Govt., ಅನಕ್ಷರಸ್ಥ ಗ್ರಾ.ಪಂ. ಸದಸ್ಯರಿಗೆ ಅಕ್ಷರ ಕಲಿಸಲು “ಸಾಕ್ಷರ ಸಮ್ಮಾನ್‌’

ಪ್ರಸ್ತುತ ದಕ್ಷಿಣ ಕನ್ನಡದಲ್ಲಿ 53, ಉಡುಪಿಯಲ್ಲಿ 20 ಗ್ರಾ.ಪಂ. ಸದಸ್ಯರಿಗೆ ತರಬೇತಿಗೆ ಸಿದ್ಧತೆ

Team Udayavani, Jul 25, 2024, 6:45 AM IST

Govt., ಅನಕ್ಷರಸ್ಥ ಗ್ರಾ.ಪಂ. ಸದಸ್ಯರಿಗೆ ಅಕ್ಷರ ಕಲಿಸಲು “ಸಾಕ್ಷರ ಸಮ್ಮಾನ್‌’

ಮಂಗಳೂರು: ಸಾಕ್ಷರ ಸಮ್ಮಾನ್‌…. ಇದು ಇನ್ನೂ ಸಹಿ ಹಾಕಲಾಗದ ಅನಕ್ಷರಸ್ಥ ಗ್ರಾ.ಪಂ. ಸದಸ್ಯರನ್ನು ಸಾಕ್ಷರರನ್ನಾಗಿ ಮಾಡಲು ಆರಂಭಿಸಲಾಗುತ್ತಿರುವ ಹೊಸ ಯೋಜನೆ.

ರಾಜ್ಯದಲ್ಲೇ ಅತ್ಯಧಿಕ ಹೆಚ್ಚು ಸಾಕ್ಷರರಿರುವ ಜಿಲ್ಲೆಯೆಂಬ ಖ್ಯಾತಿಯ ದ.ಕ.ದಲ್ಲಿ ಇನ್ನೂ ಅನಕ್ಷರಸ್ಥರಿದ್ದಾರೆ. ಕರಾವಳಿಯ ಉಭಯ ಜಿಲ್ಲೆಗಳಲ್ಲೂ ಸಾಕ್ಷರತೆ ಕುರಿತು ನಿರಂತರ ಕಾರ್ಯಕ್ರಮಗಳು ಸರಕಾರದ ಪಟ್ಟಿಯಲ್ಲಿ ನಡೆಯುತ್ತಲೇ ಇವೆ. ಅದರಲ್ಲೂ ಅಚ್ಚರಿ ಎಂದರೆ ಉಭಯ ಜಿಲ್ಲೆಗಳಲ್ಲೂ ಗ್ರಾ.ಪಂ.ಗಳಿಗೆ ಆಯ್ಕೆಯಾದರಲ್ಲೂ ಅನಕ್ಷರಸ್ಥರು ದೊಡ್ಡ ಸಂಖ್ಯೆಯಲ್ಲಿದ್ದಾರೆ!

1990ರ ದಶಕದಲ್ಲಿ ಸಾಕ್ಷರತೆಯ ಆಂದೋಲನ ನಡೆದು ದಕ್ಷಿಣ ಕನ್ನಡವು ರಾಜ್ಯದಲ್ಲೇ ಅತ್ಯಧಿಕ ಸಾಕ್ಷರರಿರುವ ಜಿಲ್ಲೆ ಎಂದು ಘೋಷಣೆಯಾಗಿತ್ತು. 2011ರ ಜನಗಣತಿ ಪ್ರಕಾರವೂ ರಾಜ್ಯದ ನಂ.1 ಸಾಕ್ಷರ ಜಿಲ್ಲೆಯಾಗಿದ್ದು, ಸಾಕ್ಷರರ ಪ್ರಮಾಣ ಶೇ.88ರಷ್ಟಿದೆ.

