ಮಂಗಳೂರು: “ದಂಡ’ ವಸೂಲಿಗೆ ನಕಲಿ ಪೊಲೀಸರ “ಚಾಟಿಂಗ್‌’ ಅಸ್ತ್ರ ! 


Team Udayavani, Oct 28, 2022, 7:50 AM IST

“ದಂಡ’ ವಸೂಲಿಗೆ ನಕಲಿ ಪೊಲೀಸರ “ಚಾಟಿಂಗ್‌’ ಅಸ್ತ್ರ ! 

ಮಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರನ್ನು ನಾನಾ ರೂಪದಲ್ಲಿ ವಂಚಿಸಿ ಹಣ ಗಳಿಸುತ್ತಿರುವ ಖದೀಮರು ಈಗ ಸೈಬರ್‌ ಪೊಲೀಸರ ಹೆಸರಿನಲ್ಲಿ ವಂಚನೆಗೆ ದಾಳ ಎಸೆದಿದ್ದಾರೆ.

ವಂಚಕರು ಈಗ ಪೊಲೀಸ್‌ ವೇಷದಲ್ಲಿ “ದಂಡ’ ವಸೂಲಿಗೆ ಮುಂದಾಗಿದ್ದಾರೆ. ನೇರವಾಗಿ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ ಬಲೆಗೆ ಕೆಡವುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯ ರೊಂದಿಗಿನ “ಚಾಟಿಂಗ್‌’ (ಸಂಭಾಷಣೆ) ವಿಚಾರ ಮುಂದಿಟ್ಟು ವಂಚಿಸಲಾಗುತ್ತಿದೆ. ಹೆಚ್ಚಾಗಿ ಯುವಜನರನ್ನೇ ಗುರಿ ಮಾಡಲಾಗುತ್ತಿದೆ.

ರಶೀದಿಯೂ ಸಿದ್ಧ:

ದಂಡದ ಮೊತ್ತ ಪಾವತಿಸುವವರಿಗೆ ಪೊಲೀಸ್‌ ಇಲಾಖೆಯದ್ದು ಎಂದು ಬಿಂಬಿಸುವ ನಕಲಿ ರಶೀದಿಯನ್ನು ಕೂಡ ನೀಡಲಾಗುತ್ತದೆ. ಈ ರೀತಿ ಸಂದೇಶ ಕಳುಹಿಸುವವರ ವಾಟ್ಸ್‌ಆ್ಯಪ್‌ ಅಥವಾ ಫೇಸ್‌ಬುಕ್‌ ಪ್ರೊಫೈಲ್‌ನಲ್ಲಿ ಪೊಲೀಸ್‌ ಅಧಿಕಾರಿಗಳ ಪೊಟೋ ಇರುತ್ತದೆ. ಜತೆಗೆ ಸರಕಾರಿ ಅಧಿಕಾರಿ ಎಂದು ಉಲ್ಲೇಖೀಸಲಾಗುತ್ತದೆ ಎಂದು ಸೈಬರ್‌ ಭದ್ರತಾ ತಜ್ಞರು ಹಾಗೂ ಈ ರೀತಿಯ ಸಂದೇಶಗಳನ್ನು ಸ್ವೀಕರಿಸಿದವರು ತಿಳಿಸಿದ್ದಾರೆ.

ಪೋರ್ನ್’ ಹೆಸರಲ್ಲೂ ದೋಖಾ!:

ಇನ್ನು ಕೆಲವರಿಗೆ ಪೋರ್ನ್ ವೀಡಿಯೋ (ಅಶ್ಲೀಲ ದೃಶ್ಯಗಳು) ಹೆಸರಿನಲ್ಲಿ ಹೆದರಿಸಿ ಹಣ ಪಡೆಯಲಾಗುತ್ತಿದೆ. “ನೀವು ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ್ದೀರಿ. ನಿಮ್ಮ ವಾಟ್ಸ್‌ ಆ್ಯಪ್‌ನಲ್ಲಿ ಅಶ್ಲೀಲ ದೃಶ್ಯ ರವಾನೆಯಾಗಿದೆ’ ಎಂಬಿತ್ಯಾದಿ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ “ನಿಮ್ಮ ವಿರುದ್ಧ ಪ್ರಕರಣ ದಾಖಲಾಗುವುದನ್ನು ತಪ್ಪಿಸಬೇಕಾದರೆ ಹಣ ನೀಡಬೇಕು’ ಎಂದು ಹೆದರಿಸಲಾಗುತ್ತದೆ. ಇದು ಕೂಡ ಪೊಲೀಸರ ಹೆಸರಿನಲ್ಲಿ ನಡೆಯುವ ಮೋಸ.

