ಪರಿಹಾರ ಸಿಗದಿದ್ದರೆ ದೇವರೇ ಗತಿ: ಕುಕ್ಕರ್‌ ಬಾಂಬ್‌ ಸ್ಫೋಟದ ಗಾಯಾಳುವಿನ ಅಳಲು


Team Udayavani, Jan 17, 2023, 7:15 AM IST

https://www.udayavani.com/wp-content/uploads/2023/01/auto-2.jpg

ಮಂಗಳೂರು: ಸರಕಾರ ಪರಿಹಾರ ನೀಡುವುದಾಗಿ ಹೇಳಿದೆ. ನಮ್ಮಲ್ಲಿ ಇದ್ದ ಹಣ ಖರ್ಚಾಯಿತು. ಪರಿಹಾರ ನೀಡದಿದ್ದರೆ ದೇವರೇ ಗತಿ.

– ಇದು ನ. 19ರಂದು ನಗರದ ನಾಗುರಿಯಲ್ಲಿ ಆಟೋರಿಕ್ಷಾದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದು ಶನಿವಾರ ಆಸ್ಪತ್ರೆ ಯಿಂದ ಬಿಡುಗಡೆಗೊಂಡಿರುವ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರ ನೋವಿನ ನುಡಿಗಳು.

ಪುರುಷೋತ್ತಮ ಅವರ ಮನೆ ದುರಸ್ತಿಯಾಗುತ್ತಿದ್ದು ಪ್ರಸ್ತುತ ಬಾಡಿಗೆ ಮನೆ ಯಲ್ಲಿದ್ದಾರೆ. ಸೋಮವಾರ ಬಾಡಿಗೆ ಮನೆಗೆ ಮಾಧ್ಯಮದವರು ತೆರಳಿ ಮಾತನಾಡಿಸಿದಾಗ ಅವರು ನೋವು ತೋಡಿಕೊಂಡರು.

ಅಂದು ನಾನು ರಿಕ್ಷಾ ಓಡಿಸುತ್ತಿರು ವಾಗ ಒಬ್ಬ ಕೈ ಅಡ್ಡ ಹಿಡಿದು ನಿಲ್ಲಿಸಿ ಪಂಪ್‌ವೆಲ್‌ಗೆ ಹೋಗಬೇಕು ಎಂದ. ಸ್ವಲ್ಪ ಹೊತ್ತಲ್ಲೇ ಭಾರೀ ಶಬ್ದವಾಯಿತು. ದಟ್ಟ ಹೊಗೆ ಆವರಿಸಿ ಏನೂ ಕಾಣಿಸ ಲಿಲ್ಲ. ನಾನು ಹೇಗೋ ರಿಕ್ಷಾ ಪಕ್ಕಕ್ಕೆ ನಿಲ್ಲಿಸಿದೆ. ಪ್ರಯಾಣಿಕನಿಗೆ ಬೆಂಕಿ ತಗಲಿತ್ತು. ಅವನು ರಿಕ್ಷಾದಿಂದ ಹೊರಗೆ ಇಳಿದ. ನನ್ನ ಮುಖ ಮತ್ತು ಕೈಗೆ ಬೆಂಕಿಯಿಂದ ಗಾಯವಾಗಿತ್ತು. ಬಳಿಕ ನಮ್ಮನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಬೇರೇನೂ ನನಗೆ ಗೊತ್ತಾಗಿಲ್ಲ ಎಂದರು ಪುರುಷೋತ್ತಮ.

ಇನ್ನೂ ಒಂದು ವರ್ಷ
ದುಡಿಮೆ ಅಸಾಧ್ಯ
ನಾನು ಇನ್ನೂ ಒಂದು ತಿಂಗಳು ಮನೆಯಿಂದ ಹೊರಗೆ ಹೋಗಬಾರದು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ ಒಂದು ವರ್ಷ ನನಗೆ ದುಡಿಯಲು ಸಾಧ್ಯವಿಲ್ಲ. 10 ದಿನಕ್ಕೊಮ್ಮೆ ಚಿಕಿತ್ಸೆಗೆ ಬರುವಂತೆ ವೈದ್ಯರು ಹೇಳಿದ್ದಾರೆ. ಇಎಸ್‌ಐನಿಂದ ಇಷ್ಟರ ವರೆಗೆ ಚಿಕಿತ್ಸೆಯ ಖರ್ಚು ಆಯಿತು. ಓಡಾಟ ಮತ್ತಿತರ ಖರ್ಚಿಗೆ ನಮ್ಮಲ್ಲಿದ್ದ ಹಣ ಬಳಕೆ ಮಾಡಿದೆವು. ಸರಕಾರದವರು ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಹೊಸ ರಿಕ್ಷಾ ಕೂಡ ಕೊಡುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಅವರು ಕೊಟ್ಟರೆ ಆಯಿತು. ಇಲ್ಲವಾದರೆ ದೇವರೇ ಗತಿ ಎಂದು ನೋವು ತೋಡಿಕೊಂಡರು.

