡೆದಾಡ ಬೇಕಾದ ಸ್ಥಿತಿ ಇದೆ. ಪುಟ್ಟ ಮಕ್ಕಳು ಕೊಳಚೆ ನೀರಿನಲ್ಲಿ ನಡೆಯುವುದನ್ನು ಕಂಡಾಗ ಬೇಸರವಾಗುತ್ತದೆ. ಪಂಚಾಯತ್ ಆಡಳಿತ ಶೀಘ್ರವಾಗಿ ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಮುಖಂಡರಾದ ಡಾ| ಕೈಲಾರ್ ರಾಜಗೋಪಾಲ ಭಟ್ ಆಗ್ರಹಿಸಿದ್ದಾರೆ. ಉಪ್ಪಿನಂಗಡಿ ಪೇಟೆಯ ಸಮಸ್ಯೆ ಗಮನಕ್ಕೆ ಬಂದಿದೆ. ಕಾರಣಾಂತರಗಳಿಂದ ಬಗೆಹರಿಸಲು ಅಸಾಧ್ಯವಾಗಿತ್ತು. ಮಳೆಯ ಪ್ರಮಾಣವೂ ಅಧಿಕವಾಗಿದೆ. ಕಳೆದ ಸಾಮಾನ್ಯ ಸಭೆಯಲ್ಲಿ ಚರಂಡಿ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ. ಶೀಘ್ರದಲ್ಲಿ ಸಮಸ್ಯೆ ನಿವಾರಣೆ ಆಗಲಿದೆ ಎಂದು ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಹಿಮಾನ್ ಕೆ. ಪ್ರತಿಕ್ರಿಯಿಸಿದ್ದಾರೆ.
ಸಮಾನವಾಗಿ ಹಂಚಿದ್ದೇವೆ
ವಿಧಾನಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಕಾರಣದಿಂದಾಗಿ ಪಂಚಾಯತ್ ಸಭೆ ಸಕಾಲದಲ್ಲಿ ನಡೆಯದ ಕಾರಣ ಕ್ರಿಯಾ ಯೋಜನೆ ಮಾಡಲು ಆಗಿಲ್ಲ. ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಈ ಬಗ್ಗೆ ಅಗತ್ಯ ಕ್ರಮ ಜರುಗಿಸಲಾಗಿದ್ದು, ಪ್ರತಿ ವಾರ್ಡ್ಗೆ ಚರಂಡಿ ದುರಸ್ತಿಗಾಗಿ ತಲಾ 50 ಸಾವಿರ ರೂ.ಗಳನ್ನು ನೀಡಲಾಗುವುದು. ಹೆಚ್ಚು ಆದಾಯ ತರುವ ಮೊದಲ ವಾರ್ಡ್ಗೆ ಹೆಚ್ಚು ಹಣ ಮೀಸಲಿರಿಸಲು ಉಳಿದ ಸದಸ್ಯರು ಒಪ್ಪದ ಕಾರಣ ಎಲ್ಲ ವಾರ್ಡ್ಗಳಿಗೆ ಸಮಾನವಾಗಿ ಹಣ ಹಂಚಲಾಗಿದೆ ಎಂದು ಪಿಡಿಒ ಅಬ್ದುಲ್ಲಾ ಅಸಫ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್](https://www.udayavani.com/wp-content/uploads/2024/07/salman-150x84.jpg)
Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್
![Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು](https://www.udayavani.com/wp-content/uploads/2024/07/11-1-150x90.jpg)
Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು
![Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್ ವಂಚನೆ, ಹೂಡಿಕೆದಾರರು ಕಂಗಾಲು!](https://www.udayavani.com/wp-content/uploads/2024/07/America-150x92.jpg)
Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್ ವಂಚನೆ, ಹೂಡಿಕೆದಾರರು ಕಂಗಾಲು!
![10](https://www.udayavani.com/wp-content/uploads/2024/07/10-1-150x90.jpg)
Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ
![Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್; ಯುವಕನ ವಿರುದ್ಧ ಎಫ್ಐಆರ್](https://www.udayavani.com/wp-content/uploads/2024/07/9-1-150x90.jpg)
Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್; ಯುವಕನ ವಿರುದ್ಧ ಎಫ್ಐಆರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.