ಗೇಲ್‌ ಪೈಪ್‌ಲೈನ್‌: ಸಮುದ್ರ ತಡಿಯಲ್ಲೋ ? ರೈತರ ಭೂಮಿಯಲ್ಲೋ?


Team Udayavani, Dec 18, 2017, 12:20 PM IST

18-Dec-8.jpg

ಮಹಾನಗರ: ಕರಾವಳಿ ಭಾಗದಲ್ಲಿ ತೀವ್ರ ವಿರೋಧ ಎದುರಿಸಿ, ಕೆಲವು ವರ್ಷಗಳಿಂದ ಮರೆಯಾಗಿದ್ದ, ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ ಕಂಪೆನಿಯ (ಗೇಲ್) ಬಹು ನಿರೀಕ್ಷಿತ ಕೊಚ್ಚಿ -ಕುಟ್ಟನಾಡು -ಮಂಗಳೂರು ಗ್ಯಾಸ್‌ ಪೈಪ್‌ಲೈನ್‌ ಯೋಜನೆಗಾಗಿ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಮತ್ತೆ ಜೀವ ದೊರಕಲಿದೆ. ಪೈಪ್‌ಲೈನ್‌ ಕೃಷಿಕರ ಭೂಮಿಯಲ್ಲಿ ಸಾಗುವುದೇ ಅಥವಾ ಸಮುದ್ರದ ಬದಿಯಲ್ಲಿ ಹಾಕುವುದೇ? ಎಂಬುದು ಡಿ.22ರಂದು ಮಂಗಳೂರಿನಲ್ಲಿ ನಡೆಯುವ ಭೂಮಾಲಕರ ಸಭೆಯಲ್ಲಿ ನಿರ್ಧಾರವಾಗಲಿದೆ.

ಕೇರಳದ ಕೊಚ್ಚಿಯಿಂದ ಮಂಗಳೂರಿನ ಎಂಸಿಎಫ್‌ಗೆ ನೈಸರ್ಗಿಕ ಅನಿಲ ಪೂರೈಸುವ ನಿಟ್ಟಿನಲ್ಲಿ ಕೃಷಿಕರ ಭೂಮಿಯಲ್ಲಿ ಪೈಪ್‌ ಲೈನ್‌ ಸಾಗುವುದಾದರೆ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ 16 ಹಳ್ಳಿಗಳನ್ನು ಯೋಜನೆ ಒಳಗೊಳ್ಳುತ್ತದೆ.

ಗ್ಯಾಸ್‌ ಪೈಪ್‌ಲೈನ್‌ ಅನ್ನು ಕೃಷಿಕರ ಭೂಮಿಯಲ್ಲಿ ಒಯ್ಯುವ ಬದಲು ಕೇರಳದಿಂದ ಸಮುದ್ರ ಕಿನಾರೆಯಲ್ಲೇ ಮಂಗಳೂರಿಗೆ ತಂದರೆ ಸಮಸ್ಯೆ ಇದೆಯೇ ಎಂಬ ಕುರಿತು ವರದಿ ಸಲ್ಲಿಸುವಂತೆ ಈ ಹಿಂದಿನ ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್‌ ತಿಳಿಸಿದ್ದರು. ಇದಕ್ಕಾಗಿ ಎನ್‌ಐಟಿಕೆ ತಜ್ಞರು, ಕಂದಾಯ ಇಲಾಖೆ ಹಾಗೂ ಸ್ಥಳೀಯ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. 10 ದಿನಗಳ ಹಿಂದೆ ಸಭೆ ಸೇರಿದ ಸಮಿತಿ ಸದಸ್ಯರು, ಸಮುದ್ರ ದಡದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವುದು ಕಷ್ಟ ಎಂಬುದನ್ನು ಸ್ಥಳೀಯ ಮುಖಂಡರಿಗೆ ಮನವರಿಕೆ ಮಾಡಲು ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕೆ ಒಪ್ಪದ ಹೋರಾಟಗಾರರು, ಸಮುದ್ರ ಬದಿಯಲ್ಲೇ ಪೈಪ್‌ಲೈನ್‌ ಸಾಗಲಿ; ಇಲ್ಲವಾದರೆ, ರೈತರಿಗೆ ಭೂಮಿಯಹಾಲಿ ಮೌಲ್ಯಕ್ಕಿಂತ ಮೂರು ಪಟ್ಟು ಅಧಿಕ ಪರಿಹಾರವನ್ನು ನ್ಯಾಯಬದ್ಧ ವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆದರೂ, ಅಂತಿಮವಾಗಿ ಯಾವ ಭಾಗದಲ್ಲಿ ಪೈಪ್‌ಲೈನ್‌ ಸಾಗಿಸುವುದು ಎಂಬುದನ್ನು ಡಿ. 22ರ ಸಭೆಯಲ್ಲಿ ನಿರ್ಧರಿಸಲಾಗುವುದು. ಭೂಮಿ ಕಳೆದುಕೊಳ್ಳುವವರ ಉಪಸ್ಥಿತಿಯಲ್ಲಿ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ
ಎಂದು ಸ್ಥಳೀಯ ಮುಖಂಡರು ಸ್ಪಷ್ಟಪಡಿಸಿದ್ದಾರೆ. ನೂತನ ಜಿಲ್ಲಾಧಿಕಾರಿ ಶಶಿಕುಮಾರ್‌ ಸೆಂಥಿಲ್‌ ಈ ವಿಚಾರದಲ್ಲಿ ಯಾವ ನಿಲುವು ತಾಳಲಿದ್ದಾರೆ ಎಂಬ ಕುತೂಹಲ ಶುರುವಾಗಿದೆ.

