ಹೈಟೆಕ್‌ ಸೌಂದರ್ಯ ತಾಣವಾಗಲಿದೆ ಕೊಟ್ಟಾರ ಚೌಕಿ ಫ್ಲೈಓವರ್‌!


Team Udayavani, Dec 7, 2018, 11:26 AM IST

7-december-3.gif

ಮಹಾನಗರ: ಮಂಗಳೂರು- ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿಯ ಫ್ಲೈಓವರ್‌ ಕೆಲವೇ ದಿನದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿ ಬದಲಾವಣೆಗೊಂಡು ಸುಂದರಗೊಳ್ಳಲಿದೆ.

ಸ್ವಚ್ಛ ತೆಯ ಮೂಲಕ ನಗರ ವ್ಯಾಪ್ತಿಯಲ್ಲಿ ಮಹಾನ್‌ ಕಾರ್ಯ ನಡೆಸುತ್ತಿರುವ ಶ್ರೀ ರಾಮಕೃಷ್ಣ ಮಠದ ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಕೊಟ್ಟಾರಚೌಕಿಯ ಪ್ಲೈಓವರ್‌ ಸುಂದರ ಸ್ವರೂಪಕ್ಕೆ ಬದಲಾವಣೆಯಾಗಲಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆಯುವ ಪ್ರಕ್ರಿಯೆ ಸದ್ಯ ಪ್ರಗತಿಯಲ್ಲಿದೆ.

ಕೊಟ್ಟಾರಚೌಕಿ ಪ್ಲೈಓವರ್‌ನ ಕೆಳಭಾಗದಲ್ಲಿ ಈಗ ವಾಹನಗಳು, ತಳ್ಳುಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಸ್ವಚ್ಚತೆಗೆ ಆದ್ಯತೆ ಇಲ್ಲಿ ಸಿಗುತ್ತಿಲ್ಲ. ಹೀಗಾಗಿ ಮೇಲ್ಸೇತುವೆಯ ಕೆಳಭಾಗದ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಉಂಟಾಗಿತ್ತು. ಇದಕ್ಕೆ ಮುಕ್ತಿ ನೀಡಲು ಹಾಗೂ ಬೇರೆ ಬೇರೆ ಭಾಗದ ಪ್ರಯಾಣಿಕರು ಕೊಟ್ಟಾರಚೌಕಿ ಫ್ಲೈ ಓವರ್‌ ಕೆಳಭಾಗದ ರಸ್ತೆಯಲ್ಲಿ ಸಂಚರಿಸುವ ಹಿನ್ನೆಲೆಯಲ್ಲಿ ಪ್ಲೈಓವರ್‌ ಗೆ ಹೊಸ ರೂಪ ನೀಡಲು ರಾಮಕೃಷ್ಣ ಮಿಷನ್‌ ನಿರ್ಧರಿಸಿದೆ. ಈಗಾಗಲೇ ನಗರದ ವಿವಿಧೆಡೆ ಇಂತಹ ಹಲವು ರೀತಿಯ ಸುಂದರೀಕರಣ ಕೆಲಸ ಮಾಡಿರುವ ಮಿಷನ್‌ ಕೊಟ್ಟಾರಚೌಕಿ ಫ್ಲೈಓವರ್‌ ಕೆಳಭಾಗವನ್ನು ಕೂಡ ಆಕರ್ಷಣೀಯವಾಗಿಸಲು ಉದ್ದೇಶಿಸಿದೆ.

ಗಾರ್ಡನ್‌ ರೂಪ
ಇಲ್ಲಿನ ಪ್ಲೈಓವರ್‌ನ ತಳಭಾಗದ ಸುಮಾರು 500-600 ಮೀಟರ್‌ ವ್ಯಾಪ್ತಿಯಲ್ಲಿ ಇಂಟರ್‌ಲಾಕ್‌ ಅಳವಡಿಸಲಾಗುತ್ತದೆ. ನಿಗದಿತ ಜಾಗದಲ್ಲಿ ಹೂವಿನ ಗಿಡಗಳೊಂದಿಗೆ ಅಲಂಕಾರ ಹಾಗೂ ಗಾರ್ಡನ್‌ ರೂಪದಲ್ಲಿ ಸುಂದರೀಕರಣಕ್ಕೆ ಒತ್ತು ನೀಡಲಾಗುತ್ತದೆ. ಕುಳಿತುಕೊಳ್ಳಲು ಅನುವಾಗುವಂತೆ ಮನ ಸೆಳೆಯುವ ಶೈಲಿಯ ಬೆಂಚುಗಳನ್ನು ಇಡಲಾಗುತ್ತದೆ. ಎಲ್ಲೆಂದರಲ್ಲಿ ಕಾರು, ರಿಕ್ಷಾ, ಬೈಕ್‌ ಪಾರ್ಕ್‌ಗೆ ಮುಂದೆ ಅವಕಾಶವಿರುವುದಿಲ್ಲ.  

