![1-havy](https://www.udayavani.com/wp-content/uploads/2024/12/1-havy-415x277.jpg)
ಕಟೀಲು ಭ್ರಾಮರಿಗೆ ಇಂದಿನಿಂದ ಬ್ರಹ್ಮಕಲಶೋತ್ಸವ ಸಂಭ್ರಮ
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ
Team Udayavani, Jan 22, 2020, 6:18 AM IST
![chii-26](https://www.udayavani.com/wp-content/uploads/2020/01/chii-26-620x465.jpg)
ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ. 22ರಿಂದ ಫೆ. 3ರ ವರೆಗೆ ಜರಗುವ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲ, ಕೋಟಿ ಜಪಯಜ್ಞ, ಶತಚಂಡಿಕಾ ಯಾಗಕ್ಕೆ ಕ್ಷೇತ್ರವೂ ಮಹಾಪರ್ವಕ್ಕೆ ಪೂರ್ಣವಾಗಿ ಸಿದ್ಧಗೊಂಡಿದೆ.
ಬ್ರಹ್ಮಕಲಶೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ದಿನವಿಡೀ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಪೂರ್ವಭಾವಿಯಾಗಿ ವಿವಿಧ ಅಭಿವೃದ್ಧಿ ಕೆಲಸ ಕಾರ್ಯಗಳಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ಎಲ್ಲ ಕೆಲಸ ಕಾರ್ಯಗಳು ಈಗಾಗಲೇ ಅಂತಿಮ ಹಂತದಲ್ಲಿವೆ. ಶೃಂಗಾರಗೊಂಡ ಕಟೀಲು ಗಿಡಿಗೆರೆಯಿಂದ ಕಟೀಲು ಸೇತುವೆಯ ತನಕ ರಥಬೀದಿಯನ್ನು ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊಳಿಸಲಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಪತಾಕೆಗಳು ರಾರಾಜಿಸುತ್ತಿವೆ. ಅಲ್ಲಲ್ಲಿ ಸ್ವಾಗತ ಗೋಪುರಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಆವರಣ ರಥಬೀದಿಯ ಇಕ್ಕೆಲಗಳಲ್ಲಿ ಅಂಗಡಿ ವಸತಿಗೃಹ, ಹಳೆ ಶಾಲೆ ಕಟ್ಟಡ, ಸರಸ್ವತೀ ಸದನ ತೆರವುಗೊಂಡಿದೆ.
ರಥಬೀದಿಯಲ್ಲಿ ನೂತನ ರಥದ ಕೊಠಡಿಯನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಮೇಲ್ಛಾವಣಿಗೆ ಆಕರ್ಷಕ ಪಬ್ ಶೀಟ್ ಆಳವಡಿಕೆ ಹಾಗೂ ಸುತ್ತು ಪೌಳಿಯಲ್ಲಿ ಮರದ ಕೆತ್ತನೆಯ ಕಾಷ್ಠಶಿಲ್ಪ, ದೇವರ ಗರ್ಭಗುಡಿಯ ಮುಂಭಾಗದಲ್ಲಿ ಬೆಳ್ಳಿಯ ಹೊದಿಕೆಯ ಮಂಟಪ ಸಿದ್ಧಗೊಂಡಿದೆ. ಬಸ್ ನಿಲ್ದಾಣದ ಪಕ್ಕದಲ್ಲಿ ನೂತನ ಶೌಚಾಲಯ ಹಾಗೂ ಬಸ್ ನಿಲ್ದಾಣದಲ್ಲಿ ಆಕರ್ಷಕ ಸಭಾ ಮಂಟಪ ಸಿತ್ಲಬೈಲಿನಲ್ಲಿ ಬೃಹತ್ ಭೋಜನ ಶಾಲೆ, ಪಕ್ಕದಲ್ಲಿ ಪಾಕಶಾಲೆ ನಿರ್ಮಾಣವಾಗಿದೆ.
