Education: ಈಗ ಎಸೆಸೆಲ್ಸಿ ಪಾಸಾದವರಿಗೆ 3 ತಿಂಗಳ ಪಾಠ ನಷ್ಟ

ಪಿಯುಸಿ ನಿಗದಿತ ಪಾಠ ಆರಂಭವಾಗಿ 3 ತಿಂಗಳು ಕಳೆಯಿತು

Team Udayavani, Aug 26, 2024, 7:05 AM IST

Education: ಈಗ ಎಸೆಸೆಲ್ಸಿ ಪಾಸಾದವರಿಗೆ 3 ತಿಂಗಳ ಪಾಠ ನಷ್ಟ

ಮಂಗಳೂರು: ವಿದ್ಯಾರ್ಥಿ ಗಳ ಅನುಕೂಲಕ್ಕಾಗಿ ಈ ಬಾರಿ ಎಸೆಸೆಲ್ಸಿಯಲ್ಲಿ 3 ಪರೀಕ್ಷೆ ಮಾಡಿದ್ದು, ಅದರ ಫ‌ಲಿತಾಂಶ ಫಲಿತಾಂಶ ಸೋಮವಾರ (ಆ. 26) ಪ್ರಕಟ ಆಗಲಿದೆ. ಆದರೆ ಪಿಯು ತರಗತಿಗಳು ಜೂ.1ರಿಂದಲೇ ಆರಂಭವಾಗಿದ್ದು, 3ನೇ ಪರೀಕ್ಷೆ ಯಲ್ಲಿ ತೇರ್ಗಡೆ ಆದವರಿಗೆ ಪಿಯುಸಿಯ 3 ತಿಂಗಳ ಪಾಠ ನಷ್ಟವಾಗಲಿದೆ!

ವಿದ್ಯಾರ್ಥಿಗಳ ಉತ್ತೀರ್ಣತೆಯ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರಕಾರ ದ್ವಿತೀಯ ಪಿಯುಸಿಯಂತೆಯೇ ಎಸೆಸೆಲ್ಸಿಯಲ್ಲಿ ಇದೇ ಮೊದಲ ಬಾರಿಗೆ ಮೂರು ಪರೀಕ್ಷೆಗಳನ್ನು ನಡೆಸಿತ್ತು. ಪಿಯುಸಿಯ 3 ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದ್ದು, ಅದರಲ್ಲಿ ಯಾವುದೇ ಸಮಸ್ಯೆಗಳಾಗಿಲ್ಲ.

ಆ.2ರಿಂದ 8ರ ವರೆಗೆ ನಡೆದ ಎಸೆಸೆಲ್ಸಿಯ ಮೂರನೇ ಪರೀಕ್ಷೆಯ ಫಲಿತಾಂಶ ಇದುವರೆಗೆ ಸಿಗದ ಕಾರಣದಿಂದ ಒಂದು ರೀತಿಯ ಗೊಂದಲದ ಪರಿಸ್ಥಿತಿ ಮೂಡಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆ ಆದವರು ಪಿಯುಸಿಗೆ ಸೇರಿದಾಗ ಈವರೆಗೆ ಆಗಿರುವ ಪಾಠವನ್ನು ಅವರಿಗೆ ಹೇಗೆ ಮಾಡುವುದು ಎಂಬ ಪ್ರಶ್ನೆ ಉಪನ್ಯಾಸಕರದ್ದಾಗಿದೆ.

ಎಸೆಸೆಲ್ಸಿಗೆ ಹಿಂದೆ 2 ಪರೀಕ್ಷೆಗಳಿದ್ದವು. ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣ ರಾದವರಿಗೆ ಅಕ್ಟೋಬರ್‌ನಲ್ಲಿ ಮತ್ತೂಂದು ಪರೀಕ್ಷೆ ಆಗುತ್ತಿತ್ತು. ಅದರಲ್ಲಿ ಉತ್ತೀರ್ಣರಾದವರಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ತರಗತಿ ಪ್ರವೇಶಕ್ಕೆ ಅವಕಾಶ ಇತ್ತು. ಬಳಿಕ ಅಕ್ಟೋಬರ್‌ನಲ್ಲಿ ನಡೆಯುವ ಪರೀಕ್ಷೆಯನ್ನು ಜೂನ್‌ನಲ್ಲಿ ನಡೆಸಿ ಅದರ ಫಲಿತಾಂಶದ ಆಧಾರದಲ್ಲಿ ಪಿಯುಸಿ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಈ ವರ್ಷದಿಂದ ಸರಕಾರ 3 ಪ್ರತ್ಯೇಕ ಪರೀಕ್ಷೆ ನಡೆಸಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೈಗೊಂಡ ಈ ತೀರ್ಮಾನ ಈಗ ಅವರಿಗೇ ಸಮಸ್ಯೆ ತಂದೊಡ್ಡುವಂತಾಗಿದೆ.

