ಮಾಹಿತಿ ನೀಡದ್ದರಿಂದಲೇ ಕೋವಿಡ್ 19 ಸೋಂಕು ಹೆಚ್ಚಳ?

ಪ್ರತೀ ರೋಗಿಯ ಸಮಗ್ರ ಮಾಹಿತಿ ಇದ್ದರೂ ಬಹಿರಂಗಪಡಿಸದ ಅಧಿಕಾರಿಗಳು

Team Udayavani, Aug 1, 2020, 6:21 AM IST

ಮಾಹಿತಿ ನೀಡದ್ದರಿಂದಲೇ ಕೋವಿಡ್ 19 ಸೋಂಕು ಹೆಚ್ಚಳ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮಂಗಳೂರು/ಉಡುಪಿ: ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಗ್ರಾ.ಪಂ. ಅಧಿಕಾರಿಗಳವರೆಗೆ ಎಲ್ಲರಿಗೂ ಕೋವಿಡ್ 19 ನಿಯಂತ್ರಿಸಲು ಜನರ ಸಹಕಾರ ಅಗತ್ಯ.

ಜನರು ನಿಯಮ ಪಾಲಿಸಿ ಎಚ್ಚರಿಕೆ ವಹಿಸುವುದು ಅಗತ್ಯ ಎನ್ನುತ್ತಿದ್ದಾರೆ.

ಆದರೆ ರಾಜ್ಯದಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದಿರುವ ಮೂಲಕ ಸೋಂಕು ಹೆಚ್ಚುವುದಕ್ಕೆ ಅಧಿಕಾರಿಗಳೇ ಕಾರಣರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಕೋವಿಡ್ 19 ಕಾಣಿಸಿಕೊಂಡ ಆರಂಭದಲ್ಲಿ ಓರ್ವ ರೋಗಿಯ ಕೇಸ್‌ ಹಿಸ್ಟರಿಯನ್ನು ತಯಾರಿಸುತ್ತಿದ್ದುದಕ್ಕಿಂತ ಸುಧಾರಿತ ಮಾದರಿಯಲ್ಲಿ ಈಗ ತಯಾರಿಸಲಾಗುತ್ತಿದೆ. ಆದರೆ ಬರಬರುತ್ತಾ ಅಧಿಕಾರಿಗಳು ಬಹಿರಂಗಪಡಿಸುವ ಮಾಹಿತಿಯ ಪ್ರಮಾಣವನ್ನು ಮಾತ್ರ ಕಡಿಮೆ ಮಾಡುತ್ತಾ ಬಂದಿದ್ದಾರೆ.

ಆರಂಭದಲ್ಲಿ ಒಂದು ಪ್ರದೇಶದ ಓರ್ವ ವ್ಯಕ್ತಿಗೆ ಸೋಂಕು ತಗಲಿದರೆ ಕೂಡಲೇ ಆ ಬಗ್ಗೆ ವಿವರವಾದ ಮಾಹಿತಿ ನೀಡಲಾಗುತ್ತಿತ್ತು. ಇದರಿಂದ ಜನರೂ ಸ್ವಯಂ ಎಚ್ಚರಿಕೆಯಿಂದ ಇರುವುದು ಸಾಧ್ಯವಾಗುತ್ತಿತ್ತು. ಈಗಿನ ಪರಿಸ್ಥಿತಿಯೇ ಬೇರೆ. ಸ್ಥಳೀಯವಾಗಿ ಮಾಹಿತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿರುವರಾದರೂ ಬಹುತೇಕ ಕಡೆ, ಅದರಲ್ಲೂ ನಗರ ಪ್ರದೇಶದಲ್ಲಿ ಇದರ ಪಾಲನೆಯಾಗುತ್ತಿಲ್ಲ. ಇಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳು ಗಣನೀಯವಾಗಿ ಏರುತ್ತಲೇ ಇವೆ.

