![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 7, 2023, 9:50 PM IST
ಕಾಸರಗೋಡು: ರೈಲು ಗಾಡಿಯಲ್ಲಿ ಸಾಗಿಸುತ್ತಿದ್ದ 40.80 ಲಕ್ಷ ರೂ. ಮೌಲ್ಯದ 204 ಗ್ರಾಂ ಎಂಡಿಎಂಎ ಸಹಿತ ಬದಿಯಡ್ಕ ಕಡಂಬಳದ ಮೊಹಮ್ಮದ್ ಹಾರೀಫ್(26)ನನ್ನು ಕಣ್ಣೂರು ಆರ್ಪಿಎಫ್, ಅಬಕಾರಿ ದಳ ಹಾಗು ಪಾಲ್ ಘಾಟ್ ಆರ್ಪಿಎಫ್ ಕ್ರೈಂ ಪ್ರಿವೆನ್ಶನ್ ಡಿಟೆಕ್ಷನ್ ಸ್ಕ್ವಾಡ್ ಸಂಯುಕ್ತ ಕಾರ್ಯಾಚರಣೆಯಲ್ಲಿ ಬಂದಿಸಿದೆ.
ಚೆನ್ನೈಯಿಂದ ಮಂಗಳೂರು ಎಗ್ಮೂರ್ ಎಕ್ಸ್ಪ್ರೆಸ್ ರೈಲುಗಾಡಿಯಲ್ಲಿ ಈತನನ್ನು ಮಾಲು ಸಹಿತ ಬಂಧಿಸಲಾಗಿದೆ. ಬೆಂಗಳೂರಿನಿಂದ ಕೊಯಂಬತ್ತೂರು ಮೂಲಕ ಪಾಲ್ ಘಾಟ್ ಗೆ ತಂದು ಎಗ್ಮೂರ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಾಸರಗೋಡಿಗೆ ತರುತ್ತಿದ್ದ ವೇಳೆ ಕಣ್ಣೂರಿನಲ್ಲಿ ಬಂಧಿಸಲಾಯಿತು. ಬಂಧಿತನ ಮೊಬೈಲ್ ಫೋನ್, ಎಟಿಎಂ ಕಾರ್ಡ್, ಪ್ರಯಾಣ ಟಿಕೆಟ್ ಮತ್ತು ಬ್ಯಾಗನ್ನು ತನಿಖಾ ತಂಡ ವಶಪಡಿಸಿದೆ. ಈತನ ಮೊಬೈಲ್ ಫೋನ್ನ್ನು ಅಧಿಕಾರಿಗಳು ಸಮಗ್ರ ಪರಿಶೀಲಿಸುತ್ತಿದ್ದಾರೆ. ಇಷ್ಟೊಂದು ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳುತ್ತಿರುವುದು ಉತ್ತರ ಕೇರಳದಲ್ಲೇ ಪ್ರಥಮವಾಗಿದೆ. ಇದನ್ನು ಯಾರಿಗಾಗಿ ತಲುಪಿಸಲು ಉದ್ದೇಶಿಸಲಾಗಿತ್ತು ಮತ್ತು ಅದರ ಹಿಂದಿನ ವಿತರಣಾ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.