ವಾರದಲ್ಲಿ ಹಠಾತ್‌ ಕುಸಿತ ಕಂಡ ಮೊಟ್ಟೆ ದರ


Team Udayavani, Apr 2, 2019, 6:30 AM IST

egg

ಬಜಪೆ: ಕೋಳಿಮೊಟ್ಟೆ ಪೌಷ್ಟಿಕ ಆಹಾರಗಳಲ್ಲಿ ಒಂದು. ಸಮಾರಂಭ, ಬೇಡಿಕೆಯನ್ನು ಹೊಂದಿಕೊಂಡು ಅದರ ದರ ಏರಿಳಿಕೆ ಕಾಣುತ್ತದೆ. ಆದರೆ ಈಗ ಒಂದೇ ವಾರದಲ್ಲಿ ಅದರ ದರ ಒಂದು ಮೊಟ್ಟೆಗೆ ರೂ. 1.25ನಷ್ಟು ಇಳಿಕೆ ಕಂಡಿದ್ದು, ಕೋಳಿ ಫಾರ್ಮ್ನವರು ನಷ್ಟಕ್ಕೊಳಗಾಗುವ ಸ್ಥಿತಿಗೆ ತಲುಪಿದ್ದಾರೆ.

ವಾತಾವರಣದ ತಾಪಮಾನ ಹೆಚ್ಚಿದಾಗ ಮೊಟ್ಟೆ ದರ ಇಳಿಕೆಯಾ
ಗುತ್ತದೆ. ಈಗ ಕಂಡುಬಂದಿರುವ ಹಠಾತ್‌ ದರ ಇಳಿಕೆಗೆ ಇದು ಒಂದು ಕಾರಣ. ತಾಪ ಹೆಚ್ಚಿರುವಾಗ ಮೊಟ್ಟೆಯನ್ನು ಹೆಚ್ಚು ಕಾಲ ದಾಸ್ತಾನು
ಇರಿಸಿಕೊಳ್ಳಲಾಗುವುದಿಲ್ಲ, ತೀವ್ರ ಸೆಖೆಯಿದ್ದರೆ ಕೋಳಿಗಳು ಸತ್ತುಹೋಗುವ ಸಾಧ್ಯತೆಯೂ ಇದೆ. ಜನರು ಬೇಸಗೆಯಲ್ಲಿ ಸೇವಿಸುವ ಪ್ರಮಾಣ ಕಡಿಮೆ.

ಇನ್ನೊಂದು ಕಾರಣ ಕ್ರೈಸ್ತರ ಕಪ್ಪು ದಿನಗಳು
ಕ್ರೈಸ್ತ ಸಮುದಾಯದವರು ಈಗ ಕಪ್ಪು ದಿನಗಳನ್ನು ಆಚರಿಸುತ್ತಿದ್ದಾರೆ. ಈ ದಿನಗಳಲ್ಲಿ ಅವರು ಮಾಂಸಾಹಾರ ಸೇವಿಸುವುದಿಲ್ಲ. ಬೇಡಿಕೆ ಕಡಿಮೆಯಾಗಲು ಇದೂ ಒಂದು ಕಾರಣ. ಕಪ್ಪು ದಿನಗಳು ಕೊನೆಯಾಗುವುದು ಎ. 19ರ ಗುಡ್‌ಫ್ರೈಯಂದು.

ಸಮಾರಂಭ ಕಡಿಮೆ
ಈಗ ಸಮಾರಂಭಗಳು ಕಡಿಮೆಯಾಗಿದ್ದು, ಇದರಿಂದಲೂ ಮೊಟ್ಟೆಗೆ
ಬೇಡಿಕೆ ಕಡಿಮೆಯಾಗಿದೆ. ಸಮಾರಂಭಗಳು ಮುಂದೂಡಿಕೆಯಾಗಲು ಚುನಾವಣೆಯ ಮಾದರಿ ನೀತಿ ಸಂಹಿತೆಯೂ ಒಂದು ಕಾರಣವಾಗಿದೆ. ಪಾರ್ಟಿ, ಸತ್ಕಾರಕೂಟಗಳಿಗೆ ನೀತಿ ಸಂಹಿತೆಯ ಅಡ್ಡಿ ಇದೆ.

ಚಿಲ್ಲರೆ ವ್ಯಾಪಾರ ದರ ಕಡಿಮೆಯಾಗಿಲ್ಲ
ಇಷ್ಟಾದರೂ ಚಿಲ್ಲರೆ ವ್ಯಾಪಾರದ ಮೊಟ್ಟೆಯ ದರ ಕಡಿಮೆಯಾಗಿಲ್ಲ ಎನ್ನುತ್ತಾರೆ ಹಳ್ಳಿ ಭಾಗಗಳ ಗ್ರಾಹಕರು. ಇದರಿಂದ ಹೆಚ್ಚಿನ ಅಂಗಡಿಗಳಲ್ಲಿ ಈಗಲೂ ಮೊಟ್ಟೆ ಒಂದಕ್ಕೆ 5.50 ರೂ.ಗಳಲ್ಲಿ ಮಾರಾಟ ಮಾಡಲಾಗುತ್ತದೆ. ರಖಂ ದರ 4.95 ರೂ. ಇದ್ದಾಗಲೂ ಚಿಲ್ಲರೆ ದರ ಇದೇ ಇತ್ತು. ಹೆಚ್ಚಿನ ಚಿಲ್ಲರೆ ವ್ಯಾಪಾರಸ್ಥರು ಇದು ಹಿಂದಿನ ರಖಂ ದರದಲ್ಲಿ ಖರೀದಿಸಿದ ಮೊಟ್ಟೆ ಎಂಬುದಾಗಿ ಸಮಜಾಯಿಶಿ ನೀಡುತ್ತಾರೆ ಎನ್ನುತ್ತಾರೆ ಗ್ರಾಹಕರು. ರಖಂ ಮೊಟ್ಟೆ ದರ ಕಡಿಮೆಯಾದರೆ ಸಾಲದು, ಚಿಲ್ಲರೆ ಮಾರಾಟ ದರ ಕಡಿಮೆಯಾದರೆ ಮಾತ್ರ ಬೇಡಿಕೆ ಜಾಸ್ತಿಯಾಗಬಹುದು ಎಂದು ಓರ್ವ ಗ್ರಾಹಕರು ತಿಳಿಸಿದ್ದಾರೆ.

