ಇನ್‌ಸ್ಟಾಗ್ರಾಂ ಕಲಿಸಿತು ಉಲ್ಲಾಸ್‌ಗೆ ಚಿತ್ರಕಲೆಯ ಪಾಠ

ನೂರಕ್ಕೂ ಅಧಿಕ ಚಿತ್ರಗಳನ್ನು ರಚಿಸಿದ್ದಾರೆ ಯುವ ಪ್ರತಿಭೆ

Team Udayavani, Feb 15, 2020, 5:21 AM IST

MEGHA-6

ಇನ್‌ಸ್ಟಾಗ್ರಾಂ ನನಗೆ ಚಿತ್ರಗಳನ್ನು ಬಿಡಿಸುವುದನ್ನು ಕಲಿಸಿದ ಗುರು. ಪ್ರಾರಂಭದ ದಿನಗಳಲ್ಲಿ ಸಾಧಾರಣವಾಗಿ ಚಿತ್ರಗಳನ್ನು ಬಿಡಿಸಿ ಅಪ್ಲೋಡ್‌ ಮಾಡುತ್ತಿದ್ದೆ. ಆಗ ಕೆಲವರು ಅದನ್ನು ನೋಡಿ ತಿದ್ದುತ್ತಿದ್ದರು. ಅಲ್ಲಿಂದ ಚಿತ್ರಕಲೆಯ ಸರಿಯಾದ ರೇಖೆಗಳನ್ನು ಹಾಕಬೇಕು ಎಂದು ಆಲೋಚಿಸಿ, ಬರುತ್ತಿದ್ದ ಸಲಹೆಗಳನ್ನು ಸ್ವೀಕರಿಸಿ ಖಾಲಿ ಪುಟಗಳ ಮೇಲೆ ಪ್ರಯೋಗಿಸಲು ಪ್ರಾರಂಭಿಸಿದೆ. ಅದುವೇ ಇಂದು ನನ್ನ ಬೆಳವಣಿಗೆಗೆ ಕಾರಣ ಆಯಿತು ಎನ್ನುತ್ತಾರೆ ಕಲಾಕಾರರ ಜಗತ್ತಿಗೆ ಕಾಲಿಡುತ್ತಿರುವ ಕಾಸರಗೋಡು ಸಮೀಪದ ಪೆರ್ಲದ ಉಲ್ಲಾಸ್‌ ಕೆ.ಯು.

ಇದುವರೆಗೆ ಸುಮಾರು 100ಕ್ಕೂ ಹೆಚ್ಚು ಮುಖ ಚಿತ್ರಗಳನ್ನು ಮಾಡಿದ್ದಾರೆ ಉಲ್ಲಾಸ್‌. ಅದರಲ್ಲಿ ಮುಖ್ಯವಾಗಿ ಪಟ್ಲ ಸತೀಶ್‌ ಶೆಟ್ಟಿ, ತಲೈವ ವಿಜಯ್‌, ಸಾಯಿ ಪಲ್ಲವಿ, ಎ.ಪಿ.ಜೆ. ಅಬ್ದುಲ್‌ ಕಲಾಂ ಹೀಗೆ ಹಲವು. ಅವರು ಬಿಡಿಸಿರುವ ಚಿತ್ರಕ್ಕೆ ಪಟ್ಲ ಸತೀಶ್‌ ಶೆ‌ಟ್ಟಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಬಣ್ಣಗಳನ್ನು ಬಳಸಿ ಸುಂದರ ಚಿತ್ರಗಳನ್ನು ಬರೆಯುತ್ತಾರೆ. ಬರೆದ ಚಿತ್ರಗಳಲ್ಲಿ ಕೆಲವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಕುತ್ತಾರೆ. ಅವುಗಳಿಗೆ ಹಲವಾರು ಸ್ನೇಹಿತರು ಪ್ರತಿಕ್ರಿಯೆ ಹಾಗೂ ಸಲಹೆಗಳನ್ನು ನೀಡುತ್ತಾರೆ. ಆ ಸಲಹೆಗಳನ್ನು ಹಾಗೂ ಬೇರೆಯವರು ಬರೆದ ಚಿತ್ರಗಳನ್ನು ನೋಡಿ ತಮ್ಮ ತಪ್ಪನ್ನು ತಿದ್ದಿಕೊಂಡು ಕಲಿಕೆಯನ್ನು ಮುಂದುವರಿಸುತ್ತಿದ್ದಾರೆ.

ಕೃಷಿಯಲ್ಲೂ ಆಸಕ್ತಿ
ಇವೆಲ್ಲದರ ಜತೆಗೆ ತಮ್ಮನ್ನು ತಾವು ಕೃಷಿಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರಲ್ಲಿಯೂ ನರ್ಸರಿ, ಹೂವಿನ ಬೀಜ ಮೊದಲಾದವುಗಳನ್ನು ಬೆಳೆಸುವುದು ಹಾಗೂ ಸಂಗ್ರಹಿಸುವುದು ಇವರ ನೆಚ್ಚಿನ ಕೆಲಸ. ತಮ್ಮ ವಿದ್ಯಾರ್ಥಿ ಜೀವನದಲ್ಲೇ ಚಿತ್ರಕಲೆ ಹಾಗೂ ಕೃಷಿಯಿಂದ ಸಂಪಾದಿಸಿ ತಮ್ಮ ಕಾಲಮೇಲೆ ನಿಂತಿದ್ದಾರೆ ಉಲ್ಲಾಸ್‌.

