“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

ಮೀನುಗಾರಿಕೆ ಉದ್ದೇಶಕ್ಕಾಗಿ ನಿರ್ಮಾಣ,ಕಾಮಗಾರಿ ಆರಂಭ

Team Udayavani, Jun 23, 2024, 7:30 AM IST

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

ಮಂಗಳೂರು: ಮೀನುಗಾರಿಕೆಗಾಗಿ “ತೇಲುವ ಜೆಟ್ಟಿ’ಯು ದೇಶದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ.

ಮೀನುಗಾರಿಕೆ ಇಲಾಖೆ ವತಿಯಿಂದ ಮಂಗ ಳೂರಿನ ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ಇರುವ ಹೊಗೆ ಬಜಾರ್‌ ಭಾಗದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ)ವು ಅನುಷ್ಠಾನ ದ ಹೊಣೆ ಹೊತ್ತಿದೆ. ಉಡುಪಿಯ ಮಲ್ಪೆಯಲ್ಲೂ ಇಂಥದ್ದೇ ಜೆಟ್ಟಿ ನಿರ್ಮಿಸುವ ಉದ್ದೇಶವಿದೆ.

ಈಗಾಗಲೇ ಮಂಗಳೂರಿನಲ್ಲಿ ಒಂದು “ಕಾಂಕ್ರೀಟ್‌ ಫಾಂಟೂನ್ಸ್‌’ ನಿರ್ಮಿಸಿ ನಿಲುಗಡೆ (ಆ್ಯಂಕರ್‌) ಮಾಡಲಾಗಿದೆ. ಇನ್ನೆರಡು ಫಾಂಟೂನ್ಸ್‌ ಆಗಬೇಕಿದ್ದು, ಜೆಟ್ಟಿಯು ನೀರಿನ ಮಧ್ಯಭಾಗ ದಲ್ಲಿರುತ್ತದೆ. ಅಲ್ಲಿಂದ ನದಿ ದಡಕ್ಕೆ ಅಗಲದ ರಸ್ತೆ ಸ್ವರೂಪದ ಸಂಪರ್ಕ (ರೋಪ್‌) ಕಲ್ಪಿಸಲಾಗುತ್ತದೆ. ಇದರ ಮೂಲಕ ಜೆಟ್ಟಿಗೆ ಸಣ್ಣ ಗಾತ್ರದ ವಾಹನಗಳ ಸಂಚಾರಕ್ಕೂ ಅವಕಾಶವಾಗಲಿದೆ. ಸಣ್ಣ ದೋಣಿ ಗಳಲ್ಲಿ ತಂದ ಮೀನನ್ನು ಈ ಜೆಟ್ಟಿಯಲ್ಲಿ ಇಳಿಸಿ ಅದನ್ನು ವಾಹನದ ಮೂಲಕ ದಡಕ್ಕೆ ತರಬಹುದು. ರೋಪ್‌ನ ಇಕ್ಕೆಲಗಳಲ್ಲಿ ದೋಣಿ ನಿಲ್ಲಿಸಬಹುದು.

ಯಾಕಾಗಿ?
ಬಂದರಿನಲ್ಲಿ ಪ್ರಸ್ತುತ ಬೋಟುಗಳ ನಿಲುಗ ಡೆಗೆ ಸ್ಥಳವಿಲ್ಲ. ಸಾಂಪ್ರದಾಯಿಕ ನಾಡದೋಣಿಗಳಿಗೆ ಇದರಿಂದ ಹೆಚ್ಚು ಸಮಸ್ಯೆ. ಇದರ ನಿವಾರಣೆಗೆ ತೇಲುವ ಜೆಟ್ಟಿ ನಿರ್ಮಾಣವನ್ನು “ಪೈಲೆಟ್‌ ಪ್ರಾಜೆಕ್ಟ್’ ಆಗಿ ಕೈಗೊಳ್ಳಲು 2019-20ರ ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿತ್ತು.