ಬದಲಾಗಿ, ಒಂದು ಸ್ಲ್ಯಾಬ್ ನ ಅಡಿಯಲ್ಲಿ ಬೈಕ್‌, ಇನ್ನೊಂದರಲ್ಲಿ ಕಾರು ಹಾಗೂ ಮತ್ತೊಂದರಲ್ಲಿ ರಿಕ್ಷಾ ಪಾರ್ಕಿಂಗ್‌ ಗೆ ಅವಕಾಶವಿರುತ್ತದೆ. ಪ್ರತೀ  ಸ್ಲ್ಯಾಬ್ ನ ಗೋಡೆಗಳಲ್ಲಿ ದೇಶದ ಸಂಸ್ಕೃತಿ ಸಾರು ಚಿತ್ರಗಳನ್ನು ಬರೆಯಲಾಗುತ್ತದೆ. ಇದು ವಾಹನದಲ್ಲಿ ತೆರಳುವ ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿರುತ್ತದೆ. ಇನ್ನು ಬೆಳಕಿನ ವ್ಯವಸ್ಥೆಯನ್ನು ಕೂಡ ಆಕರ್ಷಕವಾಗಿ ಇಲ್ಲಿಗೆ ಮಾಡಲಾಗುತ್ತದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ನಡೆಸುವ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಸುರತ್ಕಲ್‌/ಕೂಳೂರು ಫ್ಲೈ ಓವರ್‌ ಬ್ಯೂಟಿಫುಲ್‌!
ಕಳೆದ ವರ್ಷ ವಿವಿಧ ಸಮಾಜಮುಖಿ ಸಂಘಟನೆಗಳ ನೆರವಿನೊಂದಿಗೆ ಸುರತ್ಕಲ್‌ ಮೇಲ್ಸೇತುವೆಯ ಕೆಳಭಾಗವನ್ನು ಸುದರಿಕರಣಗೊಳಿಸಲಾಗಿದೆ.
ಇಲ್ಲಿನ 6 ಸ್ಲ್ಯಾಬ್ ಗಳ ವ್ಯಾಪ್ತಿಯನ್ನು ಆಕರ್ಷಣೀಯಗೊಳಿಸಲಾಗಿದೆ. ಟೆಂಪೋ, ರಿಕ್ಷಾ, ದ್ವಿಚಕ್ರ ವಾಹನ ನಿಲುಗಡೆಗೆ ಪೂರಕ ಸೌಕರ್ಯ ಇಲ್ಲಿ ಕಲ್ಪಿಸಲಾಗಿದೆ. ಕರಾವಳಿಯ ಹೆಮ್ಮೆಯ ಕ್ರೀಡಾಪಟುಗಳಾದ ಕೆ.ಎಲ್‌. ರಾಹುಲ್‌, ಪೂವಮ್ಮ ಅವರ ಚಿತ್ರವನ್ನು ಬರೆಯಲಾಗಿದ್ದು, ಗಮನಸೆಳೆಯುತ್ತಿವೆ. ಇದೇ ರೀತಿ 2 ವರ್ಷಗಳ ಹಿಂದೆ ಕೂಳೂರು ಮೇಲ್ಸೇತುವೆ ಕೆಳಭಾಗವನ್ನು ಸ್ಥಳೀಯರು ಸುಂದರೀಕರಣಗೊಳಿಸಿದ್ದಾರೆ. ಕರಾವಳಿಯ ಸಂಸ್ಕೃತಿ ಬಿಂಬಿಸುವ ಚಿತ್ರ, ಸ್ವಚ್ಚತೆಯ ಜಾಗೃತಿ ಬರೆಹಗಳು ಅಲ್ಲಿ ಇವೆ. ಇದು ಪ್ರಯಾಣಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

‘ಜನವರಿಯಲ್ಲಿ ಆರಂಭ’
ಕೊಟ್ಟಾರಚೌಕಿ ಪ್ಲೈಓವರ್‌ನ ಕೆಳಭಾಗವನ್ನು ಅತ್ಯಾಕರ್ಷಕ ರೀತಿಯಲ್ಲಿ ಸುಂದರೀಕರಣಗೊಳಿಸುವ ಸಂಬಂಧ  ರಾಮಕೃಷ್ಣ ಮಿಷನ್‌ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಪ್ರಸ್ತಾವನೆಯೊಂದನ್ನು ಸಿದ್ಧಗೊಳಿಸಲಾಗಿದೆ. ರಾ.ಹೆ.ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು, ಜನವರಿ ವೇಳೆಯಲ್ಲಿ ಪ್ಲೈಓವರ್‌ ಸುಂದರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಸ್ವಾಮಿ ಏಕಗಮ್ಯಾನಂದಜಿ,
  ಸಂಚಾಲಕರು, ರಾಮಕೃಷ್ಣ ಮಿಷನ್‌-ಸ್ವಚ್ಚತಾ ಅಭಿಯಾನ 

ವಿಶೇಷ ವರದಿ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.