60 ವರ್ಷ ದಾಟಿದ ಅಡುಗೆ ಸಿಬಂದಿ ಮನೆಗೆ! ದಕ್ಷಿಣ ಕನ್ನಡ, ಉಡುಪಿಯ 254 ಮಂದಿಯ ಕೆಲಸ ಖೋತಾ


Team Udayavani, May 12, 2022, 6:50 AM IST

60 ವರ್ಷ ದಾಟಿದ ಅಡುಗೆ ಸಿಬಂದಿ ಮನೆಗೆ! ದಕ್ಷಿಣ ಕನ್ನಡ, ಉಡುಪಿಯ 254 ಮಂದಿಯ ಕೆಲಸ ಖೋತಾ

ಸಾಂದರ್ಭಿಕ ಚಿತ್ರ

ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿ ಸಿಬಂದಿಗೆ 60 ವರ್ಷ ತುಂಬಿದ್ದರೆ ಕೆಲಸದಿಂದ ಬಿಡುಗಡೆಗೊಳಿಸುವಂತೆ (ರಿಲೀವ್‌) ಸರಕಾರ ಆದೇಶಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 254 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.

ಅಕ್ಷರ ದಾಸೋಹ ಯೋಜನೆ ಸಿಬಂದಿಗೆ ಮಾಸಿಕ ಸಂಭಾವನೆ ಹೆಸರಿನಲ್ಲಿ ವೇತನ ನೀಡಲಾಗುತ್ತಿದೆ. ನಿವೃತ್ತಿಯ ಮಾನದಂಡ ಅಥವಾ ಆದೇಶ ಇರದ ಕಾರಣ 60 ದಾಟಿದ ಮಹಿಳೆಯರೂ ಕೆಲಸದಲ್ಲಿ ಮುಂದುವರಿದಿದ್ದರು. ಆದರೆ ಇದೀಗ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ 60 ದಾಟಿದವರು ಅನಿವಾರ್ಯವಾಗಿ ಮನೆಗೆ ಹೋಗಬೇಕಾಗಿದೆ. ಈ ವರೆಗೆ ಇರದಿದ್ದ ಆದೇಶವನ್ನು ಏಕಾಏಕಿ ಜಾರಿ ಮಾಡಿರುವುದು ಸಿಬಂದಿಯ ಆಕ್ರೋಶ ಮತ್ತು ಅಸಹಾಯಕತೆಗೆ ಕಾರಣವಾಗಿದೆ.

ಬರಿಗೈಯಲ್ಲಿ ಮನೆಗೆ
ಸರಕಾರ ಅಡುಗೆ ಸಿಬಂದಿಗೆ ಮಾಸಿಕ ಸಂಭಾವನೆ ಮಾತ್ರ ನೀಡುತ್ತಿದ್ದು, ಅದನ್ನೇ ಒಂದಷ್ಟು ಹೆಚ್ಚು ಮಾಡುತ್ತಿತ್ತು. ಭವಿಷ್ಯ ನಿಧಿಯಂತಹ ಇತರ ಯಾವುದೇ ಸೌಲಭ್ಯಗಳಿಲ್ಲ. ಆದ್ದರಿಂದ ಪ್ರಸ್ತುತ ಕೆಲಸ ಕಳೆದುಕೊಳ್ಳುವ ಸಿಬಂದಿ ಬರಿಗೈಯಲ್ಲೇ ಮನೆಗೆ ಹೋಗಬೇಕಾದ ಸ್ಥಿತಿ ಇದೆ. ಕಾರ್ಮಿಕ ಸಂಘಟನೆಗಳು ಸರಕಾರದ ನಿರ್ಧಾರವನ್ನು ಖಂಡಿಸುತ್ತಿದ್ದು, ಕೆಲಸದಿಂದ ಬಿಡುಗಡೆಗೊಳಿಸುವಾಗ ಒಂದಷ್ಟು ಗೌರವ ಮೊತ್ತವನ್ನು ನೀಡಬೇಕು. ಜತೆಗೆ ಅಕ್ಷರ ದಾಸೋಹ ಸಿಬಂದಿಯನ್ನು ಖಾಯಂಗೊಳಿಸಬೇಕು ಎಂಬ ಆಗ್ರಹದ ಜತೆಗೆ ಮನವಿಯನ್ನೂ ನೀಡುತ್ತಿವೆ.

ದ.ಕ.  178, ಉಡುಪಿ 76 ಮಂದಿ ಸಂತ್ರಸ್ತರು
ಸರಕಾರಿ, ಅನುದಾನಿತ ಶಾಲೆಗಳು ಸೇರಿ ದ.ಕ. ಜಿಲ್ಲೆಯಲ್ಲಿ 3,213 ಮಂದಿ ಅಡುಗೆ ಸಿಬಂದಿ ಇದ್ದು, ಆದೇಶದ ಪ್ರಕಾರ 178 ಮಂದಿ ಮನೆಗೆ ತೆರಳಬೇಕಿದೆ. ಉಡುಪಿ ಜಿಲ್ಲೆಯ ಒಟ್ಟು 1,866 ಮಂದಿಯಲ್ಲಿ 76 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಸರಕಾರದ ಆದೇಶದ ಪ್ರಕಾರ ಕಳೆದ ಮಾರ್ಚ್‌ 31ಕ್ಕೆ 60 ವರ್ಷ ತುಂಬಿದವರನ್ನು ಬಿಡುಗಡೆಗೊಳಿಸಬೇಕಿದೆ.
ಮಂಗಳೂರು 48 ಬಂಟ್ವಾಳ 50
ಬೆಳ್ತಂಗಡಿ 37 ಪುತ್ತೂರು 30
ಸುಳ್ಯ 13 ಕಾರ್ಕಳ 56
ಉಡುಪಿ 12 ಕುಂದಾಪುರ 8

