ಕವಳೇದುರ್ಗ, ಕನಸಲ್ಲೂ ಕಾಡುವ ಪಿಕ್‌ನಿಕ್‌


Team Udayavani, Apr 26, 2018, 2:47 PM IST

26-April-12.jpg

ಬೆಂಗಳೂರಿಂದ ಗೆಳೆಯರ ಗುಂಪು ಬರುವುದಿತ್ತು. ಸಮುದ್ರ ತೀರ, ಹಿನ್ನೀರು ಬೋರು ಮಾರಾಯ ಎಂದವರಿಗೆ ಕವಳೇದುರ್ಗದ ಬಗ್ಗೆ ಹೇಳಿದ್ದೆ. ತುಸು ಚಾರಣವೂ ಇದೆ ಅಂದಾಗ ಉಮೇದಿನಲ್ಲಿ ಸೈ ಎಂದಿದ್ದರು. ಮತ್ತೆ ತಡ ಮಾಡಲಿಲ್ಲ. ವಾರಾಂತ್ಯ ಬೆಂಗಳೂರಿಂದ ಮಣಿಪಾಲಕ್ಕೆ ಬಂದಿದ್ದರು. ಬೆಳಗ್ಗೆ ಆರೂವರೆಗೆ ಮೊದಲೇ ಗೊತ್ತು ಮಾಡಿದ್ದ ಇನ್ನೋವಾ ಹಾಜರಿತ್ತು.

ಬಾಳೆ ಎಲೆಯಲ್ಲಿ ಕಟ್ಟಿದ ಹತ್ತಾರು ಚಪಾತಿ, ನೆಂಜಿಕೊಳ್ಳಲು ಪಲ್ಯ, ಮಧ್ಯೆ ಮಧ್ಯೆ ಬೋರಾಗದಂತೆ ಕುರುಕಲು ತಿಂಡಿ, ಆಯಾಸ ಪರಿಹಾರಕ್ಕೆ ಡಬ್ಬದಲ್ಲಿ ಕಲ್ಲಂಗಡಿ ಹಣ್ಣು, ಕುಡಿಯಲು ನೀರು! ಗುಡ್ಡ ಹತ್ತುವುದಕ್ಕಿಂತ ತಿಂಡಿಯ ಭಾರವೇ ದೊಡ್ಡದಿತ್ತು. ಕಾರು ಹೊರಟು ಪೆರ್ಡೂರು, ಹೆಬ್ರಿ ಪೇಟೆ ಕಳೆಯುತ್ತಿದ್ದಂತೆ ನಿಂತು ಬಿಡ್ತು. ಕಾರಣ ಬೇರೇನೂ ಅಲ್ಲ ಬಡಿಕ್ಕಿಲ್ಲಾಯರ ಹೋಟೆಲ್‌, ಕವಳೇದುರ್ಗದ ವಿಚಾರ ಹೇಳುವುದಕ್ಕೂ ಮೊದಲೇ ಇದರ ಬಗ್ಗೆ ಹೇಳಲೇಬೇಕು. ಕಾರಣ ಸೂಪರ್‌ ತಿಂಡಿ, ಎಕ್ಸಲೆಂಟ್‌ ಕಾಫಿ. ಬಿಸಿಬಿಸಿ ನೀರು ದೋಸೆ, ಗೋಳಿಬಜೆ, ಬನ್ಸ್‌, ಮೂಡೆಗೆ ಹೆಸರುವಾಸಿ ಈ ಹೋಟೆಲ್‌. ಬೆಂಗಳೂರಿಂದ ಬಂದವರೊಂದಿಗೆ ಊರ ತಿಂಡಿಯ ಗಮ್ಮತ್ತಿನೊಂದಿಗೆ ನಮಗೂ ತಿನ್ನಬೇಕಿದ್ದರಿಂದ ಅಲ್ಲೇ ನಿಲ್ಲಿಸಿದ್ದು. ಅಲ್ಲಿಂದ ಹೊರಟು ಕವಳೇದುರ್ಗ ತಲುಪಬೇಕಾದರೆ ಗಂಟೆ ಸುಮಾರು ಎಂಟೂ ಮುಕ್ಕಾಲು ದಾಟಿತ್ತು.

