Kadaba police Station: ದಾಖಲೆ ಕಾಪಿಡುವುದೇ ಇಲ್ಲಿ ಸಾಹಸದ ಕೆಲಸ

ಏಳು ವರ್ಷಗಳ ಹಿಂದೆಯೇ ಸೋರಿಕೆ ಆರಂಭವಾಗಿದ್ದರೂ ಇನ್ನೂ ನಿಯಂತ್ರಣವಾಗಿಲ್ಲ |19 ಗ್ರಾಮ ವ್ಯಾಪ್ತಿ

Team Udayavani, Sep 30, 2024, 12:50 PM IST

2(1)

ಕಡಬ: ಈಗ ತಾಲೂಕು ಕೇಂದ್ರ ವಾಗಿರುವ ಕಡಬದ ಪೊಲೀಸ್‌ ಠಾಣೆ ಹಳೆಯ ಹಂಚಿನ ಕಟ್ಟಡದಿಂದ ಹೊಸದಾಗಿ ನಿರ್ಮಿಸಲ್ಪಟ್ಟ ಆರ್‌ಸಿಸಿ ಕಟ್ಟಡಕ್ಕೆ ಸ್ಥಳಾಂತರಗೊಂಡು ಸುಮಾರು 15 ವರ್ಷಗಳಾಗುತ್ತಾ ಬಂದಿದೆ. ಆದರೆ ಈ ಕಟ್ಟಡದ ಛಾವಣಿ ಸೋರಲಾರಂಭಿಸಿ ಠಾಣೆಗೆಗೆ ಸಂಬಂಧಿಸಿದ ಅಮೂಲ್ಯ ದಾಖಲೆಗಳನ್ನು ಜತನದಿಂದ ಕಾಪಾಡುವುದೇ ಅಲ್ಲಿ ಬಲುದೊಡ್ಡ ಸಾಹಸವೆಂಬಂತಾಗಿದೆ.

ಲಕ್ಷಾಂತರ ರೂ. ವ್ಯಯ ಮಾಡಿ ಅಂದಿನ ಗೃಹ ಮಂತ್ರಿ ಡಾ| ವಿ.ಎಸ್‌.ಆಚಾರ್ಯ ಅವರಿಂದ 2009 ರಲ್ಲಿ ಉದ್ಘಾಟನೆಗೊಂಡ ಕಟ್ಟಡದ ಸ್ಲ್ಯಾಬ್‌ ಬಿರುಕುಬಿಟ್ಟು ದಾಖಲೆಗಳ ಕೊಠಡಿ ಮತ್ತು ಕೈದಿಗಳನ್ನಿರಿಸುವ ಸೆಲ್‌ ಕೊಠಡಿಯ ನಡುವೆ ಇರುವ ಕಾರಿಡಾರ್‌ಗೆ ನೀರು ಬೀಳುತ್ತಿದೆ. ಈ ಹಿಂದೆ ಕೆಲವು ದಾಖಲೆಗಳು ಕೂಡಾ ನೀರಿನಿಂದ ತೇವಗೊಂಡು ಹಾನಿಯಾದ ವಿದ್ಯಮಾನಗಳೂ ನಡೆದಿವೆ. ಏಳು ವರ್ಷಗಳ ಹಿಂದೆಯೇ ನೀರು ಸೋರಿಕೆ ಕಂಡು ಬಂದಿದ್ದರೂ ಇನ್ನೂ ಸೋರಿಕೆ ತಡೆಯುವ ಕೆಲಸ ಸಮರ್ಪಕವಾಗಿ ನಡೆದಿಲ್ಲ.

19 ಗ್ರಾಮಗಳ ವ್ಯಾಪ್ತಿ
ಈ ಹಿಂದೆ 26 ಗ್ರಾಮಗಳು ಈ ಠಾಣೆಯ ವ್ಯಾಪ್ತಿಗೆ ಒಳಪಟ್ಟಿತ್ತು. ಆದರೆ ಕೆಲವು ಗ್ರಾಮಗಳು ಬೆಳ್ಳಾರೆ ಠಾಣೆಗೆ ಸೇರ್ಪಡೆಯಾದ ಬಳಿಕ ಕಡಬ ಠಾಣೆಯ ವಿಸ್ತಾರ ಕಡಿಮೆಯಾಗಿ 19 ಗ್ರಾಮಗಳಿಗೆ ಸೀಮಿತಗೊಂಡಿದೆ. ಮಹಿಳಾ ಪೊಲೀಸ್‌ ಸಿಬಂದಿ ಒಂದು ಹುದ್ದೆ ಹೊರತು ಪಡಿಸಿ ಉಳಿದ ಎಲ್ಲ ಹುದ್ದೆಗಳು ಭರ್ತಿಯಾಗಿದ್ದರೂ ಠಾಣೆಯ ವಿಸ್ತಾರದ ದೃಷ್ಟಿಯಿಂದ ಹಾಗೂ ಸರಕಾರ ಇನ್ನಷ್ಟು ಹುದ್ದೆಗಳನ್ನು ಸೃಷ್ಟಿ ಮಾಡಬೇಕಿದೆ. ಕಡಬವು ತಾಲೂಕು ಕೇಂದ್ರವಾಗಿರುವುದರಿಂದ ಪೊಲೀಸ್‌ ಸಿಬಂದಿ ಸಂಖ್ಯೆ ಹೆಚ್ಚಿಸಬೇಕು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈಗ ಇಲ್ಲಿ ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌ಗಳು, ಮೂವರು ಎಎಸ್‌ಐ ಗಳು, ಎಂಟು ಹೆಡ್‌ಕಾನ್‌ ಸ್ಟೇಬಲ್‌ಗ‌ಳು ಹಾಗೂ 19 ಜನ ಕಾನ್‌ ಸ್ಟೇಬಲ್‌ ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಷ್ಟಾದರೂ ಬೆಳೆಯುತ್ತಿರುವ ಕಡಬದಲ್ಲಿ ಟ್ರಾಫಿಕ್‌ ಕಂಟ್ರೋಲ್‌ಗೆಂದು ಪೊಲೀಸ್‌ ಸಿಬಂದಿ ನಿಯೋಜಿಸುತ್ತಿಲ್ಲ. ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಜನಸಂದಣಿ ಇರುವಾಗ ಸಾರ್ವಜನಿಕರನ್ನು ನಿಭಾಯಿಸಲು ಪೊಲೀಸ್‌ ಸಿಬಂದಿ ಸಾಕಾಗುತ್ತಿಲ್ಲ. ನೆರೆಯ ಠಾಣೆಗಳ ವ್ಯಾಪ್ತಿಯಲ್ಲಿ ಅಥವಾ ಮಂಗಳೂರಿಗೆ ಬೇಕಾದರೆ ಇಲ್ಲಿನ ಸಿಬಂದಿ ಕೂಡ ಅಲ್ಲಿನ ಬಂದೋಬಸ್ತ್ಗಾಗಿ ತೆರಳಬೇಕಾಗುತ್ತದೆ. ಹಿಂದೆ ಇಲ್ಲಿ 15 ಜನ ಗೃಹರಕ್ಷಕ ಸಿಬಂದಿ ಪೊಲೀಸರೊಂದಿಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರ ಸಂಖ್ಯೆ 4 ಕ್ಕೆ ಇಳಿದಿದೆ.

