
ಕೊಂದಪ್ಪಡೆ: ಅಮಾವಾಸ್ಯೆ ವಿಶೇಷ ಪೂಜೆ
Team Udayavani, Jul 24, 2017, 7:25 AM IST

ಕಡಬ: ರಾಮಕುಂಜ ಗ್ರಾಮದ ಕೊಂದಪ್ಪಡೆ ಅನಂತಪದ್ಮನಾಭ ದೇವಸ್ಥಾನದಲ್ಲಿ ರವಿವಾರ ಆಟಿ ಅಮಾವಾಸ್ಯೆಯ ಅಂಗವಾಗಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.
ದೇವಸ್ಥಾನದಲ್ಲಿ ಪ್ರತೀವರ್ಷದಂತೆ ಈ ವರ್ಷವೂ ಆಟಿ ಅಮಾವಾಸ್ಯೆಯ ಪ್ರಯುಕ್ತ ವಿಶೇಷ ಮಹಾಪೂಜೆ ನಡೆ ಯಿತು. ಮುಖ್ಯವಾಗಿ ಇಲ್ಲಿ ಮಕ್ಕಳಾಗದ ದಂಪತಿ ಸಂತಾನ ಪ್ರಾಪ್ತಿಗಾಗಿ ಸಂತಾನ ಪ್ರಾರ್ಥನೆ ನಡೆಯಿತು.
ಹರಕೆ ಹೊರುವ 70ಕ್ಕೂ ಹೆಚ್ಚು ದಂಪತಿ ದೇವಸ್ಥಾನದ ಎದುರಿನ ಕೆರೆಯಲ್ಲಿ ವಿಶೇಷ ತೀರ್ಥಸ್ನಾನ ಮಾಡಿ ಅರ್ಚಕರಿಂದ ಮುಷ್ಟಿ ಅಕ್ಕಿಯನ್ನು ಸ್ವೀಕರಿಸಿದರು. ಈ ಅಕ್ಕಿಯನ್ನು ಪಡೆದ ದಂಪತಿಗಳು 12 ದಿನ ತಮ್ಮ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಸ್ನಾನ ಮಾಡಿ ಮಡಿಯುಟ್ಟು ತಾವು ಸೇವಿಸುವ ಆಹಾರದಲ್ಲಿ ಈ ಅಕ್ಕಿಯನ್ನು ಬೆರೆಸಿ ಸ್ವೀಕರಿಸಬೇಕು.
ಹೀಗೆ ಮಾಡಿದಲ್ಲಿ ಅವರಿಗೆ ಸಂತಾನ ಪ್ರಾಪ್ತಿಯಾಗುವುದೆಂದು ಭಕ್ತರ ನಂಬಿಕೆ ಯಾಗಿದೆ. ಇಷ್ಟಾರ್ಥ ಸಿದ್ಧಿಸಿಕೊಂಡವರು ಹರಕೆ ಸಂದಾಯ ಮಾಡುತ್ತಿದ್ದಾರೆ.
ತೊಟ್ಟಿಲು ಮಗು ರೂಪದ ಹರಕೆ
ಕ್ಷೇತ್ರದಲ್ಲಿ ತೊಟ್ಟಿಲು ಮಗು ರೂಪದಲ್ಲಿ ಹರಿಕೆ ಸಲ್ಲಿಸುವುದು ವಿಶೇಷವಾಗಿದೆ. ಹೆಚ್ಚಾಗಿ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂತಾನ ಪಡೆದ ದಂಪತಿಗಳು ಈ ಸೇವೆಯನ್ನು ಮಾಡುತ್ತಾರೆ. ಜತೆಗೆ ತುಪ್ಪ, ನಾಗನ ಹೆಡೆಯು ಹರಕೆಗಳೂ ಸಂದಾಯವಾಗುತ್ತದೆ. ಪ್ರಧಾನ ಅರ್ಚಕ ರಾಮಶಂಕರ ಧಾರ್ಮಿಕ ವಿಧಿವಿಧಾನ ಗಳನ್ನು ನೆರವೇರಿಸಿದರು.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.