ಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು: ಕಡಿಮೆಯಾಗಿದೆ ಕುದ್ರುವಿನ ಅರ್ಧಕ್ಕರ್ಧ ಗಾತ್ರ

ತತ್‌ಕ್ಷಣ ಕ್ರಮಕ್ಕೆ ಆಗ್ರಹ

Team Udayavani, Jun 25, 2024, 6:35 AM IST

ಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು: ಕಡಿಮೆಯಾಗಿದೆ ಕುದ್ರುವಿನ ಅರ್ಧಕ್ಕರ್ಧ ಗಾತ್ರಮರಳುಗಾರಿಕೆಗೆ ನಲುಗಿದ ಉಳಿಯ ಕುದ್ರು: ಕಡಿಮೆಯಾಗಿದೆ ಕುದ್ರುವಿನ ಅರ್ಧಕ್ಕರ್ಧ ಗಾತ್ರ

ಮಂಗಳೂರು: ಪಾವೂರು ಮತ್ತು ಅಡ್ಯಾರ್‌ ಮಧ್ಯೆ ನೇತ್ರಾವತಿ ನದಿಯ ಮಧ್ಯದ ಪಾವೂರು ಉಳಿಯ ಕುದ್ರು ಅಕ್ರಮ ಮರಳುಗಾರಿಕೆಯಿಂದ ನಲುಗಿವೆ. ದ್ವೀಪದ ಭೂಭಾಗವನ್ನೇ ಬಗೆದು ಮರಳುಗಾರಿಕೆ ನಡೆಯುತ್ತಿ ದ್ದರೂ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯರ ಮನವಿ ಮೇರೆಗೆ ಕೆಥೋಲಿಕ್‌ ಸಭಾ ಮಂಗಳೂರು ಪ್ರದೇಶ್‌ ಮತ್ತು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದವರು ಸೋಮವಾರ ಕುದ್ರುವಿಗೆ ಭೇಟಿ ನೀಡಿ, ಮರಳುಗಾರಿಕೆ ನಡೆಸಲಾದ ಸ್ಥಳವನ್ನು ಪರಿಶೀಲಿಸಿದರು. ಇಲ್ಲಿ ಮರಳುಗಾರಿಕೆ ತಡೆಯಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳ ಬೇಕು. ಇಲ್ಲವಾದಲ್ಲಿ ಕಾನೂನು ಸಮರ ಅನಿವಾರ್ಯ ಎಂದು ಎಚ್ಚರಿಸಿದರು.

ಅರ್ಧಕ್ಕರ್ಧ ದ್ವೀಪವೇ ಇಲ್ಲ!
ಸುಮಾರು 80 ಎಕ್ರೆ ವಿಸ್ತೀರ್ಣ ಹಾಗೂ 2 ಕಿ.ಮೀ.ನಷ್ಟು ಉದ್ದಕ್ಕಿದ್ದ ದ್ವೀಪ ಹಲವು ವರ್ಷಗಳ ಮರಳು ಗಾರಿಕೆಯಿಂದ ಈಗ 40 ಎಕ್ರೆಗೆ ಇಳಿದಿದ್ದು, ಉದ್ದವೂ ಒಂದು ಕಿ.ಮೀ. ಕಡಿಮೆಯಾಗಿದೆ. ದೊಡ್ಡ ನೆರೆ ಬಂದರೆ ಸಂಪೂರ್ಣ ದ್ವೀಪವೇ ಕೊಚ್ಚಿ ಹೋಗಬಹುದು.

ಎ.ಬಿ. ಇಬ್ರಾಹಿಂ ಅವರು ಜಿಲ್ಲಾಧಿಕಾರಿಯಾಗಿದ್ದಾಗ ದ್ವೀಪದ ಸುತ್ತಲಿನ 1 ಕಿ.ಮೀ. ವ್ಯಾಪ್ತಿ ಯಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿ, ಮರಳು ದಕ್ಕೆ ಗಳನ್ನು ನಾಶಪಡಿಸಿದ್ದರು. ಪ್ರಸ್ತುತ ಆ ಆದೇಶಕ್ಕೆ ಯಾವುದೇ ಬೆಲೆಇಲ್ಲ ಎನ್ನುತ್ತಾರೆ “ಉದಯವಾಣಿ’ ಜತೆ ಮಾತನಾಡಿದ ಸ್ಥಳೀಯರಾದ ಬೆನೆಟ್‌.