ರಸ್ತೆ ವಿಸ್ತರಣೆ
ಕಟೀಲು ಸಂಪರ್ಕಿಸುವ ಉಲ್ಲಂಜೆ- ಕಟೀಲು-ಕಿನ್ನಿಗೋಳಿ ರಸ್ತೆಯನ್ನು ವಿಸ್ತರಿಸಲಾಗಿದೆ. ಮೂರು ಕಾವೇರಿಯಿಂದ ಕಟೀಲು ರಸ್ತೆಯ ಅಭಿವೃದ್ಧಿ ಕೆಲಸ, ಬಜಪೆಯಿಂದ ಕಟೀಲು ಸಂಪರ್ಕ ರಸ್ತೆ, ಗಿಡಿಗೆರೆ ಬೈಪಾಸ್ ರಸ್ತೆ ಅಗಲಗೊಂಡಿದೆ.
ಕಟೀಲಿನ ಬಸ್ನಿಲ್ದಾಣ ಸ್ಥಳಾಂತರ
ಕಿನ್ನಿಗೋಳಿ ಕಡೆಯಿಂದ ಬರುವವರಿಗೆ ಗಿಡಿಗೆರೆ ದೈವಸ್ಥಾನದ ಸಮೀಪ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಬಜಪೆಯಿಂದ ಬರುವವರಿಗೆ ಕಟೀಲು ಸೇತುವೆಯ ಬಳಿ ಪೆಟ್ರೋಲ್ ಪಂಪ್ ಬಳಿ, ಬಸ್ ನಿಲ್ದಾಣ ನಿರ್ಮಾಣವಾಗಿದೆ.
8,000 ಸ್ವಯಂಸೇವಕರು
ಬ್ರಹ್ಮಕಲಶೋತ್ಸವ ಧಾರ್ಮಿಕ, ಸಾಂಸ್ಕೃತಿಕ ಮತ್ತು ವಿವಿಧ ಕಾರ್ಯಕ್ರಮಗಳ ಯಸ್ಸಿಗಾಗಿ ಸುಮಾರು 8,000 ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ.
ಚಿನ್ನದ ಲೇಪನದ ಮಂಟಪ
ಶ್ರೀ ದೇವರಿಗೆ ಚಿನ್ನದ ಲೇಪನದ ಮಂಟಪ ತಯಾರುಗೊಂಡಿದೆ. ಹೊರಭಾಗದಲ್ಲಿ ನಂದಿನಿ ನದಿಯ ಸೇತುವೆಗೆ ಸ್ಟೀಲ್ ಸೇತುವೆ ನಿರ್ಮಾಣ, ಕಟೀಲಿನ ಅನೆ ಮಹಾಲಕ್ಷ್ಮೀ ಗೆ ಹೊಸ ಆನೆಲಾಯ, ನೂತನ ಪಾಕ ಶಾಲೆ, ಅಲ್ಲಿನ ಆವರಣಗಲ್ಲಿ ಹೊಸ ಕೈತೋಟ, ಡಾಮರು ರಸ್ತೆಗೆ ಇಂಟರ್ಲಾಕ್ ಅಳವಡಿಕೆ, ಕಟೀಲು ತಾಯಿಯ ಮೂಲ ಕುದ್ರುವಿನಲ್ಲಿ ನಾಗಮಂಡಲದ ಚಪ್ಪರ, ಕೋಟಿ ಜಪಯಜ್ಞ, ಶತ ಚಂಡಿಕಾಯಾಗಕ್ಕೆ ಯಜ್ಞ ಮಂಟಪವು ನಿರ್ಮಾಣವಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮ
ಜ. 22ರಂದು ನಾದಸ್ವರ ವಿ| ಅಣ್ಣಿ ದೇವಾಡಿಗ ಮತ್ತು ಬಳಗದವರಿಂದ, ತಾಳಮದ್ದಳೆ ಉತ್ತರ – ಗೋಗ್ರಹಣ, ಕಾಂಚನ ಸಹೋದರಿಯರಿಂದ ಪುರಂದರದಾಸರ ಹಾಡುಗಳು, ವಯಲಿನ್ ಸೋಲೊ ಪದ್ಮಭೂಷಣ ಡಾ| ಎಲ್. ಸುಬ್ರಹ್ಮಣ್ಯಂ ಮತ್ತು ಬಳಗದಿಂದ ನೃತ್ಯ ವೈವಿಧ್ಯ ಬಹುರಂಗ್ ನಿರುಪಮಾ – ರಾಜೇಂದ್ರರಿಂದ ನಡೆಯಲಿದೆ.
