‘ಯಕ್ಷಗಾನ ಸ್ವೇಚ್ಛಾಚಾರವಲ್ಲ, ಕಲಾರಾಧನೆ’


Team Udayavani, Apr 20, 2018, 2:51 PM IST

20-April-13.jpg

ನೆಹರೂನಗರ: ಯಕ್ಷಗಾನವನ್ನು ಕಲೆಯಾಗಿಯೇ ಉಳಿಸಿ ಬೆಳೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅದು ಕೇವಲ ನಾಟಕ ಅಥವಾ ಸಂಗೀತ ಆಗಬಾರದು. ಯಕ್ಷಗಾನ ಎಂಬುವುದು ಮಕ್ಕಳಾ ಟಿಕೆಯಲ್ಲ. ರಂಗಭೂಮಿಗೆ ಯಾವುದೇ ಕಾರಣಕ್ಕೂ ವಿಕೃತಿಯನ್ನು ತರುವುದು ಸರಿಯಲ್ಲ. ಯಕ್ಷಗಾನ ಎಂಬುವುದು ಸ್ವೇಚ್ಛಾಚಾರ ಆಗದಿರಲಿ, ಅದೊಂದು ಕಲಾರಾಧನೆ. ಅದರ ಪ್ರಾಮುಖ್ಯವನ್ನು ಅರಿತುಕೊಂಡು ಮುನ್ನಡೆಯಬೇಕೆಂದು ಹಿರಿಯ ಯಕ್ಷಗಾನ ಕಲಾವಿದ, ಯಕ್ಷಗಾನ ಸಂಘಟಕ ಶ್ಯಾಮ ಭಟ್‌ ಹೇಳಿದರು.

ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಯಕ್ಷಗಾನ ಕಲಾತಂಡ ಯಕ್ಷರಂಜಿನಿ ವತಿಯಿಂದ ಕಲ್ಲೇಗ ಭಾರತ್‌
ಮಾತಾ ಸಮುದಾಯ ಸಭಾಭವನದಲ್ಲಿ ಆಯೋಜಿಸಿದ ‘ಗುರುವಂದನೆ ಹಾಗೂ ವಾರ್ಷಿಕೋತ್ಸವ’ ಸಮಾರಂಭದಲ್ಲಿ ಯಕ್ಷಗುರು ಸಬ್ಬಣಕೋಡಿ ರಾಮಭಟ್‌ ಅವರ ಕುರಿತು ಅಭಿನಂದನ ಭಾಷಣ ಮಾಡಿದರು. ಭಾರತೀಯ ಸಂಸ್ಕೃತಿಯ ಪ್ರಕಾರ ಗುರುವೆಂದರೆ ಕೇವಲ ಲೌಕಿಕ ವರ್ಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅದೊಂದು ಪ್ರಚಂಡ ಶಕ್ತಿ. ಆದರೆ ಲೌಕಿಕವಾದ ಯಾವುದೋ ಒಂದು ವಿದ್ಯೆಯನ್ನು ಹೇಳಿಕೊಡುವ ವ್ಯಕ್ತಿಯನ್ನು ಆ ಶಕ್ತಿಯ ಪ್ರತಿರೂಪವಾಗಿ ನಾವು ಕಾಣುತ್ತೇವೆ. ಸಾಧನೆಯ ಹಾದಿಯಲ್ಲಿ ಅನೇಕ ಕಿರುದಾರಿಗಳು ಎದುರಾಗುತ್ತವೆ. ಸರಿಯಾದ ದಾರಿ ಆಯ್ದುಕೊಳ್ಳುವಲ್ಲಿ ಸಹಕರಿಸಿ ಮುನ್ನಡೆಸುತ್ತಾ ಸಾರ್ಥಕತೆಯೆಂಬ ಕೊನೆಯನ್ನು ತೋರಿಸಬಲ್ಲವನು ಮಾತ್ರ ನಿಜವಾದ ಗುರು ಎನಿಸಿಕೊಳ್ಳುತ್ತಾನೆ ಎಂದು ಅಭಿಪ್ರಾಯಪಟ್ಟರು.

