![Rohit Sharma backs Virat kohli in T20 World Cup](https://www.udayavani.com/wp-content/uploads/2024/06/ro-ko-415x229.jpg)
ಕಳಿಯ ಎಚ್ಪಿಸಿಎಲ್ ಪೈಪ್ಲೈನ್ ಸ್ಟೇಷನ್ಗೆ ಮುತ್ತಿಗೆ
Team Udayavani, May 6, 2019, 6:30 AM IST
![0505CH5](https://www.udayavani.com/wp-content/uploads/2019/05/0505CH5-620x462.jpg)
ಬೆಳ್ತಂಗಡಿ: ತಾ|ನ ಗೇರುಕಟ್ಟೆ ಕಳಿಯ ಎಚ್ಪಿಸಿಎಲ್ ಪೈಪ್ಲೈನ್ ಸ್ಟೇಷನ್ ಸಿಬಂದಿಯನ್ನು ಪೊಲೀಸ್ ಭದ್ರತೆ ಮೂಲಕ ಕರ್ತವ್ಯದಿಂದ ತೆಗೆಯಲು ಮುಂದಾದಾಗ ಶಾಸಕರು, ಹೋರಾಟಗಾರರು ರವಿವಾರ ಪ್ರತಿಭಟನೆಗೆ ಮುಂದಾದ ಘಟನೆ ಸಂಭವಿಸಿದೆ.
ಅಧಿಕಾರಿಗಳು ಪೊಲೀಸ್ ಭದ್ರತೆ ಯಲ್ಲಿ ಬಂದ ಹಿನ್ನೆಲೆಯಲ್ಲಿ ಶಾಸಕ ಹರೀಶ್ ಪೂಂಜ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಸಿಬಂದಿಯನ್ನು ಕೆಲಸದಿಂದ ತೆಗೆಯದಂತೆ ಸೂಚಿಸಿ ದರು. ಬಳಿಕ ಶಾಸಕರ ಸೂಚನೆ ಮೇರೆಗೆ ಸಿಬಂದಿಯನ್ನು ಕರ್ತವ್ಯದಲ್ಲಿ ಮುಂದುವರಿಸಲಾಗಿದೆ. ಈ ಸಂದರ್ಭ ದಲ್ಲಿ ಸ್ಥಳೀಯರು ಸಹಿತ ನೂರಕ್ಕೂ ಹೆಚ್ಚು ಮುಂದಿ ಸೇರಿದ್ದರು.
ನಂಬಿಸಿ ಕೈಕೊಟ್ಟ ಕಂಪೆನಿ
ತಾಲೂಕಿನ 4 ಸ್ಟೇಷನ್ಗಳಲ್ಲಿ ಸ್ಥಳೀಯ 22 ಮಂದಿ ಕೆಲಸ ನಿರ್ವಹಿಸುತ್ತಿದ್ದು, ಗ್ಯಾಸ್ ಪೈಪ್ ಲೈನ್ ಹಾದು ಹೋಗಲು ಬೆಳ್ತಂಗಡಿ ತಾಲೂಕಿನ ಅದೆಷ್ಟೋ ಜನರ ಕೃಷಿ ಭೂಮಿಯನ್ನು ವಶಪಡಿಸಿಕೊಂಡ ಕಂಪೆನಿ ಆಗ ಜಾಗದ ಮಾಲಕರಿಗೆ ಉದ್ಯೋಗದ ಭರವಸೆ ನೀಡಿತ್ತು. ನೀಡಿದ ಭರವಸೆಯಂತೆ ಜಾಗದ ಮಾಲಕರಿಗೆ ಸೆಕ್ಯೂರಿಟಿ ಕೆಲಸವನ್ನು ಗುತ್ತಿಗೆ ಆಧಾರದಲ್ಲಿ ನೀಡಿ ಕೈ ತೊಳೆದುಕೊಂಡಿತ್ತು.
ಇತ್ತ ಕೃಷಿ ಭೂಮಿಯನ್ನೂ ಕಳೆದುಕೊಂಡು ಕಂಪೆನಿಯನ್ನು ನಂಬಿ ಕೆಲಸಕ್ಕೆ ಸೇರಿದ್ದೆವು. ಇದೀಗ ಕೆಲಸವೂ ಇಲ್ಲ, ನಮ್ಮ ಭೂಮಿಯೂ ಇಲ್ಲ. ಇಷ್ಟು ವರ್ಷ ಕೆಲಸ ನಿರ್ವಹಿಸಿದ ಅನುಭವ ಇದ್ದ ನಮ್ಮನ್ನು ಏಕಾಏಕಿ ತೆಗೆದು ಹಾಕುತ್ತಿರುವುದು ಸರಿಯಲ್ಲ. ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಸಿಬಂದಿ ಪ್ರತಿಕ್ರಿಯಿಸಿದ್ದಾರೆ.
ಮೇ 6ರಂದು ಸಭೆ
ಸಿಬಂದಿಯನ್ನು ಕೆಲಸದಿಂದ ವಜಾಗೊಳಿಸದಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೇರೆ ಉದ್ಯೋಗ ಅಥವಾ ಇದೇ ಕೆಲಸದಲ್ಲಿ ಮುಂದುವರಿಸುವ ಕುರಿತಾಗಿ ಮೇ 6ರಂದು ಸಂಸದ, ಶಾಸಕರು ಹಾಗೂ ಎಚ್.ಪಿ.ಸಿ.ಎಲ್. ಅಧಿಕಾರಿಗಳೊಂದಿಗೆ ಮಂಗಳೂರಿನಲ್ಲಿ ಸಭೆ ಕರೆಯಲಾಗಿದೆ.
- ಹರೀಶ್ ಪೂಂಜ,ಶಾಸಕರು
ಟಾಪ್ ನ್ಯೂಸ್
![Rohit Sharma backs Virat kohli in T20 World Cup](https://www.udayavani.com/wp-content/uploads/2024/06/ro-ko-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Rohit Sharma backs Virat kohli in T20 World Cup](https://www.udayavani.com/wp-content/uploads/2024/06/ro-ko-150x83.jpg)
T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?
![Udupi: ಜೂನ್ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ](https://www.udayavani.com/wp-content/uploads/2024/06/Malpe-4-150x86.jpg)
Udupi: ಜೂನ್ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ
![DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?](https://www.udayavani.com/wp-content/uploads/2024/06/ice-creme-2-150x84.jpg)
DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?
![Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್](https://www.udayavani.com/wp-content/uploads/2024/06/sandal-1-150x83.jpg)
Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್
![shatabhisha](https://www.udayavani.com/wp-content/uploads/2024/06/shatabhisha-150x83.jpg)
Kannada Cinema; ತೆರೆಗೆ ಬಂತು ನವತಂಡದ ‘ಶತಭಿಷ ‘
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.