‘ಗುರುವಾಯನಕೆರೆಯಲ್ಲೂ ಅಕ್ವೇರಿಯಂ ಸ್ಥಾಪನೆಯಾಗಲಿ’


Team Udayavani, Jun 29, 2018, 2:05 AM IST

matsya-28-6.jpg

ವೇಣೂರು: ಅಳಿವಿನ ಅಂಚಿನಲ್ಲಿರುವ ಜೀವರಾಶಿಗಳ ಬೆಳವಣಿಗೆಗೆ ಮುಂದಾಗಿರುವ ಇಲಾಖೆಗಳ ನಿರ್ಧಾರ ಶ್ಲಾಘನೀಯ. ಪಿಲಿಕುಳ ನಿಸರ್ಗಧಾಮದಲ್ಲಿರುವ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ, ಅಕ್ವೇರಿಯಂ ಯೋಜನೆ ಗುರುವಾಯನ ಕೆರೆಯಲ್ಲೂ ಸ್ಥಾಪನೆಯಾಗಲಿ ಎಂದು ಶಾಸಕ ಹರೀಶ್‌ ಪೂಂಜ ವಿನಂತಿಸಿದರು. ಅರಣ್ಯ ಇಲಾಖೆ, ಮೀನುಗಾರಿಕೆ ಇಲಾಖೆ, ದ.ಕ. ಜಿ.ಪಂ. ಸಹಯೋಗದಲ್ಲಿ ನಾರಾವಿಯಲ್ಲಿ ಜರಗಿದ ಅಳಿವಿನ ಅಂಚಿನಲ್ಲಿರುವ ಮೀನು ಮರಿಗಳನ್ನು ಪಶ್ಚಿಮ ಘಟ್ಟದ ಮೂಲ ಆವಾಸ ಸ್ಥಾನಗಳಿಗೆ ಬಿಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿನೂತನ ಯೋಜನೆಗಳ ಮೂಲಕ ಇಂದು ಇಲಾಖೆಗಳು ಮೀನುಗಳ ಸಂರಕ್ಷಣೆಗೆ ಉತ್ತೇಜನ ನೀಡಿದೆ.

ನದಿ ನೀರಿನ ಸ್ವಚ್ಛತೆಯನ್ನೂ ಕಾಪಾಡುವ ಉದ್ದೇಶ ಇದರಲ್ಲಿ ಅಡಗಿದೆ. ಜಲಪೂಜೆ  ಕಾರ್ಯಕ್ರಮದಂತೆ ಮತ್ಸ್ಯಗಳ ಸಂರಕ್ಷಿಸುವ ಕಾರ್ಯಕ್ರಮವೂ ಪ್ರತಿವರ್ಷವೂ ನಡೆಯಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳ ಒಟ್ಟು ಸೇರಿ ಇಂತಹ ವಿನೂತನ ಯೋಜನೆಗಳನ್ನು ಜಾರಿಗೆ ತಂದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದರು.

ಮಂಗಳೂರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಮಾತನಾಡಿ, ಪ್ರಕೃತಿಯ ಅಸಮತೋಲನ ತಡೆಗಟ್ಟಬೇಕಾದರೆ ಎಲ್ಲ ಜೀವರಾಶಿಗಳ ಉಳಿವು ಅಗತ್ಯ. ಆದರೆ ಇಂದು ನಾವು ಸ್ವಾರ್ಥ ಜೀವನಗೋಸ್ಕರ ಪ್ರಕೃತಿ, ಜೀವರಾಶಿಗಳನ್ನು ನಾಶ ಮಾಡುತ್ತಿದ್ದೇವೆ. ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳನ್ನು ಗುರುತಿಸಿ ಅದರ ಸಂತಾನೋತ್ಪತ್ತಿ ಮಾಡಿಸಿ ಪುನಃ ಅದರ ಮೂಲ ಆವಾಸ ಸ್ಥಾನಗಳಿಗೆ ಬಿಡಲು ಇಲಾಖೆಗಳು ಕೈಜೋಡಿಸಿವೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಮತ್ಸ್ಯ ಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಅನ್ನು ಈಗಾಗಲೇ  98 ಲಕ್ಷ ರೂ. ಅನುದಾನದಡಿ ಪಿಲಿಕುಳದಲ್ಲಿ ಸ್ಥಾಪಿಸಿ, 22 ಜಾತಿ ಮೀನುಗಳನ್ನು ಸಾಕಿ ಪ್ರವಾಸಿಗರ ಪ್ರದರ್ಶನಕ್ಕೆ ಇಡಲಾಗಿದೆ ಎಂದು ತಿಳಿಸಿದರು.

