Mescom ವ್ಯಾಪ್ತಿಯಲ್ಲಿ 195 ಇವಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ


Team Udayavani, Jun 19, 2023, 8:02 AM IST

Mescom ವ್ಯಾಪ್ತಿಯಲ್ಲಿ 195 ಇವಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

ಮಂಗಳೂರು: ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಚಾರ್ಜಿಂಗ್‌ ಕೇಂದ್ರಗಳಿಗೂ ಬೇಡಿಕೆ ಏರುತ್ತಿದೆ. ಆದ್ದರಿಂದ ಮುಂದಿನ ಐದು ವರ್ಷಗಳಲ್ಲಿ 1 ಸಾವಿರ ಚಾರ್ಜಿಂಗ್‌ ಪಾಯಿಂಟ್‌ಗಳನ್ನು ನಿರ್ಮಿಸಲು ಮೆಸ್ಕಾಂ ಮುಂದಾಗಿದೆ. ಮೊದಲ ಹಂತದಲ್ಲಿ 195 ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ.

ಕೇಂದ್ರಗಳ ನಿರ್ಮಾಣದ ಉಸ್ತುವಾರಿಯನ್ನು ರಾಜ್ಯದಲ್ಲಿ ಬೆಸ್ಕಾಂ ನೇರವಾಗಿ ವಹಿಸಿಕೊಂಡಿದ್ದು, ಮೆಸ್ಕಾಂ ವ್ಯಾಪ್ತಿಯ ದ.ಕ., ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಗಳಲ್ಲಿ ಗುತ್ತಿಗೆಯನ್ನು ಬೆಂಗಳೂರು ಮೆಡಿಕಲ್‌ ಸಿಸ್ಟಂಸ್‌ ಕಂಪೆನಿಗೆ ನೀಡ ಲಾಗಿದೆ. ಉಡುಪಿ ಜಿಲ್ಲೆಯ ಟೆಂಡರ್‌ ಅನ್ನು ಇದು ವರೆಗೆ ಯಾರೂ ವಹಿಸಿಕೊಳ್ಳದ ಕಾರಣ ಇನ್ನೊಮ್ಮೆ ಟೆಂಡರ್‌ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಎಲೆಕ್ಟ್ರಿಕ್‌ ವಾಹನಗಳ ಚಾರ್ಜಿಂಗ್‌ ಅವಧಿ ಹೆಚ್ಚಿದ್ದು, ಆ ಅವಧಿಯಲ್ಲಿ ಚಾಲಕರ ವಿಶ್ರಾಂತಿ/ ವಿಹಾರಕ್ಕೆ ಪೂರಕ ಅವಕಾಶ ಇರುವಂತಹ ಸ್ಥಳಗಳಲ್ಲೇ ಕೇಂದ್ರ ನಿರ್ಮಿಸುವುದು ಸದ್ಯದ ಗುರಿ. ಮುಖ್ಯವಾಗಿ ಹೆದ್ದಾರಿ ಬದಿ ಮೆಸ್ಕಾಂನ ಜಮೀನು ಇರುವ 32 ಕಡೆಗಳಲ್ಲಿ, ಇತರ ಸರಕಾರಿ ಕಚೇರಿ ಆವರಣವಿರುವ 48 ಸ್ಥಳಗಳನ್ನು ಗುರುತಿಸಲಾಗಿದೆ. ಹೆದ್ದಾರಿ ಬಿಟ್ಟು ಉಳಿದಂತೆ ಮೆಸ್ಕಾಂ ಜಮೀನಿನಲ್ಲಿ 16 ಕಡೆ ಹಾಗೂ ಇತರ ಸರಕಾರಿ ಕಚೇರಿಗಳಿರುವ 75 ಕಡೆಗಳಲ್ಲಿಯೂ ಸ್ಥಳ ನಿಗದಿಪಡಿಸಿದೆ.

ಮೆಸ್ಕಾಂ ವ್ಯಾಪ್ತಿಯಲ್ಲಿವೆ
61 ಚಾರ್ಜಿಂಗ್‌ ಕೇಂದ್ರ
ಪ್ರಸ್ತುತ ಮೆಸ್ಕಾಂ 24 ಲಕ್ಷ ರೂ. ವೆಚ್ಚ ಮಾಡಿ 61 ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ದ.ಕ. ಜಿಲ್ಲೆಯಲ್ಲಿ 17 (ಮಂಗಳೂರಿನಲ್ಲಿ 3), ಉಡುಪಿಯಲ್ಲಿ 12, ಶಿವಮೊಗ್ಗ 17 ಹಾಗೂ ಚಿಕ್ಕ ಮಗಳೂರಿನಲ್ಲಿ 12 ಕಾರ್ಯ ವೆಸಗುತ್ತಿವೆ. ಇವೆಲ್ಲವೂ ಟೈಪ್‌-1 ಎಂದರೆ 3.3 ಕೆವಿ ಸಾಮರ್ಥ್ಯದ ಪಾಯಿಂಟ್‌ಗಳು. ಇಲ್ಲಿ ಆಟೊ, ದ್ವಿಚಕ್ರ ವಾಹನಗಳಷ್ಟೇ ಚಾರ್ಜ್‌ ಆಗುತ್ತವೆ. ಕಾರುಗಳಿಗೆ ಅಧಿಕ ಸಾಮರ್ಥ್ಯದ ಪಾಯಿಂಟ್‌ ಅಗತ್ಯವಾಗಿರುವುದರಿಂದ ಹೊಸ ದಾಗಿ ನಿರ್ಮಿ ಸುವ ಕೇಂದ್ರಗಳಲ್ಲಿ ಕಾರುಗಳನ್ನೂ ಚಾರ್ಜ್‌ ಮಾಡಲು ಅವಕಾಶವಿದೆ.