ಸಿಸಿ ಕೆಮರಾಗಳಿಗೆ ಬೇಕು ಕಾಯಕಲ್ಪ
ಠಾಣೆಯ ವತಿಯಿಂದ ಕಡಬ ಪೇಟೆಯಲ್ಲಿರುವ ಒಂದು ಸಿಸಿ ಕೆಮರಾ ಹೊರತು ಪಡಿಸಿ ಮರ್ದಾಳ, ಆಲಂಕಾರು ಮುಂತಾದೆಡೆ ಹಾಕಲಾಗಿರುವ ಸಿಸಿ ಕೆಮರಾಗಳು ಕೆಟ್ಟು ಹೋಗಿ ಹಲವು ವರ್ಷಗಳೇ ಸಂದು ಹೋಗಿವೆ. ಅವುಗಳನ್ನು ದುರಸ್ತಿಪಡಿಸಿದರೆ ಅಪರಾಧ ಕೃತ್ಯಗಳು ಅಥವಾ ವಾಹನ ಅಪಘಾತಗಳ ಸಂದರ್ಭದಲ್ಲಿ ಪೊಲೀಸರ ತನಿಖೆಗೆ ಸಹಾಯ ವಾಗಲಿದೆ ಎನ್ನುವುದು ಸ್ಥಳೀಯ ಜನರ ಅಭಿಪ್ರಾಯ.

-ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

Transportation agency issue; Minister Ramalinga Reddy challenged BJP

Koppala: ಸಾರಿಗೆ ಸಂಸ್ಥೆ ವಿಚಾರ; ಬಿಜೆಪಿಗೆ ಸವಾಲು ಹಾಕಿದ ಸಚಿವ ರಾಮಲಿಂಗಾ ರೆಡ್ಡಿ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

Temple Priest: ದೇವಾಲಯದ ಅರ್ಚಕನನ್ನೇ ಹೊತ್ತೊಯ್ದ ಚಿರತೆ… 11 ದಿನದಲ್ಲಿ 7ನೇ ಪ್ರಕರಣ

9

Kerala Kannadigas: ಕೇರಳಿಗರಿಗೆ ಕನ್ನಡ ಕಲಿಸಲು ವಿಶೇಷ ತರಗತಿ

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು … ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…

Pakistanಕ್ಕೆ ದೊಡ್ಡ‌ ಮೊತ್ತದ ಆರ್ಥಿಕ ನೆರವು …ರಾಜನಾಥ್‌ ಸಿಂಗ್‌ ಭರ್ಜರಿ ಆಫರ್‌, ಆದರೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Puttur: ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರ ಶೀಘ್ರ ಸಿದ್ಧ

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

Dharmasthala: ಭಜನೆಯಿಂದ ಸನಾತನ ಧರ್ಮ, ಸಂಸ್ಕೃತಿ ರಕ್ಷಣೆ

ಪಂಜ: ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

Sullia: ಪಂಜ; ಬೈಕ್‌ ಮೇಲೆ ಜಿಗಿದ ಕಡವೆ; ಸವಾರನಿಗೆ ಗಾಯ

arest

Puttur: ವಂಚನೆ ಪ್ರಕರಣದ ಆರೋಪಿ ತೆಲಂಗಾಣದಲ್ಲಿ ಬಂಧನ

Sullia: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖೀಸಿದ ಪೋಸ್ಟ್‌: ದೂರು

Sullia: ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖೀಸಿದ ಪೋಸ್ಟ್‌: ದೂರು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

Gadag; ಚಾಮುಂಡೇಶ್ವರಿ ವಿಚಾರದಲ್ಲಿ ಪ್ರೊ.ಭಗವಾನ್ ಜನರ ದಾರಿ ತಪ್ಪಿಸುತ್ತಿದ್ದಾರೆ: ಬೊಮ್ಮಾಯಿ

8

Udupi: ತಾಲೂಕು ಕಚೇರಿಗಳಲ್ಲಿ 112 ಹುದ್ದೆ ಖಾಲಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

7

Bunts Hostel ವೃತ್ತ: ಫುಟ್‌ಪಾತ್‌ ಇಲ್ಲದೆ ಅಪಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.