ಹಿಂದೆ 60 ದಾಟಿದವರನ್ನು ರಿಲೀವ್‌ ಮಾಡಲಾಗಿದೆಯೇ ಎಂಬ ಮಾಹಿತಿ ಇಲ್ಲ. ಕಳೆದ 2 ವರ್ಷಗಳಲ್ಲಿ ಮಾಡಿರಲಿಲ್ಲ. ಕಳೆದ ಮಾರ್ಚ್‌ 31ಕ್ಕೆ 60 ವರ್ಷ ದಾಟಿದವರನ್ನು ರಿಲೀವ್‌ ಮಾಡುವಂತೆ ಆದೇಶ ಬಂದಿದ್ದು, ಮುಂದೆ ಯಾವಾಗ ಸಿಬಂದಿ 60 ವರ್ಷ ಆಗುತ್ತದೆಯೋ ಆಗ ರಿಲೀವ್‌ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇಲಾಖೆಯ ಆಯುಕ್ತರ ಆದೇಶದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ.
– ಉಷಾ / ವಿವೇಕ್‌ ಗಾಂವ್ಕರ್‌ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ), ದ.ಕ./ಉಡುಪಿ ಜಿಲ್ಲೆ

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Kasaragod: ಮಾವೋವಾದಿ ಕಮಾಂಡರ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

court

Painting; ಅಶ್ಲೀ*ಲತೆಗೆ ಸರಕಾರದ ವಿವರಣೆ ಏನು?: ಹೈಕೋರ್ಟ್‌ ತರಾಟೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kasaragod: ರೈಲು ನಿಲ್ದಾಣ “ಅಮೃತ್‌ ಭಾರತ್‌’ ಮಾನ್ಯತೆ

Kharge (2)

BJP ಟ್ರಿಪಲ್‌ ಎಂಜಿನ್‌ ಸರಕಾರ ಜನರ ಆಹಾರ ಕಸಿಯುತ್ತಿದೆ: ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalladka: ಹೊಟೇಲ್‌ಗೆ ನುಗ್ಗಿದ ಕಳ್ಳ: ವೀಡಿಯೋ ವೈರಲ್‌

Kalladka: ಹೊಟೇಲ್‌ಗೆ ನುಗ್ಗಿದ ಕಳ್ಳ: ವೀಡಿಯೋ ವೈರಲ್‌

ಅಮ್ಮೆಮಾರ್‌ನಲ್ಲಿ ತಲವಾರು ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಡಿಐಜಿ ಅಮಿತ್‌ ಸಿಂಗ್‌ ಭೇಟಿ

ಅಮ್ಮೆಮಾರ್‌ನಲ್ಲಿ ತಲವಾರು ದಾಳಿ ಪ್ರಕರಣ: ಘಟನಾ ಸ್ಥಳಕ್ಕೆ ಡಿಐಜಿ ಅಮಿತ್‌ ಸಿಂಗ್‌ ಭೇಟಿ

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

9

Sullia ಆಸ್ಪತ್ರೆ ಶೆಡ್‌ನ‌ಲ್ಲಿ ನಿಲ್ಲುತ್ತಿದ್ದ 108 ಆ್ಯಂಬುಲೆನ್ಸ್‌ ಈಗ ರಸ್ತೆ ಬದಿಗೆ!

5(1)

Uppinangady-ನೆಲ್ಯಾಡಿ ಹೆದ್ದಾರಿ ಹೊಂಡಮಯ, ಧೂಳುಮಯ!

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

Udupi: ಗೀತಾರ್ಥ ಚಿಂತನೆ-75: ಅರಾಜಕತೆಯಾಗದಂತೆ ಮುಂಜಾಗ್ರತ ಚಿಂತನೆ

ARMY (2)

Kashmir: 4 ಯೋಧರ ಕೊಂ*ದ ಉಗ್ರರ ಪತ್ತೆಗೆ ತೀವ್ರ ಶೋಧ

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

Udupi: “ಸಂಸ್ಕೃತ, ಪಾಲಿ, ಪ್ರಾಕೃತಗಳ ಸಮಗ್ರ ಅಧ್ಯಯನ ಅಗತ್ಯ’

AATISHI (2)

Kejriwal ಮೇಲೆ ಹಲ್ಲೆ: ಆರೋಪ ತಿರಸ್ಕರಿಸಿದ ಬಿಜೆಪಿ

police crime

Dog ಕೊಂ*ದು ಮರಕ್ಕೆ ಕಟ್ಟಿದ ತಾಯಿ-ಮಗನ ಮೇಲೆ ಕೇಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.