Guarantee; ಗೃಹಲಕ್ಷ್ಮಿ ಆರ್ಥಿಕ ಸಂಕಷ್ಟ ಸರಿದೂಗಿಸಲು ಬಿಪಿಎಲ್‌ ಕಾರ್ಡ್‌ ರದ್ದು: ಕೋಟ


Team Udayavani, Oct 19, 2024, 12:36 AM IST

Kota-1

ಪುತ್ತೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿಯಡಿಯಲ್ಲಿ ಫಲಾನುಭವಿಗಳಿಗೆ ತಿಂಗಳಿಗೆ 2 ಸಾ. ರೂ. ಪಾವತಿಸಲು ಸರಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿರುವ ಕಾರಣ ಈ ಯೋಜನೆಯನ್ನು ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಸೀಮಿತಗೊಳಿಸುವ ಉದ್ದೇಶದಿಂದ ರಾಜ್ಯದಲ್ಲಿ 12 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಗೊಳಿಸುವ ಹುನ್ನಾರ ನಡೆದಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್‌ ಚುನಾವಣೆ ಕುರಿತಂತೆ ಪಕ್ಷದ ಪ್ರಮುಖರ ಜತೆಗೆ ಸಭೆ ನಡೆಸಿ ಬಳಿಕ ಅವರು ಮಾತನಾಡಿದರು. ದ.ಕ.ಜಿಲ್ಲೆಯಲ್ಲಿ ಸುಮಾರು 50 ಸಾವಿರ ಕಾರ್ಡ್‌ ರದ್ದುಪಡಿಸಲು ಉದ್ದೇಶಿಸಲಾಗಿದ್ದು, ತನ್ಮೂಲಕ ಬಡವರಿಗೆ ಅನ್ಯಾಯವಾಗಲಿದೆ. ಬಿಪಿಎಲ್‌ ಕಾರ್ಡ್‌ ರದ್ದಾದರೆ ಆ ಕುಟುಂಬವೂ ಅನ್ನಭಾಗ್ಯ ಯೋಜನೆ, ಆಯುಷ್ಮಾನ್‌ ಭಾರತ್‌ ಸೌಲಭ್ಯ, ಸ್ಕಾಲರ್‌ಶಿಪ್‌ ಸಹಿತ ವಿವಿಧ ಯೋಜನೆಗಳಿಂದ ವಂಚಿತವಾಗಲಿದೆ ಎಂದರು.

ಪಂಚಾಯತ್‌ರಾಜ್‌ ವ್ಯವಸ್ಥೆ ದುರ್ಬಲಕ್ಕೆ ಕಾಂಗ್ರೆಸ್‌ ಯತ್ನ
ಕೇಂದ್ರದ ಬಿಜೆಪಿ ಸರಕಾರವೂ ಗ್ರಾ.ಪಂ.ಗಳಿಗೆ ಬಲ ತುಂಬುವ ಕಾರ್ಯ ನಡೆಸಿದೆ. ಗ್ರಾ.ಪಂ.ಗಳಿಗೆ ಹೆಚ್ಚಿನ ಅಧಿಕಾರ ಕೊಟ್ಟರೆ ಸಾಮಾನ್ಯ ಜನರ ಹೆಚ್ಚಿನ ಸಮಸ್ಯೆ ಅಲ್ಲೇ ಪರಿಹಾರವಾಗಲಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ 15ನೇ ಹಣಕಾಸು ಯೋಜನೆಯಡಿ ಗ್ರಾ.ಪಂ.ಗಳಿಗೆ ನೇರ ಅನುದಾನ ನೀಡುತ್ತಿದೆ.

ಜನಸಂಖ್ಯಾ ಆಧಾರದಲ್ಲಿ ಕೆಲವು ಗ್ರಾ.ಪಂ.ಗಳಿಗೆ 50 ಲಕ್ಷ ರೂ.ನಿಂದ 1 ಕೋ. ರೂ. ತನಕ ಅನುದಾನ ಸಿಗುತ್ತಿದೆ. ಪ್ರತಿ ಮನೆಗೆ ಶೌಚಾಲಯ, ದೀನ ದಯಾಳ್‌ ಯೋಜನೆ ಮೂಲಕ ಮನೆ ಮನೆಗೆ ವಿದ್ಯುತ್‌ ಸಂಪರ್ಕ ಮೊದಲಾದ ಯೋಜನೆಗಳನ್ನು ನೀಡಿದೆ. ಆದರೆ ಕಾಂಗ್ರೆಸ್‌ ಸರಕಾರ ಪಂಚಾಯತ್‌ರಾಜ್‌ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಇದರ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಉದಾಹರಣೆಗೆ ಈ ಹಿಂದೆ 9/11 ಅನ್ನು ಗ್ರಾ.ಪಂ. ನೀಡುತ್ತಿತ್ತು. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರ ಆ ಅಧಿಕಾರವನ್ನು ರದ್ದು ಮಾಡಿ ಪ್ರಾಧಿಕಾರಕ್ಕೆ ನೀಡಿದ್ದು, ಇದರಿಂದ ಜನರಿಗೆ ತೊಂದರೆಯಾಗಿದೆ ಎಂದರು.

ಟಾಪ್ ನ್ಯೂಸ್

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

ranaj

Ranaji Trophy: ಹೊರಮೈದಾನ ಒದ್ದೆ : ಕರ್ನಾಟಕ-ಕೇರಳ ಪಂದ್ಯಕ್ಕೆ ತೊಂದರೆ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ

Udupi: ಗೀತಾರ್ಥ ಚಿಂತನೆ-68: ಅರ್ಜುನನ ಅಹಂ ಮರ್ದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide (2)

Panja:ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

police crime

Uppinangady; ಹುಟ್ಟು ಹಬ್ಬಕ್ಕಾಗಿ ಕಡವೆ ಹ*ತ್ಯೆ!: ಕೋವಿ, ಮಾಂಸ ವಶ

drowned

Subrahmanya: ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ

arrested

Sullia;ಮಹಿಳೆಯರ ಅವಹೇಳನ ಆರೋಪ: ಅರಣ್ಯಾಧಿಕಾರಿಯ ಬಂಧನ, ಬಿಡುಗಡೆ

CT Ravi

Mr. Corrupt; ಸಿದ್ದರಾಮಯ್ಯ ಮಿಸ್ಟರ್‌ ಕ್ಲೀನ್‌ ಅಲ್ಲ: ಸಿ.ಟಿ. ರವಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Bihar-tragey

Tragedy: ಬಿಹಾರದ 2 ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತ: ಒಟ್ಟು 35 ಮಂದಿ ಸಾವು

Maha-Rig

Maharashtra: ವಾಣಿಜ್ಯ ವಾಹನಗಳಿಗೂ ಇನ್ನು ಡೀಲರ್‌ಗಳಿಂದಲೇ ನೋಂದಣಿ

supreme-Court

Court: ಬಾಲ್ಯವಿವಾಹ ತಡೆ ಕಾನೂನಿಗೆ ವೈಯಕ್ತಿಕ ಕಾನೂನು ಅಡ್ಡಿ ಆಗಬಾರದು: ಸುಪ್ರೀಂ

GOLD2

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

NZ-Rachin

India Vs New Zealand Test: ಇನ್ನಿಂಗ್ಸ್‌ ಸೋಲು ತಪ್ಪಿಸಲು ಭಾರತ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.