ಪಿವಿಎಸ್, ಬಲ್ಮಠ ಸಹಿತ ಎಲ್ಲೆಡೆ ಗಂಟೆಗಟ್ಟಲೆ ಬ್ಲಾಕ್
Team Udayavani, Jun 19, 2018, 11:22 AM IST
ಮಹಾನಗರ : ಬಂಟ್ಸ್ಹಾಸ್ಟೆಲ್ ಹಾಗೂ ನಂತೂರು ಬಳಿ ಎರಡು ವಾಹನಗಳು ರಸ್ತೆ ಮಧ್ಯದಲ್ಲೇ ಕೆಟ್ಟು ನಿಂತಿದ್ದ ಪರಿಣಾಮ ಹಾಗೂ ವಾಹನಗಳ ದಟ್ಟನೆಯಿಂದಾಗಿ ಸೋಮವಾರ ಮಧ್ಯಾಹ್ನದ ಅನಂತರ ನಗರದ ಬಹಳಷ್ಟು ಕಡೆ ಯಾರೂ ಊಹಿಸದಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು.
ಸಂಜೆಹೊತ್ತು ಕಚೇರಿ ಮುಗಿಸಿ ಮನೆಗೆ ತೆರಳುವವರು, ಶಾಲೆ-ಕಾಲೇಜು ಬಿಟ್ಟು ಮನೆಗೆ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ನಡುವೆ ಸಿಲುಕಿ ಸುಮಾರು ಎರಡರಿಂದ ಮೂರು ತಾಸು ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಯಿತು.
ಮಧ್ಯಾಹ್ನ ಸುಮಾರು ಮೂರು ಗಂಟೆಗೆ ಆರಂಭವಾಗಿದ್ದ ಟ್ರಾಫಿಕ್ ಸಮಸ್ಯೆ ರಾತ್ರಿ 7 ಗಂಟೆಯಾದರೂ ಬಹುತೇಕ ಕಡೆಗಳಲ್ಲಿ ಮುಂದುವರಿದಿತ್ತು. ಇದು ಅನಿರೀಕ್ಷಿತವಾಗಿದ್ದು, ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಏಕೆಂದರೆ, ಸೋಮವಾರ ನಗರದಲ್ಲಿ ಯಾವುದೇ ಪ್ರತಿಭಟನೆ ಅಥವಾ ದೊಡ್ಡ ಮಟ್ಟದ ಕಾರ್ಯಕ್ರಮಗಳು ಇರಲಿಲ್ಲ. ಜತೆಗೆ, ಸಂಚಾರದಲ್ಲಿ ಮಾರ್ಪಾಟು ಕೂಡ ಇರಲಿಲ್ಲ. ಹೀಗಿರುವಾಗ, ಏಕಾಏಕಿ ಪ್ರಮುಖ ರಸ್ತೆಗಳಲ್ಲಿ ಮೂರ್ನಾಲ್ಕು ತಾಸು ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತು ಪರದಾಡುವಂತೆ ಮಾಡಿದ್ದು ನಗರವಾಸಿಗಳಿಗೂ ಆಶ್ಚರ್ಯವುಂಟುಮಾಡಿದೆ.
ರಸ್ತೆಗಳು ಬ್ಲಾಕ್!
ನಗರದ ಪಿವಿಎಸ್-ಬಂಟ್ಸ್ಹಾಸ್ಟೆಲ್ ರಸ್ತೆ, ಪಂಪುವೆಲ್-ಬೆಂದೂರ್ವೆಲ್, ಪಂಪುವೆಲ್ -ನಂತೂರು, ಪಿವಿಎಸ್-ಲಾಲ್ಬಾಗ್, ಕಂಕನಾಡಿ-ಪಳ್ನೀರ್, ಬಲ್ಮಠ-ಬೆಂದೂರ್ವೆಲ್ ಹೀಗೆ ನಗರದ ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ತೀವ್ರವಾಗಿತ್ತು.
ಪೊಲೀಸರ ಹರಸಾಹಸ
ಟ್ರಾಫಿಕ್ ನಿಯಂತ್ರಿಸಲು ಸಂಚಾರ ಪೋಲಿಸರು ಪರದಾಡದ ಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಪ್ರತಿಯೊಂದೆಡೆಯೂ ಎರಡು-ಮೂರು ಪೊಲೀಸರು ನಿಂತು ಸಂಚಾರ ನಿಯಂತ್ರಿಸಿದರು. ಅಡ್ಡಾದಿಡ್ಡಿ ವಾಹನ ಚಲಾಯಿಸಿದವರಿಗೆ ಗದರಿಸುತ್ತಾ ತಮ್ಮ ಕರ್ತವ್ಯ ನಿರ್ವಹಿಸಿದರು. ಮಧ್ಯಾಹ್ನದಿಂದ ರಾತ್ರಿ ತನಕವೂ ಟ್ರಾಫಿಕ್ ಜಾಮ್ ಇದ್ದುದರಿಂದ ರಾತ್ರಿವರೆಗೂ ರಸ್ತೆಯಲ್ಲೇ ಬೀಡು ಬಿಟ್ಟಿದ್ದರು.
5 ನಿಮಿಷದ ದಾರಿಗೆ 1 ಗಂಟೆ
ಸಾಮಾನ್ಯವಾಗಿ ಬಸ್ಸುಗಳು ಹಂಪನಕಟ್ಟೆ, ಪಿವಿಎಸ್ ಭಾಗಗಳಿಂದ ಪಂಪುವೆಲ್ ತಲುಪಬೇಕಾದರೆ ಐದು ನಿಮಿಷ ತೆಗೆದುಕೊಳ್ಳುತ್ತದೆ. ಆದರೆ ಸೋಮವಾರ ಸಂಜೆ 5 ನಿಮಿಷದ ದಾರಿ ಸಾಗಲು ಒಂದು ಗಂಟೆ ತೆಗೆದುಕೊಂಡಿದ್ದವು. ಬಂಟ್ಸ್ಹಾಸ್ಟೆಲ್ ವೃತ್ತದಲ್ಲಿ 15 ನಿಮಿಷ, ಜ್ಯೋತಿ ವೃತ್ತ 15 ನಿಮಿಷ, ಬಲ್ಮಠ ಸರ್ಕಲ್ 15 ನಿಮಿಷ, ಕಂಕನಾಡಿಯಲ್ಲಿ 15 ನಿಮಿಷ ಹೀಗೆ ಎಲ್ಲಾ ಕಡೆಗಳಲ್ಲೂ ನಿಂತು ಸಾಗದ ಬೇಕಾದ ಸ್ಥಿತಿ ಇತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅಯೋಧ್ಯೆ ಮಾದರಿ ಎಲ್ಲ ದೇವಾಲಯಗಳಿಗೂ ವಿಶ್ವಸ್ಥ ಮಂಡಳಿ ರೂಪಿಸಿ: ಪೇಜಾವರ ಶ್ರೀ
Mangalore: ಊದು ಪೂಜೆ: ಹುಲಿ ವೇಷಕ್ಕೆ ಮುಹೂರ್ತ!
Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ
Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!
Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.