ಮೇಯಲ್ಲಿ ಮಗಳ ಮದುವೆ
ಮುಂದಿನ ಮೇ ತಿಂಗಳಿಗೆ ಮಗಳ ಮದುವೆ ನಿಗದಿಯಾಗಿದೆ. ಅದಕ್ಕಾಗಿ ಮನೆ ದುರಸ್ತಿ ನಡೆಯುತ್ತಿದೆ. ಕೆಲವರು ಸಹಾಯ ಮಾಡುತ್ತಿದ್ದಾರೆ. ಬಾಡಿಗೆ ಮನೆ ನೀಡಿದವರು ನನ್ನ ಸ್ನೇಹಿತರು. ಎಷ್ಟು ಬಾಡಿಗೆ ಎಂದು ಹೇಳಿಲ್ಲ ಎಂದರು ಪುರುಷೋತ್ತಮ ಅವರು.

ಆಸ್ಪತ್ರೆಗೆ ಸಂಸದ ನಳಿನ್‌ ಕುಮಾರ್‌ ಕಟೀಲು, ಸಚಿವ ಸುನಿಲ್‌ ಕುಮಾರ್‌, ಶಾಸಕ ವೇದವ್ಯಾಸ ಕಾಮತ್‌, ಮಾಜಿ ಶಾಸಕರಾದ ಜೆ.ಆರ್‌. ಲೋಬೋ, ಐವನ್‌ ಡಿ’ಸೋಜಾ ಮೊದಲಾದವರು ಭೇಟಿ ನೀಡಿದ್ದಾರೆ. ಸರಕಾರ ಭರವಸೆ ಈಡೇರಿಸುವ ವಿಶ್ವಾಸವಿದೆ ಎಂದು ಪುರುಷೋತ್ತಮ ಅವರ ಮನೆಯವರು ತಿಳಿಸಿದರು.

ಬಲಗೊಳ್ಳದ ಕೈಗಳು
ಪುರುಷೋತ್ತಮ ಪೂಜಾರಿ ಅವರಿಗೆ 61 ವರ್ಷ ವಯಸ್ಸು. ಆಟೋರಿಕ್ಷಾದಲ್ಲಿಯೇ ಬದುಕು ಕಟ್ಟಿಕೊಂಡವರು. ಚಿಕಿತ್ಸೆ ಪಡೆದು ಮನೆಗೆ ಬಂದಿದ್ದರೂ ಅವರ ಆರೋಗ್ಯ ಇನ್ನೂ ಪೂರ್ಣ ಚೇತರಿಕೆ ಕಂಡಿಲ್ಲ. ಅವರ ಕೈಗಳ ಗಾಯ ಇನ್ನೂ ಕೂಡ ಪೂರ್ಣ ಗುಣಮುಖವಾಗದೇ ಇರುವುದರಿಂದ ಅವರ ಮನೆಯವರು ಊಟ ಮಾಡಿಸುತ್ತಿದ್ದಾರೆ.

ಟಾಪ್ ನ್ಯೂಸ್

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Kolkata: ಶನಿವಾರದಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Kolkata: ಸೆ. 21 ರಿಂದ ತುರ್ತು ಸೇವೆ ಪುನರಾರಂಭಿಸಲು ಕಿರಿಯ ವೈದ್ಯರ ನಿರ್ಧಾರ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Kinnigoli: ಕಳವು ಆರೋಪಿಗಳ ಬಂಧನ

Kinnigoli: ಕಳವು ಆರೋಪಿಗಳ ಬಂಧನ

Untitled-1

Mangaluru ಶಕ್ತಿನಗರ: ವ್ಯಕ್ತಿ ನಾಪತ್ತೆ: ದೂರು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

4-mc-sudhakar

Students ಆತ್ಮಹತ್ಯೆ ತಡೆಗೆ ಕಾಲೇಜುಗಳಲ್ಲಿ ಜಾಗೃತಿ: ಸಚಿವ

3-bng

Bengaluru: ನಗರದಲ್ಲಿ 3 ವರ್ಷದಲ್ಲಿ 9700 ಮರಗಳ ಹನನ

Yermarus: Private bus caused end of 150 sheeps

Yermarus: ಖಾಸಗಿ ಬಸ್ ಹರಿದು 150 ಕುರಿಗಳ ಮಾರಣಹೋಮ

ನಟಿಯಾಗುವ ಕನಸು ಕಂಡಿದ್ದ ದ್ರುವಿ ಪಟೇಲ್ ಗೆ ‘ಮಿಸ್ ಇಂಡಿಯಾ ವರ್ಲ್ಡ್‌ವೈಡ್ 2024’ ಕಿರೀಟ

ನಟಿಯಾಗುವ ಕನಸು ಕಂಡಿದ್ದ ಧ್ರುವಿ ಪಟೇಲ್ ಗೆ ‘Miss India Worldwide 2024’ ಕಿರೀಟ

Family drama ‘Langoti Man’ hits screens today

Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್‌ʼ ಇಂದು ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.