“ಮೀನುಗಾರಿಕೆ ಬಂದರನ್ನು ಸ್ಮಾರ್ಟ್‌ಸಿಟಿ ಸ್ವರೂಪದಲ್ಲಿ ಅಭಿವೃದ್ಧಿಪಡಿಸಿ ನಾಡದೋಣಿಗಳಿಗೆ ಅನುಕೂಲ ಕಲ್ಪಿಸಲು ಮೊದಲ ತೇಲುವ ಜೆಟ್ಟಿ ನಿರ್ಮಿಸಲಾಗುತ್ತಿದೆ. ಈ ಮೂಲಕ ಮೀನುಗಾರಿಕೆ ಕ್ಷೇತ್ರದಲ್ಲಿ ಹೊಸ ಬದಲಾವಣೆ ಕಾಣಲಾಗುತ್ತಿದೆ’ ಎನ್ನುತ್ತಾರೆ ಶಾಸಕ ಡಿ. ವೇದವ್ಯಾಸ ಕಾಮತ್‌.

ಸದ್ಯ ನಾಡದೋಣಿಗಳು ಬೆಂಗ್ರೆಯಲ್ಲಿ ನಿಲ್ಲುತ್ತದೆ. ಆದರೆ ಮೀನು ಇಳಿಸಲು ಅವರು ಮಂಗಳೂರಿನ ಮೀನುಗಾರಿಕೆ ಬಂದರಿಗೆ ಆಗಮಿಸಿ ಯಾಂತ್ರೀಕೃತ ಬೋಟ್‌ಗಳ ಹಿಂಬದಿಯಲ್ಲಿ ನಿಂತು ಅಲ್ಲಿಂದ ಇತರ ಬೋಟ್‌ಗಳಿಗೆ ಹತ್ತಿ ಸಾಹಸಕರ ರೀತಿಯಲ್ಲಿ ಮೀನನ್ನು ದಕ್ಕೆಗೆ ತರಬೇಕಿದೆ. ತೇಲುವ ಜೆಟ್ಟಿ ಈ ಸಮಸ್ಯೆಗೆ ಪೂರ್ಣವಿರಾಮ ಹಾಕಲಿದೆ.

ಲಾಭ ಹೇಗೆ?
ಹೊಸ ಜೆಟ್ಟಿಗೆ ಭೂಮಿಯ ಅಗತ್ಯ ಇದ್ದು, ಭೂಸ್ವಾಧೀನ/ಜಾಗದ ಸಮಸ್ಯೆ ಇದೆ. ಆದರೆ ನೀರಿನಲ್ಲೇ ಜೆಟ್ಟಿ ನಿರ್ಮಿಸಲು ಈ ಸಮಸ್ಯೆ ಇಲ್ಲ. ಹೊಸ ಜೆಟ್ಟಿಯಾದರೆ ನಾಡದೋಣಿ, ಸಾಂಪ್ರದಾಯಿಕ ದೋಣಿಗಳ ನಿಲುಗಡೆಗೆ ಸ್ಥಳ ಸಿಗಲಿದೆ. ಪ್ರಸ್ತುತ ಇರುವ ಮೀನುಗಾರಿಕೆ ಜೆಟ್ಟಿಯಲ್ಲಿ ನೀರಿನ ಮಟ್ಟ ಏರಿಳಿತ ಆಗುವಾಗ ಬೋಟ್‌ಗಳೂ ಎತ್ತರ/ತಗ್ಗು ಆಗಿ ಮೀನು ಇಳಿಸಲು ಸಮಸ್ಯೆಯಾಗುತ್ತದೆ. ತೇಲುವ ಜೆಟ್ಟಿಯು ನೀರಿನ ಮಟ್ಟದಲ್ಲೇ ಇರುವ ಕಾರಣ ಈ ಸಮಸ್ಯೆ ಇರದು. ಮೀನು ತರುವ ಬೋಟ್‌ಗಳಿಗೆ ಕೆಲವೊಮ್ಮೆ ಮೀನು ಇಳಿಸಲು ದಕ್ಕೆಯಲ್ಲಿ ಸ್ಥಳ ಸಿಗದೇ ಕಾಯಬೇಕು. ದೊಡ್ಡ ಬೋಟ್‌ಗಳಲ್ಲಿ ಮಂಜುಗಡ್ಡೆ ಇರುವುದರಿಂದ ಮೀನು ಹಾಳಾಗದು. ಆದರೆ ನಾಡದೋಣಿ ಸಹಿತ ಸಣ್ಣ ಬೋಟ್‌ಗಳಿಗೆ ಮಂಜುಗಡ್ಡೆ ಇರದ್ದರಿಂದ ಬೇಗನೆ ಇಳಿಸಲು ಹೊಸ ಜೆಟ್ಟಿ ಸಹಾಯಕ. ಜತೆಗೆ ಅಗತ್ಯವಿದ್ದರೆ ತೇಲುವ ಜೆಟ್ಟಿಯನ್ನು ಬಿಚ್ಚಿಕೊಂಡು ಇನ್ನೊಂದು ಕಡೆಗೆ ಸಾಗಿಸಲು ಬಹುದು.

