ಹೆಗ್ಗಡೆ ಇನ್ನೂ  50 ವರ್ಷ ಮಾರ್ಗದರ್ಶನ ನೀಡಲಿ


Team Udayavani, Oct 30, 2017, 6:45 AM IST

margadarshana.jpg

ಉಜಿರೆ: ಪ್ರಧಾನಿ ನರೇಂದ್ರ ಮೋದಿ ಭಾಷಣದುದ್ದಕ್ಕೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಸಾಧನೆಗಳನ್ನು ಉಲ್ಲೇಖೀ ಸುತ್ತಾ ಶ್ಲಾಘಿಸಿದರು. 20ರ ತಾರುಣ್ಯ ದಲ್ಲಿ ಹೆಗ್ಗಡೆ ಅವರು ಧರ್ಮಾಧಿಕಾರಿಯಾಗಿ ಪ್ರಮುಖ ವಾದ ಹೊಣೆ ಸ್ವೀಕರಿಸಿದರು. ಈಗ 50 ವರ್ಷ ಪೂರ್ಣವಾಗಿದೆ. ಕ್ಷೇತ್ರದ ಸಾಧನೆಗಳು ಜಗದ್ವಿಖ್ಯಾತವಾಗಿವೆ. ಹೆಗ್ಗಡೆ ಅವರನ್ನು ಸಮ್ಮಾನಿಸುವ ಭಾಗ್ಯವಿಂದು ತನಗೆ ಪ್ರಾಪ್ತವಾಗಿದೆ. ಹೆಗ್ಗಡೆಯವರು ಪಟ್ಟ ಸ್ವೀಕರಿಸಿ 50 ವರ್ಷ ಆಗಿರುವುದಕ್ಕೆ ತಾನು ಅವರನ್ನು ಸಮ್ಮಾನಿಸಿರುವುದಲ್ಲ. ಅವರು ಇನ್ನೂ 50 ವರ್ಷ ಈ ಪಟ್ಟದಲ್ಲಿದ್ದು ಸಮಾಜಕ್ಕೆ ಮಾರ್ಗದರ್ಶನ ನೀಡು ವಂತಾಗಲೆಂದು ತನ್ನ ಹಾರೈಕೆ ಎಂದರು ಮೋದಿ.

- ಹಿಂದಿನ ವಾರ ನಾನು ಕೇದಾರ ನಾಥಕ್ಕೆ ತೆರಳಿ ದೇವರ ದರ್ಶನ ಪಡೆ ದಿದ್ದೆ. ಈದಿನ ದಕ್ಷಿಣದ ಕೇದಾರ 
ದಂತಹ ಪುಣ್ಯಸ್ಥಳಕ್ಕೆ ನಾನು ಬಂದಿ ದ್ದೇನೆ. ನರೇಂದ್ರ ಮೋದಿ ಎಂಬ ಸಾಮಾನ್ಯ ವ್ಯಕ್ತಿಗೆ ಪ್ರಧಾನಿ ಯಾಗು ವಂಥ ಆಶೀರ್ವಾದ ಜನತೆ ನೀಡಿದ್ದಾರೆ. ಜನತೆಯ ಪರವಾಗಿ ಹೆಗ್ಗಡೆಯವರ ಚರಣ ಗಳಿಗೆ ಅಭಿವಂದಿಸುತ್ತೇನೆ.