ತುರ್ತು ಪಾವತಿಗೂ ಉಪಾಯ:

ಈ ರೀತಿಯಾಗಿ ಮೋಸದ ಜಾಲಕ್ಕೆ ಒಡ್ಡುವ ವಂಚಕರು ಹಣ ಪಾವತಿಗೆ ತುರ್ತು ಸ್ಥಿತಿ (ಸೆನ್ಸ್‌ ಆಫ್ ಅರ್ಜೆನ್ಸಿ) ಸೃಷ್ಟಿ ಮಾಡುತ್ತಾರೆ. “ನೀವು ಈಗಲೇ ದಂಡದ ಮೊತ್ತ ಅಥವಾ ಹಣ ಪಾವತಿಸಿದರೆ ಮೊತ್ತದಲ್ಲಿ ಕಡಿಮೆ ಮಾಡುತ್ತೇವೆ. ವಿಳಂಬವಾದರೆ ಹೆಚ್ಚು ನೀಡಬೇಕಾಗುತ್ತದೆ’ ಎಂದು ಹೇಳುತ್ತಾರೆ. ಹಾಗಾಗಿ ಕೆಲವು ಮಂದಿ ಕೂಡಲೇ ಪಾವತಿಸಲು ಮುಂದಾಗಿ ವಂಚನೆಗೊಳಗಾಗುತ್ತಾರೆ.

ಅಶ್ಲೀಲ ಚಿತ್ರದ ಭಯ:

ವಂಚಕರು ತಮಗೆ ಸಿಗುವ ಮೊಬೈಲ್‌ ನಂಬರ್‌ಗಳಿಗೆ ಇಂತಹ ಸಂದೇಶಗಳನ್ನು ಕಳುಹಿಸುತ್ತ ಹೋಗುತ್ತಾರೆ. ಕೆಲವು ಮಂದಿ ಅವರ ಬಲೆಗೆ ಬಿದ್ದರೂ ಉದ್ದೇಶ ಈಡೇರುತ್ತದೆ. ಕೆಲವರು ಹಲವು ವಾಟ್ಸ್‌ ಆ್ಯಪ್‌ ಗ್ರೂಪ್‌ಗ್ಳಲ್ಲಿರುತ್ತಾರೆ. ಆಗ ಯಾವುದಾದರೊಂದು ಗ್ರೂಪ್‌ನಿಂದ ಅವರಿಗೆ ಗೊತ್ತಿಲ್ಲದಂತೆಯೇ ಅಶ್ಲೀಲ ಚಿತ್ರ, ವೀಡಿಯೋ ಅವರ ಮೊಬೈಲ್‌ ಸೇರಿರಬಹುದು. ಇಂತಹ ಸಂದರ್ಭದಲ್ಲಿ ಪೊಲೀಸರೆಂದು ಹೇಳಿ ಯಾರಾದರೂ ಕರೆ ಮಾಡಿ “ನಿಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳಿವೆ’ ಎಂದು ಹೆದರಿಸಿದರೆ ಆತಂಕ ಹೆಚ್ಚಾಗಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

ಡಾಟಾಬೇಸ್‌ ಸೇಲ್‌ :

ಮೊಬೈಲ್‌ ಬಳಕೆದಾರರ ನಂಬರ್‌ಗಳು ಕೆಲವು ಖದೀಮರಿಗೆ ಸುಲಭವಾಗಿ ಸಿಗುತ್ತದೆ. ಬಳಕೆದಾರರ ಮೊಬೈಲ್‌ ಸಂಖ್ಯೆಗಳನ್ನು ಸಂಗ್ರಹಿಸಿ ಮಾರಾಟ ಮಾಡುವವರೂ ಇದ್ದಾರೆ. ವಿದ್ಯಾರ್ಥಿಗಳು, ಕಾರು ಮಾಲಕರು ಹೀಗೆ ವಿವಿಧ ವರ್ಗಗಳ ಗ್ರಾಹಕರ ಮೊಬೈಲ್‌ ಸಂಖ್ಯೆ (ಡಾಟಾ ಬೇಸ್‌) ಮಾರಾಟ ಮಾಡುವ ಸಂಸ್ಥೆಗಳು ಕೂಡ ಇವೆ.

