![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 13, 2023, 7:50 AM IST
ಮಂಗಳೂರು: ಯಾತ್ರಾ ಡಾಟ್ ಕಾಮ್ ಎನ್ನುವ ವೆಬ್ಸೈಟ್ನಲ್ಲಿ ಟಿಕೆಟ್ ಬುಕ್ ಮಾಡಿದ ವ್ಯಕ್ತಿಯೊಬ್ಬರು 99,860ರೂ. ಕಳೆದುಕೊಂಡಿರುವ ಕುರಿತಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ. 8ರಂದು 6,380 ರೂ. ಪಾವತಿಸಿ ಟಿಕೆಟ್ ಬುಕ್ ಮಾಡಿದ್ದು, ಟಿಕೆಟ್ ಬಾರದ ಹಿನ್ನೆಲೆಯಲ್ಲಿ ಸಂಸ್ಥೆಯವರಿಗೆ ಕರೆ ಮಾಡಿ ಹಣ ಹಿಂದಿರುಗಿರುವಂತೆ ಆಗ್ರಹಿಸಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಅಕೌಂಟ್ ನಂಬರ್ನ ಕೊನೆಯ 6 ಸಂಖ್ಯೆಗಳನ್ನು ಕೇಳಿ ಪಡೆದು, ಎರಡು ದಿನದಲ್ಲಿ ಜಮೆಯಾಗುತ್ತದೆ ಎಂದು ತಿಳಿಸಿದ್ದಾನೆ.
ಆದರೆ ಜ.11ರಂದು ಅವರ ಮೊಬೈಲ್ಗೆ ಖಾತೆಯಿಂದ ಬೇರೆ ಬ್ಯಾಂಕ್ ಖಾತೆಗೆ 99,860 ರೂ. ವರ್ಗಾವಣೆಯಾಗಿರುವ ಕುರಿತು ಬ್ಯಾಂಕ್ನಿಂದ ಮೆಸೇಜ್ಬಂದಿದೆ. ಅದರಂತೆ ಬ್ಯಾಂಕ್ನಲ್ಲಿ ದೂರು ದಾಖಲಿಸಿ, ಬಳಿಕ ಸೆನ್ ಠಾಣೆಯಲ್ಲೂ ಆನ್ಲೈನ್ಲ್ಲಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಕುರಿತಂತೆ ದೂರು ದಾಖಲಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.