ಏರು ಹಾದಿ
ಕುರುಕಲು ತಿಂಡಿಗಳ ಬ್ಯಾಗು ಹೆಗಲಿಗೇರಿಸಿ ಲೆಫ್ಟ್ ರೈಟ್‌ ಶುರು. ಅದಾಗಲೇ, ಒಂದಷ್ಟು ಮಂದಿ ಕೋಟೆ ಹತ್ತಲು ಬಂದಿದ್ದರು. ಅವರ ಬಳಿಕ ನಮ್ಮ ತಂಡವೂ ಸೇರಿಕೊಂಡಿತ್ತು. ಕೋಟೆ ಬಾಗಿಲು ಬರುವವರೆಗೆ ಭರ್ಜರಿ ಮಾತುಕತೆ, ನಾಲ್ಕಾರು ಫೋಟೋಗಳು, ತಮಾಷೆ ನಡೆದೇ ಇತ್ತು. ಸುಮಾರು ಮುಕ್ಕಾಲು ಕಿ.ಮೀ. ನಡೆದ ಬಳಿಕ ಕೋಟೆ ಏರಲು ತೊಡಗಿದ್ದು, ನೋಡುವ ಕುತೂಹಲ ಹೆಚ್ಚು ಮಾಡಿತ್ತು.

ಕವಳೇದುರ್ಗ ಕೋಟೆ 9ನೇ ಶತಮಾನದ್ದಾಗಿದ್ದು, ಇದನ್ನು 14ನೇ ಶತಮಾನದಲ್ಲಿ ಮರು ನಿರ್ಮಾಣ ಮಾಡಲಾಗಿತ್ತು. ಕೆಳದಿಯ ನಾಯಕರ ಹಿಡಿತದಲ್ಲಿದ್ದ ಈ ಕೋಟೆಯನ್ನು ಚೆಲುವರಂಗಪ್ಪ ಸುಧಾರಿಸಿದ್ದು, ಬಳಿಕ ವಿಜಯನಗರ ಕಾಲದಲ್ಲಿ ವೆಂಕಟಪ್ಪ ನಾಯಕ (1582-1629) ಅವಧಿಯಲ್ಲಿ ಉಚ್ಛಾ†ಯ ಸ್ಥಿತಿ ಕಂಡಿತ್ತು. ಇಲ್ಲಿ ದೇಗುಲ, ಅರಮನೆ, ಕೋಟೆಯ ಪ್ರತಿ ಬಾಗಿಲುಗಳಲ್ಲೂ ಕಾವಲು ಭಟರ ಕೋಣೆಗಳು, ಗುಪ್ತ ಮಾರ್ಗಗಳು ಇವೆ. ಜತೆಗೆ ಗಜಶಾಲೆ, ಅಶ್ವಶಾಲೆ, ನೀರಿನ ಕೊಳ, ಅಗ್ರಹಾರ, ರಾಣಿ ಕೋಣೆ ಸ್ನಾನದ ಮನೆ ಇತ್ಯಾದಿಗಳ ಕಲ್ಲಿನ ಅವಶೇಷಗಳು ದಂಡಿಯಾಗಿ
ಬಿದ್ದಿವೆ. ಇವುಗಳನ್ನೆಲ್ಲ ನೋಡುತ್ತ ನಾವು ಕೋಟೆಯ ಮೇಲ್ಭಾಗಕ್ಕೆ ಹೆಜ್ಜೆ ಹಾಕತೊಡಗಿದ್ದೆವು. ಮೇಲಕ್ಕೆ ಹೋಗುತ್ತಿದ್ದಂತೆ ಸ್ವಲ್ಪ ಸುಧಾರಿಸಲು ನೀರು ಕುಡಿದು ಬಳಿಕ ಹೊರಟಿದ್ದೆವು. ಸುತ್ತಲೂ ಹಸುರು, ತಂಪಾದ ವಾತಾವರಣ ಇದ್ದರಿಂದ ಆಯಾಸ ಅಷ್ಟೇನೂ ಆಗಿರಲಿಲ್ಲ.

