ಗಿರೀಶ್‌ ಭಾರದ್ವಾಜ್‌ ಅವರಿಗೆ ನಾಗರಿಕ ಸಮ್ಮಾನ


Team Udayavani, May 31, 2017, 12:31 PM IST

3005bk7a.jpg

ಸುಳ್ಯ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಗಿರೀಶ್‌ ಭಾರದ್ವಾಜ್‌ ಅವರ ಕೀರ್ತಿಯ ಹಿಂದೆ ಧ್ಯೇಯ ಮತ್ತು ಕರ್ಮ ಜೀವನವಿದೆ. 129 ಸೇತುವೆಗಳ ನಿರ್ಮಾಣದ ಮೂಲಕ ದೇಶದ ಕುಗ್ರಾಮಗಳ ಪ್ರತಿಯೋರ್ವರಿಗೂ ತಮ್ಮ ಜವಾಬ್ದಾರಿಯ ಅರಿವು ಮೂಡಿಸಿದ್ದಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ನುಡಿದರು.

ಪದ್ಮಶ್ರೀ ಗಿರೀಶ್‌ ಭಾರದ್ವಾಜ್‌ ಅಭಿನಂದನ ಸಮಿತಿ ಸುಳ್ಯ ಮತ್ತು ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಮಂಗಳವಾರ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ಜರಗಿದ ನಾಗರಿಕ ಸಮ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಯಾರೂ ಬಯಸಿ ಬಂದಿದ್ದಲ್ಲ. ಸಾಮಾಜಿಕ ಚಿಂತನೆಗಳುಳ್ಳ ಕರ್ಮಜೀವಿಗಳನ್ನೇ ಅರಸಿ ಬಂದಿದೆ. ಗಿರೀಶ್‌ ಮತ್ತು ಅವರ 70 ಮಂದಿ ಜೊತೆಗಾರರ ನಂಬಿಕೆ, ವಿಶ್ವಾಸದ ಕಾರ್ಯಕ್ಕೆ ಸಂದ ಗೌರವವಿದು. ಹುಟ್ಟೂರ ಜನತೆ ಸಮ್ಮಾನಿಸುವ ಮೂಲಕ ಪ್ರಶಸ್ತಿಗಿಂತಲೂ ಹೆಚ್ಚಿನ ಗೌರವ ಪ್ರಾಪ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಭಾರದ್ವಾಜರ ಸಾಧನೆ ಪಠ್ಯವಾಗಲಿ
ಮುಖ್ಯ ಅತಿಥಿಗಳಾಗಿದ್ದ ಸುಳ್ಯ ಅಕಾಡೆಮಿ ಆಫ್ ಲಿಬರಲ್‌ ಎಜುಕೇಶನ್‌ನ ಅಧ್ಯಕ್ಷ ಡಾ. ಚಿದಾನಂದ ಕೆ.ವಿ., ಗಿರೀಶ್‌ ಅವರು ಉತ್ತಮ ಸಾಧಕ. ಕ್ರಿಕೆಟ್‌ ತಾರೆಗಳ ವಿಚಾರಗಳನ್ನು ಬರೆಯುವ ಬದಲಾಗಿ ಸರಕಾರ ಗಿರೀಶ್‌ ಅವರ ವಿಚಾರಧಾರೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು. ಅವರ ತೂಗು ಸೇತುವೆಯ ತಾಂತ್ರಿಕತೆ ಮತ್ತಷ್ಟು ಆಧುನಿಕತೆ ಯೊಂದಿಗೆ ಸಾಗಲಿ ಎಂದು ಶುಭಹಾರೈಸಿದರು.

ಗುಣಗಳಿಗೆ ಮಾನ್ಯತೆ ನೀಡಬೇಕು: ಅಂಗಾರ
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌. ಅಂಗಾರ ಮಾತನಾಡಿ, ದೇಶದ ಅತ್ಯುನ್ನತ ಪ್ರಶಸ್ತಿ ಪಡೆದ ಸಾಧನೆ ಓರ್ವನಾದರೂ ಅದರ ಕೀರ್ತಿ ತಾಲೂಕಿಗೆ ದೊರೆತಿದೆ. ಇಂದು ವ್ಯಕ್ತಿಯ ಗುಣಗಳಿಗೆ ಮಾನ್ಯತೆ ನೀಡುವ ಕಾರ್ಯವಾಗಬೇಕು. ಪ್ರತಿಯೊಬ್ಬರಲ್ಲೂ ಕಾರ್ಯನಿಷ್ಠೆ ಇದ್ದಾಗ ಯಶಸ್ಸು ಖಂಡಿತ ಎಂದರು.