ಯೂನಿಟ್‌ಗೆ 50 ಪೈಸೆ ಇಳಿಕೆ
ಈ ಬಾರಿಯ ಹೊಸ ಶುಲ್ಕ ಪ್ರಕಟಿಸುವ ವೇಳೆ ಇವಿ ಚಾರ್ಜಿಂಗ್‌ ಶುಲ್ಕವನ್ನೂ 50 ಪೈಸೆ ಇಳಿಸಲಾಗಿದೆ. ಇದುವರೆಗೆ ಯುನಿಟ್‌ಗೆ 5 ರೂ. ವಿಧಿಸಲಾಗುತ್ತಿದ್ದರೆ ಪ್ರಸ್ತುತ 4.50 ರೂ. ಆಗಿದೆ. ಉಳಿದಂತೆ ಸೇವೆ, ಇತರ ಶುಲ್ಕ ಸೇರಿಕೊಂಡು ಒಂದು ಯುನಿಟ್‌ಗೆ 11 ರೂ.ನಷ್ಟು ವಿಧಿಸಲಾಗುತ್ತಿದೆ.

ಪರಿಸರ ಸ್ನೇಹಿ ವಾಹನಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಆಶಯ. ಮುಂದಿನ ಐದು ವರ್ಷಗಳಲ್ಲಿ 1 ಸಾವಿರ ಚಾರ್ಜಿಂಗ್‌ ಸ್ಟೇಷನ್‌ ನಿರ್ಮಾಣದ ಗುರಿ ಹಾಕಿಕೊಂಡಿದ್ದು, ಹಂತ ಹಂತವಾಗಿ ಕೈಗೊಳ್ಳಲಿದ್ದೇವೆ.
– ಎಚ್‌.ಜಿ. ರಮೇಶ್‌,
ವ್ಯವಸ್ಥಾಪಕ ನಿರ್ದೇಶಕರು (ಪ್ರಭಾರ)

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Bhovi Community ಜು. 20ಕ್ಕೆ ದೀಕ್ಷಾ ರಜತ ಮಹೋತ್ಸವ: ಲಿಂಬಾವಳಿ

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

Congress ಸ್ಥಾನಮಾನ ಬೇಕಿದ್ರೆ ವರಿಷ್ಠರ ಬಳಿ ಕೇಳಬೇಕು: ರಾಜಣ್ಣಗೆ ಕೃಷ್ಣ ಬೈರೇಗೌಡ ತಿರುಗೇಟು

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

Trekking: ಚಾರಣಪಥಗಳ ಆನ್ ಲೈನ್ ಟಿಕೆಟ್ ಗೆ ಶೀಘ್ರ ಚಾಲನೆ: ಈಶ್ವರ ಖಂಡ್ರೆ

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

ಡಿಸಿ ಸಂಕೀರ್ಣಕ್ಕೆ “ಸ್ಮಾರ್ಟ್‌ ಸಿಟಿ’ ನೆರವು: 20 ಕೋಟಿ ರೂ. ಮೀಸಲು

1-mng-protest

Mangaluru: ನೀಟ್ ಅವ್ಯವಹಾರ: ಎನ್.ಎಸ್.ಯು.ಐ., ಕಾಂಗ್ರೆಸ್ ಪ್ರತಿಭಟನೆ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

July 5: “ಧರ್ಮದೈವ’ ತುಳು ಚಲನಚಿತ್ರ ತೆರೆಗೆ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Davanagere; ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯ

Davanagere; ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಂಭೀರ ಗಾಯ

Shivaraj-Thangadagi

Government: ಗಟ್ಟಿತನ ಇದ್ದುದರಿಂದಲೇ ಜಾತಿಗಣತಿ ವರದಿ ಸ್ವೀಕಾರ- ತಂಗಡಗಿ

Will not believe EVMs says akhilesh yadav

ಉ.ಪ್ರ.ದ 80 ಕ್ಷೇತ್ರ ಗೆದ್ದರೂ EVM ನಂಬಲ್ಲ: ಅಖೀಲೇಶ್‌

Dr.Sudhakar

Lokasabha: ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಪುಷ್ಪ ಮಂಡಳಿ; ಡಾ.ಕೆ.ಸುಧಾಕರ್‌ ಪ್ರಸ್ತಾಪ

Question paper ready 2 hours before NEET-PG exam start?

NEET-PG ಪರೀಕ್ಷೆ ಆರಂಭಕ್ಕಿಂತ 2 ಗಂಟೆ ಮುಂಚೆ ಪ್ರಶ್ನೆಪತ್ರಿಕೆ ಸಿದ್ಧ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.