- ಹೆಗ್ಗಡೆಯವರು ಸಮಾಜದ ಒಳಿತಿ ಗಾಗಿ ತ್ಯಾಗ, ತಪಸ್ಸಿನ ಜೀವನ ನಿರತ ರಾಗಿದ್ದಾರೆ. ನುಡಿದಂತೆ ನಡೆಯು ವವರಾಗಿದ್ದಾರೆ. ಸ್ವಂತಕ್ಕಿಲ್ಲ-ಎಲ್ಲವೂ ಸಮಾಜಕ್ಕೆ ಎಂಬುದು ಅವರ ಬದುಕಿನ ಸಂದೇಶ. ಒಂದು ಧರ್ಮಕ್ಷೇತ್ರ ಹೇಗಿರ ಬೇಕು ಎಂಬುದಕ್ಕೆ ಧರ್ಮಸ್ಥಳ ಆದರ್ಶ . ಅಧ್ಯಾತ್ಮ, ಶಿಕ್ಷಣ, ಧರ್ಮ, ಪರಂಪರೆ, ಕೃಷಿ, ಗ್ರಾಮಾಭಿವೃದ್ಧಿ, ಬಡ ಜನರಿಗೆ ನೆರವು, ಕೌಶಲಾಭಿವೃದ್ಧಿ ಸಹಿತ ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಕೊಡುಗೆ ಅನನ್ಯವಾಗಿದೆ.

- ಆರ್ಥಿಕ ಸುಧಾರಣೆಗಳನ್ನು ತಾನು ತಂದಾಗ ಸಂಸತ್ತಿನಲ್ಲಿ ಕೆಲವು ಬುದ್ಧಿ ವಂತರು ಎನಿಸಿಕೊಂಡವರು ಕೆಟ್ಟ ಭಾವನೆಗಳಿಂದ, ಕೆಟ್ಟ ಭಾಷೆಗಳಿಂದ ನಿಂದಿಸಿದರು. ಭಾರತ ಅಶಿಕ್ಷಿತರ ದೇಶ. ಅಶಿಕ್ಷಿತ ಬಡಜನರು ಡಿಜಿಟಲ್‌ ಅಥವಾ ಕ್ಯಾಶ್‌ಲೆಸ್‌ ವ್ಯವಹಾರ ಹೇಗೆ ನಡೆಸಿಯಾರು? ಎಲ್ಲರಲ್ಲೂ ಮೊಬೈಲ್‌ ಫೋನ್‌ ಇದೆಯಾ ಎಂದೆಲ್ಲ ವ್ಯಂಗ್ಯ ವಾಡಿದರು. ಅವರ ಈ ಪ್ರಶ್ನೆಗಳಿಗೆ ಹೆಗ್ಗಡೆ ಅವರು ಇಂದು ಅನುಷ್ಠಾನಿಸಿದ ಯೋಜನೆಗಳೇ ಉತ್ತರಗಳಾಗಿವೆ. ಮಹಿಳೆಯರಿಗಂತೂ ವಿಶೇಷ ವಂದನೆ ಗಳು ಎಂದರು ಮೋದಿ.

ಕರಾವಳಿಯ ಚಿಂತನೆ
ಮಂಗಳೂರು ಸಹಿತ ಕರ್ನಾಟಕ ಕರಾವಳಿಯ ಬಗ್ಗೆ  ಮೋದಿ ಸಾಂದರ್ಭಿಕ ವಾಗಿ ಉಲ್ಲೇಖೀಸಿದರು. ಮಳೆಗಾಲದಲ್ಲಿ ಇಲ್ಲಿನ ಮೀನುಗಾರರಿಗೆ ಪರ್ಯಾಯ ವಾಗಿ ಉದ್ಯೋಗ ದೊರೆಯಬೇಕು. ಸೀವೀಡ್‌ ಎಂಬ ಯೋಜನೆ ತರ  ಬಹುದು. ಸಮುದ್ರದ ಕಳೆಗಳನ್ನು ಕೃಷಿ ರೂಪದಲ್ಲಿ ಸಂಸ್ಕರಿಸಿ ಕಡಲ ಕಿನಾರೆಯಲ್ಲಿ ಬೆಳೆಸಬೇಕು. ಜಲಸಹಿತವಾದ ಈ ಉತ್ಪನ್ನ ಕೃಷಿ ಕಾರ್ಯದ ಗದ್ದೆಗಳಲ್ಲಿ ಪೂರಕವಾದ ಗೊಬ್ಬರವಾಗುತ್ತದೆ. ಆದಾಯವನ್ನು ನೀಡು ತ್ತದೆ. ಹೆಗ್ಗಡೆ ಯವರು ಈ ಬಗ್ಗೆ ಚಿಂತನೆ ನಡೆಸಲು ಮೋದಿ ವಿನಂತಿಸಿ ದರು. ಇಲ್ಲಿ ಅಡಿಕೆ ಬೆಲೆ ಕುಸಿದಾಗ ಇಲ್ಲಿನ ಬೆಳೆಗಾರರು ಗುಜರಾತ್‌ ಮುಖ್ಯ ಮಂತ್ರಿಯಾಗಿದ್ದ ನನ್ನಲ್ಲಿಗೆ ಬರುತ್ತಿದ್ದರು ಎಂದು ನೆನಪಿಸಿಕೊಂಡರು.