ವೇದಿಕೆಯಲ್ಲಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ನ.ಪಂ. ಅಧ್ಯಕ್ಷೆ ಶೀಲಾ ಮಾಧವ ಉಪಸ್ಥಿತರಿದ್ದರು. ಅಭಿನಂದನ ಸಮಿತಿ ಕೋಶಾಧಿಕಾರಿ ಎಂ.ಬಿ. ಸದಾಶಿವ ಸ್ವಾಗತಿಸಿದರು. ಕೃಷ್ಣಪ್ರಸಾದ್‌ ಮಡ್ತಿಲ ಸಮ್ಮಾನ ಪತ್ರ ವಾಚಿಸಿದರು. ಸುಜನ್‌ ಕಿಲಂಗೋಡಿ ವಂದೇ ಮಾತರಂ ಹಾಡಿದರು. ಬೇಬಿ ವಿದ್ಯಾ ಹಾಗೂ ಭವ್ಯಾ ರಜತ್‌ ಕಾರ್ಯಕ್ರಮ ನಿರೂಪಿಸಿದರು. ಎ.ಟಿ. ಕುಸುಮಾಧರ ವಂದಿಸಿದರು.

ವಿವಿಧ ಸಂಘ-ಸಂಸ್ಥೆಗಳಿಂದ ಪ್ರಮುಖರು ಹಾರಾರ್ಪಣೆ ಮಾಡಿದರು. ದುರ್ಗಾಕುಮಾರ್‌ ಮತ್ತು ತಂಡದವರಿಂದ ಸಂಪಾದಿತ ಸಾಕ್ಷ್ಯಚಿತ್ರ ವನ್ನು ಬಿಡುಗಡೆಗೊಳಿಸಲಾಯಿತು.

ಸಾರೋಟಿನಲ್ಲಿ  ಮೆರವಣಿಗೆ
ಉಷಾ – ಗಿರೀಶ್‌ ಭಾರದ್ವಾಜ ದಂಪತಿಯನ್ನು ಕಾರ್ಯಕ್ರಮಕ್ಕೆ ಮೊದಲು ಜ್ಯೋತಿ ವೃತ್ತದಿಂದ ಸಭಾವೇದಿಕೆವರೆಗೆ ಸಾರೋಟಿನಲ್ಲಿ ಕುಳ್ಳಿರಿಸಿ ಭವ್ಯವಾದ ಮೆರವಣಿಗೆ ಮೂಲಕ ಕರೆತರಲಾ ಯಿತು. ವಿವಿಧ ಸಂಘ-ಸಂಸ್ಥೆಗಳವರು ಸಾರ್ವಜನಿ ಕರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಹೃದಯಗಳನ್ನು ಬೆಸೆಯುವ ಕಾರ್ಯ
ಅಭಿನಂದನೆ ಸ್ವೀಕರಿಸಿದ ಗಿರೀಶ್‌ ಭಾರದ್ವಾಜ್‌ ಅವರು ಮಾತನಾಡಿ, ಪ್ರತಿಯೊಂದು ವೃತ್ತಿ ಮನುಕುಲದ ಸೇವೆಗಿರುವ ಅವಕಾಶ. ಹಾಗೆ ಅರಿತುಕೊಂಡರೆ ಸಾಕಷ್ಟು ಅನುಭವಗಳಾಗುತ್ತವೆ. ನಮ್ಮ ನದಿ-ದಡಗಳನ್ನು ಸಂಪರ್ಕಿಸುವ ಸೇತುವೆ ಕಾರ್ಯದಲ್ಲಿ ಜನರ ಪ್ರೇಮದ ಸಾûಾತ್ಕಾರವಾಗುತ್ತಿತ್ತು ಎಂದು ತಮ್ಮ ಅನುಭವ‌ಗಳನ್ನು ತಿಳಿಸಿದರು. ಕೇವಲ ನದಿಗಳ ದಡವನ್ನು ತಲುಪುವ ಮಾತ್ರವಲ್ಲ. ಹಳ್ಳಿ – ಹಳ್ಳಿಗಳ, ಹಳ್ಳಿ- ನಗರಗಳ ಸಂಪರ್ಕಿಸುವ ಸೇವೆಗಳೊಂದಿಗೆ ಹಳ್ಳಿಗರ ಕನಸು ನಗರಕ್ಕೆ ಜೋಡಿಸುವುದರೊಂದಿಗೆ ಹೃದಯ ಹೃದಯಗಳ ಬೆಸೆಯುವ ಕಾರ್ಯದಲ್ಲಿ ನಮ್ಮ ತಂಡ ಕೈಜೋಡಿಸಿದೆ. ಇದೇ ರೀತಿ ಜನರ ಹೃದಯ – ಹೃದಯಗಳನ್ನು ಬೆಸೆಯುವ ಕಾರ್ಯವಾಗಬೇಕು. ರಾಜಕೀಯ ಪಕ್ಷ ಗಳಿಂದಾಗಿ ಜನರ ನಡುವೆ ಕಂದಕ, ಗೋಡೆಗಳು ನಿರ್ಮಾಣವಾಗಿವೆ. ಇವುಗಳನ್ನು ನಿವಾರಿಸುವ ಕಾರ್ಯವಾಗಬೇಕು ಎಂದರು.

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.