ತೇಲುವ ಜೆಟ್ಟಿ ವಿಶೇಷತೆ
-ಜೆಟ್ಟಿಗಾಗಿ ನಿರ್ಮಿಸಿದ ಫಾಂಟೂನ್ಸ್‌ನ ಹೊರಭಾಗ ಕಾಂಕ್ರೀಟ್‌ ಸ್ವರೂಪದಲ್ಲಿದೆ.
-ಫಾಂಟೂನ್ಸ್‌ ಒಳಗೆ ಇಪಿಎಸ್‌ (ಎಕ್ಸ್‌ ಪಾಂಡೆಡ್‌ ಪಾಲಿಸ್ಟೈನರ್‌) ಬಳಕೆ.
-ಪ್ರತಿ ಫಾಂಟೂನ್ಸ್‌ 20 ಮೀ. ಉದ್ದ ಇರ ಲಿದ್ದು, 3 ಫಾಂಟೂನ್ಸ್‌ ಸೇರಿ 60 ಮೀ. ಉದ್ದ ಹಾಗೂ 6 ಮೀ. ಅಗಲ ಇರಲಿದೆ.
-30 ನಾಡದೋಣಿಗಳಿಗೆ ಅವಕಾಶ.
-ಒಂದು ಫಾಂಟೂನ್ಸ್‌ ಸುಮಾರು 180 ಟನ್‌ ತೂಕ
-360 ಟನ್‌ ಭಾರವನ್ನು ಸುಲಭವಾಗಿ ಹೊರುವ ಸಾಮರ್ಥ್ಯ ಇದಕ್ಕಿದೆ.

ಕಾಮಗಾರಿ ಆರಂಭ
ಮೀನುಗಾರಿಕೆ ಬಂದರಿನ ಬೋಟ್‌ ದಟ್ಟಣೆಯನ್ನು ಕಡಿಮೆಗೊಳಿಸಲು ಹಾಗೂ ನಾಡದೋಣಿಗಳ ಅನುಕೂಲಕ್ಕೆ ಮೊದಲ ಬಾರಿಗೆ ತೇಲುವ ಜೆಟ್ಟಿಯನ್ನು ಮಂಗಳೂ ರಿನಲ್ಲಿ ನಿರ್ಮಿಸಲಾಗುತ್ತಿದೆ. ಪ್ರಥಮ ಹಂತದ ಕಾಮಗಾರಿ ನಡೆಯುತ್ತಿದೆ.
-ಕೆ.ಗಣೇಶ್‌., ಎಂಡಿ, ಕೆಎಫ್‌ಡಿಸಿ

-ದಿನೇಶ್‌ ಇರಾ

ಟಾಪ್ ನ್ಯೂಸ್

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ…  ಆರನೇ ಮಹಡಿಯಿಂದ ಬಿದ್ದು ಮೃತಪಟ್ಟ

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

Theft Case ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 67.75 ಲ.ರೂ. ಮೌಲ್ಯದ ಚಿನ್ನಾಭರಣ ಕಳವು

Theft Case ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 67.75 ಲ.ರೂ. ಮೌಲ್ಯದ ಚಿನ್ನಾಭರಣ ಕಳವು

Mangaluru ಜೆಪ್ಪು ಸೆಮಿನರಿ: ಮನೆಯಿಂದ ಕಳವು

Mangaluru ಜೆಪ್ಪು ಸೆಮಿನರಿ: ಮನೆಯಿಂದ ಕಳವು

police crime

Mangalore ಕಾರಾಗೃಹದಲ್ಲಿ ಕೈದಿಗಳ ಮಾರಾಮಾರಿ: ಇಬ್ಬರು ಆಸ್ಪತ್ರೆಗೆ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.