ಬಯಲಾಗಿದ್ದು ಹೇಗೆ?
ಆದರೆ ಜಿಲ್ಲೆಯ ಹೆಮ್ಮೆಯ ಬಲೂನಿಗೆ ತೂತು ಬಿದ್ದದ್ದು ಗ್ರಾ.ಪಂ. ಸದಸ್ಯರ ತರಬೇತಿ ವೇಳೆ. ಮೈಸೂರಿನ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ತರಬೇತಿ ವೇಳೆ ವಿವಿಧ ಜಿಲ್ಲೆಗಳ ಸದಸ್ಯರ ಚಟುವಟಿಕೆಯನ್ನು ರಾಜ್ಯ ಗ್ರಾಮೀಣಾ ಭಿವೃದ್ಧಿ ಸಂಸ್ಥೆ (ಎಸ್‌ಐಆರ್‌ಡಿ)ಯವರು ದಾಖಲಿಸಿಕೊಂಡಿದ್ದು, ಆಗ ಸಹಿ ಬದಲಿಗೆ ಬೆರಳಚ್ಚು ಹಾಕಿದ್ದು ಗೊತ್ತಾಗಿದೆ. ಇದರ ಆಧಾರದಲ್ಲಿ ರಾಜ್ಯದ ಜಿಲ್ಲೆಗಳ ಗ್ರಾ.ಪಂ. ಸದಸ್ಯರಿಗೆ ಸಾಕ್ಷರತೆಯ ಪಾಠ ಹೇಳಿಕೊಡಲು ಸೂಚಿಸಲಾಗಿದೆ.

ದ.ಕ.ದಲ್ಲಿ 53 ಗ್ರಾ.ಪಂ.ಗಳಿಂದ 72 ಹಾಗೂ ಉಡುಪಿ ಜಿಲ್ಲೆಯಿಂದ 42 ಅನಕ್ಷಕರಸ್ಕ ಸದಸ್ಯರನ್ನು ಎಸ್‌ಐಆರ್‌ಡಿ ಸಂಸ್ಥೆ ಗುರುತಿಸಿದೆ. ಸಂಸ್ಥೆ ಕೊಟ್ಟ ಮಾಹಿತಿ ಅನ್ವಯ ದಕ್ಷಿಣ ಕನ್ನಡದ ಆಯಾ ಗ್ರಾಮಗಳ ಪಿಡಿಒ ಮೂಲಕ ಇದನ್ನು ದೃಢಪಡಿಸಲು ಮುಂದಾದಾಗ ಕೆಲವರು ಬಳಿಕ ಅಕ್ಷರ ಕಲಿತಿರುವ ಮಾಹಿತಿ ಸಿಕ್ಕಿದ್ದು, ಅಂಥ 19 ಮಂದಿಯನ್ನು ಬಿಟ್ಟು ಉಳಿದ 53 ಮಂದಿಗೆ ತರಬೇತಿ ನಡೆಸಲು ತೀರ್ಮಾನಿಸಲಾಗಿದೆ. ದ.ಕ.ದ ಮಂಗಳೂರು ಹಾಗೂ ಪುತ್ತೂರಿನಲ್ಲಿ ತರಬೇತಿಯನ್ನೂ ನಡೆಸ ಲಾ ಗುವುದು ಎಂದು ಜಿಲ್ಲಾ ಲೋಕಶಿಕ್ಷಣಾಧಿಕಾರಿ ಲೋಕೇಶ್‌ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 42 ಮಂದಿ ಅನಕ್ಷರಸ್ಥರ ಬಗ್ಗೆ ಪೂರ್ವ ಮಾಹಿತಿಯಿದ್ದು, ಅವರಲ್ಲಿ 20 ಮಂದಿ ಬಳಿಕ ಅಕ್ಷರ ಕಲಿತಿರುವುದರಿಂದ ಉಳಿದ 22 ಮಂದಿಗೆ ತರಬೇತಿ ನಡೆಯಲಿದೆ.