ಕೈರಂಗಳದ ಮೂಲಕ ಕರಾವಳಿ ಪ್ರವೇಶ
ಸುಮಾರು 450 ಕಿ.ಮೀ. ಉದ್ದದ ಗೈಲ್‌ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸಲು ಕೇಂದ್ರದ ಅನುಮತಿ 2007ರಲ್ಲೇ ದೊರಕಿದೆ. ಭಾರೀ ಪ್ರತಿರೋಧದ ನಡುವೆಯೂ ಕೇರಳ ಹಾಗೂ ತಮಿಳುನಾಡಿನಲ್ಲಿ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಲ್ಲಿಕೋಟೆ-ಕಣ್ಣೂರು-ಕಾಸರಗೋಡು ಮೂಲಕ ಈ ಅನಿಲ ಕೊಳವೆ ಮಾರ್ಗ ಸಾಗಿ, ಕೈರಂಗಳ ಗ್ರಾಮದ ಶಾರದಾ ಗಣಪತಿ ಪ್ರಾಥಮಿಕ ಶಾಲೆ ಸಮೀಪ ಇದು ಕರ್ನಾಟಕದ ಗಡಿಯನ್ನು ಪ್ರವೇಶಿಸಿಸಲಿದೆ. ಅಲ್ಲಿಂದ ಮುಂದೆ ಮುಡಿಪು, ಕೊಣಾಜೆ, ಬಂಟ್ವಾಳದ ಅರ್ಕುಳ, ಪುದು, ಮಲ್ಲೂರು, ಅದ್ಯಪಾಡಿ, ಕೆಂಜಾರು, ತೋಕೂರು ಮೂಲಕ 35 ಕಿ.ಮೀ. ಸಾಗಿ, ಎಂಸಿಎಫ್‌ ಪ್ರವೇಶಿಸಲಿದೆ. ತೋಕೂರು ಗ್ರಾಮದ- 2.6 ಎಕರೆ, ಕೆಂಜಾರು – 5.1, ಮಳವೂರು -3.6, ಅದ್ಯಪಾಡಿ – 5.7, ಕಂದಾವರ – 1.5, ಅಡ್ಡೂರು – 5.6, ಮಲ್ಲೂರು – 3.3, ಪಾವೂರು – 5.5, ಮೇರಮಜಲು – 6.2, ಕೈರಂಗಳ – 4.0, ಅರ್ಕುಳ – 3.8, ಅಮ್ಮುಂಜೆ – 1.7, ಬಾಳೇಪುಣಿ – 0.03 ಎಕರೆ ಭೂಮಿ ಗ್ಯಾಸ್‌ ಪೈಪ್‌ಲೈನ್‌ಗೆ ಹೋಗಲಿದೆ. ಮೂಲ ಪ್ರಸ್ತಾವನೆಯಂತೆ ಈ ಯೋಜನೆ 2012 -13ರ ಮಾರ್ಚ್‌ಗೆ ಪೂರ್ಣಗೊಳ್ಳಬೇಕಿತ್ತು