ಹೋರಾಡುವ ಶಕ್ತಿ ಇಲ್ಲ
ಮರಳುಗಾರಿಕೆ ವಿರುದ್ಧ ಹಲವು ಬಾರಿ ಹೋರಾಟ ನಡೆಸಿದ್ದೇವೆ. ಮರಳು ತೆಗೆಯುವವರನ್ನು ಓಡಿಸಿದ್ದೇವೆ. ಆದರೆ ಅವರ ತಾಕತ್ತಿನ ಎದುರು ನಮ್ಮ ಶಕ್ತಿ ಕುಂದಿದೆ. ನಮಗೆ ಶಾಶ್ವತ ಪರಿಹಾರ ಬೇಕು. ಭಯ ರಹಿತ ಜೀವನಕ್ಕೆ ಸಹಾಯ ಮಾಡಿ ಎಂದು ಗಿಲ್ಬರ್ಟ್‌ ಡಿ’ಸೋಜಾ ಮನವಿ ಮಾಡಿದರು.

ಕುದ್ರು ಇನ್ಫೆಂಟ್ ಜೀಸಸ್‌ ಚರ್ಚ್‌ ನ ಧರ್ಮಗುರು ಫಾ| ಮನೋಹರ್‌ ಡಿ’ಸೋಜಾ, ಕೆಥೋಲಿಕ್‌ ಸಭಾ ಕಾರ್ಯದರ್ಶಿ ಆಲ್ವಿನ್‌ ಮೊಂತೇರೊ, ಮಾಜಿ ಅಧ್ಯಕ್ಷ ಸ್ಟಾನಿ ಲೋಬೊ, ಪ್ರಮುಖರಾದ ಮುನೀರ್‌ ಕಾಟಿಪಳ್ಳ, ಮಂಜುಳಾ ನಾಯಕ್‌, ಕೆ. ಯಾದವ ಶೆಟ್ಟಿ, ಬಿ. ಶೇಖರ್‌, ಸುನಿಲ್‌ ಕುಮಾರ್‌ ಬಜಾಲ್‌ ಮತ್ತಿತರರಿದ್ದರು.

ದ್ವೀಪದ ಕುರಿತು
ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಪಾವೂರು ಉಳಿಯ ಕುದ್ರು ನೇತ್ರಾವತಿ ನದಿ ಮಧ್ಯದಲ್ಲಿದೆ. ತುಂಬೆ ಹಾಗೂ ಹರೇಕಳ ಅಣೆಕಟ್ಟಿನ ನಡುವಿನ ಪ್ರದೇಶವೂ ಸಹ. ಹಲವು ವರ್ಷಗಳ ಹಿಂದೆ 50ಕ್ಕೂ ಅಧಿಕ ಕುಟುಂಬಗಳಿದ್ದವು. ಪ್ರಸ್ತುತ 35ಕ್ಕೆ ಇಳಿದಿದ್ದು, ಸುಮಾರು 130 ಮಂದಿ ಇಲ್ಲಿ ವಾಸವಾಗಿದ್ದಾರೆ. ಈ ಪೈಕಿ ಶೇ.99ರಷ್ಟು ಕ್ರಿಶ್ಚಿಯನ್ನರು. ಕೃಷಿ ಹಾಗೂ ಹೊರಗೆ ಉದ್ಯೋಗ ಮಾಡಿಕೊಂಡು ಜೀವಿಸುತ್ತಿದ್ದಾರೆ. ಇವರಿಗೆ ಹೊರ ಪ್ರದೇಶದ ಸಂಪರ್ಕಕ್ಕೆ ದೋಣಿಯೇ ಆಧಾರ. ಹರೇಕಳ ಅಣೆಕಟ್ಟು ನಿರ್ಮಾಣದಿಂದಾಗಿ ಬೇಸಗೆಯಲ್ಲೂ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುತ್ತದೆ. ಕುದ್ರು ಮತ್ತು ಅಡ್ಯಾರ್‌ ನಡುವೆ ಸೇತುವೆ ಆಗಬೇಕು ಎಂಬ ಬೇಡಿಕೆ ಈಡೇರಿಲ್ಲ. ಬೇಸಗೆಯಲ್ಲಿ ಕುದ್ರು ನಿವಾಸಿಗಳೇ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿದರು. ಕೆಲ ವರ್ಷಗಳ ಹಿಂದೆ ಮರಳು ದಂಧೆಕೋರರು ಈ ಸೇತುವೆಗೂ ಹಾನಿ ಮಾಡಿದರು ಎನ್ನುತ್ತಾರೆ ಸ್ಥಳೀಯರು.