ನಾರಾವಿ ಜಿ.ಪಂ. ಸದಸ್ಯ ಪಿ. ಧರಣೇಂದ್ರ ಕುಮಾರ್‌, ಪಿಲಿಕುಳ ಶಿವರಾಮ ಕಾರಂತ ನಿಸರ್ಗಧಾಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಸನ್ನ ವಿ., ಮಂಗಳೂರು ಮೀನುಗಾರಿಕಾ ಇಲಾಖೆಯ ಸಹಾಯಕ ಯೋಜನಾ ನಿರ್ದೇಶಕಿ ಡಾ| ಸುಶ್ಮಿತಾ, ನಾರಾವಿ ಗ್ರಾ.ಪಂ. ಉಪಾಧ್ಯಕ್ಷೆ ಯಶೋದಾ, ಸದಸ್ಯ ಉದಯ ಹೆಗ್ಡೆ, ಕುತ್ಲೂರು ಅರಣ್ಯ ಸಮಿತಿ ಅಧ್ಯಕ್ಷ ಶ್ರೀಧರ ಪೂಜಾರಿ, ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಕುಮಾರ್‌ ಪೈ ಸ್ವಾಗತಿಸಿ, ನಿರೂಪಿಸಿದರು.

ನದಿಗಳಿಗೆ ಮೀನು ಮರಿ
ಅಳಿವಿನ ಅಂಚಿನಲ್ಲಿರುವ ಕಿಜಾನ್‌, ಮಲಬಾರ್‌ ಡೈನೊ, ಚಂದ್ರಡಿಕೆ ಮೊದಲಾದ ಪ್ರಬೇಧಗಳ ಮೀನುಗಳ ಸಂತಾನೋತ್ಪತ್ತಿ ಮಾಡಿ ಅವುಗಳ ಮರಿಗಳನ್ನು ಪಶ್ಚಿಮಘಟ್ಟದ ಮೂಲ ಆವಾಸ ಸ್ಥಾನಗಳಿಗೆ ಕೊಂಡೊಯ್ದು ಬಿಡಲಾಗುವುದು. ಇದೀಗ ವೇಣೂರು, ನಾರಾವಿ, ಅಳದಂಗಡಿ ಪರಿಸರದ ನದಿಗಳಿಗೆ ಮೀನು ಮರಿಗಳನ್ನು ಬಿಟ್ಟು ಸಂರಕ್ಷಣೆಗೆ ಚಾಲನೆ ನೀಡಲಾಗಿದೆ. 
– ಡಾ| ಎಂ.ಆರ್‌. ರವಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿ.ಪಂ.

ಟಾಪ್ ನ್ಯೂಸ್

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

FLIGHT

IndiGo Flight: ವಿಮಾನದಲ್ಲಿ ಯಾರಿಗೂ ಗೊತ್ತಾಗದಂತೆ ಸಿಗರೇಟ್ ಎಳೆದು ಸಿಕ್ಕಿಬಿದ್ದ ಪ್ರಯಾಣಿಕ

Bellary; ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆಯನ್ನು ಸಿಬಿಐಗೆ ವಹಿಸಲಿ: ಶ್ರೀರಾಮುಲು

Bellary; ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆಯನ್ನು ಸಿಬಿಐಗೆ ವಹಿಸಲಿ: ಶ್ರೀರಾಮುಲು

T20 World Cup: ಬಾಬರ್ ಅಜಂ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

T20 World Cup: ಬಾಬರ್ ಅಜಂ ದಾಖಲೆ ಮುರಿದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

