ಜು. 8: ಇಂಗ್ಲಿಷ್ ಯಕ್ಷಗಾನ
Team Udayavani, Jul 5, 2018, 10:28 AM IST
ಮಹಾನಗರ: ಪಣಂಬೂರಿನ ಪಿ.ವಿ. ಐತಾಳ ಇಂಗ್ಲಿಷ್ ಯಕ್ಷಗಾನ ಬಳಗ ‘ಯಕ್ಷನಂದನ’ದ 37ನೇ ವರ್ಷಾಚರಣೆ, ಇಂಗ್ಲಿಷ್ ಸಂಭಾಷಣೆಯ ‘ರತಿಕಲ್ಯಾಣ’ ಯಕ್ಷಗಾನ ಜು. 8ರಂದು ಸಂಜೆ 4.15 ರಿಂದ ರಾತ್ರಿ 9.15ರ ವರೆಗೆ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಕ್ಷನಂದನ ಸಂಚಾಲಕ ಪಿ. ಸಂತೋಷ ಐತಾಳ್, ಕಟೀಲು ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ ಉದ್ಘಾಟಿಸುವರು. ಪಿ.ವಿ. ಐತಾಳ್ ಸ್ಮರಣಾರ್ಥ ವೆಂಕಟರತ್ನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನೀಡುವ ‘ವೆಂಕಟರತ್ನ’ ಪ್ರಶಸ್ತಿಯನ್ನು ಅಶಕ್ತ ಯಕ್ಷಗಾನ ಕಲಾವಿದ ಸುರೇಶ್ ಕಾಮತ್ ಅವರಿಗೆ ನೀಡಲಾಗುವುದು. ಯಕ್ಷನಂದನ ವತಿಯಿಂದ ಕಲಾವಿದರಾದ ಎಸ್. ಈಶ್ವರ ಭಟ್, ಸೂರ್ಯನಾರಾಯಣ ಸಿ.,ಮಟ್ಟಿ ಲಕ್ಷ್ಮೀನಾರಾಯಣ ರಾವ್ ಅವರನ್ನು ಅಭಿನಂದಿಸಲಾಗುವುದು ಎಂದರು.
ಬಳಿಕ ಡಾ| ಪಿ. ಸತ್ಯಮೂರ್ತಿ ಐತಾಳ್ ಬರೆದ ರತಿಕಲ್ಯಾಣ ಇಂಗ್ಲಿಷ್ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಯಕ್ಷ ನಂದ ನದ ಮೂಲಕ ಈಗಾಗಲೇ ಮೇದಿನಿ ನಿರ್ಮಾಣ, ಮಹಿಷಾ ಮರ್ದಿನಿ, ಶಾಂಭವಿ ವಿಲಾಸ, ಶ್ರೀಕೃಷ್ಣ ಲೀಲೆ-ಕಂಸವಧೆ ಸಹಿತ ಹಲವಾರು ಯಕ್ಷಗಾನ ಪ್ರಸಂಗಗಳನ್ನು ಇಂಗ್ಲಿಷ್ ಸಂಭಾಷಣೆಯಲ್ಲಿ ಪ್ರದರ್ಶಿಸಲಾಗಿದೆ ಎಂದರು. ಡಾ| ಜೆ.ಎನ್. ಭಟ್, ಶಂಕರನಾರಾಯಣ ಮೈರ್ಪಾಡಿ, ರವಿ ಅಲೆವೂರಾಯ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.