ವಿಹಂಗಮ ನೋಟ
ಕೋಟೆಯ ಮೇಲ್ಭಾಗದಿಂದ ಕಾಣುವ ಪಶ್ಚಿಮ ದಿಕ್ಕಿನ ಸೌಂದರ್ಯ ಅಪೂರ್ವ. ಸುತ್ತಲೂ ಮೈಚೆಲ್ಲಿದ ಹಸುರು, ಹರಡಿಕೊಂಡ ವಾರಾಹಿ ಹಿನ್ನೀರು. ಆಹ್ಲಾದಕರ ತಂಗಾಳಿ. ಇದನ್ನೆಲ್ಲ ನೋಡಿ ಖುಷಿ ಪಟ್ಟು, ಪಕ್ಕದಲ್ಲೇ ದೊಡ್ಡ ಬಂಡೆ ಮೇಲಿರುವ ಗುಡಿ ಪಕ್ಕ ಕೂತು, ನಮ್ಮ ಕುರುಕಲು ತಿಂಡಿ ತಿನ್ನುವ ಕಾರ್ಯಕ್ರಮ ಶುರುವಿಟ್ಟುಕೊಂಡೆವು. ನೀರು ಕುಡಿದು ಸುಧಾರಿಸಿದ ಬಳಿಕ ವಾಪಸ್‌ ಹೆಜ್ಜೆ ಹಾಕಿದ್ದೆವು. ಹನ್ನೆರಡು ಗಂಟೆ ಸುಮಾರಿಗೆ ಕೋಟೆ ಇಳಿದೆವಾದ್ದರಿಂದ ಊಟಕ್ಕೆ ಇನ್ನೂ ಸಮಯವಿತ್ತು. ಕಟ್ಟಿಕೊಂಡು ಬಂದ ಚಪಾತಿ, ಪಲ್ಯ ಕಾರಿನಲ್ಲೇ ಇತ್ತು. ಅಷ್ಟಾಗಿ ಹಸಿವೆ ಇಲ್ಲದ್ದರಿಂದ ದಾರಿ ಮಧ್ಯೆ ಚಪಾತಿ ಸೇವನೆ ಪ್ಲ್ರಾನ್‌ ಮಾಡಿ ಹೊರಟಿದ್ದೆವು. ಜತೆಗೆ ಬರುವ ದಾರಿಯಲ್ಲಿ ಸಿಗುವ ಕುಂದಾದ್ರಿ ಏರಿ ವೀಕ್ಷಣೆಯ ಯೋಜನೆ ಕೂಡ ರೂಪುಗೊಂಡಿತ್ತು.