ಚೆಹೆರೇಪರ್‌ ಮುಸ್ಕಾರಾಹಟ್‌ ಹಟ್‌ತೀ ನಹೀಂ…
“ನಮೋ’ಶ್ರೀ ಮಂಜು ನಾಥಾಯ ಎಂದು ಪ್ರೇಕ್ಷಕರಲ್ಲಿ ಮೂರು ಬಾರಿ ಹೇಳಿಸಿದರು ಹೆಗ್ಗಡೆಯವರು. ಇದರ ಔಚಿತ್ಯ ತಿಳಿಯಿತೇ ಎಂದು ಅವರು ಕೇಳಿದಾಗ ಸಭಾಂಗಣ ಪೂರ್ತಿ “ಹೌದು’ ಎಂದಿತು! 

- ನಮೋ ಮಂಜುನಾಥ, ಧರ್ಮಸ್ಥಳದ ನನ್ನ ಪ್ರೀತಿಯ ಬಂಧು ಭಗಿನಿಯರೇ, ನಿಮ ಗೆಲ್ಲಾ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ ಹಿಂದಿಯಲ್ಲಿ ಮುಂದು  ವರಿ ಸಿದರು ಮೋದಿ. 

- ಹೆಗ್ಗಡೆಯವರನ್ನು ಅನೇಕ ಬಾರಿ ಭೇಟಿಯಾಗಿದ್ದೇನೆ. ಅದೇ ಮುಗುಳುನಗೆ; ಎಂದೂ ಆಯಾಸವಿಲ್ಲ. ಚೆಹೆರೇಪರ್‌ ಮುಸ್ಕಾರಾ ಹಟ್‌ ಹಟ್‌ತೀ ನಹೀಂ…!

- ಹಿಂದೆ ಹೇಳುತ್ತಿದ್ದರು: ಕೇಂದ್ರ ಸರಕಾರ ಒಂದು ರೂಪಾಯಿ ನೀಡಿದರೆ ಹಳ್ಳಿಗೆ ಬಂದದ್ದು 15 ಪೈಸೆ ಮಾತ್ರ. ಉಳಿದ ಮೊತ್ತ ನಡುವೆ ಯಾರ್ಯಾರದೋ ಪಾಲಾಗು  ತ್ತಿತ್ತು. ಈಗ ಹೇಳು ತ್ತೇವೆ: ಕೇಂದ್ರ ಸರಕಾರ ನೀಡುವ ಪೂರ್ಣ ಮೊತ್ತ ಹಳ್ಳಿ ಯನ್ನು ಪ್ರಾಮಾ ಣಿಕ ವಾಗಿ, ಪಾರ ದರ್ಶಕ ವಾಗಿ ತಲುಪುತ್ತಿದೆ.