ಅರೆಸ್ಟ್‌ಗೆ ಬರುತ್ತಿದ್ದೇವೆ… ! :

“ನಾವು ಸೈಬರ್‌ ಪೊಲೀಸರು. ನಿನ್ನೆ ರಾತ್ರಿ ನೀವು ಒಂದು ಹುಡುಗಿಯೊಂದಿಗೆ ವಾಟ್ಸ್‌ ಆ್ಯಪ್‌ನಲ್ಲಿ ಮಾತನಾಡಿದ್ದೀರಿ, ಅವಳೊಂದಿಗೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಚಾಟ್‌ ಮಾಡಿದ್ದೀರಿ. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಮೊಬೈಲ್‌ನಲ್ಲಿ ನಿಮ್ಮ ನಂಬರ್‌ ಇತ್ತು. ನಿಮ್ಮಂತಹ 8 ಮಂದಿಯನ್ನು ಬಂಧಿಸಲಾಗಿದೆ. ನಿಮ್ಮ ವಿರುದ್ಧ ಕೂಡ ಎಫ್ಐಆರ್‌ ದಾಖಲಿಸಲಾಗಿದ್ದು, ಕೂಡಲೇ ಬಂಧಿಸಲಾಗುವುದು. ಒಂದು ವೇಳೆ ಇದರಿಂದ ಬಚಾವ್‌ ಆಗಬೇಕಾದರೆ ದಂಡದ ಹಣ ನೀಡಬೇಕು’ ಎಂಬ ಸಂದೇಶ ಕಳುಹಿಸಲಾಗುತ್ತದೆ. ಅಲ್ಲದೆ ಕೂಡಲೇ ಕರೆ ಮಾಡುವಂತೆ ಒಂದು ಮೊಬೈಲ್‌ ಸಂಖ್ಯೆಯನ್ನು ಕೂಡ ಕಳುಹಿಸಲಾಗುತ್ತದೆ. ಕರೆ ಸ್ವೀಕರಿಸಿದರೆ ಇನ್ನಷ್ಟು ಹೆದರಿಸಲಾಗುತ್ತದೆ. ಆನ್‌ಲೈನ್‌ ಮೂಲಕ ಹಣ ಪಾವತಿಸಿಕೊಳ್ಳಲಾಗುತ್ತದೆ.

ಪೊಲೀಸರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿರುವುದು ಕಂಡುಬಂದಿದೆ. ಆದರೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ, ನೋಟಿಸ್‌ ಕಳುಹಿಸುವುದಿಲ್ಲ. ಆತಂಕಕ್ಕೊಳಗಾಗಿ ಹಣ ಪಾವತಿಸುವ ಅಗತ್ಯವಿಲ್ಲ. ಡಾ| ಅನಂತ ಜಿ. ಪ್ರಭು, ಸೈಬರ್‌ ಭದ್ರತಾ ತಜ್ಞ, ಮಂಗಳೂರು

ಈ ಹಿಂದೆ ಲೋನ್‌ ನೀಡಿ ಅನಂತರ ಮರುಪಾವತಿಸುವಂತೆ ಸತಾಯಿಸಿ ಸಾಲ ಗಾರರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದ “ಲೋನ್‌ ಆ್ಯಪ್‌’ಗಳನ್ನು ಸರಕಾರ ನಿಷೇಧಿ

ಸಿದೆ. ಇದೇ ರೀತಿ ಅಶ್ಲೀಲ ಚಿತ್ರಗಳ ವಿಷಯ ಮುಂದಿಟ್ಟು ಬೇರೆ ಬೇರೆ ರೀತಿಯಲ್ಲಿ ವಂಚಿಸುವ ಸಾಧ್ಯತೆಗಳಿವೆ. ಆಮಿಷ, ಬೆದರಿಕೆ ಬಗ್ಗೆ ಪ್ರತಿಕ್ರಿಯಿಸದೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಸತೀಶ್‌, ಇನ್‌ಸ್ಪೆಕ್ಟರ್‌, ಸೆನ್‌ ಠಾಣೆ ಮಂಗಳೂರು

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

-ROHAN

Rohan City Bejai: ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆಗೆ ಖಚಿತ ಪ್ರತಿಫಲ ಕೊಡುಗೆ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

Mulki: ರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಇಬ್ಬರ ಬಂಧನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.