ದಾರಿ ಮಧ್ಯೆ ಕೈಪಂಪ್‌ ಇರುವ ಜಾಗವೊಂದರಲ್ಲಿ ನಿಂತು, ಚಪಾತಿ ಹೊಟ್ಟೆಗಿಳಿಸಿ ಮಧ್ಯಾಹ್ನ ಎರಡೂವರೆಗೆಲ್ಲ ಕುಂದಾದ್ರಿ ತಪ್ಪಲಲ್ಲಿದ್ದೆವು. ಬಿಸಿಲಿದ್ದರೂ ನಮ್ಮ ಉಮೇದಿಗೆ ಕಡಿಮೆ ಇರಲಿಲ್ಲ. ಕುಂದಾದ್ರಿ ಹತ್ತಿ ಬಸದಿ ಎಲ್ಲ ವೀಕ್ಷಣೆ ಮಾಡಿದೆವು. ಆದರೆ ಇಲ್ಲಿ ಮುಗಿಲಿನ ಛಾಯೆ ಇದ್ದರಿಂದ ದೂರದ ನೋಟ ಅಷ್ಟಾಗಿ ಸವಿಯುವುದಕ್ಕೆ ಅವಕಾಶವಿರಲಿಲ್ಲ. ಸುತ್ತಲೂ ಬೇಲಿ ಹಾಕಿ ಭದ್ರತೆ ಕಲ್ಪಿಸಿದ್ದರಿಂದ, ಬಸದಿಗೂ ಕಾಂಪೌಂಡ್‌ ಕಟ್ಟಿದ್ದರಿಂದ ಕರಿಶಿಲೆಯ ಬಸದಿ, ಪ್ರಕೃತಿ ನೋಟದ ಆಸಕ್ತಿಗೆ ಸ್ವಲ್ಪ ಹಿನ್ನಡೆಯಾಗಿತ್ತು.

ಕುಂದಾದ್ರಿ ಮೂರೂವರೆ ಗಂಟೆ ಹೊತ್ತಿಗೆ ಇಳಿದು ನಮ್ಮ ಪ್ರಯಾಣ ಮರಳಿ ಉಡುಪಿಯತ್ತ. ಮಧ್ಯಾಹ್ನದ ಬಿಸಿಲು ತುಸು ಹೆಚ್ಚೇ ಇದ್ದರಿಂದ ಜೋಂಪು ಹತ್ತಿತ್ತು. ಕಾರಿನ ಸೀಟಿಗೆ ಒರಗಿದವರಿಗೆಲ್ಲ ಗಡದ್ದು ನಿದ್ದೆ. ಆಗುಂಬೆ ತಿರುವು ಕಳೆದು, ಹೆಬ್ರಿ ದಾಟಿ ಮಣಿಪಾಲ ಬರುತ್ತಿದ್ದಂತೆ ಗಂಟೆ ಐದಾಗಿತ್ತು. ಅಂದು ರಾತ್ರಿಯ ಬಸ್ಸಿಗೇ ಗೆಳಯರಿಗೆ ಬೆಂಗಳೂರು ಹೋಗಬೇಕಿದ್ದರಿಂದ, ನಮ್ಮ ಪಿಕ್‌ನಿಕ್‌ ಮನೆ ಸೇರಿದಲ್ಲಿಗೆ ಮುಕ್ತಾಯ. ಆದರ ನೆನಪು ಮಾತ್ರ ಸದಾ ಹಸುರು.

ಹೋಗುವ ಮುನ್ನ
ಹೆಬ್ರಿ ಆಗುಂಬೆ, ತೀರ್ಥಹಳ್ಳಿ ಮಾರ್ಗದಲ್ಲಿ ಕ್ರಮಿಸಿದಾಗ ಮೇಗರವಳ್ಳಿ ಸಿಗುತ್ತದೆ. ಬಳಿಕ ಸಿಗುವ ಮುಳುಬಾಗಿಲಿನಲ್ಲಿ ಎಡಕ್ಕೆ ತಿರುಗಿ, ಹುಲಿಕಲ್‌ ಮಾರ್ಗದಲ್ಲಿ ಹೋಗಬೇಕು. ಕವರಿ ಎಂಬಲ್ಲಿಗೆ ತಲುಪುವ ಮುನ್ನ ಮುಖ್ಯ ರಸ್ತೆಯಿಂದ ಬಲಕ್ಕೆ ತಿರುಗಿ 3 ಕಿ.ಮೀ. ಕ್ರಮಿಸಿದರೆ, ಕವಳೇದುರ್ಗ
ಸಿಗುತ್ತದೆ. ಗೂಗಲ್‌ ಮ್ಯಾಪ್‌ ನಲ್ಲೂ ಸರಿಯಾದ ದಾರಿ ಲಭ್ಯ.