ಪ.ಪೂ.ಕಾಲೇಜುಗಳ ಪ್ರಾಚಾರ್ಯರ ಸಂಘದ ದ.ಕ. ಅಧ್ಯಕ್ಷ ಜಯಾನಂದ ಎನ್‌.ಸುವರ್ಣ ಹೇಳುವ ಪ್ರಕಾರ, “ಈಗಾಗಲೇ ಪಿಯುಸಿ ಮೊದಲ ವರ್ಷದ ಮಕ್ಕಳಿಗೆ ಪಾಠಗಳು ನಡೆದು ಮೊದಲ ಪರೀಕ್ಷೆಯೂ ಆಗಿದೆ. ಇನ್ನು ಎಸೆಸೆಲ್ಸಿಯ ಫಲಿತಾಂಶ ಬಂದು, ಪ್ರವೇಶಾತಿ ಆಗಿ, ಆ ವಿದ್ಯಾರ್ಥಿಗಳು ಬರಲು ಎಷ್ಟು ಸಮಯ ಬೇಕೋ ಗೊತ್ತಿಲ್ಲ. ಅವರಿಗೆ ಆಗಿರುವ ಪಾಠ ನಷ್ಟವನ್ನು ಸರಿದೂಗಿಸುವುದು ಹೇಗೆ ಎಂಬುದೇ ಈಗ ಎದುರಿರುವ ಪ್ರಶ್ನೆ’ ಎನ್ನುತ್ತಾರೆ.

ದ.ಕ. 496, ಉಡುಪಿ 1008
ಎಸೆಸೆಲ್ಸಿಯ 3ನೇ ಪರೀಕ್ಷೆಗೆ ದಕ್ಷಿಣ ಕನ್ನಡದಿಂದ 496 ಹಾಗೂ ಉಡುಪಿ ಜಿಲ್ಲೆಯಿಂದ 1008 ವಿದ್ಯಾರ್ಥಿಗಳು ಹಾಜ ರಾಗಿದ್ದಾರೆ. ಇದರಲ್ಲಿ ತೇರ್ಗಡೆ ಆದವರಿಗೆ ಸರಕಾರಿ ಪಿಯು ಕಾಲೇಜುಗಳಲ್ಲಿ ಸೀಟು ಸಿಗಲಿವೆ. ಬಹುತೇಕ ಖಾಸಗಿ ಕಾಲೇಜುಗಳ ಸೀಟುಗಳು ಭರ್ತಿಯಾಗಿವೆ.

ಪಿಯು ಮೊದಲ ಪರೀಕ್ಷೆಯೂ ಪೂರ್ಣ!
ಪಿಯುಸಿಯಲ್ಲಿ ಮೊದಲ ಪರೀಕ್ಷೆ ಈಗಾಗಲೇ ಆಗಿರುವುದರಿಂದ ಹೊಸದಾಗಿ ಬರುವ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಪರೀಕ್ಷೆ ಮಾಡುವುದು ಯಾವಾಗ? ಒಂದು ವೇಳೆ ವಿಶೇಷ ತರಗತಿ ಮಾಡುವುದಾದರೂ ಅದು “ರೆಗ್ಯುಲರ್‌’ ತರಗತಿ ಯಂತೆ ವಿದ್ಯಾರ್ಥಿಗಳಿಗೆ ಅನುಕೂಲ ವಾಗಬಹುದೇ? ಯಾಕೆಂದರೆ, 2 ಬಾರಿ ಅನುತ್ತೀರ್ಣ/ಕಡಿಮೆ ಅಂಕ ಕಾರಣದಿಂದ 3 ನೇ ಪರೀಕ್ಷೆ ಬರೆದ ಕೆಲವು ಮಕ್ಕಳಿಗೆ “ವಿಶೇಷ’ ತರಗತಿ ಅನುಕೂಲ ನೀಡಲಿದೆಯೇ ಎಂಬಿತ್ಯಾದಿ ಪ್ರಶ್ನೆಗೆ ಇನ್ನೂ ಉತ್ತರವಿಲ್ಲ.

ವಿಶೇಷ ತರಗತಿ ಸಾಧ್ಯತೆ
ಪಿಯು ತರಗತಿ ಜೂ.1ರಿಂದ ಆರಂಭವಾಗಿದೆ. ಎಸೆಸೆಲ್ಸಿ 3ನೇ ಫಲಿತಾಂಶ ಪ್ರಕಟವಾದ ಆದ ಬಳಿಕ ಬರುವ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗಿನ ತರಗತಿ ನಷ್ಟವನ್ನು ಯಾವ ರೀತಿ ನಿಭಾಯಿಸುವುದು ಎಂಬ ಬಗ್ಗೆ ಇಲಾಖೆ ಮಾರ್ಗದರ್ಶನ ನೀಡಲಿದೆ. ಅಂತೂ ವಿಶೇಷ ತರಗತಿ ಮೂಲಕ ಅವರಿಗೆ ಪಾಠ ಮಾಡಲು ಆದ್ಯತೆ ನೀಡಬೇಕಾಗುತ್ತದೆ.
ಸಿ.ಡಿ. ಜಯಣ್ಣ, ಡಿಡಿಪಿಯು

-ದಿನೇಶ್‌ ಇರಾ

ಟಾಪ್ ನ್ಯೂಸ್

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Railway

Mangaluru: ಹಳಿ ನಿರ್ವಹಣೆ ಕಾಮಗಾರಿ; ರೈಲು ಸೇವೆಯಲ್ಲಿ ವ್ಯತ್ಯಯ

Kadri-park

Mangaluru: ಕದ್ರಿ ಪಾರ್ಕ್‌ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ

Puspa-Amar

Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್‌ ಅಧಿಕಾರಿ: ಪುಷ್ಪಾ ಅಮರನಾಥ್‌

MU-Univerasity

Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.