ಪೈಪ್‌ ಸಾಗಲು ಬೇಕು 60 ಅಡಿ ಸ್ಥಳ
ಗೇಲ್‌ ಪೈಪ್‌ಲೈನ್‌ ಮೂಲಕ ಆರಂಭದಲ್ಲಿ ಎಂಸಿಎಫ್‌ಗೆ ಮಾತ್ರ ಅನಿಲ ಪೂರೈಕೆಯಾಗಲಿದೆ. ಮುಂದೆ ಪ್ರತ್ಯೇಕ ಘಟಕ ನಿರ್ಮಾಣ ಮಾಡಿ, ಕೊಳವೆ ಮೂಲಕ ಮನೆಗಳಿಗೆ, ಹೊಟೇಲ್‌ಗ‌ಳಿಗೆ ಅನಿಲ ಪೂರೈಕೆ ಮಾಡುವ ಉದ್ದೇಶವೂ ಇದೆ. ಎಲ್‌ ಪಿಜಿಗಿಂತ ಕಡಿಮೆ ದರದಲ್ಲಿ ಹಾಗೂ ದಿನಪೂರ್ತಿ ಅನಿಲ ಪೂರೈಕೆ ಸಾಧ್ಯವಿದೆ. ಪೈಪ್‌ ಲೈನ್‌ ಹಾಕಲು ಸ್ವಾಧೀನಪಡಿಸುವ ಸ್ಥಳಕ್ಕೆ ನಷ್ಟ ಪರಿಹಾರ ನೀಡಲಾಗುತ್ತದೆ. ಅಲ್ಲದೆ ಜಾಗವನ್ನು ಮಾಲಕರಿಗೆ ಬಿಟ್ಟು ಕೊಡಲಾಗುತ್ತಿದೆ. ಸುಮಾರು 60 ಅಡಿ ಜಾಗದಲ್ಲಿ ಪೈಪ್‌ ಹಾದು ಹೋಗಲಿದ್ದು, ಈ ಜಾಗದಲ್ಲಿ ಕಟ್ಟಡ ನಿರ್ಮಾಣ ಹಾಗೂ ಶಾಶ್ವತ ಕೃಷಿಗೆ
ಅವಕಾಶ ಇಲ್ಲ. ತರಕಾರಿ ಸಹಿತ ತಾತ್ಕಾಲಿಕ ಬೆಳೆಗಳನ್ನು ಬೆಳೆಯಲು ಅವಕಾಶ ಇದೆ ಎಂಬುದು ಗೇಲ್‌ ಕಂಪೆನಿಯ ಹೇಳಿಕೆ.

800ರಷ್ಟು ರೈತರ ಹಿತವೇ ನಮಗೆ ಮುಖ್ಯ
ರೈತರ ಜಾಗದಲ್ಲಿ ಗ್ಯಾಸ್‌ ಪೈಪ್‌ಲೈನ್‌ ಅಳವಡಿಸುವ ಬದಲು ಸಮುದ್ರದ ಬದಿಯಲ್ಲಿ ಹಾಕಿದರೆ ಅನುಕೂಲ ಎಂಬುದನ್ನು ನಾವು ಜಿಲ್ಲಾಡಳಿತಕ್ಕೆ ತಿಳಿಸಿದ್ದೇವೆ. ರೈತರ ಭೂಮಿಯೇ ಬೇಕಿದ್ದರೆ ಈಗಿನ ಮಾರುಕಟ್ಟೆ ಬೆಲೆಗಿಂತ ಮೂರು ಪಟ್ಟು ಅಧಿಕ ಮೌಲ್ಯ ನೀಡಬೇಕು. ಇದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ, ನಾವು ಯಾವುದೇ ಕಾರಣಕ್ಕೂ ಭೂಮಿ ಬಿಟ್ಟು ಕೊಡಲಾರೆವು. 800ರಷ್ಟು ರೈತರ ಹಿತ ನಮಗೆ ಮುಖ್ಯ. ಕಡಲ ಬದಿಯಲ್ಲಿ ಅಳವಡಿಸಲು ಕಾನೂನಿನ ನೆಪ ಹೇಳುವ ಕಂಪೆನಿ, ಪಾವೂರಿನಿಂದ ಮೇರಮಜಲು ಭಾಗಕ್ಕೆ ನದಿಯ ಮೂಲಕ ಹೇಗೆ ಪೈಪ್‌ಲೈನ್‌ ಅಳವಡಿಸಲಿದ್ದಾರೆ ಎಂಬುದನ್ನು ವಿವರಿಸಲಿ.
ಸಂತೋಷ್‌ ಕುಮಾರ್‌ ರೈ ಬೋಳ್ಯಾರ್‌
   ಹೋರಾಟಗಾರರು

ದಿನೇಶ್‌ ಇರಾ

ಟಾಪ್ ನ್ಯೂಸ್

ದುಷ್ಟ ಶಕ್ತಿಯ ದಮನ; ಶಿಷ್ಟ ರಕ್ಷಣೆಯ ಅಭಯ

ದುಷ್ಟ ಶಕ್ತಿಯ ದಮನ; ಶಿಷ್ಟ ರಕ್ಷಣೆಯ ಅಭಯ

adani (2)