ಜನರಿಗೆ ಮಾಹಿತಿ ಏಕೆ ಬೇಕು?
ಕಣ್ಣಿಗೆ ಕಾಣದ ವೈರಸ್‌ನಿಂದ ವೇಗವಾಗಿ ಹರಡುವ ರೋಗವನ್ನು ನಿಯಂತ್ರಿಸಲು ಜನರಿಗೆ ಕನಿಷ್ಠ ಮಾಹಿತಿಯಾದರೂ ಸಿಗಬೇಕಾಗುತ್ತದೆ. ಉದಾ: ನಗರ ಪ್ರದೇಶದ ಹೊಟೇಲ್‌ ಸಿಬಂದಿ, ಯಾವುದೋ ಅಂಗಡಿಯವರಿಗೆ, ಸಾರಿಗೆ ಸಿಬಂದಿಗೆ ಅಥವಾ ಯಾವುದೇ ಸೇವೆ ನೀಡುವ ವ್ಯಕ್ತಿಗೆ ಸೋಂಕು ದೃಢಪಟ್ಟರೆ ಅದು ತತ್‌ಕ್ಷಣ ಸಾರ್ವಜನಿಕರಿಗೆ ಗೊತ್ತಾಗಬೇಕು ಆಗ ಮಾತ್ರ ಅವರು ಸ್ವಯಂಪ್ರೇರಿತವಾಗಿ ಜಾಗರೂಕರಾಗಲು ಸಾಧ್ಯ.

ಉದಾ: ಮೇಲೆ ತಿಳಿಸಿದ ಯಾವುದೇ ಒಂದು ವಿಭಾಗದವರಿಗೆ ಸೋಂಕು ದೃಢಪಟ್ಟದ್ದು ಎಲ್ಲರಿಗೂ ತಿಳಿದರೆ ಆಗ ಅವರ ಸಂಪರ್ಕ ಹೊಂದಿರಬಹುದಾದ ಎಲ್ಲರೂ ಎಚ್ಚರಿಕೆ ವಹಿಸಲು ಸಾಧ್ಯ. ಆದರೆ ಈಗ ಸರಕಾರಿ ಮೂಲಗಳಿಂದ ಬಹಿರಂಗಗೊಳ್ಳುತ್ತಿರುವ ವರದಿಯಲ್ಲಿ ಕೇವಲ ಜಿಲ್ಲೆಯ ಎಷ್ಟು ಮಂದಿಗೆ ಸೋಂಕು ತಗಲಿದೆ ಎಂಬುದು ಮಾತ್ರ ಇರುತ್ತದೆ. ಮುಖ್ಯವಾಗಿ ನಗರ ಪ್ರದೇಶದವರಿಗೆ ಅವರು ಎಲ್ಲಿಯವರು, ಏನು ಎತ್ತ ಎಂಬುದು ತಿಳಿಯುವುದೇ ಇಲ್ಲ. ಆದುದರಿಂದ ಅವರು ಇಂತಹ ಪ್ರದೇಶಗಳಿಗೆ ಹೋಗಿ ಸೋಂಕು ತಗಲಿದ್ದರೂ ತಮಗೆ ತಿಳಿಯದಂತೆ ನೂರಾರು ಮಂದಿಗೆ ಪಸರಿಸಿಯಾಗಿರುತ್ತದೆ. ಇದುವೇ ಈಗ ಹೆಚ್ಚಾಗುತ್ತಿರುವ ‘ಮೂಲ ಪತ್ತೆಯಾಗದ ಕೇಸುಗಳು’. ಇದು ನಿಜಕ್ಕೂ ಆತಂಕಕಾರಿ.

ಎಲ್ಲಿದೆ ಚೈನ್‌?
ಲಾಕ್‌ಡೌನ್‌, ಸೀಲ್‌ಡೌನ್‌ ಉದ್ದೇಶ ಕೋವಿಡ್ 19 ಸಂಪರ್ಕವನ್ನು ಆರಂಭಿಕ ಹಂತದಲ್ಲಿಯೇ ನಿಯಂತ್ರಿಸುವುದು. ಅಂದರೆ ಕೋವಿಡ್ 19 ಲಿಂಕ್‌ ಬ್ರೇಕ್‌ ಮಾಡುವುದು. ಇದಕ್ಕೆ ‘ಬ್ರೇಕ್‌ದ ಚೈನ್‌’ ಎನ್ನಲಾಗುತ್ತಿದೆ. ಆದರೆ ಈಗಚೈನ್‌ ಎಲ್ಲಿದೆ ಎಂಬುದೇ ಗೊತ್ತಾಗುತ್ತಿಲ್ಲ. ಹೀಗಾದರೆ ಅದನ್ನು ಬ್ರೇಕ್‌ ಮಾಡುವುದಾದರೂ ಹೇಗೆ?