ಟಾಪ್ ನ್ಯೂಸ್

sanjay-raut

Defamation case; ಸಂಜಯ್ ರಾವತ್‌ಗೆ ಸೆಷನ್ಸ್ ಕೋರ್ಟ್ ನಿಂದ ಜಾಮೀನು, ಶಿಕ್ಷೆ ಅಮಾನತು

1-eweqwewq

Maharashtra Election; 5 ಸೀಟು ಕೊಡಿ, ಇಲ್ಲದಿದ್ದರೆ 25 ರಲ್ಲಿ ಹೋರಾಟ ಎಂದ ಎಸ್ ಪಿ

1-aree

Germany visas; ಭಾರತೀಯ ಉದ್ಯೋಗಿಗಳಿಗೆ 20,000 ದಿಂದ 90,000ಕ್ಕೆ ಏರಿಕೆ: ಪ್ರಧಾನಿ ಮೋದಿ

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

1-a-siddu

By Polls; ಭಾವನಾತ್ಮಕ ಮಾತು, ಕಣ್ಣೀರು ನೋಡಿ ಜನರು ಬೇಸತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

1–a-crick

2nd Test ; ಸಂಕಷ್ಟದಲ್ಲಿ ಭಾರತ : 301 ರನ್ ಲೀಡ್ ಪಡೆದ ನ್ಯೂಜಿಲ್ಯಾಂಡ್

Banana Crop: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ ಹಣ್ಣು… 11 ತಿಂಗಳಲ್ಲಿ ಲಕ್ಷಾಂತರ ಲಾಭ

Banana Crop: ಇರಾನ್ ದೇಶಕ್ಕೆ ಜಗದಾಳ ಗ್ರಾಮದ ಬಾಳೆ ಹಣ್ಣು… 11 ತಿಂಗಳಲ್ಲಿ ಲಕ್ಷಾಂತರ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

Puttur: ರೈಲ್ವೇ ಹಳಿಯಲ್ಲಿ ಕಾಸರಗೋಡು ಮೂಲದ ಕಾರ್ಮಿಕನ ಮೃತದೇಹ ಪತ್ತೆ

9

Sullia ಆಸ್ಪತ್ರೆ ಶೆಡ್‌ನ‌ಲ್ಲಿ ನಿಲ್ಲುತ್ತಿದ್ದ 108 ಆ್ಯಂಬುಲೆನ್ಸ್‌ ಈಗ ರಸ್ತೆ ಬದಿಗೆ!

5(1)

Uppinangady-ನೆಲ್ಯಾಡಿ ಹೆದ್ದಾರಿ ಹೊಂಡಮಯ, ಧೂಳುಮಯ!

WhatsApp Image 2024-10-25 at 02.16.30

Aranthodu: ಕಾಡಾನೆಗಳಿಂದ ಕೃಷಿಗೆ ಹಾನಿ

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

Dharmasthala: ಗ್ರಾಮಾಭಿವೃದ್ಧಿಗೆ ಭಾರತರತ್ನ ಒಲಿಯಲಿ: ಡಾ| ಮಂಜುನಾಥ್‌

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

sanjay-raut

Defamation case; ಸಂಜಯ್ ರಾವತ್‌ಗೆ ಸೆಷನ್ಸ್ ಕೋರ್ಟ್ ನಿಂದ ಜಾಮೀನು, ಶಿಕ್ಷೆ ಅಮಾನತು

1-eweqwewq

Maharashtra Election; 5 ಸೀಟು ಕೊಡಿ, ಇಲ್ಲದಿದ್ದರೆ 25 ರಲ್ಲಿ ಹೋರಾಟ ಎಂದ ಎಸ್ ಪಿ

1-aree

Germany visas; ಭಾರತೀಯ ಉದ್ಯೋಗಿಗಳಿಗೆ 20,000 ದಿಂದ 90,000ಕ್ಕೆ ಏರಿಕೆ: ಪ್ರಧಾನಿ ಮೋದಿ

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

Ajekar: ಕೊ*ಲೆ ಪ್ರಕರಣ; ಪತಿಗೆ ದಿನನಿತ್ಯ ವಿಷ ಪದಾರ್ಥ ನೀಡುತ್ತಿದ್ದ ಪತ್ನಿ!

1-a-siddu

By Polls; ಭಾವನಾತ್ಮಕ ಮಾತು, ಕಣ್ಣೀರು ನೋಡಿ ಜನರು ಬೇಸತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.