Dollar Earnings: ಭಾರತದಲ್ಲಿ ಗೌತಮ್‌ ಅದಾನಿ ನಂ.1, ಮೌಲ್ಯ 9.62 ಲಕ್ಷ ಕೋಟಿ

43 ಕ್ರಿಮಿನಲ್ ಕೇಸ್‌ ವಾಪಸ್ ಗೆ ಸಚಿವ ಸಂಪುಟ ಸಭೆ ನಿರ್ಧಾರ

Karnataka: 43 ಕ್ರಿಮಿನಲ್ ಕೇಸ್‌ ವಾಪಸ್ ಗೆ ಸಚಿವ ಸಂಪುಟ ಸಭೆ ನಿರ್ಧಾರ: ಎಚ್‌.ಕೆ. ಪಾಟೀಲ

Muda Case: 8 ಗಂಟೆ ಕಾಲ ಸಿಎಂ ಭಾಮೈದನ ವಿಚಾರಣೆ

Muda Case: 8 ಗಂಟೆ ಕಾಲ ಸಿಎಂ ಭಾಮೈದನ ವಿಚಾರಣೆ

akhilesh

SP-Congress ಮೈತ್ರಿ ಸ್ಥಿರ, ಒಕ್ಕೂಟದಲ್ಲಿ ಬಿರುಕಿಲ್ಲ: ಅಖೀಲೇಶ್‌

rahul gandhi

Haryana ಸೋಲಿಗೆ ನಿಮ್ಮ ಸ್ವಾರ್ಥ ಕಾರಣ: ರಾಹುಲ್‌ ಗಾಂಧಿ ಗರಂ?

Dr G. Parameshwara

Parameshwara: ಇನ್ನು ಮುಂದೆ ಯಾವುದೇ ಚರ್ಚೆ ಮಾಡುವುದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ತೋಟಬೆಂಗ್ರೆಯಲ್ಲಿ ಸರಕಾರಿ ಜಾಗದಿಂದ ಅಕ್ರಮ ಮರಳು ಸಾಗಾಟ

Mangaluru: ತೋಟಬೆಂಗ್ರೆಯಲ್ಲಿ ಸರಕಾರಿ ಜಾಗದಿಂದ ಅಕ್ರಮ ಮರಳು ಸಾಗಾಟ

missing

Mangaluru: ಮೊಬೈಲ್‌ ಕಿತ್ತುಕೊಂಡದ್ದಕ್ಕೆ ಮನೆ ಬಿಟ್ಟು ಹೋದ ವಿದ್ಯಾರ್ಥಿ

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Ullal: ಎಂಡಿಎಂಎ ಮಾರಾಟ ಆರೋಪಿ ಬಂಧನ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

Mangaluru: ಸಾಲು ಸಾಲು ರಜೆ; ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ ಜನಜಂಗುಳಿ

accident2

Kaup: ದಂಪತಿಗೆ ಕಾರು ಢಿಕ್ಕಿ; ಮಹಿಳೆಗೆ ಗಾಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

ದುಷ್ಟ ಶಕ್ತಿಯ ದಮನ; ಶಿಷ್ಟ ರಕ್ಷಣೆಯ ಅಭಯ

ದುಷ್ಟ ಶಕ್ತಿಯ ದಮನ; ಶಿಷ್ಟ ರಕ್ಷಣೆಯ ಅಭಯ

Mangaluru: ತೋಟಬೆಂಗ್ರೆಯಲ್ಲಿ ಸರಕಾರಿ ಜಾಗದಿಂದ ಅಕ್ರಮ ಮರಳು ಸಾಗಾಟ

Mangaluru: ತೋಟಬೆಂಗ್ರೆಯಲ್ಲಿ ಸರಕಾರಿ ಜಾಗದಿಂದ ಅಕ್ರಮ ಮರಳು ಸಾಗಾಟ

adani (2)

Dollar Earnings: ಭಾರತದಲ್ಲಿ ಗೌತಮ್‌ ಅದಾನಿ ನಂ.1, ಮೌಲ್ಯ 9.62 ಲಕ್ಷ ಕೋಟಿ

43 ಕ್ರಿಮಿನಲ್ ಕೇಸ್‌ ವಾಪಸ್ ಗೆ ಸಚಿವ ಸಂಪುಟ ಸಭೆ ನಿರ್ಧಾರ

Karnataka: 43 ಕ್ರಿಮಿನಲ್ ಕೇಸ್‌ ವಾಪಸ್ ಗೆ ಸಚಿವ ಸಂಪುಟ ಸಭೆ ನಿರ್ಧಾರ: ಎಚ್‌.ಕೆ. ಪಾಟೀಲ

Muda Case: 8 ಗಂಟೆ ಕಾಲ ಸಿಎಂ ಭಾಮೈದನ ವಿಚಾರಣೆ

Muda Case: 8 ಗಂಟೆ ಕಾಲ ಸಿಎಂ ಭಾಮೈದನ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.