ಅನಕ್ಷರಸ್ಥರ ಗುರುತಿಸಲು
ಮನೆ ಮನೆ ಸಮೀಕ್ಷೆ
ಸಾಕ್ಷರತೆಯ ಮಟ್ಟ ಹೆಚ್ಚಿಸಲು ರಾಜ್ಯ-ಕೇಂದ್ರ ಸರಕಾರಗಳೆರಡೂ ಹಲವು ಕಾರ್ಯಕ್ರಮಗಳನ್ನು ಯೋಜಿಸುತ್ತಾ ಬಂದಿವೆ. ರಾಜ್ಯ ಸರಕಾರ 2022ರಲ್ಲಿ ಘೋಷಿಸಿದ 1,000 ಗ್ರಾ.ಪಂ. ಸಂಪೂರ್ಣ ಸಾಕ್ಷರ ಗ್ರಾ.ಪಂ. ಕಾರ್ಯಕ್ರಮದಡಿ ದ.ಕ. ಜಿಲ್ಲೆಯ 26 ಗ್ರಾಮ ಪಂಚಾಯತ್‌ಗಳ 11,047 ಅನಕ್ಷರಸ್ಥರನ್ನು ಗುರುತಿಸಲಾಗಿತ್ತು. ಇದರಲ್ಲಿ 1,390 ಮಂದಿಯನ್ನು ಮೊದಲು ಹಾಗೂ 227 ಮಂದಿಯನ್ನು ಅನಂತರದ ಹಂತದಲ್ಲಿ ಪತ್ತೆ ಮಾಡಿ ತರಬೇತಿ ಕೊಡಲಾಗಿದೆ. ಈಗ ಮತ್ತೆ ಅಭಿಯಾನ ರೂಪದಲ್ಲಿ ಅನಕ್ಷರಸ್ಥರನ್ನು ಗುರುತಿಸಲು ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ.

ಕೇಂದ್ರ ಸರಕಾರವೂ ನವಭಾರತ ಸಾಕ್ಷರತಾ ಕಾರ್ಯಕ್ರಮವನ್ನು ಯೋಜಿಸಿದ್ದು, ಅದರಲ್ಲೂ ಬ್ಲಾಕ್‌ ಸಂಪನ್ಮೂಲ ವ್ಯಕ್ತಿ, ಶಿಕ್ಷಕರು, ಶಿಕ್ಷಕ ಅಭ್ಯಾಸಿಗಳ ಮೂಲಕ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದೆ.

ಅನಕ್ಷರಸ್ಥ ಗ್ರಾ.ಪಂ.
ಸದಸ್ಯರಿರುವ ಟಾಪ್‌ ಜಿಲ್ಲೆಗಳು
ಬೆಳಗಾವಿ-727
ತುಮಕೂರು-328
ಚಿಕ್ಕಬಳ್ಳಾಪುರ-305
ರಾಮನಗರ-227
ಹಾಸನ-223

ಸಾಕ್ಷರ ಸಮ್ಮಾನ್‌ ತರಬೇತಿ ಹೇಗೆ ?
“ಈಚ್‌ ಒನ್‌, ಟೀಚ್‌ ಒನ್‌’ ಎಂದರೆ ಪ್ರತಿಯೊಬ್ಬನೂ ಇನ್ನೊಬ್ಬನಿಗೆ ಕಲಿಸುವುದು ಎನ್ನುವ ನೆಲೆ ಯಲ್ಲಿ ಆಯಾ ಗ್ರಾ.ಪಂ. ಸಿಬಂದಿಯೇ ತಮ್ಮಲ್ಲಿನ ಅನಕ್ಷರಸ್ಥ ಜನಪ್ರತಿನಿಧಿಗಳಿಗೆ ಕಲಿಸುವ ಕಾರ್ಯಕ್ರಮ ಸಾಕ್ಷರತಾ ಸಮ್ಮಾನ್‌. ಇದಕ್ಕಾಗಿ ಗ್ರಾ.ಪಂ. ಸಿಬಂದಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ.
-ಲೋಕೇಶ್‌, ಲೋಕಶಿಕ್ಷಣಾಧಿಕಾರಿ, ದ.ಕ

-ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.