ಮೊಟ್ಟೆ ಕೆಡುವ ಭೀತಿ
ಸೆಖೆ ಜಾಸ್ತಿಯಿರುವ ಕಾರಣ ಮೊಟ್ಟೆಯನ್ನು ಹೆಚ್ಚು ಕೊಂಡೊಯ್ಯುವುದಿಲ್ಲ. ಎರಡು ದಿನಕ್ಕೆ ಬೇಕಾಗುವಷ್ಟೇ ಖರೀದಿಸುತ್ತೇವೆ. ಚಿಲ್ಲರೆ ದರ ಇಳಿಸಿದರೆ ನಮ್ಮಂತಹ ಗ್ರಾಹಕರಿಗೂ ಅನುಕೂಲ.
– ಪೂರ್ಣಿಮಾ, ಸುಂಕದಕಟ್ಟೆಯ ಗೃಹಿಣಿ

ದಾವಣಗೆರೆ ಮಾರುಕಟ್ಟೆಯಲ್ಲಿ ಮೊಟ್ಟೆಗೆ ಇಲ್ಲಿನ ದರಕ್ಕಿಂತ 35 ಪೈಸೆ ಕಡಿಮೆ ಇರುತ್ತದೆ. ಸೆಕೆ, ಕಪ್ಪುದಿನ ಕಾರಣಗಳಿಂದ ಮೊಟ್ಟೆ ಮಾರಾಟ ಕಡಿಮೆಯಾಗಿದೆ. 1 ವಾರದಿಂದ ದರ ಒಮ್ಮೆಲೇ ಕುಸಿದಿದೆ. ಸೆಕೆ ಜಾಸ್ತಿಯಾದರೆ ದರ ಇನ್ನೂ ಕಡಿಮೆಯಾಗಬಹುದು.
– ನಿತ್ಯಾನಂದ ಶೆಟ್ಟಿ, ರಖಂ ಮೊಟ್ಟೆ ವ್ಯಾಪಾರಿ

ಟಾಪ್ ನ್ಯೂಸ್

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Siruguppa ಅನೈತಿಕ ಚಟುವಟಿಕೆಗಳ ತಾಣವಾದ ಸರ್ಕಾರಿ ಅತಿಥಿ ಗೃಹ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ

Team India; ಏಕದಿನ, ಟೆಸ್ಟ್ ನಾಯಕತ್ವದಿಂದ ರೋಹಿತ್ ಗೆ ಕೊಕ್?; ಸ್ಪಷ್ಟನೆ ನೀಡಿದ ಜಯ್ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

ಸುರತ್ಕಲ್‌ ಟೋಲ್‌ ತೆರವು ಹೋರಾಟಗಾರರು ನ್ಯಾಯಾಲಯಕ್ಕೆ ಹಾಜರು; ಜಾಮೀನು

ಸುರತ್ಕಲ್‌ ಟೋಲ್‌ ತೆರವು ಹೋರಾಟಗಾರರು ನ್ಯಾಯಾಲಯಕ್ಕೆ ಹಾಜರು; ಜಾಮೀನು

CC Camera ದೃಶ್ಯಾವಳಿ; ಫೂರೆನ್ಸಿಕ್‌ ವರದಿ ಸಾಕ್ಷಿಯಾಗಿಸಿ ಶಿಕ್ಷೆ ವಿಧಿಸಿದ ನ್ಯಾಯಾಲಯ

CC Camera ದೃಶ್ಯಾವಳಿ; ಫೂರೆನ್ಸಿಕ್‌ ವರದಿ ಸಾಕ್ಷಿಯಾಗಿಸಿ ಶಿಕ್ಷೆ ವಿಧಿಸಿದ ನ್ಯಾಯಾಲಯ

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

Yakshagana ಮುಮ್ಮೇಳದ ಸವ್ಯಸಾಚಿ ಕುಂಬ್ಳೆ ಶ್ರೀಧರ್‌ ರಾವ್‌

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

1-crick

Zimbabwe ವಿರುದ್ಧ ಹಳಿಗೆ ಮರಳಿದ ಯುವ ಭಾರತ: ಅಭಿಷೇಕ್ ಅಮೋಘ ಶತಕ

6

Nag Ashwin: ‘ಕಲ್ಕಿ’ ಡೈರೆಕ್ಟರ್ ನಾಗ್ ಅಶ್ವಿನ್‌ಗೆ ಕೃಷ್ಣನೂರು ಉಡುಪಿಯ ನಂಟು

1-maya

K Armstrong; ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ: ಮಾಯಾವತಿ ಆಕ್ರೋಶ

1hatharas

Hathras ಕಾಲ್ತುಳಿತ: ವಿಷಕಾರಿ ದ್ರವವನ್ನು ಹೊಂದಿದ್ದ ಕ್ಯಾನ್‌ಗಳನ್ನು ತಂದಿದ್ದರೆ?

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Assam: ಜೋರು ಮಾಡಿದ್ದಕ್ಕೆ ತರಗತಿಯಲ್ಲೇ ಶಿಕ್ಷಕನನ್ನು ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.