ಇಂದಿನ ಕಾರ್ಯಕ್ರಮಗಳು
ಬೆಳಗ್ಗೆ 8ರಿಂದ ಋತ್ವಿಜರ ಸ್ವಾಗತ, ಸಾಮೂಹಿಕಪ್ರಾರ್ಥನೆ, ತೋರಣ ಮುಹೂರ್ತ, ವೈದಿಕ ಉಗ್ರಾಣ ಮುಹೂರ್ತ, ಹೊರೆಕಾಣಿಕೆ ಉಗ್ರಾಣ ಮುಹೂರ್ತ, ಪುಣ್ಯಾಹವಾಚನ, ನಾಂದೀ, ಋತ್ವಿಗÌರಣ, ಅರಣಿಮಥನ, ಬ್ರಹ್ಮಕೂರ್ಚ ಹೋಮ, ಕಂಕಣಬಂಧ, ಅಥರ್ವಶೀರ್ಷಗಣಯಾಗ, ಪುರಾಣಾದಿಗಳ ಪಾರಾಯಣ ಪ್ರಾರಂಭ, ಧ್ವಜವಾಹನ ಅಗುತ್ತಾರಣೆ, ಸಂಜೆ 5ರಿಂದ ಪುಣ್ಯಾಹವಾಚನ, ಸಪ್ತಶುದ್ಧಿ, ಗೋಪೂಜೆ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರಬಲಿ, ಅಸ್ತ್ರಕಲಶ ಸ್ಥಾಪನೆ ಭ್ರಾಮರೀವನದಲ್ಲಿ ತೋರಣ ಮುಹೂರ್ತ, ಸಾಯಂ, ವಾಸುಪೂಜೆ, ವಾಸ್ತು ಹೋಮ, ವಾಸ್ತುಬಲಿ, ಮಂಟಪ ಸಂಸ್ಕಾರ, ಸಪ್ತಶುದ್ಧಿ, ಕೋಟಿಜಪಯಜ್ಞ.
ಟಾಪ್ ನ್ಯೂಸ್
![1-havy](https://www.udayavani.com/wp-content/uploads/2024/12/1-havy-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![7](https://www.udayavani.com/wp-content/uploads/2024/12/7-40-150x80.jpg)
Mangaluru: ಮಹಾಕಾಳಿಪಡ್ಪು ರೈಲ್ವೇ ಅಂಡರ್ಪಾಸ್; ಕುಂಟುತ್ತಿರುವ ಕಾಮಗಾರಿಗೆ ಬೇಕಿದೆ ವೇಗ
![4-ut-khader](https://www.udayavani.com/wp-content/uploads/2024/12/4-ut-khader-150x90.jpg)
Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್
![6](https://www.udayavani.com/wp-content/uploads/2024/12/6-51-150x80.jpg)
Mangaluru: ಅಪಾರ್ಟ್ಮೆಂಟ್, ಮಾಲ್ಗಳಲ್ಲಿ ತ್ಯಾಜ್ಯ ಸಂಸ್ಕರಣೆ ಕಡ್ಡಾಯ
![5](https://www.udayavani.com/wp-content/uploads/2024/12/5-55-150x80.jpg)
Mangaluru: ನಗರದಲ್ಲಿ ತೆರೆದುಕೊಂಡ ಗ್ರಾಮೀಣ ಬದುಕು
![4](https://www.udayavani.com/wp-content/uploads/2024/12/4-55-150x80.jpg)
Kulur: ಗೈಲ್ ಪೈಪ್ಲೈನ್ ಕಾಮಗಾರಿ; ಹೆದ್ದಾರಿ ಕುಸಿತ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![1-havy](https://www.udayavani.com/wp-content/uploads/2024/12/1-havy-150x100.jpg)
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
![puttige-4](https://www.udayavani.com/wp-content/uploads/2024/12/puttige-4-1-150x92.jpg)
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
![Kharge (2)](https://www.udayavani.com/wp-content/uploads/2024/12/Kharge-2-1-150x87.jpg)
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
![1](https://www.udayavani.com/wp-content/uploads/2024/12/1-53-150x80.jpg)
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
![1-weqeqw](https://www.udayavani.com/wp-content/uploads/2024/12/1-weqeqw-150x78.jpg)
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.