 .ಮಳೆಗಾಲ, ಮಳೆಗಾಲದ ಅನಂತರದ ತಿಂಗಳು ಕವಳೇದುರ್ಗ ಪಿಕ್‌ನಿಕ್‌ಗೆ ಬೆಸ್ಟ್‌.
 .ಮಳೆಗಾಲ ಉತ್ತಮ ಆದರೂ, ಕಲ್ಲಿನ ಹಾದಿ ಜಾರುವ ಸಾಧ್ಯತೆ ಇದೆ. 
.ಒಂದು ದಿನದ ಪಿಕ್‌ನಿಕ್‌ಗೆ, ತೀರ ಕ್ಲಿಷ್ಟಕರ ಚಾರಣ ಬಯಸದವರಿಗೆ ಕವಳೇದುರ್ಗ ಉತ್ತಮ ಸ್ಥಳ.

ರೂಟ್‌ಮ್ಯಾಪ್‌
ಮಂಗಳೂರಿನಿಂದ ಕವಳೇ ದುರ್ಗಕ್ಕೆ 132 ಕಿ.ಮೀ. ದೂರ, ತೀರ್ಥಹಳ್ಳಿಯಿಂದ 18 ಕಿ.ಮೀ. ದೂರದಲ್ಲಿದೆ.
ಖಾಸಗಿ ವಾಹನ ಮಾಡಿಕೊಂಡು ಕೂಡ ಹೋಗಬಹುದು.
ಕವಳೇ ದುರ್ಗಕ್ಕೆ ಅರ್ಧ ತಾಸು ಕಾಲ್ನಡಿಗೆಯ ಹಾದಿ 
ಊಟ, ವಸತಿ ಸೌಲಭ್ಯ ಹತ್ತಿರದಲ್ಲಿಲ್ಲ.

ಈಶ

ಟಾಪ್ ನ್ಯೂಸ್

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Sandur By Poll: ನಾಗೇಂದ್ರ ಈಗಾಗಲೇ ಡಸ್ಟ್ ಬಿನ್ ನಲ್ಲಿ ಬಿದ್ದಿದ್ದಾನೆ: ಜನಾರ್ದನ ರೆಡ್ಡಿ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

Yahya Sinwar:ಕೊನೆಯಾದ ಹಮಾಸ್ ಮುಖ್ಯಸ್ಥನ ತಂತ್ರ: ಸೋಲಿನಲ್ಲಿ ಅಂತ್ಯ ಕಂಡ ಸಿನ್ವರ್ ಜೀವನ

ed raid on mysore muda office

Mysore: ಮುಡಾ ಕಚೇರಿಗೆ ಇ.ಡಿ ದಾಳಿ; ಕಡತಗಳ ಪರಿಶೀಲನೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

8(3)

Mangaluru: ಗುಂಡಿ ಬಿದ್ದ ರಸ್ತೆಗಳಿಗೆ ಜಲ್ಲಿಕಲ್ಲೇ ಆಧಾರ; ಅಪಾಯದಲ್ಲಿ ಸವಾರರು

5

Jokatte: ಸಂಪೂರ್ಣ ಹದೆಗೆಟ್ಟ ಕೂಳೂರು, ಕೈಗಾರಿಕೆ ವಲಯದ-ಜೋಕಟ್ಟೆ ರಸ್ತೆ

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Belagavi: UT Khader, Basavaraja Horatti visited Suvrana vidhasoudha

Belagavi: ಸುವರ್ಣ ವಿಧಾನಸೌಧಕ್ಕೆ‌ ಯು.ಟಿ.ಖಾದರ್‌, ಬಸವರಾಜ ಹೊರಟ್ಟಿ ಭೇಟಿ

16-bng

Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ

15-

Bengaluru: ಎಎಸ್‌ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು

9

Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.