ಯಕ್ಷರಂಜಿನಿ ತಂಡದಿಂದ ಗುರು ವಂದನೆಯನ್ನು ಸ್ವೀಕರಿಸಿದ ಯಕ್ಷಗುರು, ಶ್ರೀಪಡ್ರೆ ಚಂದು ಸ್ಮಾರಕ ಯಕ್ಷಗಾನ ಕಲಾಕೇಂದ್ರದ ನಿರ್ದೇಶಕ ಸಬ್ಬಣಕೋಡಿ ರಾಮಭಟ್‌ ಮಾತನಾಡಿ, ಅತಿಯಾದ ವೇಗಕ್ಕೆ ಜೋತು ಬಿದ್ದು ಯಕ್ಷಗಾನ ವೇಷಗಳ ಗಾಂಭೀರ್ಯ ಹಾಗೂ ಸೊಗಡು ಹಾಳಾಗುತ್ತಿದೆ. ಕಥೆ, ಸಂದರ್ಭ, ಸ್ವಾರಸ್ಯಗಳನ್ನು ಅರಿತುಕೊಂಡು ಪಾತ್ರಗಳು ಅಭಿನಯಿಸಿದಾಗ ಮಾತ್ರ ಮೌಲ್ಯ ಉಳಿಯುತ್ತದೆ. ನವರಸಗಳನ್ನು ಸಮರ್ಪಕವಾಗಿ ಬಳಸಿಕೊಂಡಾಗ ಅಂದ ಹೆಚ್ಚುತ್ತದೆ. ಯಕ್ಷಗಾನದ ಮೂಲ ಪರಂಪರೆಗೆ ಧಕ್ಕೆಯಾಗದಂತೆ ಈ ಚಂದದ ಕಲಾಪ್ರಕಾರವನ್ನು ನಾವು ಉಳಿಸಿಕೊಳ್ಳಬೇಕಾಗಿದೆ ಎಂದರು.

ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ ಭಟ್‌ ಮಾತನಾಡಿ, ಯಕ್ಷಗಾನ ದಲ್ಲಿ ವೇಷಭೂಷಣದಂತೆ ಸಂಭಾಷಣೆಗೂ ಪ್ರಾಮುಖ್ಯ ನೀಡಬೇಕಾ ಗಿದೆ. ಕಲಾವಿದರು ವ್ಯಕ್ತಪಡಿಸುವ ಭಾವನೆ, ಆಡುವ ಸಂಭಾಷಣೆ ಪ್ರೇಕ್ಷಕರಿಗೆ ಅರ್ಥ ಆಗುವಂತಿರಬೇಕು. ಅನರ್ಥ, ಗೊಂದಲಗಳ ಸೃಷ್ಟಿಗೆ ಕಾರಣ ಆಗ ಬಾರದು. ಪಾತ್ರಕ್ಕೆ ನ್ಯಾಯ ಒದಗಿಸುವುದೇ ಆದ್ಯ ಕರ್ತವ್ಯವಾಗಿರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಮಾತನಾಡಿ, ಯಾವುದೇ ವಿಷಯವನ್ನು ಕಲಿಯುವಲ್ಲಿ ಅವಸರ ಬೇಡ. ಅವಸರಿಸುವಿಕೆ ಕಲಿಕೆಯನ್ನು ಕುಂಠಿತಗೊಳಿಸುತ್ತದೆ. ಮೊದಲು ನಾವು ಕಲಿಯಬೇಕಾದ ವಿಷಯದ ಕುರಿತು ಮನಸ್ಸನ್ನು ಸಿದ್ಧಪಡಿಸಿಕೊಳ್ಳಬೇಕು. ಆಗ ತನ್ಮಯತೆ, ಕಲಿಯುವ ಆಸಕ್ತಿ ತಾನಾಗಿಯೇ ಮೂಡುತ್ತದೆ. ಪ್ರಯತ್ನ ಕೈಬಿಡಬಾರದು. ಅದೇ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಕೈ ಹಿಡಿದು ನಮ್ಮನ್ನು ಗುರಿಯತ್ತ ಕೊಂಡೊಯ್ಯುತ್ತದೆ. ಯಶಸ್ಸಿಗಾಗಿ ಕವಲು ದಾರಿ ಹಿಡಿಯುವ ಪ್ರವೃತ್ತಿಯಿಂದ ದೂರವಾಗಬೇಕು ಎಂದರು.

ಉಪನ್ಯಾಸಕಿ ಭವ್ಯ ಪಿ.ಆರ್‌. ನಿಡ್ಪಳ್ಳಿ ಸ್ವಾಗತಿಸಿದರು. ಯಕ್ಷರಂಜಿನಿ ಸಂಚಾಲಕ, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್‌ ಕುಮಾರ್‌ ಕಮ್ಮಜೆ ವಂದಿಸಿ, ನಿರೂಪಿಸಿದರು.

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ

16

Belthangady: ಸಾರಿಗೆ ಬಸ್‌ ಢಿಕ್ಕಿ: ಪಾದಚಾರಿ ಗಂಭೀರ

17

Belthangady: ಕಾಶಿಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು

5

Maninalkur: ಶಿಥಿಲಾವಸ್ಥೆಯಲ್ಲಿ ಹಳೆ ಶಾಲಾ ಕಟ್ಟಡ; ಕ್ರಮಕ್ಕೆ ಆಗ್ರಹ

4

Puttur: ಬೀದಿ ಬದಿ ವ್ಯಾಪಾರಿಗಳಿಗೆ ನೆರವಾದ ಪಿಎಂ ಸ್ವನಿಧಿ ಯೋಜನೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.