ಮರಳುಗಾರಿಕೆ ಮೂಲಕ ದ್ವೀಪದ ಜನರನ್ನು ಓಡಿಸುವ ಸಂಚು ನಡೆಯುತ್ತಿದೆ. ಇದರಲ್ಲಿ ಎಲ್ಲ ಇಲಾಖೆಗಳೂ ಕೈ ಜೋಡಿಸಿರುವೆ. ಜನರ ಕಣ್ಣೀರಿನ ಶಾಪ ಖಂಡಿತ ವಾಗಿ ದಂಧೆಕೋರರಿಗೆ ತಟ್ಟಲಿದೆ.
– ರಾಯ್‌ ಕ್ಯಾಸ್ಟಲಿನೋ,
ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪಿಆರ್‌ಒ

ಸ್ಥಳೀಯರ ಮನವಿ ಮೇರೆಗೆ ಜನರ ಸಮಸ್ಯೆಯನ್ನು ಪ್ರತ್ಯಕ್ಷವಾಗಿ ನೋಡಲು ಬಂದಿದ್ದೇವೆ. ಜಿಲ್ಲಾಧಿ ಕಾರಿಗೆ ಕರೆ ಮಾಡಿ ಸ್ಥಳೀಯರ ಕಷ್ಟವನ್ನು ಸ್ಥಳದಿಂದಲೇ ವಿವರಿಸಿ ದ್ದೇವೆ. ಶಾಶ್ವತ ಪರಿಹಾರ ಸಿಗುವವ ರೆಗೆ ಹೋರಾಟ ನಿಲ್ಲಿಸುವುದಿಲ್ಲ.
ಆಲ್ವಿನ್‌ ಡಿ’ಸೋಜಾ,
ಅಧ್ಯಕ್ಷರು, ಕೆಥೋಲಿಕ್‌ ಸಭಾ

ಟಾಪ್ ನ್ಯೂಸ್

Sunil-kumar

CM Siddaramaiah; ಅನುದಾನ ಹಿಂಪಡೆದಂತೆ ಸೈಟ್‌ ವಾಪಸ್‌ ಕೊಡಿ: ಸುನಿಲ್‌ ವ್ಯಂಗ್ಯ

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

1-mng-protest

Mangaluru: ನೀಟ್ ಅವ್ಯವಹಾರ: ಎನ್.ಎಸ್.ಯು.ಐ., ಕಾಂಗ್ರೆಸ್ ಪ್ರತಿಭಟನೆ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Government should promote prevention of uterine cancer: Sudha Murthy

Rajyasabha; ಗರ್ಭಕೋಶ ಕ್ಯಾನ್ಸರ್‌ ತಡೆಗಟ್ಟಲು ಸರ್ಕಾರ ಉತ್ತೇಜಿಸಬೇಕು: ಸುಧಾಮೂರ್ತಿ

Sunil-kumar

CM Siddaramaiah; ಅನುದಾನ ಹಿಂಪಡೆದಂತೆ ಸೈಟ್‌ ವಾಪಸ್‌ ಕೊಡಿ: ಸುನಿಲ್‌ ವ್ಯಂಗ್ಯ

Davanagere; ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯ

Davanagere; ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯ

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Will not believe EVMs says akhilesh yadav

ಉ.ಪ್ರ.ದ 80 ಕ್ಷೇತ್ರ ಗೆದ್ದರೂ EVM ನಂಬಲ್ಲ: ಅಖೀಲೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.