![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 2, 2020, 6:25 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Use
ಸುರತ್ಕಲ್: ಪ್ರವಾಸಿಗರು ಈಗ ಮ್ಯಾಪ್ ಹಾಕಿಕೊಳ್ಳುವುದು ಸಾಮಾನ್ಯ. ಕೇಳುತ್ತಾ ಕೇಳುತ್ತಾ ಹೋಗುವ ಬದಲು ದಾರಿ ತೋರಿಸಿದ ಕಡೆ ಹೋಗುವುದು ಹೊಸತೆನಲ್ಲ.
ಆದರೆ ಇಲ್ಲಿ ಉಡುಪಿಯಿಂದ ಮಂಗಳೂರಿಗೆ ಹೋಗುತ್ತಿರುವ ಹಲವಾರು ಪ್ರವಾಸಿಗರಿಗೆ ಗೂಗಲ್ ಮ್ಯಾಪ್ ಹಳೆಯಂಗಡಿ ಬಳಿಯ ನಾರಾಯಣಗುರು ರಸ್ತೆಯನ್ನು ತೋರಿಸುತ್ತಿದೆ. ಕಳೆದ ಒಂದು ವಾರದಿಂದೀಚೆಗೆ ವಿದೇಶಿ ಪ್ರವಾಸಿಗರು ಈ ರಸ್ತೆಯಲ್ಲಿ ಸಾಗಿ ಪೇಚಿಗೆ ಸಿಲುಕಿಕೊಳ್ಳುತ್ತಿದ್ದಾರೆ.
ಈ ಬಡಾವಣೆಯ ಮಂದಿಗೆ ದಾರಿ ತಪ್ಪಿ ಬರುವ ವಾಹನಗಳಿಗೆ ವಿಳಾಸ ಹೇಳುವುದೇ ಕೆಲಸವಾಗಿ ಬಿಟ್ಟಿದೆ. ಇತ್ತೀಚೆಗೆ ಚೆನ್ನೈನಿಂದ ಟಿಎನ್ ನೋಂದಾಯಿತ ವಾಹನವು ಗೋವಾ ಮಾರ್ಗವಾಗಿ ಉಡುಪಿಯಿಂದ ಮಂಗಳೂರು ಕೇರಳ ಕಡೆ ಹೊರಟಿತ್ತು. ಆದರೆ ಹಳೆಯಂಗಡಿ ಸಮೀಪ ಹೆದ್ದಾರಿಯಲ್ಲಿ ನೇರವಾಗಿ ಸಾಗುವ ಬದಲು ಇಲ್ಲಿನ ಅಡ್ಡ ರಸ್ತೆಯನ್ನು ತೋರಿಸಿದೆ. ಬಡಾವಣೆಯ ನಿವಾಸಿ ದಿನೇಶ್ ಅವರು ವಾಹನದಲ್ಲಿ ಪ್ರಯಾಣಿಸುತ್ತಿದ್ದ ವಿದೇಶಿ ಮಹಿಳೆಯರಿಗೆ ಹೆದ್ದಾರಿ 66ರ ವಿಳಾಸ ನೀಡಿ ತಿಳಿ ಹೇಳಿದರು ಕೂಡ ಪ್ರಯೋಜನವಾಗುತ್ತಿಲ್ಲ.