ಯಾವುದಕ್ಕೂ ಹೆದರುವವನಲ್ಲ… ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳಿಗೆ ಓವೈಸಿ ಪ್ರತಿಕ್ರಿಯೆ

ಯಾವುದಕ್ಕೂ ಹೆದರುವವನಲ್ಲ… ಮನೆ ಮೇಲೆ ಮಸಿ ಎರಚಿದ ಕಿಡಿಗೇಡಿಗಳಿಗೆ ಓವೈಸಿ ಪ್ರತಿಕ್ರಿಯೆ

Delhi: 88 ವರ್ಷದ ಬಳಿಕ ದಾಖಲೆಯ ಧಾರಾಕಾರ ಮಳೆಗೆ ನಲುಗಿದ ದೆಹಲಿ, ಜನರ ಪರದಾಟ!

Delhi: 88 ವರ್ಷದ ಬಳಿಕ ದಾಖಲೆಯ ಧಾರಾಕಾರ ಮಳೆಗೆ ನಲುಗಿದ ದೆಹಲಿ, ಜನರ ಪರದಾಟ!

CM ಬದಲಾವಣೆ ಒಪ್ಪಂದವೇ ಆಗಿಲ್ಲ; ಬದಲಾವಣೆಯೂ ಆಗಲ್ಲ: ದಿನೇಶ್ ಗುಂಡೂರಾವ್

CM ಬದಲಾವಣೆ ಒಪ್ಪಂದವೇ ಆಗಿಲ್ಲ; ಬದಲಾವಣೆಯೂ ಆಗಲ್ಲ: ದಿನೇಶ್ ಗುಂಡೂರಾವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aranthodu; Man slipped and fell into the river

Aranthodu; ಕಾಲು ಜಾರಿ ಹೊಳೆಗೆ ಬಿದ್ದು ಸಾವು

7-belthangady

Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು

Belthangadi: ಪ್ರತಿಭಟನೆ ನಡೆಸಿದ ಶಾಸಕ ಹರೀಶ್‌ ಪೂಂಜ, 65 ಮಂದಿಗೆ ನ್ಯಾಯಾಲಯದಿಂದ ಸಮನ್ಸ್‌

Belthangadi: ಪ್ರತಿಭಟನೆ ನಡೆಸಿದ ಶಾಸಕ ಹರೀಶ್‌ ಪೂಂಜ, 65 ಮಂದಿಗೆ ನ್ಯಾಯಾಲಯದಿಂದ ಸಮನ್ಸ್‌

26

Bantwal: ಬೈಕ್‌ ಸ್ಕೀಡ್; ಗಂಭೀರ ಗಾಯಗೊಂಡು ಸಹಸವಾರೆ ಮೃತ್ಯು

3

Bantwal: ಕೋಟೆಕಣಿ; ಸ್ಕೂಟರ್‌ ಬಿದ್ದು ಸಹಸವಾರ ಗಾಯ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

10-mosquiotes

Mosquito: ಮಳೆಗಾಲದ ಸೊಳ್ಳೆಗಳು…!

FLIGHT

IndiGo Flight: ವಿಮಾನದಲ್ಲಿ ಯಾರಿಗೂ ಗೊತ್ತಾಗದಂತೆ ಸಿಗರೇಟ್ ಎಳೆದು ಸಿಕ್ಕಿಬಿದ್ದ ಪ್ರಯಾಣಿಕ

Bellary; ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆಯನ್ನು ಸಿಬಿಐಗೆ ವಹಿಸಲಿ: ಶ್ರೀರಾಮುಲು

Bellary; ವಾಲ್ಮೀಕಿ ನಿಗಮ ಅವ್ಯವಹಾರ ತನಿಖೆಯನ್ನು ಸಿಬಿಐಗೆ ವಹಿಸಲಿ: ಶ್ರೀರಾಮುಲು

9-uv-fusion

Love Letter: ನೆನಪಿನಲೆಯಲ್ಲಿ ಪ್ರೀತಿಯ ಪತ್ರ…!

ronny

Ronny; ಆಗಸ್ಟ್ ಗೆ ತೆರೆಗೆ ಬರಲಿದೆ ಕಿರಣ್ ರಾಜ್ ನಟನೆಯ ರಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.