![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 20, 2022, 1:33 AM IST
ಹಳೆಯಂಗಡಿ: ಇಲ್ಲಿನ ಕೆರೆಕಾಡಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿ ಆರೋಪಿ ಹಳೆಯಂಗಡಿ ಕೊಪ್ಪಳ ನಿವಾಸಿ ದಾವೂದ್ ಹಕೀಂ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿರುವ ಮೂಲ್ಕಿ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
***
ನಕಲಿ ದಾಖಲೆ ಸೃಷ್ಟಿಸಿ ಸೊಸೈಟಿಗೆ ವಂಚನೆ
ಮಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದು ವಂಚಿಸಿರುವ ಬಗ್ಗೆ ನಗರದ ಜಪ್ಪುವಿನ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದ ಕಾರ್ಯದರ್ಶಿ ಚಂದ್ರಿಕಾ ಡಿ.ರಾವ್ ಅವರು ನೀಡಿರುವ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಲ್ಪ ಗಜಾನನ ಪೂಂಜಾ, ಡಾ| ನಿಶ್ಚಿಕೇತ್ ಪೂಂಜಾ ಮತ್ತು ಡಾ| ನಿಖೀತಾ ಪೂಂಜಾ ಆರೋಪಿಗಳು. 2017ರಲ್ಲಿ ಶಿಲ್ಪ ಗಜಾನನ ಪೂಂಜಾ 50 ಲ.ರೂ. ಸಾಲಕ್ಕೆ ಅರ್ಜಿ ಸಲ್ಲಿಸಿ ಬ್ಯಾಂಕ್ವೊಂದರ ಡೆಪಾಸಿಟ್ ಬಾಂಡ್ ಮತ್ತು ಎಲ್ಐಸಿ ಬಾಂಡ್ ಹಾಗೂ ಡಾ| ನಿಶ್ಚಿಕೇತ್ ಪೂಂಜಾ 40 ಲ.ರೂ. ಸಾಲಕ್ಕೆ ಬ್ಯಾಂಕ್ವೊಂದರ ಡೆಪಾಸಿಟ್ ಬಾಂಡ್ ಮತ್ತು ಎಲ್ಐಸಿ ಬಾಂಡ್ ನೀಡಿದ್ದರು. ಅವರೀರ್ವರಿಗೂ ಸಾಲ ಮಂಜೂರಾಗಿತ್ತು.
ಆರೋಪಿಗಳು ಸಾಲ ಮರುಪಾವತಿಸದೇ ಇದ್ದಾಗ ಅವರು ನೀಡಿದ ದಾಖಲೆಗಳನ್ನು ಪರಿಶೀಲಿಸಲಾಯಿತು. ಆಗ ಅವರು ನೀಡಿರುವ ಡೆಪಾಸಿಟ್ ಬಾಂಡ್ಗಳು ನಕಲಿ ಯಾಗಿರುವುದು ಮತ್ತು ಎಲ್ಐಸಿ ಬಾಂಡ್ಗಳನ್ನು ಎಲ್ಐಸಿ ಕಚೇರಿ ಜಮೆ ಮಾಡಿ ಹಣ ತೆಗೆದಿರುವುದು ಗೊತ್ತಾಗಿದೆ. ಇವರ ಸಾಲಕ್ಕೆ ಶಿಲ್ಪ ಗಜಾನನ ಪೂಂಜಾಳ ಪುತ್ರಿ ಡಾ| ನಿಖೀತಾ ಪೂಂಜಾ ಜಾಮೀನುದಾರಳಾಗಿದ್ದು ಆಕೆ ಕೂಡ ಸಾಲ ಮಂಜೂರಾಗಲು ಸಹಕರಿಸಿ ವಂಚಿಸಿರುವುದಾಗಿ ದೂರು ದಾಖಲಾಗಿದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.