ಮುಚ್ಚಿಟ್ಟಷ್ಟು ಅಪಾಯ ಹೆಚ್ಚು
ಮೊದಲೇ ಕಣ್ಣಿಗೆ ಕಾಣದ ವೈರಸ್‌ ಇದಾಗಿದ್ದು, ಜನರಿಗೆ ಮಾಹಿತಿ ಸಿಗದಿದ್ದರೆ ಕಣ್ಣಿಗೆ ಬಟ್ಟೆ ಕಟ್ಟಿ ಹೋರಾಡಿ ಅಂದಂತಾಗುತ್ತದೆ. ಒಂದುವೇಳೆ ಇಂತಹ ಕಡೆ ಸೋಂಕು ಪೀಡಿತರು ಇದ್ದಾರೆ ಎಂಬುದು ಜನರಿಗೆ ಗೊತ್ತಾದರೆ, ತತ್‌ಕ್ಷಣಕ್ಕೆ ಅಗತ್ಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ಜತೆಗೆ ಆ ಪರಿ ಸರಕ್ಕೆ ಓಡಾಟ ಕಡಿಮೆ ಮಾಡಬಹುದು.
ಆ ಮೂಲಕ ಕೋವಿಡ್ 19 ಸೋಂಕು ವ್ಯಾಪಿಸುವುದನ್ನು ಒಂದು ಹಂತದವರೆಗೆ ನಿಯಂತ್ರಿಸುವುದಕ್ಕೂ ಅನುಕೂಲವಾಗುತ್ತದೆ. ಅದು ಬಿಟ್ಟು, ಮಾಹಿತಿಯನ್ನು ಮುಚ್ಚಿಟ್ಟರೆ ಸೋಂಕು ಮತ್ತಷ್ಟು ಹರಡಲು ಸಹಾಯ ಮಾಡಿದಂತಾಗುತ್ತದೆ.

ಮಂಗಳೂರಿನ ಶೇ. 40ರಷ್ಟು ಪ್ರದೇಶಗಳಲ್ಲಿ ಸೋಂಕು ಹರಡುತ್ತಿದೆ. ವ್ಯಕ್ತಿ ಸೋಂಕಿಗೊಳಗಾದರೆ ವಾಸ್ತವ್ಯ ವ್ಯಾಪ್ತಿಯಲ್ಲಿ ಜನರಿಗೆ ತಿಳಿ ಹೇಳಿ ಕಂಟೈನ್‌ಮೆಂಟ್‌ ವಲಯ ಮಾಡಲಾಗುತ್ತದೆ. ಸದ್ಯ ಸೋಂಕು ಹೆಚ್ಚುತ್ತಿರುವುದರಿಂದ ಮತ್ತು ಇಲಾಖೆಯಲ್ಲಿ ಸಿಬಂದಿ ಕಡಿಮೆ ಇರುವುದರಿಂದ ಎಲ್ಲ ಸ್ಥಳಗಳ ಬಗ್ಗೆ ಮಾಹಿತಿ ನೀಡುವುದು ಸಾಧ್ಯವಾಗುತ್ತಿಲ್ಲ.
– ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ರೋಗಲಕ್ಷಣ ಇಲ್ಲದಿರಬಹುದು; ಆದರೆ ಪಾಸಿಟಿವ್‌ ಇದ್ದು, ತಿರುಗಾಡುತ್ತಿದ್ದರೆ ರೋಗಾಣು ಹಬ್ಬಿಸುತ್ತಲೇ ಇರುತ್ತಾರೆ. ಜನ ಸ್ವಯಂ ಪ್ರೇರಿತರಾಗಿ ಸೀಲ್‌ಡೌನ್‌ ಮಾಡಿಸಬೇಕಾಗಿದೆ. ಆರೋಗ್ಯ ಮತ್ತು ಕಂದಾಯ ಇಲಾಖೆಯಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.
– ಡಾ| ಸುಧೀರ್‌ಚಂದ್ರ ಸೂಡ, ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Dinesh-Gundurao

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.