ಉಮೇಶ್‌ ಕೆ. ಪೆರ್ಲ ಹಾಗೂ ಹರಿಣಾಕ್ಷಿ ಬಿ. ಅವರ ಪುತ್ರ ಉಲ್ಲಾಸ್‌. ತಂದೆ, ತಾಯಿ ಇಬ್ಬರೂ ಶಾಲಾ ಶಿಕ್ಷಕರು ಹಾಗೂ ಕೃಷಿಯಲ್ಲೂ ಆಸಕ್ತಿಯನ್ನು ಹೊಂದಿದವರು. ಚಿಕ್ಕಂದಿನಿಂದಲೂ ತಂದೆಯ ಕೃಷಿ ಚಟುವಟಿಕೆಗಳನ್ನು ನೋಡುತ್ತಾ ಬೆಳೆದ ಉಲ್ಲಾಸ್‌ ಅವರಿಗೂ ಕೃಷಿಯತ್ತ ಆಸಕ್ತಿ ಹೆಚ್ಚಾಯಿತು. ತನ್ನ ಆಸಕ್ತಿ ಕೃಷಿ ಎಂದು ನಿರ್ಧರಿಸಿದ ಅವರು ಪ್ರಸ್ತುತ ಕಾರಡ್ಕRದ ಜಿ.ವಿ.ಎಚ್‌.ಎಸ್‌.ಎಸ್‌. ಕಾಲೇಜಿನಲ್ಲಿ ಕೃಷಿ (ಐ.ಜಿ.ಎ.) ವಿಷಯದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ.

ಉಲ್ಲಾಸ್‌ ಅವರ ಪ್ರಕಾರ ಸಾಮಾಜಿಕ ಜಾಲತಾಣಗಳು ನಾವು ಬಳಸಿದಂತೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಅದನ್ನು ಸಮಚಿತ್ತದಿಂದ ಕಲಿಕೆಯ ಹಾದಿಯಲ್ಲಿ ಬಳಸಿದರೆ ಏನು ಬೇಕಾದರೂ ಕಲಿಯಬಹುದು. ಇಂದು ಹಲವಾರು ಹೊಸ ಪರಿಚಯಗಳು ಹಾಗೂ ಸುಂದರ ಪ್ರತಿಭೆಗಳು ಹೊರ ಜಗತ್ತಿಗೆ ಕಾಣಿಸಿಕೊಳ್ಳುತ್ತಿರುವುದು ಇದೇ ಜಾಲತಾಣಗಳಿಂದ. ಯುವಪ್ರತಿಭೆ ಉಲ್ಲಾಸ್‌ ಅವರ ಕಲೆಯ ಬದುಕು ಮೇರುಮಟ್ಟಕ್ಕೇರಲಿ.

ಗ್ರಾಫಿಕ್‌ ವಿನ್ಯಾಸದಲ್ಲೂ ಆಸಕ್ತಿ
ಚಿತ್ರಕಲೆಗೆ ಮಾತ್ರ ತನ್ನನ್ನು ತಾನು ಸೀಮಿತಗೊಳಿಸಿಕೊಳ್ಳದೆ ಡಿಜಿಟಲ್‌ ಪೈಂಟಿಂಗ್‌, ಟ್ಯುಟೋರಿಯಲ್ಸ್‌, ಗ್ರಾಫಿಕ್‌ ವಿನ್ಯಾಸಗಳಲ್ಲೂ ಆಸಕ್ತಿಯನ್ನು ಇರಿಸಿಕೊಂಡಿದ್ದಾರೆ. ಅದರೊಂದಿಗೆ ಹಲವಾರು ಆಯಾಮಗಳಲ್ಲಿ ನಿಸರ್ಗದ ಆಗು-ಹೋಗುಗಳನ್ನು ಫೋಟೋ ಮೂಲಕ ಸೆರೆ ಹಿಡಿಯುವುದು ಅವರ ಇಷ್ಟದ ಕೆಲಸ. ಬದಿಯಡ್ಕದ ಪಿ.ಕೆ. ಆನಂದ ಅವರ ಬಳಿ ಪರ್ಪಲ್‌ ಬೆಲ್ಟ್ ತನಕ ಕರಾಟೆಯನ್ನು ಕಲಿತಿದ್ದಾರೆ. ಅದರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 5ಕ್ಕಿಂತ ಹೆಚ್ಚು ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. ಎನ್‌ಸಿಸಿಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
-ಮೇಘಾ ಆರ್‌. ಸಾನಾಡಿ
ವಿವೇಕಾನಂದ ಕಾಲೇಜು ಪುತ್ತೂರು

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

8-kukke

Subrahmanya: ಮುಜರಾಯಿ ಸಚಿವರ ನೇತೃತ್ವದಲ್ಲಿ ಕುಕ್ಕೆ ದೇಗುಲದ ಅಭಿವೃದ್ಧಿ ಸಭೆ

3(1

Sullia: ಜಳಕದಹೊಳೆ ಸೇತುವೆ; ಸಂಚಾರ ನಿಷೇಧ

2(1

Uppinangady: ಕಾಂಕ್ರೀಟ್‌ ರಸ್ತೆಯೇ ಕಿತ್ತೋಗಿದೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.