ಟೋಲ್ ಹಣ ಉಳಿಸಲು ಪ್ರವಾಸಿಗರ ತಂತ್ರ
ಗೋವಾದಿಂದ ಕೇರಳ ತನಕ ಹೋಗಬೇಕೆಂದರೂ ಹಲವಾರು ಟೋಲ್ ಪ್ಲಾಜಾಗಳು ಸಿಗುತ್ತವೆ. ದುಬಾರಿ ಅದಕ್ಕಾಗಿಯೇ ಗೂಗಲ್ ಮ್ಯಾಪ್ನಲ್ಲಿ ಆಯ್ಕೆಯೊಂದು ಲಭ್ಯವಿದ್ದು, ಟೋಲ್ ಮುಕ್ತ ರಸ್ತೆಗಳಲ್ಲಿ ಪ್ರಯಾಣಿಸಬಹುದು. ಪ್ರವಾಸಿಗರು ಹಣ ಉಳಿಸುವ ನಿಟ್ಟಿನಲ್ಲಿಯೂ ಇಂತಹ ಆಯ್ಕೆ ಮಾಡುತ್ತಾರೆಯೇ ಎಂಬುದರ ಬಗ್ಗೆಯೂ ಸಂದೇಹವಿದೆ.
ಹಳೆಯಂಗಡಿ ಮಾರ್ಗವಾಗಿ ಚೇಳ್ಯಾರು, ಮದ್ಯ ಗ್ರಾಮವಾಗಿ ಎನ್.ಐ.ಟಿ.ಕೆ. ಟೋಲ್ಗೇಟ್ ಸ್ವಲ್ಪವೇ ಮುಂದೆ ಒಳರಸ್ತೆ ಹೆದ್ದಾರಿಯನ್ನು ಸಂಪರ್ಕಿಸುತ್ತದೆ. ಇದು ಹೆದ್ದಾರಿಯಲ್ಲಿ ನೇರವಾಗಿ ಸಂಪರ್ಕಿಸುವುದಕ್ಕಿಂತ ಅಂದಾಜು 8 ಕಿ.ಮೀ ದೂರವಿದೆ. ಆದರೂ ಕೆಲವು ವಾಹನಗಳು ಗೂಗಲ್ ಮ್ಯಾಪ್ ಪ್ರಕಾರ ಆಗಮಿಸಿ ಈ ರಸ್ತೆ ಸೇರುತ್ತಾರೆ. ಆದರೆ ಇಲ್ಲಿ ಸುರಕ್ಷತೆಯಿಲ್ಲ. ಕಚ್ಚಾ ರಸ್ತೆ, ಬೀದಿ ದೀಪವಿಲ್ಲದೆ ಇರುವ ರಸ್ತೆಗಳೂ ಇವೆ.
ಜಿಪಿಎಸ್ ಅಥವಾ ಗೂಗಲ್ ಮ್ಯಾಪ್ನಲ್ಲಿ ಯಾವುದೇ ದೋಷವಿರಲಾರದು. ಉಡುಪಿಯಿಂದ ಮಂಗಳೂರು ಕಡೆ ಸಾಗುವ ಸಂದರ್ಭ ಹಳೆಯಂಗಡಿ ಬಳಿ ನೇರ ಮತ್ತು ಅಡ್ಡ ರಸ್ತೆ ಇದ್ದಲ್ಲಿ ಯಾವುದಾದರೂ ಒಂದನ್ನು ತೋರಿಸುತ್ತದೆ. ದೂರದ ಪ್ರವಾಸಿಗಳಿಗೆ ಯಾವುದು ದೂರ, ಹತ್ತಿರ ಎಂಬ ವಿಚಾರ ತಿಳಿದಿರುವುದಿಲ್ಲ. ಜಿಪಿಎಸ್ ತೋರಿದ ದಾರಿಯಲ್ಲೇ ಮುನ್ನಡೆಯುತ್ತಾರೆ. ಹೀಗಾಗಿ ಕೆಲವು ಪ್ರವಾಸಿಗರಿಗೆ ಇಂತಹ ಗೊಂದಲ ಆಗಿರಬಹುದು.
– ಪ್ರೊ| ಅಂಬಾ ಶೆಟ್ಟಿ, ಎನ್.ಐ.ಟಿ.ಕೆ. ಅಪ್ಲೈಡ್ ಮೆಕ್ಯಾನಿಕ್ ವಿಭಾಗದ ಉಪನ್ಯಾಸಕಿ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.